IPL
2008 ರಲ್ಲಿ ಆರಂಭವಾದ ವಿಶ್ವ ಕ್ರಿಕೆಟ್ನ ಅತ್ಯಂತ ಶ್ರೀಮಂತ ಟಿ20 ಲೀಗ್ ಐಪಿಎಲ್ ಇದುವರೆಗೆ 18 ಆವೃತ್ತಿಗಳನ್ನು ಪೂರೈಸಿದೆ. ಇದೀಗ ಲೀಗ್ನ 19ನೇ ಆವೃತ್ತಿಗೆ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿರುವ ಈ ಲೀಗ್ನಲ್ಲಿ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಉಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 3 ಬಾರಿ, ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜಸ್, ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಲಾ ಒಂದು ಬಾರಿ ಈ ಟ್ರೋಫಿಯನ್ನು ಎತ್ತಿಹಿಡಿದಿವೆ. 18 ವರ್ಷಗಳ ಬಳಿಕ ಈ ಟ್ರೋಫಿ ಎತ್ತಿಹಿಡಿದಿರುವ ಆರ್ಸಿಬಿ ತಂಡ ಹಾಲಿ ಚಾಂಪಿಯನ್ ಆಗಿ 19ನೇ ಆವೃತ್ತಿಗೆ ಕಾಲಿಡಲಿದೆ.
ಇನ್ನೂ ಹೆಚ್ಚು ಓದಿIPL 2027: ಆರ್ಸಿಬಿಗೆ ಇಶಾನ್ ಕಿಶನ್, ಸನ್ರೈಸರ್ಸ್ಗೆ ಜಿತೇಶ್ ಶರ್ಮಾ..!
IPL 2027 Trade Rumor: ಐಪಿಎಲ್ 2027 ಗಾಗಿ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ಬಹುದೊಡ್ಡ ಆಟಗಾರ ವಿನಿಮಯ ನಡೆಯುವ ಸಾಧ್ಯತೆಯಿದೆ. SRH ಭಾರತೀಯ ಫಿನಿಷರ್ ಜಿತೇಶ್ ಶರ್ಮಾ ಮೇಲೆ ಕಣ್ಣಿಟ್ಟಿದ್ದು, RCB ಪ್ರತಿಯಾಗಿ ಇಶಾನ್ ಕಿಶನ್ಗೆ ಬೇಡಿಕೆಯಿಟ್ಟಿದೆ. ಇಶಾನ್ ಕಿಶನ್ ಭವಿಷ್ಯದ ನಾಯಕನಾಗುವ ಸಾಧ್ಯತೆಗಳಿರುವುದರಿಂದ SRH ನಿರ್ಧಾರ ಕಷ್ಟಕರವಾಗಿದೆ. ಈ ಮೆಗಾ ಡೀಲ್ ಕುರಿತು ಚರ್ಚೆಗಳು ನಡೆಯುತ್ತಿವೆ.
- pruthvi Shankar
- Updated on: Aug 13, 2026
- 6:06 pm
IPL 2027: KKRಗೆ ಹಾರ್ದಿಕ್ ಪಾಂಡ್ಯ?
ಐಪಿಎಲ್ 2027ರ ಸೀಸನ್ಗೂ ಮುನ್ನವೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸೇರಲಿದ್ದಾರೆ ಎಂಬ ವದಂತಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಇತ್ತೀಚೆಗೆ ಕೆಕೆಆರ್ ಅಡ್ಮಿನ್ ಹಂಚಿಕೊಂಡ ವರುಣ್ ಚಕ್ರವರ್ತಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಜಂಟಿ ವಿಡಿಯೋಗೆ "ವೈಟ್ ಆಫ್ ಇಟ್..." (White of it...) ಎಂಬ ನಿಗೂಢ ಟ್ಯಾಗ್ ಲೈನ್ ನೀಡಿರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
- Zahir Yusuf
- Updated on: Aug 13, 2026
- 8:35 am
ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್!
Hardik Pandya: ಐಪಿಎಲ್ ಜಗತ್ತಿನಲ್ಲಿ ಹೊಸದಾಗಿ ಹೆಜ್ಜೆ ಇಟ್ಟ ತಂಡವೊಂದನ್ನು ಮೊದಲ ಸೀಸನ್ನಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಹಾರ್ದಿಕ್ ಪಾಂಡ್ಯ ಅವರದ್ದು. 2022ರಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ಚೊಚ್ಚಲ ಸೀಸನ್ನಲ್ಲೇ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇನ್ನು 2023 ರಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು.
- Zahir Yusuf
- Updated on: Aug 12, 2026
- 12:14 pm
IPL 2027: ಬಿಗ್ಗೆಸ್ಟ್ ಟ್ರೇಡ್ಗೆ ಮಾಜಿ ಕ್ರಿಕೆಟಿಗನ ಐಡಿಯಾ!
