AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾ ರಾಜೀವ್

ನಯನಾ ರಾಜೀವ್

ಮುಖ್ಯ ಉಪಸಂಪಾದಕಿ - TV9 Kannada

nayana.rajeev@tv9.com

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow On:
ಮಗಳ ವಿಚಾರದಲ್ಲಿ ಜಗಳ, ಮನೆ ಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿದ ಬಾಡಿಗೆದಾರ ಮಹಿಳೆ

ಮಗಳ ವಿಚಾರದಲ್ಲಿ ಜಗಳ, ಮನೆ ಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿದ ಬಾಡಿಗೆದಾರ ಮಹಿಳೆ

ಯಾವುದೋ ಸಣ್ಣ ವಿಚಾರಕ್ಕೆ ಬಾಡಿಗೆದಾರ ಮಹಿಳೆ ಮಾಲೀಕರ ಹೆಬ್ಬೆರಳು ಕಚ್ಚಿ ಕತ್ತರಿಸಿರುವ ಘಟನೆ ಹೌರಾದಲ್ಲಿ ನಡೆದಿದೆ. ಮಗಳ ಮೇಲಿನ ಕೋಪಕ್ಕೆ ಬಾಡಿಗೆದಾರ ಮಹಿಳೆ ಮನೆ ಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿರುವ ಘಟನೆ ಹೌರಾದ ಶಿಬ್​ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಕುಟುಂಬದ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆ ಮಾಲೀಕರ ಮಗಳು ತನ್ನ ಮೇಲೆ ದೌರ್ಜನ್ಯವೆಸಗಿದ್ದಾಳೆ ಎಂದು ಆರೋಪುಸಲು ಬಂದಿದ್ದ ಆಕೆ ಮಾಲೀಕರ ಹೆಬ್ಬೆರಳನ್ನೇ ಕಚ್ಚಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾಳೆ.

ಮಹಿಳೆ ತನಗಿಂತ ಅಂದವಾಗಿರುವ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಟ್ವಿಸ್ಟ್​, ಕುಟುಂಬ ಹೇಳೋದೇನು?

ಮಹಿಳೆ ತನಗಿಂತ ಅಂದವಾಗಿರುವ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಟ್ವಿಸ್ಟ್​, ಕುಟುಂಬ ಹೇಳೋದೇನು?

ಹರಿಯಾಣದಲ್ಲಿ ನಡೆದ ಮಕ್ಕಳ ಸರಣಿ ಹತ್ಯೆ(Murder) ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಮಹಿಳೆಯೊಬ್ಬಳು ತನಗಿಂತ ಅಂದವಾಗಿರುವ ಮಕ್ಕಳನ್ನು ಹತ್ಯೆ ಮಾಡಿದ್ದಳು. ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕುಟುಂಬದ ಹೇಳಿಕೆ ಬೆಚ್ಚಿಬೀಳಿಸಿದೆ. ವಿಚಾರಣೆಯ ಸಮಯದಲ್ಲಿ ಮಹಿಳೆ ಹಲವಾರು ವರ್ಷಗಳಿಂದ ತನ್ನ ಕುಟುಂಬ ಮತ್ತು ಸಂಬಂಧಿಕರ ಸುಂದರ ಹುಡುಗಿಯರನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಅಲ್ಲದೇ, ಇಲ್ಲಿಯವರೆಗೆ ತನ್ನ ಸ್ವಂತ ಮಗ ಸೇರಿದಂತೆ ನಾಲ್ವರು ಮಕ್ಕಳನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Video: ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ ಹಾಗೂ  ಪುಟಿನ್, ಕಾರಿನ ವೈಶಿಷ್ಟ್ಯವೇನು?

