ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್ ಇಂಡಿಯಾ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ
ಆಂತರಿಕ ಜಗಳಗಳು ಅಲ್ಲೂ ಇದ್ವು, ಆದ್ರೆ ಇಸ್ರೇಲ್ನ ವಿಪಕ್ಷ ನಾಯಕರು ಪ್ರಧಾನಿ ಮೋದಿ ಭಾಷಣವನ್ನು ಭಹಿಷ್ಕರಿಸಲಿಲ್ಲ
ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿ ಐತಿಹಾಸಿಕವಾಗಿದ್ದು, ನೆಸ್ಸೆಟ್ನಲ್ಲಿನ ಅವರ ಭಾಷಣಕ್ಕೆ ವಿಪಕ್ಷ ನಾಯಕರು ಗೌರವ ನೀಡಿದರು. ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ ಪಡೆದ ಮೊದಲ ವಿಶ್ವ ನಾಯಕರಾದ ಮೋದಿ, ಅಮೆರಿಕ ಅಧ್ಯಕ್ಷರಿಗೆ ಸಮಾನರಾಗಿ ಸ್ವಾಗತಿಸಲ್ಪಟ್ಟರು. ಈ ಭೇಟಿಯು ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದ್ದು, ಪರಸ್ಪರ ಗೌರವ ಮತ್ತು ಸ್ನೇಹವನ್ನು ಎತ್ತಿಹಿಡಿದಿದೆ.
- Nayana Rajeev
- Updated on: Feb 26, 2026
- 3:05 pm
ದೆಹಲಿ: ಮನೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಮಹಿಳೆ, ಮೂವರು ಹೆಣ್ಣುಮಕ್ಕಳ ಶವ ಪತ್ತೆ
ದೆಹಲಿಯಲ್ಲಿ ಭೀಕರ ಕೊಲೆಗಳು ನಡೆದಿದೆ. ಸಮಯಪುರ್ ಬದ್ಲಿಯ ಮನೆಯೊಂದರಲ್ಲಿ ತಾಯಿ ಮತ್ತು ಅವರ ಮೂವರು ಹೆಣ್ಣುಮಕ್ಕಳ ಕತ್ತು ಸೀಳಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ತಾಯಿ ಅನಿತಾ ಹಾಗೂ ಅವರ 7, 5, 3 ವರ್ಷದ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ಪತಿ ನಾಪತ್ತೆಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದು ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
- Nayana Rajeev
- Updated on: Feb 26, 2026
- 2:11 pm
Video: ಬ್ರೇಕಪ್ ನೋವಲ್ಲಿ ಊಟ, ತಿಂಡಿ ಬಿಟ್ಟ ಮಗ, ಹುಡುಗಿ ಬಳಿ ಹೋಗಿ ಕೈಮುಗಿದು ಬೇಡಿದ ತಂದೆ
ಬ್ರೇಕಪ್ ಎಂಬುದು ಎಂಥವರ ಬಾಳಲ್ಲೂ ಬರಸಿಡಿಲಿನಂತೆ ಎರಗಿ ಬಿಡುತ್ತೆ, ಇಷ್ಟು ದಿನ ಜತೆಗಿದ್ದವರು, ತಮ್ಮ ನೋವು, ನಲಿವಿನಲ್ಲಿ ನಮ್ಮೊಂದಿಗಿದ್ದವರು, ಏನೇ ಸಣ್ಣ ಪುಟ್ಟ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದವರು ಜತೆಗಿಲ್ಲವೆಂದಾದಾಗ ಏನೂ ಬೇಡ ಎನಿಸುವುದು ಸಹಜ. ಹಾಗೆಯೇ ಇಲ್ಲೊಬ್ಬ ಯುವಕ ಬ್ರೇಕಪ್ ನೋವಿನಲ್ಲಿ ಊಟ-ತಿಂಡಿ ಬಿಟ್ಟು ಕೂತಿದ್ದ, ಮಗನ ಸ್ಥಿತಿಯನ್ನು ನೋಡಲಾಗದೆ ತಂದೆ ಮಗನನ್ನು ಕರೆದುಕೊಂಡು ಹುಡುಗಿ ಬಳಿ ಹೋಗಿ ಆಕೆಗೆ ಕೈಮುಗಿದು ತನ್ನ ಮಗನ ಜೀವನಕ್ಕೆ ವಾಪಸಾಗುವಂತೆ ಪರಿಪರಿಯಾಗಿ ಬೇಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅದು ತಂದೆಯೊಬ್ಬ ಮಕ್ಕಳ ಮೇಲಿಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಈ ವಿಡಿಯೋವನ್ನು ರಮೇಶ್ ತಿವಾರಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
