ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್ ಇಂಡಿಯಾ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ
ಫೋನ್ನಲ್ಲಿ ಮಾತನಾಡುತ್ತಿರುವಾಗ ಗದರಿದ್ದಕ್ಕೆ ಗಂಡನನ್ನೇ ಹತ್ಯೆಗೈದ ಪತ್ನಿ
ಫೋನ್ನಲ್ಲಿ ಯಾಕಿಷ್ಟು ಮಾತಾಡ್ತೀಯ ಎಂದು ಗದರಿದ್ದಕ್ಕೆ ಪತ್ನಿ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ನಡೆದಿದೆ. ಎಲ್ಲದಕ್ಕೂ ಪತಿ ಮೂಗು ತೂರಿಸಿಕೊಂಡು ಬರುತ್ತಾರೆ ಎಂದು ಕೋಪಗೊಂಡು ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಳೆ. ಕುಟುಂಬ ಸದಸ್ಯರು ಆತನನ್ನು ಹುತಾ ಹುತಿನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
- Nayana Rajeev
- Updated on: Dec 12, 2025
- 2:52 pm
ವೀರ್ಯ ದಾನಿಯಿಂದ ಆನುವಂಶಿಕವಾಗಿ ಸಿಕ್ಕಿದ್ದು ‘ಡೆತ್ ಜೀನ್’ ಹಲವು ಮಕ್ಕಳಲ್ಲಿ ಕ್ಯಾನ್ಸರ್ ದೃಢ
ಇತ್ತೀಚೆಗೆ ಯುರೋಪ್ನಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 2005ರಲ್ಲಿ ವಿದ್ಯಾರ್ಥಿಯೊಬ್ಬ ವೀರ್ಯ(Sperm)ವನ್ನು ದಾನ ಮಾಡಿದ್ದ. 17 ವರ್ಷಗಳಲ್ಲಿ ಅವನ ವೀರ್ಯ 197ಕ್ಕೂ ಹೆಚ್ಚು ಮಕ್ಕಳ ಹುಟ್ಟಿಗೆ ಕಾರಣವಾಗಿದೆ. ಆದರೆ ಅಪಾಯವೊಂದು ಎದುರಾಗಿದೆ, ಆತನ ವೀರ್ಯದಿಂದ ಹುಟ್ಟಿರುವ ಮಕ್ಕಳಲ್ಲಿ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಅಪಾಯಕಾರಿ TP53 ರೂಪಾಂತರ ಹೊಂದಿರುವ ಕಾರಣ ಇದು ಲಿ-ಫ್ರಾಮೇನಿ ಸಿಂಡ್ರೋಮ್ಗೆ ಕಾರಣವಾಗುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಶೇ. 90 ವರೆಗೆ ಹೆಚ್ಚಿಸುತ್ತದೆ ಎಂಬುದು ಸಾಬೀತಾಗಿದೆ.
- Nayana Rajeev
- Updated on: Dec 12, 2025
- 1:07 pm
ಕಂದಕಕ್ಕೆ ಉರುಳಿದ್ದ ಟ್ರಕ್, 19 ಜನರ ಸಾವಿನ ಸುದ್ದಿ ತಿಳಿಸಲು 2 ದಿನಗಳ ಕಾಲ ನಡೆದಿದ್ದ ಗಾಯಾಳು
ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಹೊತ್ತು ಹೊರಟಿದ್ದ ಟ್ರಕ್ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಎರಡು ದಿನ ಕಳೆದರೂ ಯಾರಿಗೂ ಅದರ ಬಗ್ಗೆ ಸುಳಿವೇ ಇರಲಿಲ್ಲ. 19 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಸೋಮವಾರ ರಾತ್ರಿ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಇತರ ನಿರ್ಮಾಣ ಕಾರ್ಮಿಕರೊಂದಿಗೆ ದೀಪ್ ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನವು ಅಂಜಾವ್ನಲ್ಲಿ 300 ಮೀಟರ್ ದೂರದ ಕಂದಕಕ್ಕೆ ಉರುಳಿತ್ತು.