Video: ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ ಹಾಗೂ ಪುಟಿನ್, ಕಾರಿನ ವೈಶಿಷ್ಟ್ಯವೇನು?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರನ್ನು ಸ್ವಾಗತಿಸಲು ಆಗಲೇ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.ವಿಮಾನದಿಂದ ಇಳಿದ ನಂತರ, ಇಬ್ಬರು ರಾಷ್ಟ್ರಗಳ ಮುಖ್ಯಸ್ಥರು ಪರಸ್ಪರ ಅಪ್ಪಿಕೊಂಡು ಆತ್ಮೀಯವಾಗಿ ಸ್ವಾಗತಿಸಿದರು. ನಂತರ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಒಂದೇ ಕಾರಿನಲ್ಲಿ ಒಟ್ಟಿಗೆ ಹೊರಟರು. ಆಗಸ್ಟ್‌ನಲ್ಲಿ ಚೀನಾದಲ್ಲಿ ನಡೆದ ಎಸ್​ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದರು.

ಪುಟಿನ್​ಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ

ಪುಟಿನ್​ಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ

ಭಾರತಕ್ಕೆ ಬಂದಿಳಿದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಭಗವದ್ಗೀತೆಯ ರಷ್ಯನ್ ಆವೃತ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪವಿತ್ರ ಗ್ರಂಥವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಹೇಳಿದ್ದಾರೆ. ಇಬ್ಬರೂ ನಾಯಕರು ಪುಸ್ತಕವನ್ನು ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಮೋದಿ ಈ ಕ್ಷಣವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.ಲೋಕ ಕಲ್ಯಾಣ್ ಮಾರ್ಗದಲ್ಲಿರುವ ನಿವಾಸದಲ್ಲಿ ಈ ಸಭೆ ನಡೆದಿದ್ದು, ಮೋದಿ ಅವರು ರಷ್ಯಾ ಅಧ್ಯಕ್ಷರನ್ನು ಖಾಸಗಿ ಭೋಜನಕ್ಕೆ ಸ್ವಾಗತಿಸುತ್ತಿದ್ದಂತೆ ಭಾರತ-ರಷ್ಯಾ ಧ್ವಜಗಳು ಮತ್ತು ವಿಶೇಷ ಬೆಳಕಿನಿಂದ ಅಲಂಕರಿಸಲಾಗಿತ್ತು. ಪುಟಿನ್ ಎರಡು ದಿನಗಳ ರಾಜ್ಯ ಭೇಟಿಗಾಗಿ ಸಂಜೆ ದೆಹಲಿಗೆ ಬಂದಿಳಿದಿದ್ದರು.

ಎಸ್​ಐಆರ್ ಪ್ರಕ್ರಿಯೆಗೆಂದು ನೇಮಕಗೊಂಡಿರುವ ಬಿಎಲ್​ಒಗಳ ಸಾವಿನ ಬಗ್ಗೆ ಸುಪ್ರೀಂ ಕಳವಳ, ರಾಜ್ಯಗಳಿಗೆ ನಿರ್ದೇಶನ

ಎಸ್​ಐಆರ್ ಪ್ರಕ್ರಿಯೆಗೆಂದು ನೇಮಕಗೊಂಡಿರುವ ಬಿಎಲ್​ಒಗಳ ಸಾವಿನ ಬಗ್ಗೆ ಸುಪ್ರೀಂ ಕಳವಳ, ರಾಜ್ಯಗಳಿಗೆ ನಿರ್ದೇಶನ

ಚುನಾವಣಾ ಆಯೋಗವು 12 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸಿದೆ. ಈ ಸಂದರ್ಭದಲ್ಲಿ ಈ ಪ್ರಕ್ರಿಯೆಗೆಂದು ನೇಮಕಗೊಂಡಿದ್ದ ಬಿಎಲ್​ಒಗಳು ಒತ್ತಡದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರಿಗೆ ಹೃದಯಾಘಾತವಾದರೆ ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಪರಿಷ್ಕರಣೆಯನ್ನು ವಿಸ್ತರಣೆ ಮಾಡಿತ್ತು. ಈಗ ಸುಪ್ರೀಂಕೋರ್ಟ್​ ಈ ಬಿಎಲ್​ಒಗಳ ಸಾವಿನ ಕುರಿತು ಕಳವಳ ವ್ಯಕ್ತಪಡಿಸಿದೆ.ಬಿಎಲ್‌ಒಗಳ ಸುರಕ್ಷತೆ ಮತ್ತು ಕೆಲಸದ ಹೊರೆ ನಿರ್ವಹಣೆ ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅವರ ಕೆಲಸದ ಸಮಯವನ್ನು ಕಡಿಮೆ ಮಾಡಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ನಿರ್ದೇಶಿಸಿದೆ.

