ಸಭೆ ತಡ ಆಗಿದಕ್ಕೆ ಮುನಿಸಿಕೊಂಡು ಹೋಗುತ್ತಿದ್ದ ಮುನಿರತ್ನ, ಸೋಮಶೇಖರ್​ರನ್ನು ಜಮೀರ್ ಅಹ್ಮದ್​ ಸಮಾಧಾನ ಮಾಡಿದ್ದು ಹೇಗೆ ಗೊತ್ತಾ?

ಆಯೇಷಾ ಬಾನು

Updated on: Jun 05, 2023 | 2:11 PM

ಕಾದು ಕಾದು ಬೇಸರವಾಗಿ ಅಶ್ವತ್ಥ್ ನಾರಾಯಣ, ಮುನಿರತ್ನ, ಸೋಮಶೇಖರ್, ಬೈರತಿ ಬಸವರಾಜ ಸಭೆಯಲ್ಲಿ ಭಾಗವಹಿಸದೇ ಹೊರಟೇ ಹೋದ್ರು. ಸಭೆ ತಡವಾದ ಹಿನ್ನೆಲೆ ಮುನಿಸಿಕೊಂಡ ಮುನಿರತ್ನರನ್ನು ಹಾಗೂ ಸೋಮಶೇಖರ್​ರನ್ನು ಜಮೀರ್ ಅಹ್ಮದ್ ಕೂಗಿ ಕರೆದು ಸಮಾಧಾನಪಡಿಸಿದರು.

ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ ಎಲೆಕ್ಷನ್ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಕರೆದಿದ್ದರು. ಬೆಂಗಳೂರು ನಗರ ಸಂಸದರು, ಶಾಸಕರ ಸಭೆ ಕರೆದಿದ್ದು ಚರ್ಚೆ ಮಾಡಿದ್ದಾರೆ. ಈ ಸಭಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವರು ಭಾಗವಹಿಸಿದ್ದರು. ಆದರೆ ಡಿಕೆ ಶಿವಕುಮಾರ್​ ಸಭೆಗೆ ತಡವಾಗಿ ಬಂದರು. ಕಾದು ಕಾದು ಬೇಸರವಾಗಿ ಅಶ್ವತ್ಥ್ ನಾರಾಯಣ, ಮುನಿರತ್ನ, ಸೋಮಶೇಖರ್, ಬೈರತಿ ಬಸವರಾಜ ಸಭೆಯಲ್ಲಿ ಭಾಗವಹಿಸದೇ ಹೊರಟೇ ಹೋದ್ರು. ಸಭೆ ತಡವಾದ ಹಿನ್ನೆಲೆ ಮುನಿಸಿಕೊಂಡ ಮುನಿರತ್ನರನ್ನು ಹಾಗೂ ಸೋಮಶೇಖರ್​ರನ್ನು ಜಮೀರ್ ಅಹ್ಮದ್ ಕೂಗಿ ಕರೆದು ಸಮಾಧಾನಪಡಿಸಿದರು.

Published on: Jun 05, 2023 02:11 PM
Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.