ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ […]

ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ
ಸಾಧು ಶ್ರೀನಾಥ್​

Updated on: Jan 11, 2020 | 11:57 AM

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ ಕಳಿಸ್ತೀನಿ ಅದ್ರಲ್ಲಿ ಹಣ ಕಳಿಹಿಸ್ತೀನಿ ಅಂತ ವಂಚಕ ಹೇಳಿದ್ದಾನೆ.

ಗೂಗಲ್ ಪೇನಲ್ಲಿ ಒಟ್ಟು 4 ಬಾರಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಶ್ರೀಧರ್ 49 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಪಡೆದ ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿ ಆರೋಪಿ ಗಪ್​ಚುಪ್ ಆಗಿದ್ದಾನೆ. ಮೋಸ ಹೋದ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಫೇಸ್​ಬುಕ್​ ಪೇಜಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಶ್ರೀಧರ್ ದೂರು ನೀಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us