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಕೋಟಿ ಕೋಟಿ ಹಣದ ಹರಾಜು ಪ್ರಕ್ರಿಯೆ (Auction). ಆದರೆ, ಹರಾಜಿಗೂ ಮುನ್ನವೇ ತೆರೆಯ ಮರೆಯಲ್ಲಿ ತಂಡಗಳ ಬಲ ಹೆಚ್ಚಿಸಲು ನೆರವಾಗುವ ಮತ್ತೊಂದು ಪ್ರಮುಖ ಅಸ್ತ್ರವೆಂದರೆ ಅದುವೇ 'ಟ್ರೇಡ್ ವಿಂಡೋ'. ಸರಳವಾಗಿ ಹೇಳಬೇಕೆಂದರೆ, ಇದು ಫ್ರಾಂಚೈಸಿಗಳ ನಡುವೆ ನಡೆಯುವ ಆಟಗಾರರ 'ಅದಲು-ಬದಲು' ಅಥವಾ 'ಖರೀದಿ' ಪ್ರಕ್ರಿಯೆಯಾಗಿದೆ.
- Zahir Yusuf
- Updated on: Aug 12, 2026
- 8:56 am
IPL 2027: ಹಾರ್ದಿಕ್ ಪಾಂಡ್ಯ ಖರೀದಿಗೆ ಐದು ಫ್ರಾಂಚೈಸಿಗಳ ಬಿಗ್ ಪ್ಲ್ಯಾನ್!
IPL 2027: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬೇರೆ ತಂಡಕ್ಕೆ ವರ್ಗಾವಣೆ (Trade) ಮಾಡಲು ಮಾತುಕತೆಗಳು ನಡೆಯುತ್ತಿವೆ ಎಂಬ ವರದಿಗಳು ಭಾರಿ ಸಂಚಲನ ಸೃಷ್ಟಿಸಿವೆ. ಕೇವಲ ಒಂದು ತಂಡವಲ್ಲ, ಐಪಿಎಲ್ನ ಪ್ರಮುಖ ಫ್ರಾಂಚೈಸಿಗಳೆಲ್ಲವೂ ಈ ಸ್ಟಾರ್ ಆಲ್ರೌಂಡರ್ ಮೇಲೆ ಕಣ್ಣಿಟ್ಟಿದೆ.
- Zahir Yusuf
- Updated on: Aug 11, 2026
- 9:42 am
CSKಗೆ ಹೊಸ ವಿದೇಶಿ ಹೆಡ್ ಕೋಚ್: ರೇಸ್ನಲ್ಲಿ ನಾಲ್ವರು!
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆದ ಐಪಿಎಲ್ನ 20ನೇ ಆವೃತ್ತಿ (IPL Season-20) ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಪಾಳಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಬರೋಬ್ಬರಿ 18 ವರ್ಷಗಳ ಕಾಲ ಸಿಎಸ್ಕೆ ತಂಡದ ಬೆನ್ನೆಲುಬಾಗಿ ನಿಂತು, 5 ಟ್ರೋಫಿಗಳನ್ನು ತಂದುಕೊಟ್ಟ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಂಡು ಸಿಎಸ್ಕೆಗೆ ಗುಡ್ಬೈ ಹೇಳಿದ್ದಾರೆ.
- Zahir Yusuf
- Updated on: Aug 11, 2026
- 7:37 am
IPL 2027: ಗಂಗೂಲಿ, ಯುವರಾಜ್ ಹೆಗಲಿಗೆ ಕೋಚಿಂಗ್ ನೊಗ!
ಐಪಿಎಲ್ 2027ರ ಮೆಗಾ ಸಮರಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕಳೆದ ಕೆಲವು ಸೀಸನ್ಗಳಿಂದ ಪ್ರಶಸ್ತಿ ಮುಖ ನೋಡದ ಡೆಲ್ಲಿ ತಂಡವನ್ನು ಮತ್ತೆ ಗೆಲುವಿನ ಹಳಿಗೆ ತರಲು ಫ್ರಾಂಚೈಸಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕೆ ಪೂರಕವೆಂಬಂತೆ, ಬೆಂಗಳೂರಿನಲ್ಲಿ ನಡೆದ ಡಿಸಿ ಟ್ರಯಲ್ಸ್ನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಮತ್ತು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕಾಣಿಸಿಕೊಂಡಿದ್ದಾರೆ.
- Zahir Yusuf
- Updated on: Aug 10, 2026
- 2:06 pm
ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ!
