AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾ ರಾಜೀವ್

ನಯನಾ ರಾಜೀವ್

ಮುಖ್ಯ ಉಪಸಂಪಾದಕಿ - TV9 Kannada

nayana.rajeev@tv9.com

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow On:
Video: ಉದ್ಘಾಟನೆಗೆ ತಡವಾಯ್ತೆಂದು ಓಡೋಡಿ ಬಂದ ಮೇಯರ್, ಕಾಯದೆ ಹೊರಟೇ ಬಿಡ್ತು ರೈಲು

Video: ಉದ್ಘಾಟನೆಗೆ ತಡವಾಯ್ತೆಂದು ಓಡೋಡಿ ಬಂದ ಮೇಯರ್, ಕಾಯದೆ ಹೊರಟೇ ಬಿಡ್ತು ರೈಲು

ಮೇಯರ್ ಉದ್ಘಾಟನೆಗೆ ತಡವಾಗಿ ಬಂದಿದ್ದಕ್ಕೆ ರೈಲು ನಿಲ್ಲಲೇ ಇಲ್ಲ, ಮೇಯರ್​ಗೆ ಕಾಯದೆ ಹೊರಟೇ ಬಿಟ್ಟಿತ್ತು. ಈ ಘಟನೆ ನಡೆದಿದ್ದು ಮೆಕ್ಸಿಕೋದಲ್ಲಿ. ಹೊಸ ರೈಲು ಉದ್ಘಾಟನೆ ಕಾರ್ಯಕ್ರಮ ಅಂದು ನಡೆಯಬೇಕಿತ್ತು. ಸಮಯಕ್ಕೆ ಸರಿಯಾಗಿ ಬರಲಾಗದೆ ಮೇಯರ್ ತಡವಾಗಿ ಓಡುತ್ತಾ ಬಂದಿದ್ದಾರೆ. ಅವರು ಬರುತ್ತಿದ್ದಂತೆ ರೈಲು ಹೊರಟೇ ಬಿಟ್ಟಿತ್ತು. ಅವರಿಗಾಗಿ ಒಂದು ನಿಮಿಷವೂ ಕಾಯಲಿಲ್ಲ.

Video: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ವಿಮಾನದಿಂದ ಜಂಪ್ ಮಾಡಿದ ಪ್ರಯಾಣಿಕರು

Video: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ವಿಮಾನದಿಂದ ಜಂಪ್ ಮಾಡಿದ ಪ್ರಯಾಣಿಕರು

ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ಪ್ರಯಾಣಿಕರು ವಿಮಾನದಿಂದ ಜಂಪ್ ಮಾಡಿರುವ ಘಟನೆ ಕಿಂದು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿಂದು ವಿಮಾನ ನಿಲ್ದಾಣದಲ್ಲಿ ಏರ್ ಕಾಂಗೋ ವಿಮಾನದ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನದೊಳಗೆ ಕಾಯುವಂತಾಗಿತ್ತು. ಪ್ರಯಾಣಿಕರು ಮೆಟ್ಟಿಲುಗಳಿಲ್ಲದೆ ಬೇಸರಗೊಂಡು ಬಾಗಿಲಿನಿಂದ ಸುಮಾರು 5-6 ಅಡಿಯಷ್ಟು ಕೆಳಗೆ ಹಾರಿದ್ದಾರೆ.

