ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್ ಇಂಡಿಯಾ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ
Blinkit:ಹತ್ತು ನಿಮಿಷಗಳಲ್ಲಿ ಮನೆ ಮನೆಗೆ ಡೆಲಿವರಿ ವ್ಯವಸ್ಥೆ ಕೈಬಿಟ್ಟ ಬ್ಲಿಂಕಿಟ್
ಗಿಗ್ ಕಾರ್ಮಿಕರ ಮುಷ್ಕರ ಮತ್ತು ಸುರಕ್ಷತೆಯ ಕಳವಳಗಳ ಹಿನ್ನೆಲೆಯಲ್ಲಿ ಬ್ಲಿಂಕಿಟ್ ತನ್ನ 10 ನಿಮಿಷಗಳ ಮನೆ ಮನೆಗೆ ಡೆಲಿವರಿ ವ್ಯವಸ್ಥೆಯನ್ನು ಕೈಬಿಟ್ಟಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಮಧ್ಯ ಪ್ರವೇಶಿಸಿ, ಕಂಪನಿಗಳಿಗೆ ವಿತರಣಾ ಸಮಯದ ಮಿತಿಗಳನ್ನು ತೆಗೆದುಹಾಕಲು ಸಲಹೆ ನೀಡಿದ ನಂತರ ಈ ನಿರ್ಧಾರ ಬಂದಿದೆ. ಇತರ ಆನ್ಲೈನ್ ಆ್ಯಪ್ಗಳೂ ಇಂತಹ ಬದ್ಧತೆಗಳನ್ನು ತೆಗೆಯಲು ಒಪ್ಪಿವೆ.
- Nayana Rajeev
- Updated on: Jan 13, 2026
- 2:40 pm
ಬೀದಿ ನಾಯಿಗಳು ಕಚ್ಚಿದ್ರೆ ಸರ್ಕಾರವೇ ಪರಿಹಾರ ನೀಡಬೇಕು: ಸುಪ್ರೀಂ
ಬೀದಿ ನಾಯಿ ಕಡಿತದಿಂದ ಸಾವು ಅಥವಾ ಗಾಯಗಳಾದಲ್ಲಿ ಸರ್ಕಾರವೇ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮಕ್ಕಳು ಮತ್ತು ವೃದ್ಧರ ಮೇಲಿನ ದಾಳಿಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ ನ್ಯಾಯಾಲಯ, ನಾಯಿ ಪೋಷಕರು ತಮ್ಮ ಮನೆಯಲ್ಲಿಯೇ ಅವುಗಳನ್ನು ನೋಡಿಕೊಳ್ಳಬೇಕು ಎಂದಿದೆ. ಮಾನವನ ಸುರಕ್ಷತೆಗೆ ಆದ್ಯತೆ ನೀಡಿ, ಹೊಣೆಗಾರಿಕೆ ನಿಗದಿಪಡಿಸುವ ಕಠಿಣ ಕ್ರಮಗಳ ಬಗ್ಗೆ ನ್ಯಾಯಪೀಠ ಸೂಚಿಸಿದೆ.
