ನಮ್ಮ ಬೇರೆಲ್ಲಾ ಭಾವನೆಗಳಿಗಿಂತ ಆತಂಕವನ್ನು ಮರೆಮಾಚುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ನಮ್ಮ ಭಾವನೆಗಳು ಹಂಚಿಕೊಳ್ಳಲು ಯೋಗ್ಯವಲ್ಲ ಎಂದು ನಾವು ಭಾವಿಸಿದಾಗ, ಆತಂಕವನ್ನು ಇತರ ಭಾವನೆಗಳೊಂದಿಗೆ ಮರೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಆತಂಕ ಮುಚ್ಚಿಡಲು ಸಾಧ್ಯವಿಲ್ಲ. ಈ ವಿಷಯವನ್ನು ಉದ್ದೇಶಿಸಿ, ತಜ್ಞರಾದ ಅಂಬರ್ ಸ್ಮಿತ್ ಕೆಲವು ಉಪಯೋಗಕರ ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಅದೆನೆಂದರೆ "ಆತಂಕವನ್ನು ಮರೆಮಾಚುವುದು ತುಂಬಾ ದುಃಖಕರವಾಗಿರುತ್ತದೆ. ಜೊತೆಗೆ ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಾವು ಹೆಚ್ಚು ಹೆಚ್ಚು ಪ್ರತಿರೋಧಿಸಿದಷ್ಟೂ ಅದು ಕೆಟ್ಟದಾಗಿ ತೋರಬಹುದು. ನಮ್ಮ ಆತಂಕವನ್ನು ನಿಭಾಯಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಮಾತ್ರ ಇದಕ್ಕೆ ಪರಿಹಾರವನ್ನು ನೀಡಬಹುದು, ಇದರಿಂದ ನಮನ್ನು ಆತಂಕದಿಂದ ನಿಯಂತ್ರಿಸಲ್ಪಡುವುದನ್ನು ನಿಲ್ಲಿಸಬಹುದು" ಎಂದಿದ್ದಾರೆ. ಆತಂಕವನ್ನು ಮರೆಮಾಚಲು ನಾವು ಪ್ರಯತ್ನಿಸುವ ಕೆಲವು ಮಾರ್ಗಗಳ ಬಗ್ಗೆ ಅಂಬರ್ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ನಮ್ಮಲ್ಲಿರುವ ನೋವನ್ನು ನುಂಗಿಕೊಂಡು ನಗಲು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ಇದನ್ನು ಎಲ್ಲರೂ ಮಾಡುತ್ತಾರೆ. ನಮ್ಮ ಆತಂಕದ ಭಾವನೆಗಳನ್ನು ಮರೆಮಾಚಲು ಇದೊಂದು ಅತ್ಯುತ್ತಮ ಮಾರ್ಗವಾಗಿರುವುದು ಸುಳ್ಳಲ್ಲ.
ನಾವು ಆಗಾಗ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಹೆದರುತ್ತೇವೆ. ಬದಲಿಗೆ ಮೌನವಾಗಿರಲು ಆಯ್ಕೆ ಮಾಡುತ್ತೇವೆ. ಏಕೆಂದರೆ ಮಾತಾಡಿ ನೆನಪು ಮಾಡಿಕೊಂಡರೆ ನೋವು ಅಧಿಕ.
ನಮ್ಮ ನಿಯಂತ್ರಣಕ್ಕೆ ಮೀರಿದ ದೇಹದಲ್ಲಿನ ನರಗಳ ಚಲನೆಗಳನ್ನು ನಾವು ಎದುರಿಸಿದಾಗ ಕೆಲವೊಮ್ಮೆ ಆತಂಕವು ದೈಹಿಕವಾಗಿ ಕಂಡುಬರುತ್ತದೆ. ಉದಾಹರಣೆಗೆ ಚಡಪಡಿಕೆ.
ಆತಂಕವನ್ನು ಮರೆಮಾಚಲು ಅಥವಾ ಅದನ್ನು ಎದುರಿಸದಂತೆ ನಮ್ಮನ್ನು ತಡೆಯಲು ಚಂಚಲತೆ ಹೆಚ್ಚಾಗಿ ಬಳಕೆಯಾಗುತ್ತದೆ. ಹೇಗೆಂದರೆ ಆ ವಿಷ್ಯದ ಯೋಚನೆ ಬಿಟ್ಟು ಬೇರೆ ಬೇರೆ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಆತಂಕವನ್ನು ಮರೆ ಮಾಡುವ ಒಂದು ಮಾರ್ಗವಾಗಿದೆ.
ನಮ್ಮಲ್ಲಿ ಕೆಲವರು ಸಂದರ್ಭಗಳನ್ನು ಎದುರಿಸಲು ಭಯ ಪಡುತ್ತಾರೆ. ಆಗ ನಾವು ಪ್ರತಿಯೊಂದಕ್ಕೂ ಕಾರಣ ಕೊಡಲು ಆರಂಭಿಸುತ್ತೇವೆ.
ನಾವು ಎದುರಿಸುತ್ತಿರುವ ಭಾವನೆಗಳನ್ನು ಆಗಾಗ ಕಡೆಗಣಿಸುತ್ತೇವೆ. ಜೊತೆಗೆ ಅದನ್ನು ಒಪ್ಪಿಕೊಳ್ಳುತ್ತೇವೆ ಆದರೆ ಅದು ಎಷ್ಟು ದುಃಖಕರವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನಾವು ನಿರಾಕರಿಸುತ್ತೇವೆ.