ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್ ಇಂಡಿಯಾ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ
ಎಲ್ಲಾ ಪ್ಲ್ಯಾನ್ ಪ್ರಕಾರವೇ ನಡೆದಿತ್ತು: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ರವಿತಾ ಕೊಂದಿದ್ಹೇಗೆ?
ಪ್ರಿಯಕರನೊಂದಿಗೆ ಸೇರಿ ರವಿತಾ ತನ್ನ ಗಂಡನನ್ನು ಕೊಂದಿದ್ದೇಕೆ, ಆಕೆಗೆ ಗಂಡನ ಮೇಲಿದ್ದ ದ್ವೇಷವೇನು ಎನ್ನುವ ಕುರಿತು ಆಕೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾಳೆ. ಅಮಿತ್ನನ್ನು ಕತ್ತು ಹಿಸುಕಿ ಕೊಂದೆವು, ತಾನು ಅಮಿತ್ ನ ಕೈಗಳನ್ನು ಹಿಡಿದು ಬಾಯಿ ಮುಚ್ಚಿದೆ. ಅಮರ್ದೀಪ್ ಕತ್ತು ಹಿಸುಕಿ ಆತನನ್ನು ಕೊಲೆ ಮಾಡಿದ್ದ. ಹಾವು ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದೆವು. ಹಾವು ಎಲ್ಲಿಂದ ಬಂತು ಮತ್ತು ಅದರ ಬೆಲೆ ಎಷ್ಟು ಎಂದು ಕೇಳಿದಾಗ, ಹಾವನ್ನು ತಂದವರು ಅಮರದೀಪ್ ಮಾತ್ರ ಏಕೆಂದರೆ ಅದು ಅವರಿಗೆ ಮಾತ್ರ ತಿಳಿದಿದೆ ಎಂದು ರವಿತಾ ಹೇಳಿದರು.
- Nayana Rajeev
- Updated on: Apr 18, 2025
- 2:28 pm
ಡಿಜೆಯ ಲೇಸರ್ಲೈಟ್ ವಿಮಾನಕ್ಕೆ ತಂದಿತ್ತು ಆಪತ್ತು, ಪೈಲಟ್ 172 ಪ್ರಯಾಣಿಕರ ಜೀವ ಉಳಿಸಿದ್ಹೇಗೆ?
ವಿಮಾನ ಅಪಘಾತ(Plane Crash) ಕೂದಲೆಳೆಯಲ್ಲಿ ತಪ್ಪಿದೆ. ಡಿಜೆಯ ಲೇಸರ್ ಲೈಟ್ ವಿಮಾನಕ್ಕೆ ಆಪತ್ತು ತಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಪೈಲಟ್ ಬಹಳ ತಾಳ್ಮೆ ಮತ್ತು ತಿಳಿವಳಿಕೆಯಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.
- Nayana Rajeev
- Updated on: Apr 18, 2025
- 12:56 pm
Tenkasi: ಪತ್ನಿ ಎದುರೇ ಪತಿಯ ಶಿರಚ್ಛೇದ, ದೇವಸ್ಥಾನದ ಬಳಿ ರುಂಡ ಪತ್ತೆ
ಪತ್ನಿ ಎದುರೇ ಪತಿ(Husband)ಯ ಶಿರಚ್ಛೇದ ಮಾಡಿರುವ ಘಟನೆ ತಮಿಳುನಾಡಿನ ತೆಂಕಸಿ ಬಳಿ ನಡೆದಿದೆ. ಮನೆಯಿಂದ 8 ಕಿ.ಮೀ ದೂರದಲ್ಲಿರುವ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ. ತೆಂಕಸಿಯಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಅಪರಿಚಿತ ಗುಂಪೊಂದು ಹೆಂಡತಿಯ ಎದುರೇ ಶಿರಚ್ಛೇದ ಮಾಡಿ, ತಲೆ ತೆಗೆದುಕೊಂಡು ಪರಾರಿಯಾಗಿದ್ದರು. ಅಪರಾಧ ಸ್ಥಳದಿಂದ ಸುಮಾರು 8 ಕಿ.ಮೀ ದೂರದಲ್ಲಿ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ.
