AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾ ರಾಜೀವ್

ನಯನಾ ರಾಜೀವ್

ಮುಖ್ಯ ಉಪಸಂಪಾದಕಿ - TV9 Kannada

nayana.rajeev@tv9.com

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow On:
ಸಿಮ್ ಬದಲಾಯಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಸಿಮ್ ಬದಲಾಯಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಆದಿಲಾಬಾದ್​​ನಿಂದ ಚಿತ್ತೂರಿನವರೆಗೆ ಯಾವ ಪೆಟ್ರೋಲ್ ಬಂಕ್​ನಲ್ಲಿ ನೋಡಿದ್ರೂ ನೋ ಸ್ಟಾಕ್ ನೋರ್ಡ್​ಗಳದ್ದೇ ಕಾರುಬಾರು. ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಸರತಿ ಸಾಲು, ಒಂದು ಲೀಟರ್ ಪೆಟ್ರೋಲ್ ಸಿಕ್ಕರೆ ಸಾಕು ಅನ್ನೋ ಮನಸ್ಥಿತಿ. ಈ ಹೊತ್ತಿನಲ್ಲಿ, ಉದ್ಯಮಿಯೊಬ್ಬರ ಬುದ್ಧಿವಂತ ಕಲ್ಪನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಉರಿಯುವ ಚಿತೆಗಳ ನಡುವೆ ಸಪ್ತಪದಿ, ಸ್ಮಶಾನದಲ್ಲೊಂದು ಮದುವೆ

ಉರಿಯುವ ಚಿತೆಗಳ ನಡುವೆ ಸಪ್ತಪದಿ, ಸ್ಮಶಾನದಲ್ಲೊಂದು ಮದುವೆ

ಉತ್ತರಾಖಂಡದ ಅಲ್ಮೋರಾದಲ್ಲಿ ನವಜೋಡಿಯೊಂದು ಉರಿಯುವ ಚಿತೆಗಳ ನಡುವೆ ಸ್ಮಶಾನದಲ್ಲಿ ವಿವಾಹವಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸ್ಥಳೀಯ ಪಹಾಡಿ ಸಂಸ್ಕೃತಿ ಮತ್ತು ನಂಬಿಕೆಗಳಿಗೆ ಮಾಡಿದ ಅವಮಾನ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅನುಮತಿಯಿಲ್ಲದೆ ಈ ರೀತಿ ಕಾರ್ಯಕ್ರಮ ಆಯೋಜಿಸುವುದು ಕಾನೂನುಬಾಹಿರವಾಗಿದ್ದು, ಆಡಳಿತ ತನಿಖೆಗೆ ಆದೇಶಿಸಿದೆ.

ಮಾಟಮಂತ್ರದ ಶಂಕೆ ಒಡಹುಟ್ಟಿದವನನ್ನು ಕೊಂದು, ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

ಮಾಟಮಂತ್ರದ ಶಂಕೆ ಒಡಹುಟ್ಟಿದವನನ್ನು ಕೊಂದು, ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ಮಾಟಮಂತ್ರದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಸಹೋದರನನ್ನು ಕೊಲೆ ಮಾಡಿ, ಅವರ ಇಬ್ಬರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆರೋಪಿ ರಮೇಶ್ ವಾಸವ 20 ವರ್ಷಗಳ ಹಿಂದೆ ತನ್ನ ಇನ್ನೊಬ್ಬ ಸಹೋದರನನ್ನೂ ಕೊಂದಿದ್ದ. ಕುಟುಂಬದ ಆಂತರಿಕ ಕಲಹ ಮತ್ತು ಮಾಟಮಂತ್ರದ ಅನುಮಾನವೇ ಈ ಭೀಕರ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಂಗ್​ಟಕ್​​ನಲ್ಲಿ ಮಕ್ಕಳೊಂದಿಗೆ ಫುಟ್​ಬಾಲ್ ಆಡಿದ ಪ್ರಧಾನಿ ಮೋದಿ

