AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾ ರಾಜೀವ್

ನಯನಾ ರಾಜೀವ್

Chief Senior Sub-Editor - TV9 Kannada

nayana.rajeev@tv9.com

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow On:
Video: ಲಿಫ್ಟ್​ ಒಳಗೆ ಯುವತಿಯರ ಮೇಲೆ  ಸಾಕು ನಾಯಿ ದಾಳಿ

Video: ಲಿಫ್ಟ್​ ಒಳಗೆ ಯುವತಿಯರ ಮೇಲೆ ಸಾಕು ನಾಯಿ ದಾಳಿ

ಮುಂಬೈ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಯುವತಿಯರ ಮೇಲೆ ಸಾಕು ನಾಯಿಯ ಆಕ್ರಮಣಕಾರಿ ದಾಳಿ ವಿಡಿಯೋ ವೈರಲ್ ಆಗಿದೆ. ನಾಯಿಗೆ ಬಾಯಿಮುಚ್ಚಳವಿದ್ದರೂ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಈ ಘಟನೆ ಬಹುಮಹಡಿ ಕಟ್ಟಡಗಳಲ್ಲಿ ಸಾಕುಪ್ರಾಣಿಗಳ ನಿರ್ವಹಣೆ, ಅವುಗಳ ಸುರಕ್ಷತಾ ನಿಯಮಗಳು, ಹಾಗೂ ಪ್ರತ್ಯೇಕ ಲಿಫ್ಟ್ ಬಳಕೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಪ್ರಿಯಕರನ ಜತೆ ಸೇರಿ ಪತಿಗೆ ಹಾವು ಕಚ್ಚಿಸಿ ಕೊಂದ ಪತ್ನಿ, ತನಿಖೆ ವೇಳೆ ಬಯಲಾಯ್ತು ನಾಲ್ಕು ತಿಂಗಳ ಸ್ಕೆಚ್

ಪ್ರಿಯಕರನ ಜತೆ ಸೇರಿ ಪತಿಗೆ ಹಾವು ಕಚ್ಚಿಸಿ ಕೊಂದ ಪತ್ನಿ, ತನಿಖೆ ವೇಳೆ ಬಯಲಾಯ್ತು ನಾಲ್ಕು ತಿಂಗಳ ಸ್ಕೆಚ್

ಉತ್ತರ ಪ್ರದೇಶದ ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ವಿಷಪೂರಿತ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಲಾಗಿದ್ದರೂ, ಪೊಲೀಸರ ತನಿಖೆಯಿಂದ ಇದು ಪೂರ್ವಯೋಜಿತ ಕೊಲೆ ಎಂದು ಬಯಲಾಗಿದೆ. ಅಕ್ರಮ ಸಂಬಂಧ ಮತ್ತು ಆಸ್ತಿಗಾಗಿ ನಡೆದ ಈ ಕೃತ್ಯದಲ್ಲಿ ಪತ್ನಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ನಾಲ್ಕು ತಿಂಗಳ ಸುದೀರ್ಘ ಪಿತೂರಿಯ ಬಳಿಕ ಮೂರನೇ ಪ್ರಯತ್ನದಲ್ಲಿ ಹತ್ಯೆ ನಡೆಸಲಾಗಿದೆ.

ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ ಯಶಸ್ವಿ: ಸ್ಕೈರೂಟ್ ತಂಡದೊಂದಿಗೆ ಮಾತನಾಡಿ, ಅಭಿನಂದಿಸಿದ ಪ್ರಧಾನಿ ಮೋದಿ

ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ ಯಶಸ್ವಿ: ಸ್ಕೈರೂಟ್ ತಂಡದೊಂದಿಗೆ ಮಾತನಾಡಿ, ಅಭಿನಂದಿಸಿದ ಪ್ರಧಾನಿ ಮೋದಿ