- Nayana Rajeev
- Updated on: Apr 18, 2025
- 12:12 pm
ಯುವತಿಗೆ ಪ್ರೊಪೋಸ್ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ, ಆಮೇಲೇನಾಯ್ತು?
ತಾವು ಇಷ್ಟಪಟ್ಟವರ ಬಳಿ ಪ್ರೇಮ ನಿವೇದನೆ ಮಾಡುವುದು ಸರ್ವೇ ಸಾಮಾನ್ಯ. ಅನುಕೂಲ ಇದ್ದವರು ರಿಂಗ್ ಕೊಡುತ್ತಾರೆ ಇನ್ನೂ ಕೆಲವರು ತಮಗೆ ಇಷ್ಟವಾದ ಗಿಫ್ಟ್ ಕೊಟ್ಟು ಪ್ರೊಪೋಸ್ ಮಾಡಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಪ್ರೇಮ ನಿವೇದನೆ ಮಾಡಲು ದುಬಾರಿ ರಿಂಗ್ ಹಿಡಿದು ಫಾಲ್ಸ್ ಬಳಿ ಹೋಗಿದ್ದಾರೆ. ಆಕೆಗೆ ಪ್ರೊಪೋಸ್ ಮಾಡಿ ರಿಂಗ್ ತೊಡಿಸಬೇಕು ಎನ್ನುವಷ್ಟರಲ್ಲಿ ಆ ರಿಂಗ್ ಕೈಜಾರಿ ಧುಮುಕುತ್ತಿದ್ದ ನೀರಿನಲ್ಲಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
- Nayana Rajeev
- Updated on: Apr 18, 2025
- 11:38 am
ಪಂಬಾಬ್ನಲ್ಲಿ ನಡೆದ 14 ಸ್ಫೋಟಗಳ ಹಿಂದಿನ ಮಾಸ್ಟರ್ಮೈಂಡ್ ಹರ್ಪ್ರೀತ್ ಸಿಂಗ್ ಅಮೆರಿಕದಲ್ಲಿ ಅರೆಸ್ಟ್
ಪಂಜಾಬ್ನಲ್ಲಿ ನಡೆದ 14 ಸ್ಫೋಟ(Blast)ಗಳ ಹಿಂದಿನ ಮಾಸ್ಟರ್ಮೈಂಡ್ ಹರ್ಪ್ರೀತ್ ಸಿಂಗ್ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಅಮೆರಿಕ ಮೂಲದ ಉಗ್ರ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಬಂಧಿಸಲಾಗಿದೆ. ಎಫ್ಬಿಐ ಮತ್ತು ಯುಎಸ್ ವಲಸೆ ಇಲಾಖೆ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಕಳೆದ ಆರು ತಿಂಗಳಲ್ಲಿ ಪಂಜಾಬ್ನಲ್ಲಿ ನಡೆದ 14 ಭಯೋತ್ಪಾದಕ ದಾಳಿಗಳಿಗೆ ಈತ ಕಾರಣ.