- Nayana Rajeev
- Updated on: Dec 12, 2025
- 11:51 am
Video: ಅಯ್ಯೋ ದೇವ್ರೆ, ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್, ಆಮೇಲೇನಾಯ್ತು ನೋಡಿ
ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವ ಮುನ್ನ ಸಾವಿರ ಬಾರಿ ಆಲೋಚಿಸಬೇಕು. ಸ್ಕೈ ಡೈವಿಂಗ್ ಎಂಬುದು ಕೂಡ ಅಂಥದ್ದೇ ಒಂದು ಸಾಹಸ. ಹಲವು ಮಂದಿ ವಿಮಾನದಿಂದ ಕೆಳಗೆ ಡೈವ್ ಮಾಡಲು ಮುಂದಾಗಿದ್ದರು. ಗಾಳಿಯ ಒತ್ತಡವಿದ್ದ ಪರಿಣಾಮ ಹಾರಲಿಲ್ಲ ಬದಲಾಗಿ ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಹೇಗೋ ಪ್ಯಾರಾಚೂಟ್ ಓಪನ್ ಆಗಿ ವಿಮಾನದ ರೆಕ್ಕೆಯಲ್ಲಿ ಸಿಲುಕಿತ್ತು, ಅದನ್ನು ಹಿಡಿದು ಡೈವರ್ ನೇತಾಡುತ್ತಿದ್ದರು. ಬಳಿಕ ಅದು ತುಂಡಾಗಿದೆ ಇನ್ನೇನು ಕೆಳಗೆ ಬಿದ್ದೇ ಬಿಡುತ್ತಾರೆ ಎನ್ನುವಷ್ಟರಲ್ಲಿ ಬ್ಯಾಕಪ್ ಪ್ಯಾರಾಚೂಟರ್ ತೆರೆದುಕೊಂಡಿತ್ತು, ವ್ಯಕ್ತಿ ಯಾವುದೇ ಅಪಾಯವಿಲ್ಲದೆ ಕೆಳಗೆ ಇಳಿದಿದ್ದಾರೆ.
- Nayana Rajeev
- Updated on: Dec 12, 2025
- 10:51 am
Japan Earthquake: ಜಪಾನ್ನಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ, 6.7 ತೀವ್ರತೆಯ ಭೂಕಂಪ
ಜಪಾನ್ನಲ್ಲಿ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7 ರಷ್ಟು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 5 ಬಾರಿ ಭೂಮಿ ಕಂಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ ಆದರೆ 33 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಸಂಸ್ಥೆಗಳು ಡೇಟಾವನ್ನು ಸಂಗ್ರಹಿಸುತ್ತಿವೆ ಮತ್ತು ವಿವರವಾದ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
- Nayana Rajeev
- Updated on: Dec 12, 2025
- 10:04 am
Shivraj Patil Death: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಶಿವರಾಜ್ ಪಾಟೀಲ್ ನಿಧನ
ಕೇಂದ್ರ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಶಿವರಾಜ್ ಪಾಟೀಲ್ ಅವರು ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರ್ನಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಪಾಟೀಲ್ ಬೆಳಗ್ಗೆ 6.30 ರ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು, ತೀವ್ರ ಅನಾರೋಗ್ಯ ಉಂಟಾದ ಪರಿಣಾಮ ಪಾಟೀಲ್ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
- Nayana Rajeev
- Updated on: Dec 12, 2025
- 9:14 am
Andhra Bus Accident: ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್, 9 ಪ್ರಯಾಣಿಕರು ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು
ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 9 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿನಲ್ಲಿ ನಡೆದಿದೆ. 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ , ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಟ್ಟೆಯ ರಾಶಿಯಂತೆ ಬಿದ್ದಿವೆ. ಬೆಳಗಿನ ಜಾವ 5.30ರ ಸಮಯದಲ್ಲಿ, ತುಳಸಿಪಕಲು ಗ್ರಾಮದ ಬಳಿ ನಡೆದಿದೆ. ಜಿಲ್ಲಾಧಿಕಾರಿಗಳ ಪ್ರಕಾರ, ಬಸ್ಸಿನಲ್ಲಿ 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ ಇದ್ದರು.