- Nayana Rajeev
- Updated on: Feb 26, 2026
- 12:59 pm
ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇದನ್ನು ಇಲ್ಲಿಗೆ ಬಿಡುವುದಿಲ್ಲ, ಎನ್ಸಿಇಆರ್ಟಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ
ಎನ್ಸಿಇಆರ್ಟಿ 8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿನ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇದನ್ನು ಪಿತೂರಿ ಎಂದು ಕರೆದಿದ್ದು, ಹೊಣೆಗಾರರನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಆದೇಶಿಸಿದ್ದಾರೆ. ಪಠ್ಯಪುಸ್ತಕಗಳನ್ನು ಹಿಂಪಡೆದಿದ್ದರೂ, ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳು ಸಹ ಈ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದಾರೆ.
- Nayana Rajeev
- Updated on: Feb 26, 2026
- 12:03 pm
Video: ಮೋದಿ ಜಾಕೆಟ್ ತೊಟ್ಟು ಪ್ರಧಾನಿ ಮೋದಿಗೆ ಸರ್ಪ್ರೈಸ್ ಕೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತೀಯ ಉಡುಗೆ ತೊಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನು ಅಚ್ಚರಿಗೊಳಿಸಿರುವ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ಗೆ ಬುಧವಾರ ಹೋಗಿದ್ದು, ಇಂದು ಕೂಡ ಅಲ್ಲೇ ಇರಲಿದ್ದಾರೆ. ಇಸ್ರೇಲ್ಗೆ ಆಗಮಿಸಿದ ಮೋದಿ ಅವರು ವಿಮಾನ ಇಳಿದು ಬರುತ್ತಿದ್ದಂತೆ ನೆತನ್ಯಾಹು ನಗುನಗುತ್ತಾ ಕೈ ಹಿಡಿದು ಅಪ್ಪಿಕೊಂಡಿದ್ದರು. ಈ ಸಂದರ್ಭದಲ್ಲಿ ನೆತನ್ಯಾಹು ಪತ್ನಿ ಸಾರಾ ಅವರು ಜೊತೆಗಿದ್ದು ಮೋದಿ ಅವರನ್ನು ಸ್ವಾಗತಿಸಿದ್ದರು.
- Nayana Rajeev
- Updated on: Feb 26, 2026
- 11:31 am
ಕುವೈತ್ನಲ್ಲಿರುವ ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ
ತೆಲಂಗಾಣದ ಹೈದರಾಬಾದ್ನಲ್ಲಿ ಬಿಎಸ್ಸಿ ವಿದ್ಯಾರ್ಥಿನಿ ಹಾಗೂ ಯೂಟ್ಯೂಬರ್ ಕೋಮಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುವೈತ್ನಲ್ಲಿರುವ ತನ್ನ ತಾಯಿಗೆ ಐ ಲವ್ ಯೂ ಸೋ ಮಚ್ ಎಂದು ಸಂದೇಶ ಕಳುಹಿಸಿ, ಸಹೋದರನನ್ನು ನೋಡಿಕೊಳ್ಳುವಂತೆ ಕೇಳಿಕೊಂಡ ನಂತರ ಈ ದುರ್ಘಟನೆ ನಡೆದಿದೆ. 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ನೊಂದಿಗೆ ಸಂಬಂಧ ಮುರಿದುಬಿದ್ದಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ಆರು ತಿಂಗಳ ಹಿಂದೆ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.