ಗ್ಯಾಂಗ್​ಟಕ್​​ನಲ್ಲಿ ಮಕ್ಕಳೊಂದಿಗೆ ಫುಟ್​ಬಾಲ್ ಆಡಿದ ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮುಗಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಸಿಕ್ಕಿಂಗೆ ಆಗಮಿಸಿದ್ದಾರೆ. ಗ್ಯಾಂಗ್​ಟಾಕ್​ನಲ್ಲಿ ಮಕ್ಕಳೊಂದಿಗೆ ಫುಟ್​ಬಾಲ್ ಆಡಿರುವ ಫೋಟೊಗಳನ್ನು ಖುದ್ದಾಗಿ ಪ್ರಧಾನಿಯವರೇ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗ್ಯಾಂಗ್ಟಾಕ್‌ನಲ್ಲಿ ಒಂದು ಸುಂದರವಾದ ಬೆಳಗ್ಗೆಯಲ್ಲಿ ನನ್ನ ಯುವ ಸ್ನೇಹಿತರೊಂದಿಗೆ ಫುಟ್ಬಾಲ್ ಆಡುವುದಕ್ಕಿಂತ ಖುಷಿ ಬೇರೇನೂ ಇಲ್ಲ ಎಂದು ಬರೆದುಕೊಂಡಿದ್ದಾರೆ. 4,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಾಗುವುದು.

ಪಂಜಾಬ್‌ನಲ್ಲಿ ಸ್ಫೋಟ, ರೈಲ್ವೆ ಹಳಿಗೆ ಹಾನಿ, ಅಪರಿಚಿತ ಶವ ಪತ್ತೆ

ಪಂಜಾಬ್‌ನಲ್ಲಿ ಸ್ಫೋಟ, ರೈಲ್ವೆ ಹಳಿಗೆ ಹಾನಿ, ಅಪರಿಚಿತ ಶವ ಪತ್ತೆ

ಪಂಜಾಬ್‌ನ ಪಟಿಯಾಲದಲ್ಲಿ ರೈಲ್ವೆ ಹಳಿ ಸಮೀಪ ಸೋಮವಾರ ತಡರಾತ್ರಿ ಸ್ಫೋಟ ಸಂಭವಿಸಿದೆ. ಶಂಭು-ಅಂಬಾಲ ಮಾರ್ಗದ ಹಳಿ ಹಾನಿಯಾಗಿದ್ದು, ಘಟನಾ ಸ್ಥಳದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಕಾರಣ ಇನ್ನೂ ಅಸ್ಪಷ್ಟವಾಗಿದ್ದು, ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದು ಹಿಂದಿನ ಸಿರ್ಹಿಂದ್ ಘಟನೆಯನ್ನು ನೆನಪಿಸಿದೆ, ಭದ್ರತಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾಮೂಹಿಕ ವಿವಾಹದಲ್ಲಿ ಅನಿರೀಕ್ಷಿತ ಅತಿಥಿಯಾಗಿ ಬಂದ ಬಿರುಗಾಳಿ, ಸಪ್ತಪದಿ ತುಳಿಯುವುದ ಬಿಟ್ಟು ಓಡಿಹೋದ 36 ಜೋಡಿಗಳು

ಸಾಮೂಹಿಕ ವಿವಾಹದಲ್ಲಿ ಅನಿರೀಕ್ಷಿತ ಅತಿಥಿಯಾಗಿ ಬಂದ ಬಿರುಗಾಳಿ, ಸಪ್ತಪದಿ ತುಳಿಯುವುದ ಬಿಟ್ಟು ಓಡಿಹೋದ 36 ಜೋಡಿಗಳು

ಸಾಮೂಹಿಕ ವಿವಾಹ ಸಮಾರಂಭದ ವೇಳೆ ಬಿರುಗಾಳಿ ಬೀಸಿ ನವ ಜೋಡಿಗಳು ಹೆದರಿ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ.  ಬೇಸಿಗೆಯ ಆರಂಭದ ಬಿಸಿಲಿಗೆ ತತ್ತರಿಸಿದ್ದ ರಾಜಸ್ಥಾನದ ಟೋಂಕ್‌ನಲ್ಲಿ ಗುಡುಗು ಸಹಿತ ಮಳೆ ಎಲ್ಲರಿಗೂ ಸಂತೋಷ ನೀಡಬೇಕಿತ್ತು. ಆದರೆ, ಧಾಕಡ್ ಸಮುದಾಯ ಆಯೋಜಿಸಿದ್ದ 36 ಜೋಡಿಗಳ ಸಾಮೂಹಿಕ ವಿವಾಹದ ಮಂಟಪದಲ್ಲಿ ಬಿರುಗಾಳಿ, ಮಳೆ ಭೀಕರ ಅನಾಹುತವನ್ನೇ ಸೃಷ್ಟಿಸಿತ್ತು.