- Nayana Rajeev
- Updated on: Dec 12, 2025
- 8:24 am
Video: ವೇಗವಾಗಿ ಬಂದು ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಕಾರು, ಬೈಕ್ ಸವಾರ ಸಾವು, ಭಯಾನಕ ವಿಡಿಯೋ
ಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಇಸ್ನಾಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್ ಸವಾರ ಮೊಗುಳಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಡಿಕ್ಕಿಯ ರಭಸಕ್ಕೆ ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ತೆಲಂಗಾಣದಲ್ಲಿ ಅಪಘಾತದ ಪ್ರಮಾಣ ತುಸು ಹೆಚ್ಚಾದಂತಿದೆ.
- Nayana Rajeev
- Updated on: Dec 12, 2025
- 7:54 am
Video: ದಾಖಲೆಗಳ ನೋಡದೆ ಆರ್ಟಿಒ 4,500 ರೂ. ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಮಧ್ಯಪ್ರದೇಶದ ಗಡಿಯಲ್ಲಿ ಟ್ರಕ್ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಡಿಯೋ ವೈರಲ್ ಆಗಿದೆ. ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಆರ್ಟಿಒ 4,500 ರೂ. ದಂಡ ವಿಧಿಸಿದ್ದಕ್ಕೆ ಬೇಸರಗೊಂಡ ಟ್ರಕ್ ಚಾಲಕ, ಟ್ರಕ್ ಮೇಲೆಯೇ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಳಗಿನಿಂದ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆತ ಟ್ರಕ್ನಿಂದ ಕೆಳಗೆ ಇಳಿದುಬರಲು ಸಿದ್ಧನಿರಲಿಲ್ಲ. ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಳ್ಳುತ್ತಿದ್ದರು, ಟ್ರಕ್ ಚಾಲಕ ಕಣ್ಣೀರು ಹಾಕುತ್ತಾ ತನ್ನ ಅಸಹಾಯಕತೆಯನ್ನು ತೋರುತ್ತಿರುವುದು ಕಂಡುಬಂತು.
- Nayana Rajeev
- Updated on: Dec 12, 2025
- 7:37 am
ಗರ್ಭಿಣಿ ಪತ್ನಿಯಿಂದ ದೂರವಾಗಿದ್ದ ಪತಿಯಿಂದ ಆಕೆಯ ಲಿವ್-ಇನ್ ಸಂಗಾತಿಯ ಹತ್ಯೆ
ಗರ್ಭಿಣಿ ಪತ್ನಿ ತನ್ನಿಂದ ದೂರವಾಗಿದ್ದರೂ, ಆಕೆಯನ್ನು ಹಿಂಬಾಲಿಸುವುದನ್ನು ಪತಿ ಬಿಟ್ಟಿರಲಿಲ್ಲ, ಹಾಗೆಯೇ ಆಕೆಯ ಲಿವ್-ಇನ್ ಸಂಗಾತಿ ಜತೆ ಮಾರ್ಕೆಟ್ನಲ್ಲಿ ನಡೆದು ಹೋಗುತ್ತಿರುವಾಗ ಪತಿ ಆಕೆಯ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗುಜರಾತ್ನ ಜಾಮ್ನಗರದಲ್ಲಿ ನಡೆದಿದೆ. ಸೋನಾಲ್ಬೆನ್ ಎಂಬುವವರು ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಮೇಲೆ ಪತಿ ಪದೇ ಪದೇ ಹಲ್ಲೆ ನಡೆಸುತ್ತಿದ್ದ, ಬೆದರಿಕೆ ಹಾಕುತ್ತಿದ್ದ ಹೀಗಾಗಿಯೇ ಪತಿ ದಿಲೀಪ್ನಿಂದ ದೂರವಾಗಿರುವುದಾಗಿ ತಿಳಿಸಿದ್ದಾರೆ.
