ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಆಸ್ತಿ ವಿವರ ಘೋಷಣೆ

|

Updated on: Apr 20, 2023 | 9:45 PM

ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಅವರ ನಾಮಪತ್ರ ರಿಜೆಕ್ಟ್ ಆಗುವ ಭೀತಿ ಹಿನ್ನೆಲೆ ಇವರೊಂದಿಗೆ ಸಹೋದರ, ಸಂಸದ ಡಿಕೆ ಸುರೇಶ್ ಕೂಡ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಆಸ್ತಿ ವಿವರಗಳನ್ನೂ ಘೋಷಿಸಿದ್ದಾರೆ.

ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಆಸ್ತಿ ವಿವರ ಘೋಷಣೆ
ಡಿಕೆ ಸುರೇಶ್ ಆಸ್ತಿ ವಿವರ ಘೋಷಣೆ
Follow us on

ರಾಮನಗರ: ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ (DK Shivakumar) ಅವರ ನಾಮಪತ್ರ ರಿಜೆಕ್ಟ್ ಆಗುವ ಭೀತಿ ಹಿನ್ನೆಲೆ ಇವರೊಂದಿಗೆ ಸಹೋದರ, ಸಂಸದ ಡಿಕೆ ಸುರೇಶ್ (DK Suresh) ಕೂಡ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ತಮ್ಮ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನೂ ಘೋಷಿಸಿದ್ದಾರೆ. ಸಾವಿರ ಕೋಟಿ ಒಡೆಯ ಡಿಕೆ ಸುರೇಶ್ ಕುಮಾರ್ ಸಹೋದರ ಡಿಕೆ ಸುರೇಶ್ ಅವರು 300 ಕೋಟಿ ಒಡೆಯರಾಗಿದ್ದು (DK Suresh Assets), ಇವರ ವಿರುದ್ಧ 10 ಪ್ರಕರಣಗಳು ಕೂಡ ದಾಖಲಾಗಿವೆ. ಅಚ್ಚರಿ ಎಂಬಂತೆ ಪತ್ನಿ, ಮಕ್ಕಳ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲವೆಂದು ಘೋಷಣೆ ಮಾಡಿದ್ದಾರೆ. ಹಾಗಿದ್ದರೆ ಡಿಕೆ ಸುರೇಶ್ ಹೆಸರಿನಲ್ಲಿ ಏನೇನಿದೆ? ಎಷ್ಟೆಷ್ಟಿದೆ? ಇಲ್ಲಿದೆ ಮಾಹಿತಿ.

ಡಿಕೆ ಸುರೇಶ್ ಕುಟುಂಬದ ಒಟ್ಟು ಆಸ್ತಿ ಮೌಲ್ಯ: 353.7 ಕೋಟಿ ರೂ.

  • ಡಿಕೆ ಸುರೇಶ್ ಹೆಸರಿನಲ್ಲಿರುವ ಆಸ್ತಿ ಮೌಲ್ಯ: 353.7 ಕೋಟಿ ರೂ.
  • ಪತ್ನಿ ಹೆಸರಿನಲ್ಲಿ ಆಸ್ತಿ: ಇಲ್ಲ
  • ಮಕ್ಕಳ ಹೆಸರಿನಲ್ಲಿ ಆಸ್ತಿ: ಇಲ್ಲ

ಡಿಕೆ ಸುರೇಶ್ ಹೆಸರಲ್ಲಿರುವ ಚರಾಸ್ತಿ ಮತ್ತು ಚಿರಾಸ್ತಿ ಮೌಲ್ಯ

  • ಚರಾಸ್ತಿ: 55.23 ಕೋಟಿ ರೂ.
  • ಸ್ಥಿರಾಸ್ತಿ: 298.47 ಕೋಟಿ ರೂ.

ಇದನ್ನೂ ಓದಿ: ಸಾವಿರ ಕೋಟಿ ಒಡೆಯ ಡಿಕೆ ಶಿವಕುಮಾರ್ ಆಸ್ತಿ ವಿವರ ಘೋಷಣೆ

ಪಿಯುಸಿ ವ್ಯಾಸಾಂಗ ಮಾಡಿರುವ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರೊಬ್ಬರ ಹೆಸರಿನಲ್ಲೇ ಎಲ್ಲಾ ಆಸ್ತಿಗಳು ಇವೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಕ್ಕಿಂತಲೂ 15 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ನಾಮಪತ್ರದಲ್ಲಿ ನೀಡಿದ ಮಾಹಿತಿ ಪ್ರಕರಾ, ಡಿಕೆ ಸುರೇಶ್ ಕುಟುಂಬದ ಒಟ್ಟು ಸಾಲ 88.30 ಕೋಟಿ ರೂ. ಆಗಿದೆ.

ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಪ್ರತಿನಿಧಿಸುತ್ತಾ ಬಂದಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿದ್ದರು. ಇಂದು (ಏಪ್ರಿಲ್​ 20) ಡಿಕೆ ಸುರೇಶ್​ ಸಹ ನಾಮಪತ್ರ ಸಲ್ಲಿಸಿದ್ದಾರೆ. ಡಿಕೆ ಶಿವಕುಮಾರ್​ ಅವರು ಸಲ್ಲಿಸಿರುವ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾವಾಗಿ ಡಿಕೆ ಸುರೇಶ್ ಸಹ ಇಂದು ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಂತೋಷ್​ಗೆ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಕುತಂತ್ರಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಹೀಗಾಗಿ ಕೆಲವೊಂದು ಮಾಹಿತಿ ಆಧಾರದ ಮೇಲೆ ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿಯಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದು ಡಿಕೆ ಸುರುಶ್ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Thu, 20 April 23