- Nayana Rajeev
- Updated on: Apr 18, 2025
- 10:58 am
ಭಾವಿ ಅಳಿಯನ ಜತೆ ಓಡಿ ಹೇಗಿದ್ದೇಕೆ? ಕಾರಣ ಕೊಟ್ಟ ಮಹಿಳೆ
ಉತ್ತರ ಪ್ರದೇಶದ ಅಲಿಗಢದಲ್ಲಿ ತನ್ನ ಮಗಳ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಮಹಿಳೆಯನ್ನು ನೇಪಾಳ ಗಡಿಯ ಬಳಿ ತನ್ನ ಪ್ರಿಯಕರನೊಂದಿಗೆ ಬಂಧಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದಾಗ, ಸಪ್ನಾ ಮನೆಯಿಂದ ಪರಾರಿಯಾಗಲು ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸಪ್ನಾ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
- Nayana Rajeev
- Updated on: Apr 18, 2025
- 10:27 am
ಕೂದಲು ಉದುರಿಹೋಯ್ತು, ಈಗ ಉಗುರುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಈ ಜಿಲ್ಲೆಯ ಜನ, ನಿಗೂಢ ಕಾಯಿಲೆ
ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದ ಬುಲ್ದಾನಾ ಜಿಲ್ಲೆಯ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಹಲವು ಜನರು ತಮ್ಮ ಉಗುರುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇಹದಲ್ಲಿ ಸೆಲೆನಿಯಮ್ ಮಟ್ಟ ಹೆಚ್ಚಾಗುವುದೇ ಕೂದಲು ಮತ್ತು ಉಗುರು ಉದುರುವಿಕೆಗೆ ಕಾರಣ ಎಂದು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಕೂದಲು ಉದುರುವಿಕೆಯ ನಂತರ, ಉಗುರುಗಳಿಗೆ ಹಾನಿಯಾಗುವುದು ಆರೋಗ್ಯ ಇಲಾಖೆಗೆ ಮತ್ತೆ ಸವಾಲಾಗಿ ಪರಿಣಮಿಸಿದೆ.
- Nayana Rajeev
- Updated on: Apr 18, 2025
- 9:45 am
ಮಗಳ ನಡತೆ ಬಗ್ಗೆ ಅನುಮಾನ, ಅಪ್ರಾಪ್ತ ಮಗಳ ಕೊಂದು ಹೂತು ಹಾಕಿದ್ದ ಮಹಿಳೆಗೆ ಜೀವಾವಧಿ ಶಿಕ್ಷೆ
ಮಗಳ ನಡತೆ ಮೇಲೆ ಶಂಕೆ ವ್ಯಕ್ತಪಡಿಸಿ ತಾಯಿಯೊಬ್ಬಳು ಮಗಳನ್ನು ಹತ್ಯೆಗೈದು ಮನೆಯ ಹಿಂಭಾಗ ಹೂತುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಗೆ ಉತ್ತರ ಪ್ರದೇಶ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಹಳ್ಳಿಯ ಹೊರಗೆ ಕೂಲಿ ಕೆಲಸ ಮಾಡುವ ಬಾಲಕಿಯ ತಂದೆಗೂ ಆಕೆಯ ಬಗ್ಗೆ ತಿಳಿದಿರಲಿಲ್ಲ. ತೀವ್ರ ತನಿಖೆ ಬಳಿಕ ಪೊಲೀಸರು ಮೇ 4, 2020ರಂದು ಬಾಲಕಿಯ ಶವವನ್ನು ಆಕೆಯ ಮನೆಯ ಹಿಂಭಾಗದ ಹಿತ್ತಲಲ್ಲಿ ಪತ್ತೆ ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ಸಮಾಧಿ ಮಾಡಲಾಯಿತು.
- Nayana Rajeev
- Updated on: Apr 18, 2025
- 9:16 am
ವಿಮಾನ ಹೈಜಾಕ್ ಮಾಡಲು ಹೋಗಿ ಪ್ರಯಾಣಿಕನ ಗುಂಡೇಟಿಗೆ ಬಲಿಯಾದ ದಾಳಿಕೋರ
ಚಾಕು ತೋರಿಸಿ ವಿಮಾನವನ್ನು ಹೈಜಾಕ್(Hijack) ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪ್ರಯಾಣಿಕರೊಬ್ಬರು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೆಲೀಜ್ನಲ್ಲಿ ನಡೆದಿದೆ. ಅಮೆರಿಕದ ಪ್ರಜೆಯೊಬ್ಬ ಚಾಕು ತೋರಿಸಿ ವಿಮಾನ(Flight)ವನ್ನು ಹೈಜಾಕ್ ಮಾಡಲು ಯತ್ನಿಸಿದ್ದ ಕೂಡಲೇ ಪ್ರಯಾಣಿಕರೊಬ್ಬರು ಪರವಾನಗಿ ಹೊಂದಿರುವ ಪಿಸ್ತೂಲಿನಿಂದ ಆರೋಪಿಗೆ ಗುಂಡು ಹಾರಿಸಿದ ಪರಿಣಾಮ ಆತ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ.