Video: ನಿಯಂತ್ರಣ ತಪ್ಪಿ ಮಗುವಿನ ಮೇಲೆ ಪಲ್ಟಿ ಹೊಡೆದ ಟ್ರಕ್

Video: ನಿಯಂತ್ರಣ ತಪ್ಪಿ ಮಗುವಿನ ಮೇಲೆ ಪಲ್ಟಿ ಹೊಡೆದ ಟ್ರಕ್

ಟ್ರಕ್​ ಒಂದು ನಿಯಂತ್ರಣ ತಪ್ಪಿ ಮಗುವಿನ ಮೇಲೆ ಪಲ್ಟಿ ಹೊಡೆದ ಘಟನೆ ತೆಲಂಗಾಣದ ವಿಕಾರಾಬಾದ್​ನಲ್ಲಿ ನಡೆದಿದೆ. ವಾಹನವು ಸಮತೋಲನವನ್ನು ಕಳೆದುಕೊಂಡು, ಬಲಭಾಗದ ಟೈರ್‌ಗಳು ನೆಲದಿಂದ ಮೇಲಕ್ಕೆತ್ತಿ ಟ್ರಕ್ ವಾಹನಗಳ ಮೇಲೆ ಎಡಭಾಗಕ್ಕೆ ಉರುಳುತ್ತದೆ, ಕೆಲವು ವಾಹನಗಳು ನಜ್ಜುಗುಜ್ಜಾಗುತ್ತವೆ. ಟ್ರಕ್ ಪಲ್ಟಿಯಾಗುತ್ತಿದ್ದಂತೆ, ಭಾರವಾದ ಕಬ್ಬಿಣ ಅಥವಾ ಲೋಹದ ರ‍್ಯಾಕ್ ಕುಸಿದು ಮಗುವನ್ನು ಕೆಳಗೆ ಸಿಲುಕಿಸುತ್ತದೆ. ಆ ಕ್ಷಣ ತೀರಾ ಭಯಾನಕವಾಗಿದ್ದು ಜನರನ್ನು ಆಘಾತಗೊಳಿಸಿದೆ. ಬಿದ್ದ ಲೋಹದ ರ‍್ಯಾಕ್ ಅನ್ನು ಎತ್ತಿಕೊಂಡು ಮಗುವನ್ನು ಹೊರತೆಗೆಯುತ್ತಿರುವುದನ್ನು ಕಾಣಬಹುದು. ಅಪಘಾತದ ನಂತರ, ಸುಮಾರು ಎರಡು ಗಂಟೆಗಳ ಕಾಲ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ, ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅನನುಕೂಲವಾಯಿತು.

Video:  ಮಾಲ್​ನಲ್ಲಿ ಮಾರಾಟಕ್ಕಿಟ್ಟಿದ್ದ ಡಸ್ಟ್​ಬಿನ್ ತೆರೆದಾಗ ಅದರೊಳಗಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕ

Video: ಮಾಲ್​ನಲ್ಲಿ ಮಾರಾಟಕ್ಕಿಟ್ಟಿದ್ದ ಡಸ್ಟ್​ಬಿನ್ ತೆರೆದಾಗ ಅದರೊಳಗಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕ

ಕಾನ್ಪುರದ ಮಾಲ್​ ಒಂದರಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಡಸ್ಟ್​ಬಿನ್​ ಅಲ್ಲಿ ಗುಟ್ಕಾ ಉಗುಳಿರುವುದು ಕಂಡು ಗ್ರಾಹಕರು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಡಸ್ಟ್​ಬಿನ್ ಮಾಲ್​ನ ಎಂಟ್ರೆನ್ಸ್​ನಲ್ಲಿರುತ್ತದೆ. ಆದರೆ ಮಾಲ್ ಒಳಗೆ ಇಟ್ಟಿರುವ ಡಸ್ಟ್​ಬಿನ್​ ಅನ್ನೂ ಬಿಡದೆ ಜನರು ಗುಟ್ಕಾ ಉಗುಳಿರುವುದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಡಿಸ್​​ಪ್ಲೇಗೆ ಇಟ್ಟಿರುವ ಡಸ್ಟ್​ಬಿನ್​ ಅನ್ನು ತೆರೆದು ನೋಡಿದಾಗ ಅದರೊಳಗೆ ಇರುವ ಎಂಜಿಲು ನೋಡಿ ಗ್ರಾಹಕ ಹೌಹಾರಿದ್ದಾರೆ.

ಮಧ್ಯರಸ್ತೆಯಲ್ಲಿ ಆಪರೇಷನ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯರು

ಮಧ್ಯರಸ್ತೆಯಲ್ಲಿ ಆಪರೇಷನ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯರು

ಎರ್ನಾಕುಲಂನಲ್ಲಿ, ರಸ್ತೆ ಅಪಘಾತಕ್ಕೀಡಾದ ಯುವಕನ ಪ್ರಾಣ ಉಳಿಸಲು ಮೂವರು ವೈದ್ಯರು ಮಧ್ಯರಸ್ತೆಯಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು. ಅಗತ್ಯ ವೈದ್ಯಕೀಯ ಉಪಕರಣಗಳ ಕೊರತೆಯಿದ್ದರೂ, ರೇಜರ್ ಬ್ಲೇಡ್ ಮತ್ತು ಪೇಪರ್ ಸ್ಟ್ರಾಗಳನ್ನು ಬಳಸಿ ಯುವಕನ ಉಸಿರಾಟವನ್ನು ಪುನಃಸ್ಥಾಪಿಸಿದರು. ವೈದ್ಯರ ಸಮಯಪ್ರಜ್ಞೆ ಮತ್ತು ಧೈರ್ಯವು ಗಾಯಾಳುವಿನ ಜೀವವನ್ನು ಉಳಿಸಿ, ಮಾನವೀಯತೆ ಮೆರೆದಿದ್ದಾರೆ.

Video: ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ

Video: ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ

ದಂಪತಿ ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ರೈಲಿನಿಂದ ಹಾರುವ ಮುನ್ನ ದಂಪತಿ ನಡುವೆ ಜಗಳವಾಗಿತ್ತು, ಪತಿ ಆಕೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮನವೊಲಿಸಲು ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ದಂಪತಿ ಮದುವೆಯಾಗಿ ಕೇವಲ ಎರಡು ತಿಂಗಳಾಗಿತ್ತು. ಎಷ್ಟೇ ಆತ ಪತ್ನಿಯ ಮನವೊಲಿಸಲು ಪ್ರಯತ್ನಿಸಿದರೂ ಪತ್ನಿ ಒಪ್ಪಲು ತಯಾರಿರಲಿಲ್ಲ ಇದಾದ ಸ್ವಲ್ಪ ಹೊತ್ತಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಯಾದಗಿರಿಗುಟ್ಟ ವಿಭಾಗದ ಬಂಗಾಳಿ ರೈಲು ನಿಲ್ದಾಣದ ಮೂಲಕ ಹಾದುಹೋಗುವಾಗ ದಂಪತಿಗಳು ರೈಲಿನ ಮೆಟ್ಟಿಲುಗಳ ಬಳಿ ನಿಂತಿದ್ದಾಗ ರೈಲಿನಿಂದ ಬಿದ್ದಿದ್ದಾರೆ.

ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ, ಹೈಕೋರ್ಟ್​​ ಸೂಚನೆ

ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ, ಹೈಕೋರ್ಟ್​​ ಸೂಚನೆ

ಮುಂಬರುವ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ, ಮದ್ಯ ಸೇವಿಸುವ ಸ್ಥಳಗಳಾದ ಸ್ಟಾರ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತಿಲ್ಲ ಎಂದು ಚೆನ್ನೈ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮಕ್ಕಳ ಭವಿಷ್ಯ ಮತ್ತು ಬಾಲ ನ್ಯಾಯ ಕಾಯ್ದೆಗೆ ವಿರುದ್ಧವಾದ ಇಂತಹ ಘಟನೆಗಳ ದೂರುಗಳು ಬಂದಲ್ಲಿ ತಕ್ಷಣ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ವಿದೇಶಕ್ಕೆ ಹೋಗಿ ಮತ್ತೆ ಭಾರತದ ಪ್ರಜಾಪ್ರಭುತ್ವವನ್ನು ಆಡಿಕೊಂಡ ರಾಹುಲ್​ಗೆ ಬಿಜೆಪಿ ತಿರುಗೇಟು

ವಿದೇಶಕ್ಕೆ ಹೋಗಿ ಮತ್ತೆ ಭಾರತದ ಪ್ರಜಾಪ್ರಭುತ್ವವನ್ನು ಆಡಿಕೊಂಡ ರಾಹುಲ್​ಗೆ ಬಿಜೆಪಿ ತಿರುಗೇಟು

ಬಿಜೆಪಿ, ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವದ ಕುರಿತು ನೀಡಿದ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಹುಲ್ 'ಭಾರತ ವಿರೋಧಿ ನಾಯಕ' ಎಂದು ಕರೆದ ಬಿಜೆಪಿ, ಅವರು ವಿದೇಶದಲ್ಲಿ ಭಾರತದ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿದ್ದಾರೆ ಮತ್ತು ಜಾರ್ಜ್ ಸೊರೊಸ್‌ನಂತಹ ಶಕ್ತಿಗಳೊಂದಿಗೆ ಸೇರಿ ದೇಶದಲ್ಲಿ ಅಶಾಂತಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ ನಿಮ್ಮ ಹೆಂಡತಿಯನ್ನು ನನ್ನ ಬಳಿ ಕಳುಹಿಸಿ ಎಂದ ಮುಖ್ಯ ಶಿಕ್ಷಕ

ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ ನಿಮ್ಮ ಹೆಂಡತಿಯನ್ನು ನನ್ನ ಬಳಿ ಕಳುಹಿಸಿ ಎಂದ ಮುಖ್ಯ ಶಿಕ್ಷಕ

ಮುಂಬೈನ ವಿಟ್ಟಿ ಇಂಟರ್ನ್ಯಾಷನಲ್ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಶುಲ್ಕ ಹೆಚ್ಚಳ ಪ್ರಶ್ನಿಸಿದ ಪೋಷಕರಿಗೆ 'ಶುಲ್ಕ ಕಟ್ಟಲಾಗದಿದ್ದರೆ ಹೆಂಡತಿಯನ್ನು ನನ್ನ ಬಳಿ ಕಳುಹಿಸಿ' ಎಂದು ಅಸಭ್ಯವಾಗಿ ಹೇಳಿದ್ದಾರೆ. ಈ ಹೇಳಿಕೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಶೇಕಡಾ 48 ರಷ್ಟು ಶುಲ್ಕ ಹೆಚ್ಚಳದ ಬಗ್ಗೆ ಪೋಷಕರು ದೂರು ನೀಡಿದ್ದಾರೆ.