- Nayana Rajeev
- Updated on: Jan 13, 2026
- 2:02 pm
Video: ಏನಾದ್ರೂ ತಗೊಳ್ಳಿ ಪ್ಲೀಸ್, ಗಂಟೆಗಟ್ಟಲೆ ಟೈಂ ವೇಸ್ಟ್ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಯಾವುದೇ ಅಂಗಡಿಗೆ ಹೋದಾಗ ಅಲ್ಲಿರುವ ವಸ್ತುಗಳು ಇಷ್ಟವಾಗಬೇಕಂತೇನಿಲ್ಲ, ಖರೀದಿ ಮಾಡಬೇಕಂತಲೂ ಇಲ್ಲ. ಆದರೆ ಗಂಟೆಗಟ್ಟಲೆ ಅದು ತೋರಿಸಿ, ಇದು ತೋರಿಸಿ ಎಂದು ಸಿಬ್ಬಂದಿಯ ಸಮಯ ಹಾಳು ಮಾಡಿ, ಏನೂ ಕೊಳ್ಳದೆ ಹೊರಟಾಗ ಅವರಿಗೆ ಬೇಸರವಾಗದೇ ಇದ್ದೀತೆ. ಅಂಥದ್ದೇ ಘಟನೆ ಜೈಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ಜೈಪುರದ ಅಂಗಡಿಗೆ ಹೋಗಿ ಗಂಟೆಗಟ್ಟಲೆ ಸಮಯ ಹಾಳು ಮಾಡಿ ಕೊನೆಗೆ ಏನೂ ಕೊಳ್ಳದೆ ಹೊರಟಾಗ ಮಹಿಳಾ ವ್ಯಾಪಾರಿ ಗ್ರಾಹಕರ ಕಾಲಿಗೆ ಬಿದ್ದು ಏನಾದರೂ ಖರೀದಿ ಮಾಡುವಂತೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- Nayana Rajeev
- Updated on: Jan 13, 2026
- 1:00 pm
Video: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯಪ್ರಜ್ಞೆಯಿಂದ ಮಗಳ ಕಾಪಾಡಿದ ತಾಯಿ
ಅಪಹರಣಕಾರರ ಕೈಗೆ ಸಿಗುವ ಮುನ್ನವೇ ತಾಯಿಯೊಬ್ಬಳು ತನ್ನ ಮಗಳನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುಮಾರು 5-6 ವರ್ಷ ವಯಸ್ಸಿನ ಬಾಲಕಿ ಮನೆಯ ಹೊರಗೆ ಆಟವಾಡುತ್ತಿರುವಾಗ ಬಿಳಿ ವ್ಯಾನ್ ನಿಧಾನವಾಗಿ ಡ್ರೈವ್ವೇ ಮೂಲಕ ಹಾದುಹೋಗುವುದನ್ನು ತಾಯಿ ಗಮನಿಸಿದ್ದಾಳೆ, ಬಳಿಕ ಮಗಳನ್ನು ಕರೆದಾಗ ಬಾಲಕಿ ತಾಯಿಯ ಬಳಿ ಓಡಿ ಬಂದಿದ್ದಾಳೆ. ಮುಂದಕ್ಕೆ ಹೋಗಿದ್ದ ವ್ಯಾನ್ ಮತ್ತೆ ನಿಧಾನವಾಗಿ ಹಿಂದಕ್ಕೆ ಬಂದಿದೆ. ಆದರೆ ಅಷ್ಟರಲ್ಲಿ ಮಗಳು ತಾಯಿಯ ತೋಳಿನಲ್ಲಿದ್ದಳು. ಸಮಯಪ್ರಜ್ಞೆಯಿಂದ ಮಗಳು ಕಿಡ್ನ್ಯಾಪ್ ಆಗುವುದನ್ನು ಆಕೆ ತಪ್ಪಿಸಿದ್ದಳು.
