Delhi Crime: ಮದುವೆ ಮನೆಯಲ್ಲಿ ಖುಷಿಯನ್ನು ಇಮ್ಮಡಿಗೊಳಿಸಲು ಬಂದ ಮ್ಯೂಸಿಕ್​ ಬ್ಯಾಂಡ್​ನವರಿಂದ ಕೊಲೆಯೇ ನಡೆದು ಹೋಯ್ತು

ಮ್ಯೂಸಿಕ್​ ಬ್ಯಾಂಡ್​ ಇಲ್ಲದೆ ಯಾವುದೇ ಶುಭಾರಂಭವೂ ಪುರ್ಣಗೊಳ್ಳುವುದಿಲ್ಲ, ಅದರಲ್ಲೂ ಮದುವೆ ಮನೆಯೆಂದ ಮೇಲೆ ಮ್ಯೂಸಿಕ್​ ಬ್ಯಾಂಡ್​ ಇಲ್ಲದಿದ್ದರೆ ಆಗುತ್ತಾ.

Delhi Crime: ಮದುವೆ ಮನೆಯಲ್ಲಿ ಖುಷಿಯನ್ನು ಇಮ್ಮಡಿಗೊಳಿಸಲು ಬಂದ ಮ್ಯೂಸಿಕ್​ ಬ್ಯಾಂಡ್​ನವರಿಂದ ಕೊಲೆಯೇ ನಡೆದು ಹೋಯ್ತು
ದೆಹಲಿ ಪೊಲೀಸ್
Image Credit source: NDTV

Updated on: Feb 09, 2023 | 2:38 PM

ಮ್ಯೂಸಿಕ್​ ಬ್ಯಾಂಡ್​ ಇಲ್ಲದೆ ಯಾವುದೇ ಶುಭಾರಂಭವೂ ಪುರ್ಣಗೊಳ್ಳುವುದಿಲ್ಲ, ಅದರಲ್ಲೂ ಮದುವೆ ಮನೆಯೆಂದ ಮೇಲೆ ಮ್ಯೂಸಿಕ್​ ಬ್ಯಾಂಡ್​ ಇಲ್ಲದಿದ್ದರೆ ಆಗುತ್ತಾ. ಆದರೆ ಮದುವೆ ಮನೆಯ ಖುಷಿಯನ್ನು ಹೆಚ್ಚು ಮಾಡಲು ಬಂದವರು ಕೆಲಸಗಾರನೊಬ್ಬನ ಹತ್ಯೆ ಮಾಡಿ, ಸ್ಮಶಾನ ಮೌನಕ್ಕೆ ದೂಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಮದುವೆ ಮನೆಯಲ್ಲಿ ಊಟದ ತಟ್ಟೆಯ ಲಭ್ಯತೆ ಕುರಿತು ವಾಗ್ವಾದ ಶುರುವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ದೆಹಲಿಯ ಪ್ರಶಾಂತ್ ವಿಹಾರದಲ್ಲಿ ಘಟನೆ ನಡೆದಿದೆ, ಡಿಜೆ ಸೇರಿದಂತೆ ಮ್ಯೂಸಿಕ್ ಬ್ಯಾಂಡ್‌ನ ಸದಸ್ಯರು ಸಂದೀಪ್ ಸಿಂಗ್ ಅವರ ಬಳಿ ಊಟಕ್ಕೆ ತಟ್ಟೆಗಳನ್ನು ಕೇಳಿದರು.

ಸ್ವಚ್ಛಗೊಳಿಸಲಾಗುತ್ತಿದೆ ಮತ್ತು ಸ್ವಲ್ಪ ಸಮಯದ ನಂತರ ಅವು ಲಭ್ಯವಾಗುತ್ತವೆ ಎಂದು ಅವರು ಹೇಳಿದರು. ವಿಳಂಬದಿಂದ ಕೋಪಗೊಂಡ ಇಬ್ಬರು ಬ್ಯಾಂಡ್ ಸದಸ್ಯರು ಸಂದೀಪ್ ಅವರನ್ನು ಪ್ಲಾಸ್ಟಿಕ್ ಕ್ರೇಟ್‌ನಿಂದ ಥಳಿಸಿದ್ದಾರೆ.

ಆತನನ್ನು ಸಹೋದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ, ಇಬ್ಬರು ನಾಪತ್ತೆಯಾಗಿದ್ದು, ಶೀಘ್ರ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us