Video: ಹರಿಯಾಣದಲ್ಲಿ ಖಾಸಗಿ ಬಸ್​​ಗೆ ಬೆಂಕಿ, ಇಬ್ಬರು ಸಾವು, ಆರು ಮಂದಿಗೆ ಗಾಯ

Video: ಹರಿಯಾಣದಲ್ಲಿ ಖಾಸಗಿ ಬಸ್​​ಗೆ ಬೆಂಕಿ, ಇಬ್ಬರು ಸಾವು, ಆರು ಮಂದಿಗೆ ಗಾಯ

ಹರಿಯಾಣದಲ್ಲಿ ಖಾಸಗಿ ಬಸ್​​ಗೆ ಬೆಂಕಿ ಹೊತ್ತಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಿವಾನಿ-ಹನ್ಸಿ ರಸ್ತೆಯಲ್ಲಿ ಖಾಸಗಿ ಬಸ್‌ನಲ್ಲಿ ಮಿಲ್ಕ್‌ಪುರ್ ಗ್ರಾಮದ ಬಳಿ ಬೆಂಕಿ ಹೊತ್ತಿಕೊಂಡು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಬಸ್ ಭಿವಾನಿಯಿಂದ ಹನ್ಸಿ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.ಹೆಚ್ಚಿನ ಪ್ರಯಾಣಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಇಬ್ಬರು ಒಳಗೆ ಸಿಲುಕಿಕೊಂಡಿದ್ದಾರೆ. ಗಾಯಾಳುಗಳು ಪ್ರಸ್ತುತ ಹನ್ಸಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯಕೀಯ ಕಾಲೇಜಿನಲ್ಲಿ ಆಘಾತಕಾರಿ ಘಟನೆ, ವೈದ್ಯಕೀಯ ಉಪಕರಣಗಳ ಸಾಗಿಸುವ ಲಿಫ್ಟ್​​ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವು

ವೈದ್ಯಕೀಯ ಕಾಲೇಜಿನಲ್ಲಿ ಆಘಾತಕಾರಿ ಘಟನೆ, ವೈದ್ಯಕೀಯ ಉಪಕರಣಗಳ ಸಾಗಿಸುವ ಲಿಫ್ಟ್​​ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವು

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ಲಿಫ್ಟ್​​ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 50 ವರ್ಷ ವಯಸ್ಸಿನ ಜ್ಯೋತಿ ಅಹಿರೆ ಎಂಬುವವರ ತಲೆ ಲಿಫ್ಟ್​ನಲ್ಲಿ ಸಿಲುಕಿ ಒದ್ದಾಡಿದ್ದಾರೆ. ಸಿಸಿಟಿವಿಯಲ್ಲಿ ಈ ಭಯಾನಕ ಕ್ಷಣ ಸೆರೆಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು ಆದರೆ ಗಾಯಗಳಿಂದಾಗಿ ಅವರು ಸಾವನ್ನಪ್ಪಿದರು. ಈ ಘಟನೆಯು ಆಸ್ಪತ್ರೆಯಲ್ಲಿನ ಸುರಕ್ಷತಾ ಲೋಪದ ಬಗ್ಗೆ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ

ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ

ಶ್ವೇತಭವನದ ಭೋಜನಕೂಟದಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ ಕೋಲ್ ಥಾಮಸ್ ಅಲೆನ್ ವಿರುದ್ಧ ಅಧ್ಯಕ್ಷರ ಹತ್ಯೆ ಯತ್ನ ಸೇರಿದಂತೆ ಗಂಭೀರ ಫೆಡರಲ್ ಆರೋಪಗಳನ್ನು ದಾಖಲಿಸಲಾಗಿದೆ. ಇವು ಸಾಬೀತಾದರೆ ಆತನಿಗೆ ಜೀವಾವಧಿ ಶಿಕ್ಷೆ ಎದುರಾಗಲಿದೆ. ಉನ್ನತ ಶಿಕ್ಷಣ ಪಡೆದ ಅಲೆನ್, ಟ್ರಂಪ್ ವಿರೋಧಿ ಪ್ರಣಾಳಿಕೆ ಬರೆದು ದಾಳಿ ನಡೆಸಿದ್ದ.