- Nayana Rajeev
- Updated on: Jan 13, 2026
- 12:33 pm
ಗಾಜಿಯಾಬಾದ್: ಮಣಿಕಟ್ಟು ಸೀಳಿಕೊಂಡು ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಯುವಕ
ಯುವಕನೊಬ್ಬ ಮಣಿಕಟ್ಟು ಸೀಳಿಕೊಂಡು ಅಪಾರ್ಟ್ಮೆಂಟ್(Apartment)ನ 11ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. 11 ನೇ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯಿಂದ ಹಾರಿ 28 ವರ್ಷದ ಯಜ್ಞ ಪಾಂಡೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಇಂದಿರಾಪುರಂನ ಸೊಸೈಟಿಯೊಂದರ ನಿವಾಸಿಯಾಗಿರುವ ಯಜ್ಞ ಪಾಂಡೆ ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- Nayana Rajeev
- Updated on: Jan 13, 2026
- 11:50 am
ಬಾಂಗ್ಲಾದೇಶ: ಪೊಲೀಸ್ ಕಸ್ಟಡಿಯಲ್ಲಿ ಶೇಖ್ ಹಸೀನಾ ಪಕ್ಷದ ಹಿಂದೂ ನಾಯಕ ಚಾಕಿ ಸಾವು
ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ನ ಹಿಂದೂ ನಾಯಕ ಪ್ರೊಲೋಯ್ ಚಾಕಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬ ವೈದ್ಯಕೀಯ ನಿರ್ಲಕ್ಷ್ಯ ಆರೋಪಿಸಿದ್ದು, ಆರೋಗ್ಯ ಸಮಸ್ಯೆಗಳೇ ಕಾರಣವೆಂದು ಜೈಲು ಅಧಿಕಾರಿಗಳು ಸಮರ್ಥಿಸಿದ್ದಾರೆ. ಈ ಘಟನೆ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಸರಣಿಯ ಸಂದರ್ಭದಲ್ಲಿ ನಡೆದಿದ್ದು, ಕಸ್ಟಡಿ ಸಾವು, ವೈದ್ಯಕೀಯ ಆರೈಕೆ ಕೊರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
- Nayana Rajeev
- Updated on: Jan 13, 2026
- 11:26 am
ಸಿಗರೇಟ್ ಕೊಡಲಿಲ್ಲ ಎಂದು ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕರ ಸಂಬಂಧಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಮುಂಬೈನಲ್ಲಿ ಸಿಗರೇಟ್ ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅಂಗಡಿ ಮಾಲೀಕರ ಸಂಬಂಧಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ನಾಗೇಂದ್ರ ಯಾದವ್ನನ್ನು ಬಂಧಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ರಾಜೇಂದ್ರ ಯಾದವ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಹಣ ನೀಡಲು ಹೇಳಿದಾಗ ಈ ಕೃತ್ಯ ನಡೆದಿದೆ.
- Nayana Rajeev
- Updated on: Jan 13, 2026
- 10:23 am
Video: ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ, ಆ ರಾತ್ರಿ ನಡೆದಿದ್ದೇನು?
ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಅಕ್ಷರಶಃ ಭಯಭೀತರಾಗಿದ್ದರು. ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ್ದರು. ಆಗ ರಾತ್ರಿ ಹತ್ತು ಗಂಟೆಯಾಗಿತ್ತು, ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ಅರಿಯದೆ ನಿಂತಲ್ಲೇ ನಿಂತಿದ್ದರು. ಆಗ ಸಹಾಯಕ್ಕೆ ಬಂದಿದ್ದೇ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ. ಅವರು ತಮ್ಮ ವಾಹನವನ್ನು ನಿಲ್ಲಿಸಿ ಆ ಮಹಿಳೆಗೆ ಧೈರ್ಯ ತುಂಬಿ, ಸುರಕ್ಷಿತವಾಗಿ ಹೋಟೆಲ್ ಕೊಕೊನಟ್ಗೆ ಇಳಿಸಿ, ಅವರ ಭಯವನ್ನು ನಗುವಾಗಿ ಪರಿವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