Video: ಮನ್​ ಕಿ ಬಾತ್​ ಎಂಬುದು ಪ್ರಧಾನಿ ಮೋದಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ

Video: ಮನ್​ ಕಿ ಬಾತ್​ ಎಂಬುದು ಪ್ರಧಾನಿ ಮೋದಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ

ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕಿ ಬಾತ್ ಕೇಳಲು ಎಲ್ಲರೂ  ಕಾತುರದಿಂದ ಕಾಯುತ್ತಿರುತ್ತಾರೆ, ಇನ್ನೇನು ಹೊಸ ವಿಷಯಗಳ ಕುರಿತು ಚರ್ಚೆ ನಡೆಸಬಹುದು ಎನ್ನುವ ಕುತೂಹಲ ಪ್ರತಿಯೊಬ್ಬರಲ್ಲಿರುತ್ತದೆ. ಪ್ರಧಾನಿ ಮೋದಿ ನನ್ನ ಪ್ರೀತಿಯ ದೇಶ ವಾಸಿಗಳೇ ನಮಸ್ಕಾರ ಎನ್ನುವ ಶುಭಾಶಯದೊಂದಿಗೆ ಪ್ರತಿ ತಿಂಗಳು ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಈ ಕಾರ್ಯಕ್ರಮವು ಕೇವಲ ಒಬ್ಬ ವ್ಯಕ್ತಿಯ ಮಾತಾಗದೆ, ನಾನು ಎಂಬುವುದಕ್ಕಿಂತ ನಾವು ಎನ್ನುವ ಸಾಮೂಹಿಕತೆಯ ಶಕ್ತಿಯನ್ನು ಸಾರುತ್ತದೆ.

ಮಧ್ಯಪ್ರದೇಶದಲ್ಲಿ ಅಂಧ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಜೆಪಿ ನಾಯಕಿ

ಮಧ್ಯಪ್ರದೇಶದಲ್ಲಿ ಅಂಧ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಜೆಪಿ ನಾಯಕಿ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಿಜೆಪಿ ನಾಯಕಿ ಅಂಜು ಭಾರ್ಗವ ಅಂಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ವಿಡಿಯೋ ವೈರಲ್ ಆಗಿದೆ. ಧಾರ್ಮಿಕ ಮತಾಂತರದ ಆರೋಪದ ಮೇರೆಗೆ ಚರ್ಚ್ ಬಳಿ ನಡೆದ ಪ್ರತಿಭಟನೆ ವೇಳೆ ಈ ಘಟನೆ ಸಂಭವಿಸಿದೆ. ದೃಷ್ಟಿಹೀನತೆ ಬಗ್ಗೆ ಅಮಾನವೀಯ ಕಮೆಂಟ್ ಮಾಡಿ, ಹಲ್ಲೆ ನಡೆಸಿದ ನಾಯಕಿಯ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಪ್ರತಿಕ್ರಿಯೆ ನೀಡಿಲ್ಲ.

Video: ಎರಡು ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ ಮೂರು ಅಡಿಯಷ್ಟು ಕಸ ತುಂಬಿ ಹೋದ ಗೇಮರ್

Video: ಎರಡು ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ ಮೂರು ಅಡಿಯಷ್ಟು ಕಸ ತುಂಬಿ ಹೋದ ಗೇಮರ್

ಎರಡು ವರ್ಷಗಳ ಕಾಲ ಹೋಟೆಲ್​ ರೂಮಿನಲ್ಲಿದ್ದ ಗೇಮರ್ ಹೋಗುವಾಗ ಮೂರು ಅಡಿಯಷ್ಟು ಕಸ ತುಂಬಿ ಹೋಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಸಾಮಾನ್ಯವಾಗಿ ಹೋಟೆಲ್​ನಿಂದ ಅತಿಥಿಗಳು ಹೊರಡುವ ಮುನ್ನ ಫ್ಯಾನ್, ಲೈಟ್ ಇತರೆ ಉಪಕರಣಗಳನ್ನು ಆಫ್ ಮಾಡುವುದು, ಟವೆಲ್​ಗಳನ್ನು ಸರಿಯಾಗಿ ಮಡಚುವುದು, ಹಾಸಿಗೆಗಳನ್ನು ಜೋಡಿಸುವುದು, ಕಸವನ್ನು ಸರಿಯಾಗಿ ವಿವೇವಾರಿ ಮಾಡುವುದು ಅತಿಥಿಗಳು ಅನುಸರಿಸಬೇಕಾದ ಅಘೋಷಿತ ನಿಯಮಗಳಾಗಿವೆ.