ಉತ್ಪಾದನೆ ಜಾಸ್ತಿ, ಬೇಡಿಕೆ ಇಲ್ವೇ ಇಲ್ಲ.. ಜಾರುತಿದೆ ತೈಲ ಮಾರುಕಟ್ಟೆ!

ನವದೆಹಲಿ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಆಗಿರುವ ಹಿನ್ನೆಲೆ ಆಯಾ ರಾಷ್ಟ್ರಗಳಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಇದರಿಂದ, ಬೇಡಿಕೆ ಪ್ರಮಾಣ ಬಹುತೇಕ ಕುಸಿದಿದೆ. ಆದ್ರೆ ಇದೇ ವೇಳೆ ಕಚ್ಚಾ ತೈಲ ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ ಸತತ 2ನೇ ‌ದಿನವೂ ಕಚ್ಚಾ ತೈಲ ಬೆಲೆ ನೆಗೆಟಿವ್ ಸಂಖ್ಯೆಗೆ ಕುಸಿದಿದ್ದು, ಇಂದು ಮೈನಸ್ ನಾಲ್ಕು ಡಾಲರ್‌ಗೆ ಕುಸಿತ‌ ಕಂಡಿದೆ. ಇಂದು ಕೂಡ ಕಚ್ಛಾ ತೈಲ ಬೆಲೆ ಶೇ. 300 ರಷ್ಟು ಕುಸಿದಿದೆ. ಇದರ ಪರಿಣಾಮಗಳೇನು ? ಆಯಾ ದೇಶಗಳಲ್ಲಿ […]

ಉತ್ಪಾದನೆ ಜಾಸ್ತಿ, ಬೇಡಿಕೆ ಇಲ್ವೇ ಇಲ್ಲ.. ಜಾರುತಿದೆ ತೈಲ ಮಾರುಕಟ್ಟೆ!
ಕಚ್ಚಾ ತೈಲ (ಸಂಗ್ರಹ ಚಿತ್ರ)
ಸಾಧು ಶ್ರೀನಾಥ್​

Updated on: Apr 23, 2020 | 10:42 AM

ನವದೆಹಲಿ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಆಗಿರುವ ಹಿನ್ನೆಲೆ ಆಯಾ ರಾಷ್ಟ್ರಗಳಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಇದರಿಂದ, ಬೇಡಿಕೆ ಪ್ರಮಾಣ ಬಹುತೇಕ ಕುಸಿದಿದೆ. ಆದ್ರೆ ಇದೇ ವೇಳೆ ಕಚ್ಚಾ ತೈಲ ಉತ್ಪಾದನೆ ಹೆಚ್ಚಾಗಿದೆ.

ಹಾಗಾಗಿ ಸತತ 2ನೇ ‌ದಿನವೂ ಕಚ್ಚಾ ತೈಲ ಬೆಲೆ ನೆಗೆಟಿವ್ ಸಂಖ್ಯೆಗೆ ಕುಸಿದಿದ್ದು, ಇಂದು ಮೈನಸ್ ನಾಲ್ಕು ಡಾಲರ್‌ಗೆ ಕುಸಿತ‌ ಕಂಡಿದೆ. ಇಂದು ಕೂಡ ಕಚ್ಛಾ ತೈಲ ಬೆಲೆ ಶೇ. 300 ರಷ್ಟು ಕುಸಿದಿದೆ.
ಇದರ ಪರಿಣಾಮಗಳೇನು ? ಆಯಾ ದೇಶಗಳಲ್ಲಿ ಭಾಗಶಃ ಹಣದುಬ್ಬರ ಕುಸಿತ‌ ಆಗಲಿದೆ. ತೈಲದ ಅಮದಿಗೆ ಕಡಿಮೆ ವೆಚ್ಚ ತಗುಲಲಿದೆ. ಸರ್ಕಾರದ ವಿತ್ತೀಯ ಕೊರತೆ ಕಡಿಮೆ ಆಗಲಿದೆ.
ತೈಲ ಬೆಲೆ ಕುಸಿತದ ಲಾಭ ಗ್ರಾಹಕರಿಗೂ ಸಿಗಲಿದೆ. ದೇಶದಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಸಿಗಬಹುದು‌.

Published On - 2:39 pm, Tue, 21 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us