- Nayana Rajeev
- Updated on: Jan 13, 2026
- 9:59 am
ಅಪಹರಿಸಿ ಆರ್ಕೆಸ್ಟ್ರಾ ಡ್ಯಾನ್ಸರ್ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಯ ಫೋನ್ ಕದ್ದು ಪೊಲೀಸರಿಗೆ ಕರೆ ಮಾಡಿದ ಮಹಿಳೆ
ಬಿಹಾರದಲ್ಲಿ ಆರ್ಕೆಸ್ಟ್ರಾ ನರ್ತಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಪಹರಣಕ್ಕೊಳಗಾದ 24 ವರ್ಷದ ಮಹಿಳೆ, ಕುಡಿದ ಮತ್ತಿನಲ್ಲಿದ್ದ ಆರೋಪಿಯ ಫೋನ್ ಬಳಸಿ 112 ತುರ್ತು ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಯ ಧೈರ್ಯದಿಂದ ರಕ್ಷಣೆ ಹಾಗೂ ಒಬ್ಬ ಆರೋಪಿಯ ಬಂಧನ ಸಾಧ್ಯವಾಗಿದೆ. ಬಾಗಿಲು ಒಡೆದು ಪೊಲೀಸರು ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
- Nayana Rajeev
- Updated on: Jan 13, 2026
- 9:32 am
Video: ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ರಾಜೇಂದ್ರ ಸಿಸೋಡಿಯಾ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮಥುರಾದಲ್ಲಿ ನಡೆದಿದೆ. ಆತನಿಗೆ 50 ವರ್ಷ ವಯಸ್ಸು. ಆತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆ ಮರೆಸಿಕೊಂಡಿದ್ದ. ಲಿಪ್ಸ್ಟಿಕ್, ಬುರ್ಖಾ ಧರಿಸಿ ಓಡಾಡುಡುತ್ತಿದ್ದ, ಆದರೂ ಪೊಲೀಸರ ಹದ್ದಿನ ಕಣ್ಣಿಂದ ತಪ್ಪಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ.
- Nayana Rajeev
- Updated on: Jan 13, 2026
- 9:02 am
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಹತ್ಯೆ, ಮನೆಗೆ ಮರುಳುತ್ತಿದ್ದ ಆಟೋ ಚಾಲಕನನ್ನು ಇರಿದು ಕೊಂದ ದುಷ್ಕರ್ಮಿಗಳು
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಆಟೋ ಚಾಲಕ ಸಮೀರ್ ಕುಮಾರ್ ದಾಸ್ ಅವರನ್ನು ಹತ್ಯೆ ಮಾಡಲಾಗಿದೆ. ಕಳೆದ 23 ದಿನಗಳಲ್ಲಿ ನಡೆದ 7ನೇ ಹಿಂದೂ ಹತ್ಯೆ ಇದಾಗಿದೆ. ಆಟೋ ಕಳವು ಮಾಡಿ, ಹರಿತವಾದ ಆಯುಧಗಳಿಂದ ಚಾಲಕನನ್ನು ಇರಿದು ಕೊಲ್ಲಲಾಗಿದೆ. 2024ರ ಅಸ್ಥಿರತೆಯ ನಂತರ ಇಸ್ಲಾಮಿಸ್ಟ್ ಗುಂಪುಗಳ ಚಟುವಟಿಕೆಗಳು ಹೆಚ್ಚಾಗಿದ್ದು, ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
- Nayana Rajeev
- Updated on: Jan 13, 2026
- 8:13 am
ಇರಾನ್ ಜತೆ ವ್ಯಾಪಾರ ಮಾಡುವ ದೇಶಗಳಿಗೆ ಶೇ.25ರಷ್ಟು ಸುಂಕ ಘೋಷಿಸಿದ ಟ್ರಂಪ್, ಭಾರತದ ಮೇಲೂ ಪರಿಣಾಮ ಬೀರುತ್ತಾ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಸುಂಕ ಬಾಂಬ್ ಹಾಕಿದ್ದಾರೆ. ಈ ಬಾರಿ ಅವರು ಇರಾನ್ ಮೇಲೆ ಒತ್ತಡ ಹೇರಲು 25% ಸುಂಕವನ್ನು ಘೋಷಿಸಿದ್ದಾರೆ. ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಈ ಸುಂಕಗಳನ್ನು ವಿಧಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಅವರ ಈ ನಡೆಯನ್ನು ಇರಾನ್ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.
- Nayana Rajeev
- Updated on: Jan 13, 2026
- 7:51 am