- Nayana Rajeev
- Updated on: Feb 26, 2026
- 10:55 am
Video: ಹಿಮಗಟ್ಟಿದ ಪ್ಯಾಂಗಾಂಗ್ ತ್ಸೋ ಸರೋವರದಲ್ಲಿ ಮ್ಯಾರಥಾನ್
ಹಿಮಗಟ್ಟಿರುವ ಪ್ಯಾಂಗಾಂಗ್ ತ್ಸೊ ಸರೋವರದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಲಡಾಖ್ನ ಲೇಹ್ನಲ್ಲಿದೆ. ನೀರಿನ ಮೇಲ್ಮೈ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುತ್ತದೆ, ಭಾರತದ ಲಡಾಖ್ನ ಪ್ಯಾಂಗಾಂಗ್ ಸರೋವರ ಮತ್ತು ಸಿಕ್ಕಿಂನ ತ್ಸೊಂಗೊ ಸರೋವರ ಎರಡರಲ್ಲೂ ಇದೇ ರೀತಿಯ ಅನುಭವ ಕಾಣಬಹುದು.ಇವು ನೀಲಿ ಅಥವಾ ಬಿಳಿ ಬಣ್ಣದ ಐಸ್ ಶೀಟ್ನಂತೆ ಕಾಣುತ್ತವೆ.ಟಿಬೆಟ್ನಂತಹ ಎತ್ತರದ ಪ್ರದೇಶಗಳಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ.
- Nayana Rajeev
- Updated on: Feb 26, 2026
- 10:25 am
ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ಶಾಸಕ
ಕೀನ್ಯಾದ ಯುವ ಶಾಸಕ ಕ್ಯಾಲೆಬ್ ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದು, ಈ ನಡೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಸ್ಕಾನ್ ಭಕ್ತರಾಗಿರುವ ಕ್ಯಾಲೆಬ್, ಈ ಮೂಲಕ ಧಾರ್ಮಿಕ ನಂಬಿಕೆ ಮತ್ತು ಸಾರ್ವಜನಿಕ ಸೇವೆಗಳ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ. ಇದು ಕೇವಲ ಪ್ರಚಾರವಲ್ಲ, ಹೃದಯದಿಂದ ಬಂದ ಆಳವಾದ ನಂಬಿಕೆ ಎಂದು ಇಸ್ಕಾನ್ ಹೇಳಿದ್ದು, ಈ ಹಿಂದೆ ಇತರ ರಾಷ್ಟ್ರಗಳ ನಾಯಕರು ಇದೇ ರೀತಿ ಭಗವದ್ಗೀತೆ ಪ್ರಮಾಣ ಮಾಡಿದ್ದರು.
- Nayana Rajeev
- Updated on: Feb 26, 2026
- 9:58 am
ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಇತಿಹಾಸ ಸೃಷ್ಟಿಸಿದ ಮೋದಿ, ಟ್ರಂಪ್ರನ್ನು ಹಿಂದಿಕ್ಕಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಗುರುವಾರ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 100 ಮಿಲಿಯನ್ ಫಾಲೋವರ್ಸ್ಗಳ ಗಡಿಯನ್ನು ದಾಟಿದ ಮೊದಲ ವಿಶ್ವ ನಾಯಕ ಮತ್ತು ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2014 ರಲ್ಲಿ ಇನ್ಸ್ಟಾಗ್ರಾಮ್ಗೆ ಸೇರಿದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗಿಂತ ಎರಡು ಪಟ್ಟು ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಮುಂದಿನ ಐದು ಪ್ರಮುಖ ವಿಶ್ವ ನಾಯಕರ ಒಟ್ಟು ಅನುಯಾಯಿಗಳ ಸಂಖ್ಯೆಯೂ ಪ್ರಧಾನಿ ಮೋದಿಗಿಂತ ಕಡಿಮೆಯಾಗಿದೆ.
- Nayana Rajeev
- Updated on: Feb 26, 2026
- 9:28 am
Video: ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು ಟಿಕೆಟ್ ಕೊಡದೆ ಕಳಿಸಿದ ರೈಲ್ವೆ ಬುಕಿಂಗ್ ಸಿಬ್ಬಂದಿ
ರೈಲ್ವೆ ಟಿಕೆಟ್ ಕೌಂಟರ್ನಲ್ಲಿರುವ ಸಿಬ್ಬಂದಿ ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು, ಟಿಕೆಟ್ ಕೂಡ ಕೊಡದೆ ಕಳುಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಡ ಮಹಿಳೆಯೊಬ್ಬರು ರೈಲ್ವೆ ಟಿಕೆಟ್ಗಾಗಿ ಬುಕಿಂಗ್ ಕ್ಲರ್ಕ್ಗೆ ಸಾವಿರ ರೂ. ನೀಡಿದ್ದರು. ಅವರಿಗೆ ಯಾವುದೇ ಟಿಕೆಟ್ ಕೊಡದೆ, 200 ರೂ. ಅವರಿಟ್ಟುಕೊಂಡು 800 ರೂ.ವಾಪಸ್ ಕೊಟ್ಟಿದ್ದಾರೆ.
- Nayana Rajeev
- Updated on: Feb 26, 2026
- 8:18 am
Video: ಚಲಿಸುವ ಕಾರಿನಿಂದ ತಂದೆಯನ್ನು ಹೊರಗೆಸೆದು, ಒದ್ದು, ಒಂಟಿಯಾಗಿ ಬಿಟ್ಟು ಹೋದ ಮಗ
ಮಕ್ಕಳೇ ನಮ್ಮ ಭವಿಷ್ಯ ಎಂದುಕೊಂಡು ಕೇಳಿದ್ದೆಲ್ಲಾ ಕೊಡಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಬೆಟ್ಟದಷ್ಟು ಆಸೆ ಹೊತ್ತ ತಂದೆಯೊಬ್ಬರು ಬೀದಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ದುಷ್ಟ ಮಗನೊಬ್ಬ ಚಲಿಸುತ್ತಿರುವ ಕಾರಿನಿಂದ ತಂದೆಯನ್ನು ಹೊರಗೆಸೆದು, ರಸ್ತೆಯಲ್ಲೇ ಮನಬಂದಂತೆ ತಳಿಸಿ, ಅವರನ್ನು ಒಂಟಿಯಾಗಿ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಮಗ ನಗರಕ್ಕೆ ಓದಲು ಹೋಗ್ತಿದ್ದಾನೆ, ಒಳ್ಳೆಯ ನೌಕರಿ ಪಡೆಯುತ್ತಾನೆ, ತನ್ನ ಕೊನೆಗಾಲದಲ್ಲಿ ನೆರವಾಗುತ್ತಾನೆ ಎನ್ನುವ ಆಸೆಯಲ್ಲಿದ್ದ ತಂದೆಯ ಕನಸು ನುಚ್ಚು ನೂಡು ಮಾಡಿರುವ ವಿಡಿಯೋ ಇದು. ಅಲ್ಲೇ ಹಿಂದೆ ಬರುತ್ತಿದ್ದ ಕಾರುನಿಂದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿದ್ದು, ಅವರ ಸಹಾಯಕ್ಕೆ ಬಂದರು.
- Nayana Rajeev
- Updated on: Feb 26, 2026
- 7:51 am
ಹಿಮಾಚಲ ಪ್ರದೇಶ: 20 ದೆಹಲಿ ಪೊಲೀಸರನ್ನು ಬಂಧಿಸಿದ ಶಿಮ್ಲಾ ಪೊಲೀಸರು, ಕಾರಣವೇನು?
ಶಿಮ್ಲಾ ಪೊಲೀಸರು ಹಿಮಾಚಲ ಪ್ರದೇಶದಲ್ಲಿ 20 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ಬಂದಿದ್ದ ದೆಹಲಿ ಪೊಲೀಸರನ್ನು ಹಿಮಾಚಲ ಪೊಲೀಸರು ತಡೆದರು. ಇದು ಎರಡೂ ರಾಜ್ಯಗಳ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು. ಬಿಜೆಪಿ ಹಿಮಾಚಲ ಸರ್ಕಾರವನ್ನು ಟೀಕಿಸಿದೆ.
- Nayana Rajeev
- Updated on: Feb 26, 2026
- 7:22 am