ಖಾತೆದಾರರು ಬಂದ್ರೆ ಮಾತ್ರ ಹಣ ಕೊಡೋದು ಎಂದ ಬ್ಯಾಂಕ್ ಸಿಬ್ಬಂದಿ, ಮೃತ ಸಹೋದರಿಯ ಅಸ್ಥಿಪಂಜರ ಹೊತ್ತು ಬಂದ ವ್ಯಕ್ತಿ

ಖಾತೆದಾರರು ಬಂದ್ರೆ ಮಾತ್ರ ಹಣ ಕೊಡೋದು ಎಂದ ಬ್ಯಾಂಕ್ ಸಿಬ್ಬಂದಿ, ಮೃತ ಸಹೋದರಿಯ ಅಸ್ಥಿಪಂಜರ ಹೊತ್ತು ಬಂದ ವ್ಯಕ್ತಿ

ಒಡಿಶಾದ ಕಿಯೋಂಜಾರ್‌ನಲ್ಲಿ ಜಿತು ಮುಂಡಾ ಎಂಬಾತ ಮೃತ ಸಹೋದರಿಯ 19,300 ರೂ. ಪಡೆಯಲು, ಬ್ಯಾಂಕ್‌ ನಿಯಮಗಳ ತೊಡಕಿನಿಂದಾಗಿ ಅವಳ ಅಸ್ಥಿಪಂಜರವನ್ನೇ ಹೊತ್ತು 3 ಕಿ.ಮೀ ನಡೆದು ಬ್ಯಾಂಕ್‌ಗೆ ಬಂದಿದ್ದಾನೆ. ಹಣ ಪಡೆಯಲು ಮರಣ ಪ್ರಮಾಣಪತ್ರ, ಉತ್ತರಾಧಿಕಾರ ಪತ್ರದಂತಹ ದಾಖಲೆಗಳಿಲ್ಲದ ಬುಡಕಟ್ಟು ಜನಾಂಗದ ಜಿತು ಅವರ ಈ ದುರಂತ ನಿರ್ಧಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಬ್ಯಾಂಕ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಇದು ನನ್ನ ಕೊನೆಯ ರ‍್ಯಾಲಿ, ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದ ಮಣ್ಣಿನಲ್ಲಿ ಪ್ರಧಾನಿ ಮೋದಿ ವಿಜಯಘೋಷ

ಇದು ನನ್ನ ಕೊನೆಯ ರ‍್ಯಾಲಿ, ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದ ಮಣ್ಣಿನಲ್ಲಿ ಪ್ರಧಾನಿ ಮೋದಿ ವಿಜಯಘೋಷ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಬರಾಕ್‌ಪೋರ್‌ನಲ್ಲಿ ಬಿಜೆಪಿಯ ಬಲ ಪ್ರದರ್ಶನ ಮಾಡಿದರು. ತಮ್ಮ ಭಾಷಣದ ಉದ್ದಕ್ಕೂ ವಿಜಯದ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ ಅವರು, ಮುಂದಿನ ಬಾರಿ ಬರುವುದು ಬಿಜೆಪಿಯ ಪ್ರಮಾಣವಚನ ಸಮಾರಂಭಕ್ಕೆ ಎಂದು ಘೋಷಿಸುವ ಮೂಲಕ ರಾಜಕೀಯ ಸಂಚಲನ ಮೂಡಿಸಿದರು.

ಪತ್ನಿಯ ಕೊಂದು ಶವದ ಮೇಲೆ ಸಿಮೆಂಟ್ ಸುರಿದು, ಮರದ ಪೆಟ್ಟಿಗೆಯಲ್ಲಿ ಬಚ್ಚಿಟ್ಟ ಪತಿ

ಪತ್ನಿಯ ಕೊಂದು ಶವದ ಮೇಲೆ ಸಿಮೆಂಟ್ ಸುರಿದು, ಮರದ ಪೆಟ್ಟಿಗೆಯಲ್ಲಿ ಬಚ್ಚಿಟ್ಟ ಪತಿ

ಪತ್ನಿಯ ಕೊಂದು ಶವದ ಮೇಲೆ ಸಿಮೆಂಟ್ ಸುರಿದು ಮರದ ಪೆಟ್ಟಿಗೆಯಲ್ಲಿ ಬಚ್ಚಿಟ್ಟು, ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಹಾರ ತಜ್ಞೆ ಶಿಲ್ಪಾ ಸಾಲ್ವಿ (39) ಅವರ ಕೊಳೆತ ಶವವು ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ. ಆರೋಪಿ ವಿಶಾಲ್ ಸಾಲ್ವಿ (40), ನಾಲ್ಕು ದಿನಗಳ ಹಿಂದೆ ತನ್ನ ಪತ್ನಿ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಮೊದಲಿಗೆ ಇದನ್ನು ಸಾಮಾನ್ಯ ನಾಪತ್ತೆ ಪ್ರಕರಣವೆಂದು ಭಾವಿಸಿ ತನಿಖೆ ಆರಂಭಿಸಿದ್ದರು. ಆದರೆ, ಮನೆಯೊಳಗೆ ಸಿಕ್ಕ ಒಂದು ಸಣ್ಣ ಸುಳಿವು ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿತು.