AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL

IPL

2008 ರಲ್ಲಿ ಆರಂಭವಾದ ವಿಶ್ವ ಕ್ರಿಕೆಟ್​ನ ಅತ್ಯಂತ ಶ್ರೀಮಂತ ಟಿ20 ಲೀಗ್ ಐಪಿಎಲ್​ ಇದುವರೆಗೆ 18 ಆವೃತ್ತಿಗಳನ್ನು ಪೂರೈಸಿದೆ. ಇದೀಗ ಲೀಗ್​ನ 19ನೇ ಆವೃತ್ತಿಗೆ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿರುವ ಈ ಲೀಗ್​ನಲ್ಲಿ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಉಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ 3 ಬಾರಿ, ಸನ್​ರೈಸರ್ಸ್​ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜಸ್, ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ತಲಾ ಒಂದು ಬಾರಿ ಈ ಟ್ರೋಫಿಯನ್ನು ಎತ್ತಿಹಿಡಿದಿವೆ. 18 ವರ್ಷಗಳ ಬಳಿಕ ಈ ಟ್ರೋಫಿ ಎತ್ತಿಹಿಡಿದಿರುವ ಆರ್​ಸಿಬಿ ತಂಡ ಹಾಲಿ ಚಾಂಪಿಯನ್ ಆಗಿ 19ನೇ ಆವೃತ್ತಿಗೆ ಕಾಲಿಡಲಿದೆ.

ಇನ್ನೂ ಹೆಚ್ಚು ಓದಿ

ಮೂಲ ಬೆಲೆ 30 ಲಕ್ಷ, ಖರೀದಿಯಾಗಿದ್ದು ಕೋಟಿಗೆ! ಅನ್‌ಕ್ಯಾಪ್ಡ್ ಆಟಗಾರರ ಬದುಕು ಬದಲಿಸಿದ ಐಪಿಎಲ್

IPL 2026 Mini Auction: ಐಪಿಎಲ್ 2026 ರ ಮಿನಿ ಹರಾಜು ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಮೂಲಬೆಲೆ ಹೊಂದಿದ್ದ ಅನ್‌ಕ್ಯಾಪ್ಡ್ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಹರಾಜಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದರು. ಚೆನ್ನೈ ಸೂಪರ್ ಕಿಂಗ್ಸ್ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಂತಹ ಅನ್‌ಕ್ಯಾಪ್ಡ್ ಆಟಗಾರರಿಗೆ ಭಾರಿ ಮೊತ್ತ ನೀಡಿ ಇತಿಹಾಸ ನಿರ್ಮಿಸಿತು.

IPL 2026: ಇಬ್ಬರು ವಿಕೆಟ್​ಕೀಪರ್​ಗಳನ್ನು ಖರೀದಿಸಿದ ಸಿಎಸ್​ಕೆ; ಐಪಿಎಲ್‌ನಲ್ಲಿ ಧೋನಿ ಯುಗಾಂತ್ಯ?

MS Dhoni retirement: ಕಳೆದ ಎರಡು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನದ ನಂತರ, CSK 2026ರ ಐಪಿಎಲ್‌ಗಾಗಿ ಬಲಿಷ್ಠ ತಂಡವನ್ನು ಕಟ್ಟಿದೆ. ಸಂಜು ಸ್ಯಾಮ್ಸನ್, ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ಸೇರಿಸಿಕೊಂಡಿದೆ. ಇಬ್ಬರು ವಿಕೆಟ್ ಕೀಪರ್‌ಗಳ ಆಗಮನವು ಧೋನಿಯ ನಿವೃತ್ತಿ ವದಂತಿಗಳಿಗೆ ಪುಷ್ಟಿ ನೀಡಿದೆ. ರಾಬಿನ್ ಉತ್ತಪ್ಪ ಕೂಡ ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಆಗಿರಬಹುದು ಎಂದು ಹೇಳಿದ್ದು, ಹೊಸ ವಿಕೆಟ್ ಕೀಪರ್‌ಗೆ ದಾರಿ ಮಾಡಿಕೊಡಬಹುದು.

IPL 2026: ‘ನನಗೆ ಹೊಸ ಜೀವನ ಸಿಕ್ಕಿದೆ’; ಸಿಎಸ್​ಕೆಗೆ ಧನ್ಯವಾದ ತಿಳಿಸಿದ ಸರ್ಫರಾಜ್ ಖಾನ್

Sarfaraz Khan IPL Comeback: ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೆ ನಿರಾಸೆಗೊಂಡಿದ್ದ ಸರ್ಫರಾಜ್ ಖಾನ್‌ಗೆ ಐಪಿಎಲ್ ಹರಾಜಿನಲ್ಲಿ ಆರಂಭದಲ್ಲಿ ಆಘಾತ ಎದುರಾಗಿತ್ತು. ಆದರೆ, ಅಂತಿಮವಾಗಿ ಸಿಎಸ್‌ಕೆ ಫ್ರಾಂಚೈಸಿ ಅವರನ್ನು ಖರೀದಿಸುವ ಮೂಲಕ ಐಪಿಎಲ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ. ಎರಡು ವರ್ಷಗಳ ನಂತರ ಸರ್ಫರಾಜ್ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ತಮ್ಮ ಕಮ್‌ಬ್ಯಾಕ್‌ಗೆ ಸಿಎಸ್‌ಕೆ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