Vikram-1: ಭಾರತದ ಪ್ರಪ್ರಥಮ ಖಾಸಗಿ ರಾಕೆಟ್ 'ವಿಕ್ರಮ್-1' ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಸ್ಕೈರೂಟ್ ಏರೋಸ್ಪೇಸ್‌ನ ಈ ಐತಿಹಾಸಿಕ ಸಾಧನೆ ಭಾರತವನ್ನು ಅಮೆರಿಕ, ಚೀನಾ, ಜಪಾನ್ ದೇಶಗಳ ಸಾಲಿಗೆ ಸೇರಿಸಿದೆ. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಕಡಿಮೆ ವೆಚ್ಚದ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಈ ರಾಕೆಟ್, ಖಾಸಗಿ ವಲಯದ ಬಾಹ್ಯಾಕಾಶ ಪರಿಶೋಧನೆಗೆ ಹೊಸ ದಿಕ್ಕು ನೀಡಿದೆ. ಪ್ರಧಾನಿ ಮೋದಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ, ಯುವಕರಿಗೆ ಸ್ಫೂರ್ತಿ ನೀಡುವ ಕರೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಶರದ್ ಪವಾರ್ ಮೌನ: ಎನ್‌ಡಿಎ ಸೇರ್ಪಡೆ ಕುರಿತು ಹಿರಿಯ ಮುತ್ಸದ್ದಿ ಮಾರ್ಮಿಕ ನುಡಿ

ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಶರದ್ ಪವಾರ್ ಮೌನ: ಎನ್‌ಡಿಎ ಸೇರ್ಪಡೆ ಕುರಿತು ಹಿರಿಯ ಮುತ್ಸದ್ದಿ ಮಾರ್ಮಿಕ ನುಡಿ

ಮಹಾರಾಷ್ಟ್ರ ರಾಜಕೀಯದಲ್ಲಿ ಎನ್‌ಸಿಪಿ ಎನ್‌ಡಿಎ ಸೇರ್ಪಡೆ ಕುರಿತು ಶರದ್ ಪವಾರ್ ಅವರ ಮೌನ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ, ಎರಡೂ ಎನ್‌ಸಿಪಿ ಬಣಗಳ ವಿಲೀನಕ್ಕೆ ಷರತ್ತು ವಿಧಿಸಿದ್ದು, ಕೇಂದ್ರ ಸಚಿವ ಸ್ಥಾನಗಳ ಆಮಿಷ ಒಡ್ಡಿದೆ. ಆದರೆ, ಅಜಿತ್ ಪವಾರ್ ನಿಧನದಿಂದಾಗಿ ವಿಲೀನದ ಮಾತುಕತೆ ಮುಗಿದ ಅಧ್ಯಾಯ ಎಂದು ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ. ಸದ್ಯ ಮಹಾರಾಷ್ಟ್ರದ ರಾಜಕೀಯ ಭವಿಷ್ಯ ಅನಿಶ್ಚಿತವಾಗಿದೆ.

ವೈಷ್ಣೋದೇವಿ ದೇವಾಲಯದಲ್ಲಿ 500 ಕೋಟಿ ರೂ. ದೇಣಿಗೆ ಹಗರಣ, 70 ಕೆಜಿಯಲ್ಲಿ ಕೇವಲ 3 ಕೆಜಿ ಮಾತ್ರ ನಿಜವಾದ ಬೆಳ್ಳಿ

ವೈಷ್ಣೋದೇವಿ ದೇವಾಲಯದಲ್ಲಿ 500 ಕೋಟಿ ರೂ. ದೇಣಿಗೆ ಹಗರಣ, 70 ಕೆಜಿಯಲ್ಲಿ ಕೇವಲ 3 ಕೆಜಿ ಮಾತ್ರ ನಿಜವಾದ ಬೆಳ್ಳಿ

ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದಲ್ಲಿ ಭಾರಿ ದೇಣಿಗೆ ಹಗರಣ ಬೆಳಕಿಗೆ ಬಂದಿದೆ. ಭಕ್ತರು ಅರ್ಪಿಸಿದ 500 ಕೋಟಿ ರೂ. ಮೌಲ್ಯದ 20 ಟನ್ ಬೆಳ್ಳಿಯಲ್ಲಿ ಹೆಚ್ಚಿನ ಪಾಲು ನಕಲಿ ಅಥವಾ ಕಳಪೆ ಲೋಹವಿರುವುದು ಪತ್ತೆಯಾಗಿದೆ. 70 ಕೆಜಿ ಬೆಳ್ಳಿ ವಸ್ತುವನ್ನು ಪರಿಶೀಲಿಸಿದಾಗ ಕೇವಲ 3 ಕೆಜಿ ನಿಜವಾದ ಬೆಳ್ಳಿ ಸಿಕ್ಕಿದೆ. ಈ ವಂಚನೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಪಾರದರ್ಶಕತೆಗೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದಾರೆ.

