‘ಮದ್ಯ ಕಳ್ಳತನ’ ದೂರು ಕೊಟ್ಟು ತಗ್ಲಾಕ್ಕೊಂಡ ಬಾರ್ ಮಾಲೀಕನ ಸುಪುತ್ರ!

ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಬಾರ್​ನಲ್ಲಿ ಕಳ್ಳತನ ಪ್ರಕರಣ ಸಂಬಂಧ ಬಾರ್ ಮಾಲೀಕನ ಮಗ ದೀಪಕ್ ಸೇರಿ ಐವರು ಆರೋಪಿಗಳನ್ನು ನಂದಿ ಹಿಲ್ಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬಾರ್​ನ ಗೋಡೆ ಕೊರೆದು 80 ಸಾವಿರ ರೂಪಾಯಿ ಮೌಲ್ಯದ ಮದ್ಯ ಕಳ್ಳತನವಾಗಿತ್ತು. ಸ್ವತಃ ಬಾರ್ ಮಾಲೀಕನ ಮಗನೇ ಸುಪಾರಿ ನೀಡಿ ಬಾರ್​ನಲ್ಲಿ ಮದ್ಯ ಕಳ್ಳತನ ಮಾಡಿಸಿದ್ದ. ನಂತರ ಏನೂ ಗೊತ್ತಿಲ್ಲದಂತೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಮಾಲೀಕನ ಮಗನೇ ಸುಪಾರಿ […]

‘ಮದ್ಯ ಕಳ್ಳತನ’ ದೂರು ಕೊಟ್ಟು ತಗ್ಲಾಕ್ಕೊಂಡ ಬಾರ್ ಮಾಲೀಕನ ಸುಪುತ್ರ!
ಸಾಧು ಶ್ರೀನಾಥ್​

Updated on: May 04, 2020 | 4:39 PM

ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಬಾರ್​ನಲ್ಲಿ ಕಳ್ಳತನ ಪ್ರಕರಣ ಸಂಬಂಧ ಬಾರ್ ಮಾಲೀಕನ ಮಗ ದೀಪಕ್ ಸೇರಿ ಐವರು ಆರೋಪಿಗಳನ್ನು ನಂದಿ ಹಿಲ್ಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬಾರ್​ನ ಗೋಡೆ ಕೊರೆದು 80 ಸಾವಿರ ರೂಪಾಯಿ ಮೌಲ್ಯದ ಮದ್ಯ ಕಳ್ಳತನವಾಗಿತ್ತು.

ಸ್ವತಃ ಬಾರ್ ಮಾಲೀಕನ ಮಗನೇ ಸುಪಾರಿ ನೀಡಿ ಬಾರ್​ನಲ್ಲಿ ಮದ್ಯ ಕಳ್ಳತನ ಮಾಡಿಸಿದ್ದ. ನಂತರ ಏನೂ ಗೊತ್ತಿಲ್ಲದಂತೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಮಾಲೀಕನ ಮಗನೇ ಸುಪಾರಿ ನೀಡಿ ಕಳ್ಳತನ ಮಾಡಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us