Video:ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಬಿದ್ದ ವೃದ್ಧರನ್ನು ದೇವರಂತೆ ಬಂದು ರಕ್ಷಿಸಿದ ರೈಲ್ವೆ ಪೊಲೀಸ್

Video:ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಬಿದ್ದ ವೃದ್ಧರನ್ನು ದೇವರಂತೆ ಬಂದು ರಕ್ಷಿಸಿದ ರೈಲ್ವೆ ಪೊಲೀಸ್

ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಬಿದ್ದ ವೃದ್ಧರನ್ನು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ದೇವರಂತೆ ಬಂದು ಕಾಪಾಡಿರುವ ಘಟನೆ ಸೇಲಂನಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವಾಗ 71 ವರ್ಷದ ಪ್ರಯಾಣಿಕರೊಬ್ಬರು ಜಾರಿ ಬಿದ್ದಿದ್ದಾರೆ. ಜಾರಿಬಿದ್ದ. ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ಆರ್‌ಪಿಎಫ್ ಸಬ್-ಇನ್‌ಸ್ಪೆಕ್ಟರ್ ಎನ್. ಪಳನಿ ಅವರ ತ್ವರಿತ ಕ್ರಮಕ್ಕೆ ಎಲ್ಲರೂ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ಸುರಕ್ಷತೆ ಮುಖ್ಯ, ದಯವಿಟ್ಟು ಎಂದಿಗೂ ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಬೇಡಿ ಎಂದು ರೈಲ್ವೆ ಮನವಿ ಮಾಡಿದೆ. ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 156 ರ ಪ್ರಕಾರ, ಚಲಿಸುತ್ತಿರುವ ರೈಲಿನಿಂದ ಹತ್ತಲು ಅಥವಾ ಇಳಿಯಲು ಪ್ರಯತ್ನಿಸುವವರಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.

Video: ಮದುವೆಯಲ್ಲಿ ರಸಗುಲ್ಲಾ ಸಿಗಲಿಲ್ಲವೆಂದು ಕುರ್ಚಿಗಳ ಮುರಿದು ವರನ ಕಡೆಯವರಿಂದ ರಾದ್ಧಾಂತ

Video: ಮದುವೆಯಲ್ಲಿ ರಸಗುಲ್ಲಾ ಸಿಗಲಿಲ್ಲವೆಂದು ಕುರ್ಚಿಗಳ ಮುರಿದು ವರನ ಕಡೆಯವರಿಂದ ರಾದ್ಧಾಂತ

ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವರ ಹಾಗೂ ವಧುವಿನ ಕುಟುಂಬದ ನಡುವೆ ಒಂದೋ ವರದಕ್ಷಿಣೆ ವಿಚಾರಕ್ಕೆ ಇಲ್ಲವೋ ಊಟದ ವಿಚಾರಕ್ಕೆ ಜಗಳವಾಗುತ್ತಲೇ ಇರುತ್ತದೆ. ಬಿಹಾರದ ಬೋಧ್​ ಗಯಾದ ಹೋಟೆಲ್​ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಸಗುಲ್ಲಾ ಕಡಿಮೆಯಾಯ್ತೆಂದು ವರನ ಕಡೆಯವರು ಕುರ್ಚಿಗಳನ್ನು ಮುರಿದು ರಾದ್ದಾಂತ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ನಂತರ ಮದುವೆಯನ್ನೇ ರದ್ದುಗೊಳಿಸಲಾಯಿತು. ಈ ಘಟನೆ ನವೆಂಬರ್ 29 ರಂದು ನಡೆದಿತ್ತು. ವಧುವಿನ ಕುಟುಂಬವು ಅದೇ ಹೋಟೆಲ್‌ನಲ್ಲಿ ತಂಗಿತ್ತು.

Video: ಬಾರಾಬಂಕಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟಗಾರನಿಂದ ಮಹಿಳೆಗೆ ಥಳಿತ

Video: ಬಾರಾಬಂಕಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟಗಾರನಿಂದ ಮಹಿಳೆಗೆ ಥಳಿತ

ಬಾರಾಬಂಕಿ ರೈಲ್ವೆ ನಿಲ್ದಾಣದಲ್ಲಿ ಟೀ ಮಾರಾಟಗಾರನೊಬ್ಬ ಮಹಿಳೆಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಕೊತ್ವಾಲಿ ನಗರ ಪ್ರದೇಶದಲ್ಲಿ ನಡೆದ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿಯ ಸ್ಪಂದಿಸುವಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ವೀಡಿಯೊದಲ್ಲಿ ಮಾರಾಟಗಾರ ಮಹಿಳೆಯನ್ನು ಪದೇ ಪದೇ ಒದೆಯುವುದು ಮತ್ತು ಹೊಡೆಯುವುದನ್ನು ತೋರಿಸಲಾಗಿದೆ.ಆದರೆ ಯಾರೂ ಮಧ್ಯಪ್ರವೇಶಿಸಲಿಲ್ಲ. ದಾಳಿಯ ಸಮಯದಲ್ಲಿ ಯಾವುದೇ ರೈಲ್ವೆ ಸಿಬ್ಬಂದಿ ಅಥವಾ ಪೊಲೀಸರು ಸ್ಥಳಕ್ಕೆ ಬರಲಿಲ್ಲ. ಅಲ್ಲಿದ್ದವರು ಸಹಾಯ ಮಾಡುವ ಬದಲು ವಿಡಿಯೋ ಮಾಡಿದ್ದರಿಂದ ಆಕೆ ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕಾಯಿತು.

ಕೇರಳದಲ್ಲಿ ಬಿಜೆಪಿಯಿಂದ ಟಿಕೆಟ್​​ ಪಡೆದು ಪಂಚಾಯತ್ ಚುನಾವಣೆಗೆ ನಿಂತ ಸೋನಿಯಾ ಗಾಂಧಿ

ಕೇರಳದಲ್ಲಿ ಬಿಜೆಪಿಯಿಂದ ಟಿಕೆಟ್​​ ಪಡೆದು ಪಂಚಾಯತ್ ಚುನಾವಣೆಗೆ ನಿಂತ ಸೋನಿಯಾ ಗಾಂಧಿ

ಕೇರಳದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಚ್ಚರಿಯ ಹೆಸರೊಂದು ಕೇಳಿಬಂದಿದೆ. ಸೋನಿಯಾಗಾಂಧಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅದೇ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿರುವ ಸೋನಿಯಾ ಗಾಂಧಿ. ಈ ಹೆಸರು ಕೇಳಿ ನಿಮಗೂ ಅಚ್ಚರಿಯಾಗಿರಬಹುದು ಅಲ್ಲವೇ, ಆದರೆ ಇವರು ಆ ಸೋನಿಯಾ ಅಲ್ಲ ಈ ಸೋನಿಯಾ. ಸ್ಥಳೀಯ ರಾಜಕೀಯದಲ್ಲಿ ಸೋನಿಯಾ ಗಾಂಧಿ ಹೆಸರು ಕೇವಲ ಕಾಕತಾಳೀಯ. ಬಿಜೆಪಿಯಲ್ಲಿ ಸೋನಿಯಾ ಗಾಂಧಿ ಹೆಸರು ಅತ್ಯಂತ ಆಸಕ್ತಿದಾಯಕವಾಗಿಸಿದೆ.

International Cheetah Day: ಭಾರತದಲ್ಲಿ ಚೀತಾಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು, ಪ್ರಾಜೆಕ್ಟ್​ ಚೀತಾಗೆ ಸಿಕ್ಕಿದೆಯಾ ಯಶಸ್ಸು?

International Cheetah Day: ಭಾರತದಲ್ಲಿ ಚೀತಾಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು, ಪ್ರಾಜೆಕ್ಟ್​ ಚೀತಾಗೆ ಸಿಕ್ಕಿದೆಯಾ ಯಶಸ್ಸು?