Skyroot Vikram-1 Launch: ಬಾಹ್ಯಾಕಾಶ ವಲಯದಲ್ಲಿ ಭಾರತದ ಹೊಸ ಸೂರ್ಯೋದಯ:ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ

Skyroot Vikram-1 Launch: ಬಾಹ್ಯಾಕಾಶ ವಲಯದಲ್ಲಿ ಭಾರತದ ಹೊಸ ಸೂರ್ಯೋದಯ:ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ

ಭಾರತದ ಬಾಹ್ಯಾಕಾಶ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಿ ಸ್ಕೈರೂಟ್ ಏರೋಸ್ಪೇಸ್‌ನ 'ವಿಕ್ರಮ್-1' ಖಾಸಗಿ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದು 300 ಕೆ.ಜಿ. ಸಣ್ಣ ಉಪಗ್ರಹಗಳನ್ನು ಕಡಿಮೆ ವೆಚ್ಚದಲ್ಲಿ ಭೂಮಿಯ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಇಸ್ರೋ ಮಾಜಿ ವಿಜ್ಞಾನಿಗಳ ಪರಿಶ್ರಮದಿಂದ ನಿರ್ಮಿತವಾಗಿರುವ ಈ ರಾಕೆಟ್, ಜಾಗತಿಕ ಸಣ್ಣ ಉಪಗ್ರಹ ಮಾರುಕಟ್ಟೆಯಲ್ಲಿ ಭಾರತಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ, ಭವಿಷ್ಯದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲಿದೆ.

ಬಾಡಿಗೆ ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

ಬಾಡಿಗೆ ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಬಾಡಿಗೆ ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ತಂದೆಯೇ ಕುಟುಂಬಕ್ಕೆ ವಿಷ ಉಣಿಸಿ, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ನೆರೆಹೊರೆಯವರು ಕೆಟ್ಟ ವಾಸನೆ ಗಮನಿಸಿ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವು ಆರ್ಥಿಕ ಮುಗ್ಗಟ್ಟಿನ ಭೀಕರ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ

ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ

ಇರಾಕ್‌ನ ಕುರ್ದಿಸ್ತಾನ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಶಸ್ತ್ರಾಸ್ತ್ರ ಗೋದಾಮುಗಳ ಮೇಲೆ ಇರಾನ್ ಹೈಪರ್ಸಾನಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಅಮೆರಿಕಾದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಈ ಕ್ರಮ ಕೈಗೊಂಡಿದ್ದು, ಅಮೆರಿಕಾ ಇರಾನ್‌ನ ಪ್ರಮುಖ ಬಂದರ್ ಅಬ್ಬಾಸ್ ಮತ್ತು ಹಾರ್ಮೋಜ್ಗನ್ ಪ್ರಾಂತ್ಯದ ಸೇತುವೆಗಳನ್ನು ಧ್ವಂಸಗೊಳಿಸಿದೆ.

ನನ್ನ ಗಮನಕ್ಕೆ ತರದೆ ಪತಿಗೆ ಯಾವುದೇ ಇಂಜೆಕ್ಷನ್, ಔಷಧಿ ಕೊಡಬೇಡಿ: ಸೋನಮ್ ವಾಂಗ್ಚುಕ್ ಪತ್ನಿ ಎಚ್ಚರಿಕೆ

ನನ್ನ ಗಮನಕ್ಕೆ ತರದೆ ಪತಿಗೆ ಯಾವುದೇ ಇಂಜೆಕ್ಷನ್, ಔಷಧಿ ಕೊಡಬೇಡಿ: ಸೋನಮ್ ವಾಂಗ್ಚುಕ್ ಪತ್ನಿ ಎಚ್ಚರಿಕೆ

ಲಡಾಖ್‌ಗೆ ವಿಶೇಷ ಸ್ಥಾನಮಾನ ಕೋರಿ 20 ದಿನಗಳ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರ ಪತ್ನಿ ಗೀತಾಂಜಲಿ, ತಮ್ಮ ಅನುಮತಿ ಇಲ್ಲದೆ ಯಾವುದೇ ಚಿಕಿತ್ಸೆ ನೀಡದಂತೆ ಆಸ್ಪತ್ರೆಗೆ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಆರ್ಟಿಕಲ್ 32 ರ ಅಡಿಯಲ್ಲಿ ಅವರ ಆರೋಗ್ಯದ ಹಕ್ಕನ್ನು ರಕ್ಷಿಸುವುದಾಗಿ ಹೇಳಿದ್ದಾರೆ.

