ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!! ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು […]

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!
ಸಾಧು ಶ್ರೀನಾಥ್​

Updated on: Sep 05, 2020 | 10:47 AM

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!!

ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು ಕಳ್ಳ ಸಾಗಾಣೆ ಮಾಡುವುದು ಮಾಮೂಲು. ಆದ್ರೆ ಈ ಬಾರಿ ಹೊಚ್ಚಹೊಸ ಆಡುಗೆ ಕುಕ್ಕರ್ ನಲ್ಲಿಟ್ಟುಕೊಂಡು ಕಳ್ಳಸಾಗಣೆ ಮಾಡಲಾಗಿದೆ. ಆರೋಪಿ ಪ್ರಯಾಣಿಕ ಜೆಡ್ಡಾದಿಂದ ಕ್ಯಾಲಿಕಟ್​ಗೆ ವಿಮಾನದಲ್ಲಿ ಬಂದಿದ್ದ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us