ಟೀಮ್ ಇಂಡಿಯಾ ಆಟಗಾರರು ಸದ್ಯ ಅನುಭವಿಸುತ್ತಿರುವ ಸರಣಿ ಗಾಯದ ಸಮಸ್ಯೆಗಳ ಹಿಂದೆ ಬಿಸಿಸಿಐನ ಅತಿಯಾದ ಕೆಲಸದ ಒತ್ತಡ ಮಾತ್ರ ಕಾರಣವಲ್ಲ, ಬದಲಿಗೆ ಐಪಿಎಲ್ ತಂಡಗಳ ಬಲವಂತದ ಆಟವೂ ಇದೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ದೇಶದ ಜವಾಬ್ದಾರಿಗಿಂತ ಫ್ರಾಂಚೈಸಿಗಳ ಬಿಲಿಯನ್ ಡಾಲರ್ ವಾಣಿಜ್ಯ ಹಿತಾಸಕ್ತಿಯೇ ಆಟಗಾರರ ಫಿಟ್ನೆಸ್ಗೆ ಮಾರಕವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
- Zahir Yusuf
- Updated on: Aug 10, 2026
- 12:18 pm
RCB ಮಾಸ್ಟರ್ಮೈಂಡ್ಗಳ ರಣತಂತ್ರ ಉಲ್ಟಾ ಪಲ್ಟಾ!
ಐಪಿಎಲ್ನಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಆರ್ಸಿಬಿ (RCB) ಕೋಚಿಂಗ್ ಮೂವರ ಕೂಟ, ಇದೀಗ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಹೆಡ್ ಕೋಚ್ ಆ್ಯಂಡಿ ಫ್ಲವರ್, ಮೆಂಟರ್ ದಿನೇಶ್ ಕಾರ್ತಿಕ್ ಹಾಗೂ ಟೀಮ್ ಡೈರೆಕ್ಟರ್ ಮೋ ಬೋಬಾಟ್ ಅವರ ತಂತ್ರಗಾರಿಕೆಗಳು ಲಂಡನ್ ಸ್ಪಿರಿಟ್ ತಂಡವನ್ನು ಕನಿಷ್ಠ ಮುಂದಿನ ಹಂತಕ್ಕೇರಿಸುವಲ್ಲಿಯೂ ಸಂಪೂರ್ಣ ವಿಫಲವಾಗಿವೆ.
- Zahir Yusuf
- Updated on: Aug 10, 2026
- 9:51 am
ಐಪಿಎಲ್ಗೆ ಗುಡ್ ಬೈ ಹೇಳಿದ ಅಜಿಂಕ್ಯ ರಹಾನೆ
Ajinkya Rahane IPL retirement: ಟೀಮ್ ಇಂಡಿಯಾ ಬ್ಯಾಟರ್ ಅಜಿಂಕ್ಯ ರಹಾನೆ ಕೆಲ ದಿನಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದಾಗ್ಯೂ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿತ್ತು. ಆದರೀಗ ಐಪಿಎಲ್ಗೆ ಗುಡ್ ಬೈ ಹೇಳಿರುವ ರಹಾನೆ ವಿದೇಶಿ ಲೀಗ್ನತ್ತ ಮುಖ ಮಾಡಿದ್ದಾರೆ.
- Zahir Yusuf
- Updated on: Aug 8, 2026
- 7:25 am
ಪ್ರತಿ ಪಂದ್ಯದ ಬಳಿಕವೂ ‘ವಿ’ಚಿತ್ರಹಿಂಸೆ! ಕಹಿ ಅನುಭವ ಬಿಚ್ಚಿಟ್ಟ ಕೆ.ಎಲ್ ರಾಹುಲ್
KL Rahul: ಐಪಿಎಲ್ನಲ್ಲಿ ಕಪ್ ಗೆಲ್ಲುವುದಷ್ಟೇ ಅಲ್ಲ, ಕ್ರಿಕೆಟ್ ಹಿನ್ನೆಲೆಯೇ ಇಲ್ಲದ ಕಾರ್ಪೊರೇಟ್ ಮಾಲೀಕರ ಪ್ರಶ್ನೆಗಳಿಗೆ ಉತ್ತರಿಸುವುದೇ ನಾಯಕನಿಗೆ ದೊಡ್ಡ ತಲೆನೋವು! – ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯಲ್ಲಿ ತಮಗಾದ ಕಹಿ ಅನುಭವಗಳನ್ನು ನೆನೆದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಆಡಿರುವ ಮಾತುಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.
- Zahir Yusuf
- Updated on: Aug 6, 2026
- 11:34 am
ಜಗಳ ಆಗಿಯೇ ಆಗುತ್ತೆ ಅಂತ ಮೊದಲೇ ಗೊತ್ತಿತ್ತು: ಅನಿಲ್ ಚೌಧರಿ
ಐಪಿಎಲ್ 2013ರ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದಾಗ ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಗಂಭೀರ್ ಜೊತೆ ಜಗಳಕ್ಕಿಳಿದಿದ್ದರು.
- Zahir Yusuf
- Updated on: Aug 4, 2026
- 3:09 pm