ದೇಶಾದ್ಯಂತ ಸರಣಿ ಬಾಂಬ್ ಸ್ಫೋಟಕ್ಕೆ ಉಗ್ರರ ಸ್ಕೆಚ್, ಜೈಶ್ ನೆಟ್​ವರ್ಕ್​ ಧ್ವಂಸಗೊಳಿಸಿದ ಎಟಿಎಸ್, ಐವರ ಬಂಧನ

ದೇಶಾದ್ಯಂತ ಸರಣಿ ಬಾಂಬ್ ಸ್ಫೋಟಕ್ಕೆ ಉಗ್ರರ ಸ್ಕೆಚ್, ಜೈಶ್ ನೆಟ್​ವರ್ಕ್​ ಧ್ವಂಸಗೊಳಿಸಿದ ಎಟಿಎಸ್, ಐವರ ಬಂಧನ

ಗುಜರಾತ್ ಎಟಿಎಸ್ ಭಾರಿ ಉಗ್ರರ ಜಾಲವನ್ನು ಭೇದಿಸಿದೆ. ದೇಶಾದ್ಯಂತ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ 13 ಉಗ್ರರನ್ನು ಬಂಧಿಸಲಾಗಿದೆ. ಇವರು ಆನ್‌ಲೈನ್‌ನಲ್ಲಿ ಬಾಂಬ್ ತಯಾರಿಕೆ, AK-47 ತರಬೇತಿ ಪಡೆದಿದ್ದು, 8 ಕಡೆ ಪರೀಕ್ಷಾರ್ಥ ಸ್ಫೋಟಗಳನ್ನು ನಡೆಸಿದ್ದರು. ಕಮಾಂಡೋ ಕಾವಲಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಿಲ್ಲಿಸಲಿದೆ ಎಸ್​ಐಟಿ

ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಿಲ್ಲಿಸಲಿದೆ ಎಸ್​ಐಟಿ

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ ತನಿಖೆ ಅಂತಿಮ ಹಂತ ತಲುಪಿದೆ. ಜುಲೈ 20 ರಂದು ಸುಪ್ರೀಂ ಕೋರ್ಟ್‌ಗೆ ಎಸ್‌ಐಟಿ ಮಧ್ಯಂತರ ವರದಿ ಸಲ್ಲಿಸಲಿದೆ. ದೇಣಿಗೆಯಲ್ಲಿ ನಡೆದ ಆರ್ಥಿಕ ಅಕ್ರಮಗಳ ಕುರಿತ ಈ ವರದಿಯಿಂದ ಮಂದಿರ ಆಡಳಿತದಲ್ಲಿ ಬದಲಾವಣೆ ಸಾಧ್ಯತೆ ಇದೆ. ವಂಚಕರಿಗೆ ಕಠಿಣ ಶಿಕ್ಷೆಯ ಭರವಸೆ ನೀಡಿರುವ ಸರ್ಕಾರ, ದೇಶದ ಜನತೆ ತಾಳ್ಮೆಯಿಂದಿರಲು ಮನವಿ ಮಾಡಿದೆ.

ಅರೆಬರೆ ಬಟ್ಟೆ ತೊಟ್ಟು, ಮನೆಗಳಿಗೆ ನುಗ್ಗಿ, ಜನರನ್ನು ಕಚ್ಚಿ ವಾರಾಣಸಿಯಲ್ಲಿ ವಿದೇಶಿ ಪ್ರಜೆಯ ಹೈಡ್ರಾಮಾ

ಅರೆಬರೆ ಬಟ್ಟೆ ತೊಟ್ಟು, ಮನೆಗಳಿಗೆ ನುಗ್ಗಿ, ಜನರನ್ನು ಕಚ್ಚಿ ವಾರಾಣಸಿಯಲ್ಲಿ ವಿದೇಶಿ ಪ್ರಜೆಯ ಹೈಡ್ರಾಮಾ

ವಾರಾಣಸಿಯಲ್ಲಿ ಅರೆಬರೆ ಬಟ್ಟೆ ತೊಟ್ಟ ವಿದೇಶಿ ಪ್ರಜೆಯೊಬ್ಬ ದಾಂಧಲೆ ನಡೆಸಿದ್ದಾನೆ. ಮನೆಗಳಿಗೆ ನುಗ್ಗಿ, ಜನರನ್ನು ಕಚ್ಚಿ, ವಸ್ತುಗಳನ್ನು ಧ್ವಂಸಗೊಳಿಸಿದ್ದಾನೆ. ಮಾದಕವಸ್ತು ಸೇವನೆಯ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಘಟನೆಗೆ ನಿಖರ ಕಾರಣ ಮತ್ತು ಆತನ ಗುರುತು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.