Sharath remains untraceable: 24 ಗಂಟೆ ಕಳೆದರೂ ಅರಿಶಿನಗುಂಡಿ ಜಲಪಾತದಲ್ಲಿ ಜಾರಿಬಿದ್ದ ಭದ್ರಾವತಿ ಯುವಕ ಪತ್ತೆಯಾಗಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2023 | 12:20 PM

ಶರತ್ ಬಂಡೆಗಳ ನಡುವೆ ಅಥವಾ ಅವುಗಳನ್ನು ಅಸರೆಯಾಗಿಸಿಕೊಂಡು ಸಿಲುಕಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಉಡುಪಿ: ಹುಚ್ಚು ಸಾಹಸ ಮಾಡಹೋಗಿ ಜಿಲ್ಲೆಯ ಅರಿಶಿನಗುಂಡಿ ಜಲಪಾತದಲ್ಲಿ ಮಂಗಳವಾರ ಬೆಳಗ್ಗೆ ಜಾರಿಬಿದ್ದ ಭದ್ರಾವತಿ (Bhadravati) ಮೂಲದ ಯುವಕ ಶರತ್ (Sharath) 24 ಗಂಟೆಗಿಂತ ಹೆಚ್ಚಿನ ಸಮಯ ತಜ್ಞರ ಹುಡುಕಾಟದ ಹೊರತಾಗಿಯೂ ಪತ್ತೆಯಾಗಿಲ್ಲ ಅನ್ನೋದು ಕಳವಳಕಾರಿ ಸಂಗತಿ. ಅವನ ತಂದೆ-ತಾಯಿ ಮತ್ತು ಸಂಬಂಧಿಕರು ಅನುಭವಿಸುತ್ತಿರುವ ನೋವು, ಆಘಾತ, ಗಾಬರಿ ಮತ್ತು ಭಯದ ಬಗ್ಗೆ ಯೋಚಿಸುವುದು ಕೂಡ ಸಾಧ್ಯವಾಗದು. ಚಿತ್ರದುರ್ಗದ ಜ್ಯೋತಿರಾಜ್ ತಂಡ (Jyothiraj team) ನಿನ್ನೆಯಿಂದ ಅವನ ಹುಡುಕಾಟ ನಡೆಸುತ್ತಿದೆಯಾದರೂ ಪ್ರಯೋಜನವಾಗಿಲ್ಲ. ನೀರಿನ ರಭಸ ಜೋರಾಗಿದೆ ಎಂದು ತಜ್ಞರು ಹೇಳುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹುಡುಕಾಟಕ್ಕೆ ರಾಜ್ಯ ಸರ್ಕಾರ (state government) ಹೆಲಿಕಾಪ್ಟರ್ ಒದಗಿಸಿದರೆ ಅಥವಾ ತಜ್ಞರ ತಂಡವನ್ನು ಅದರಲ್ಲಿ ಕಳಿಸಿದರೆ ಉಪಯೋಗವಾಗಬಹುದು. ಶರತ್ ಬಂಡೆಗಳ ನಡುವೆ ಅಥವಾ ಅವುಗಳನ್ನು ಅಸರೆಯಾಗಿಸಿಕೊಂಡು ಸಿಲುಕಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 26, 2023 12:03 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.