ಭಾರತದಲ್ಲಿ ಚೀತಾ(Cheetah)ಗಳು ಬದುಕುಳಿಯಲು ಹೆಣಗಾಡುತ್ತಿವೆ, ಕೆಲವು ಪರಿಸ್ಥಿತಿಗಳು ಇನ್ನೂ ಸವಾಲಿನದ್ದಾಗಿವೆ. ಪ್ರಾಜೆಕ್ಟ್ ಚೀತಾ ಆರಂಭವಾಗಿ ಎರಡು ವರ್ಷಗಳ ನಂತರವೂ, ಅನೇಕ ಚೀತಾಗಳು ಇನ್ನೂ ಆವರಣಗಳಿಗೆ ಸೀಮಿತವಾಗಿವೆ ಮತ್ತು ಎಲ್ಲವನ್ನೂ ಯಶಸ್ವಿಯಾಗಿ ಕಾಡಿಗೆ ಬಿಡಲು ಸಾಧ್ಯವೇ ಆಗಿಲ್ಲ. ಚೀತಾಗಳನ್ನು ಒಂದೆಡೆ ಇರಿಸಿ, ಅಲ್ಲಿ ಅವುಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆದರೆ ಪವನ್ ಎಂಬ ಒಂದೇ ಒಂದು ಚೀತಾ ಮಾತ್ರ ಮುಕ್ತವಾಗಿ ತಿರುಗಾಡುತ್ತಿದೆ. ತೀವ್ರ ಶಾಖ ಹಲವು ಚೀತಾ ಮರಿಗಳ ಸಾವು, ಅವರ ದೇಹದ ಮೇಲಾಗಿರುವ ಗಾಯ ಸವಾಲುಗಳನ್ನು ಉಂಟು ಮಾಡುತ್ತಿದೆ.

Video: ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ವಾಯುಪಡೆಯ ಯುದ್ಧ ವಿಮಾನ ಪತನ

Video: ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ವಾಯುಪಡೆಯ ಯುದ್ಧ ವಿಮಾನ ಪತನ

ದಕ್ಷಿಣ ಕ್ಯಾಲಿಫೋರ್ನಿಯಾದ ಮರುಭೂಮಿಯಲ್ಲಿ ಅಮೆರಿಕದ ವಾಯುಪಡೆಯ ಥಂಡರ್‌ಬರ್ಡ್ ಎಫ್ -16 ಸಿ ಫೈಟಿಂಗ್ ಫಾಲ್ಕನ್ ಅಪಘಾತಕ್ಕೀಡಾಗಿದೆ. ತರಬೇತಿ ವೇಳೆ ವಿಮಾನ ಪತನಗೊಂಡಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿತ್ತು. ವಾಯುಪಡೆಯು ಅಪಘಾತದ ಸಂದರ್ಭಗಳ ಕುರಿತು ವಿವರಗಳನ್ನು ಒದಗಿಸಿಲ್ಲ. ಅಪಘಾತದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಫೈಟರ್ ಜೆಟ್ ನಿಧಾನವಾಗಿ ನೆಲದ ಕಡೆಗೆ ಚಲಿಸುತ್ತಿರುವಾಗ ಪೈಲಟ್ ನಿಧಾನವಾಗಿ ಹೊರಗೆ ಹಾರುತ್ತಿರುವುದನ್ನು ಕಾಣಬಹುದು.ನೆಲವನ್ನು ಸ್ಪರ್ಶಿಸಿದ ನಂತರ ವಿಮಾನವು ಬೆಂಕಿಗೆ ಆಹುತಿಯಾಯಿತು.

Video: ಅಮ್ರೋಹಾ: ನಿಲ್ಲಿಸಿದ್ದ ಟ್ರಕ್​ಗೆ ಕಾರು ಡಿಕ್ಕಿ, ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು

Video: ಅಮ್ರೋಹಾ: ನಿಲ್ಲಿಸಿದ್ದ ಟ್ರಕ್​ಗೆ ಕಾರು ಡಿಕ್ಕಿ, ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು

ಉತ್ತರ ಪ್ರದೇಶದ ಅಮ್ರೋಹಾದ ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಲ್ಲಿಸಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದವರು ಬದುಕುಳಿಯುವ ಯಾವುದೇ ಅವಕಾಶವಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