- Nayana Rajeev
- Updated on: Dec 12, 2025
- 7:25 am
ಸ್ವಿಟ್ಜರ್ಲೆಂಡ್ನಲ್ಲಿ ಮಾಡೆಲ್ ಕ್ರಿಸ್ಟಿನಾ ಬರ್ಬರ ಹತ್ಯೆ ಕೇಸ್, ಆಕೆಯ ದೇಹದಿಂದ ಗರ್ಭಕೋಶ ಹೊರ ತೆಗೆದಿದ್ದ ಪತಿ
ಕಳೆದ ವರ್ಷ ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಮಾಡೆಲ್ ಕೊಲೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಮಾಡೆಲ್ ಕ್ರಿಸ್ಟಿನಾ ಜೋಕ್ಸಿಮೊವಿಕ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿಯ ಮೇಲೆ ಹತ್ಯೆ ಆರೋಪ ಹೊರಿಸಲಾಗಿದೆ. ಪತಿ ಥಾಮಸ್ 2024ರಲ್ಲಿ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರನ್ನು ಕತ್ತು ಹಿಸುಕಿ ಕೊಂದು, ದೇಹ ಕತ್ತರಿಸಿ ವಿಲೇವಾರಿ ಮಾಡಲು ಮುಂದಾಗಿದ್ದ. ಮಾಡೆಲ್ನ ದೇಹವನ್ನು ಜಿಗ್ಸಾ ಚಾಕು ಮತ್ತು ತೋಟಕ್ಕೆ ಬಳಕೆ ಮಾಡುವ ಗರಗಸದ ಮಾದರಿಯ ಅಸ್ತ್ರವನ್ನು ಬಳಸಿ ಆಕೆಯ ದೇಹವನ್ನು ಕತ್ತರಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
- Nayana Rajeev
- Updated on: Dec 11, 2025
- 2:54 pm
Video: ತನ್ನ ಪ್ರಾಣವನ್ನು ಲೆಕ್ಕಿಸದೆ ಬೆಂಕಿಯ ಜ್ವಾಲೆಯಿಂದ ತನ್ನ ಪ್ರೀತಿಯ ಶ್ವಾನಗಳನ್ನು ರಕ್ಷಿಸಿದ ಮಹಿಳೆ
ಫಿಲಿಪೈನ್ಸ್ನ ಬೃಹತ್ ಕಟ್ಟಡ ಬೆಂಕಿಗಾಹುತಿಯಾಗಿತ್ತು. ಸೆಬುವಿನ ಮಾಂಡೌ ಸಿಟಿಯಲ್ಲಿ ಈ ಘಟನೆ ನಡೆದಿತ್ತು. ತನ್ನ ಸಾಕು ನಾಯಿಗಳನ್ನು ರಕ್ಷಿಸಲು ಮಹಿಳೆ ಬೆಂಕಿಯ ಜ್ವಾಲೆಯನ್ನೂ ಲೆಕ್ಕಿಸಲಿಲ್ಲ.ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅವುಗಳನ್ನು ರಕ್ಷಿಸಿದ್ದಾಳೆ. ಸ್ವಲ್ಪ ತಡವಾಗಿದ್ದರೂ ಆಕೆಯ ಪ್ರಾಣಕ್ಕೆ ಅಪಾಯವಿತ್ತು. ಕಟ್ಟಡದಲ್ಲಿ ಬೆಂಕಿ ವೇಗವಾಗಿ ಹಬ್ಬುತ್ತಿತ್ತು, ಆಕೆ ಮನಸ್ಸು ಮಾಡಿದ್ದರೆ ಮೊದಲೇ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದಿತ್ತು.
- Nayana Rajeev
- Updated on: Dec 11, 2025
- 1:46 pm