- Nayana Rajeev
- Updated on: Apr 18, 2025
- 8:50 am
ಚಿಕಿತ್ಸೆಗೆ ಹಣವಿಲ್ಲ: ಪತ್ನಿಗೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಕ್ಯಾನ್ಸರ್ ಪೀಡಿತ ವ್ಯಕ್ತಿ
ವ್ಯಕ್ತಿಯೊಬ್ಬರು ಪತ್ನಿಯನ್ನು ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಕುಲದೀಪ್ ಎಂಬುವವರಿಗೆ ಹಲವು ದಿನಗಳಿಂದ ಕ್ಯಾನ್ಸರ್ ಬಾಧಿಸುತ್ತಿತ್ತು. ಆತ್ಮಹತ್ಯೆ ಪತ್ರದ ಆಧಾರದ ಮೇಲೆ, ಇದು ಕೊಲೆ ಮತ್ತು ನಂತರ ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದೆ ಎಂದು ಎಸಿಪಿ ಮಿಶ್ರಾ ಹೇಳಿದ್ದಾರೆ. ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು.ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಕುಲದೀಪ್ ಅರ್ಧ ಪುಟದ ಆತ್ಮಹತ್ಯೆ ಪತ್ರದಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಬರೆದಿದ್ದಾರೆ.
- Nayana Rajeev
- Updated on: Apr 18, 2025
- 7:46 am
Karnataka Rains: ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ, ಸಂಜೆ ಭಾರಿ ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಇಂದು ಸಂಜೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೊಸಕೋಟೆ, ಬೆಳ್ಳೂರು, ಹುಣಸೂರು, ಮದ್ದೂರು, ಸರಗೂರು, ಕೃಷ್ಣರಾಜಪೇಟೆ, ದುರ್ಗ, ಚನ್ನರಾಯಪಟ್ಟಣ, ಬೆಂಗಳೂರು ಎಚ್ಎಎಲ್, ನಾಗಮಂಗಲ, ಬೆಂಗಳೂರು, ರಾಯಲ್ಪಾಡು, ಮೊಳಕಾಲ್ಮೂರು, ಹೆಸರಘಟ್ಟ, ಹೊಸದುರ್ಗ, ಟಿಜಿ ಹಳ್ಳಿ, ಕೋಲಾರ, ಶಿರಹಟ್ಟಿ, ಜೇವರ್ಗಿ, ಲಕ್ಷ್ಮೇಶ್ವರದಲ್ಲಿ ಮಳೆಯಾಗಿದೆ.
- Nayana Rajeev
- Updated on: Apr 18, 2025
- 7:21 am
ಒಂದೇ ಆಸ್ಪತ್ರೆಯ ಒಂದೇ ಫ್ಲೋರ್ನಲ್ಲಿ ಕೆಲಸ ಮಾಡುವ 6 ನರ್ಸ್ಗಳಿಗೆ ಬ್ರೈನ್ ಟ್ಯೂಮರ್
ಒಂದೇ ಆಸ್ಪತ್ರೆಯ ಹಾಗೂ ಒಂದೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 6 ನರ್ಸ್ಗಳಿಗೆ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್ನಲ್ಲಿ ನಡೆದಿದೆ. ಈ ನಿಗೂಢ ಗಡ್ಡೆಗಳು ಒಬ್ಬರ ನಂತರ ಒಬ್ಬರಲ್ಲಿ ಕಾಣಿಸಿಕೊಂಡಿವೆ. ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿನ ಪ್ರಕರಣ ಮೊದಲ ಮೊದಲು ಕಳೆದ ಏಪ್ರಿಲ್ ಆರಂಭದಲ್ಲಿ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿತ್ತು.
- Nayana Rajeev
- Updated on: Apr 17, 2025
- 3:33 pm