ಚರಿತ್ರೆಯಲ್ಲೇ ಮೊದಲು! ಪಾಕ್ ವಾಯುಸೇನೆ ಅಧಿಕಾರಿಯಾಗಿ ಹಿಂದೂ ಯುವಕ ನೇಮಕ

ಇಸ್ಲಮಾಬಾದ್: ಕೊರೊನಾ ಸಮರ ಕಾಲದಲ್ಲಿ ನೆರೆಯ ಪಾಕಿಸ್ತಾನದಿಂದ ಒಂದು ಸಂತೋಷದ ಸಂಗತಿ ಕೇಳಿಬಂದಿದೆ. ಹಿಂದೂ ಯುವಕನೊಬ್ಬ ಪಾಕಿಸ್ತಾನದ ವಾಯುಸೇನೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಸಿಂಧ್ ಪ್ರಾಂತ್ಯದ ಥರ್ಪಾರ್​ಕರ್ ಜಿಲ್ಲೆಯ ಹಳ್ಳಿಯ ಯುವಕ ರಾಹುಲ್​ ದೇವ್ ಜನರಲ್ ಡ್ಯೂಟಿ ಪೈಲಟ್​ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಪಾಕ್ ವಾಯುಸೇನೆ (PAF) ಟ್ವೀಟ್ ಮೂಲಕ ತಿಳಿಸಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದಿಂದ ಯುವಕನೊಬ್ಬ ಪಾಕ್ ವಾಯುಸೇನೆ ಸೇವೆಗೆ ಮೊದಲ ಬಾರಿಗೆ ನೇಮಕವಾಗಿದ್ದಾರೆ. Good news during #COVID19 tense situation. Thar […]

ಚರಿತ್ರೆಯಲ್ಲೇ ಮೊದಲು! ಪಾಕ್ ವಾಯುಸೇನೆ ಅಧಿಕಾರಿಯಾಗಿ ಹಿಂದೂ ಯುವಕ ನೇಮಕ
ಸಾಧು ಶ್ರೀನಾಥ್​

Updated on: May 07, 2020 | 5:19 PM

ಇಸ್ಲಮಾಬಾದ್: ಕೊರೊನಾ ಸಮರ ಕಾಲದಲ್ಲಿ ನೆರೆಯ ಪಾಕಿಸ್ತಾನದಿಂದ ಒಂದು ಸಂತೋಷದ ಸಂಗತಿ ಕೇಳಿಬಂದಿದೆ. ಹಿಂದೂ ಯುವಕನೊಬ್ಬ ಪಾಕಿಸ್ತಾನದ ವಾಯುಸೇನೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಸಿಂಧ್ ಪ್ರಾಂತ್ಯದ ಥರ್ಪಾರ್​ಕರ್ ಜಿಲ್ಲೆಯ ಹಳ್ಳಿಯ ಯುವಕ ರಾಹುಲ್​ ದೇವ್ ಜನರಲ್ ಡ್ಯೂಟಿ ಪೈಲಟ್​ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಪಾಕ್ ವಾಯುಸೇನೆ (PAF) ಟ್ವೀಟ್ ಮೂಲಕ ತಿಳಿಸಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದಿಂದ ಯುವಕನೊಬ್ಬ ಪಾಕ್ ವಾಯುಸೇನೆ ಸೇವೆಗೆ ಮೊದಲ ಬಾರಿಗೆ ನೇಮಕವಾಗಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us