IPL 2026: ಆರ್​ಸಿಬಿ ಫ್ಯಾನ್ಸ್​ಗೆ ಸಿಹಿ ಸುದ್ದಿ; ಚಿನ್ನಸ್ವಾಮಿಯಲ್ಲಿ ಐಪಿಎಲ್ 2026 ರ ಉದ್ಘಾಟನಾ ಪಂದ್ಯ

IPL 2026 Opening Ceremony: ಜೂನ್ 4ರ ದುರ್ಘಟನೆಯ ಬಳಿಕ ಸ್ಥಗಿತಗೊಂಡಿದ್ದ ಬೆಂಗಳೂರು ಕ್ರಿಕೆಟ್‌ಗೆ ಶುಭ ಸುದ್ದಿ ಸಿಕ್ಕಿದೆ. ವೆಂಕಟೇಶ್ ಪ್ರಸಾದ್ ಕೆಎಸ್‌ಸಿಎ ಅಧ್ಯಕ್ಷರಾದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಚಟುವಟಿಕೆಗಳು ಪುನರಾರಂಭಗೊಂಡಿವೆ. 2026ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ಬಿಸಿಸಿಐ ಆಸಕ್ತಿ ತೋರಿಸಿದೆ. ಅಂತರರಾಷ್ಟ್ರೀಯ ಪಂದ್ಯಗಳೂ ನಡೆಯಲಿವೆ. ರಾಜ್ಯ ಸರ್ಕಾರದ ಜೊತೆ ಸಭೆ ನಂತರ ಅಂತಿಮ ನಿರ್ಧಾರ ಪ್ರಕಟವಾಗಲಿದೆ.

IPL vs PSL: ಐಪಿಎಲ್​ನಲ್ಲಿ ಬಂಪರ್ ಬೆಲೆ; ಪಾಕ್ ಕ್ರಿಕೆಟ್ ಲೀಗ್​ಗೆ ಕೈಕೊಟ್ಟ 11 ಆಟಗಾರರು

IPL vs PSL: 19ನೇ ಐಪಿಎಲ್ ಮಿನಿ ಹರಾಜಿನಲ್ಲಿ 77 ಆಟಗಾರರು ತಂಡ ಸೇರಿದರು. ಮಾರ್ಚ್ 26 ರಿಂದ ಐಪಿಎಲ್ ಆರಂಭ. ಪಿಎಸ್‌ಎಲ್ ಕೂಡ ಅದೇ ಸಮಯದಲ್ಲಿ ನಡೆಯುವುದರಿಂದ, 11 ಪಿಎಸ್‌ಎಲ್ ಆಟಗಾರರು ಐಪಿಎಲ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಪಿಎಸ್‌ಎಲ್‌ಗೆ ನಷ್ಟವಾಗಿದ್ದು, ಐಪಿಎಲ್‌ನತ್ತ ಆಟಗಾರರ ಒಲವು ಸ್ಪಷ್ಟವಾಗಿದೆ. ಹರಾಜಾದ ಆಟಗಾರರು ಪಿಎಸ್‌ಎಲ್‌ನಲ್ಲಿ ಆಡುವುದಿಲ್ಲ.

IPL 2026: RCB ತಂಡದ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ

IPL 2026 RCB Playing XI: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ 2026ರ ಹರಾಜಿಗೂ ಮುನ್ನ 17 ಆಟಗಾರರನ್ನು ರಿಟೈನ್ ಮಾಡಿ ಕೊಂಡಿದ್ದರು. ಇದೀಗ ಮಿನಿ ಹರಾಜಿನ ಮೂಲಕ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಐಪಿಎಲ್ ಸೀಸನ್-19 ಗಾಗಿ 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ.

IPL 2026: ಏಕೈಕ ಕನ್ನಡಿಗ ಹರಾಜು: ಕರ್ನಾಟಕದ 11 ಆಟಗಾರರು ಅನ್​ಸೋಲ್ಡ್​

IPL 2026 Unsold Players List: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ಕ್ಕಾಗಿ ನಡೆದ ಮಿನಿ ಹರಾಜಿನಲ್ಲಿ ಬರೋಬ್ಬರಿ 292 ಆಟಗಾರರು ಅನ್​ಸೋಲ್ಡ್ ಆಗಿದ್ದಾರೆ. ಅಂದರೆ 369 ಆಟಗಾರರಲ್ಲಿ 10 ಫ್ರಾಂಚೈಸಿಗಳು 77 ಆಟಗಾರರನ್ನು ಖರೀದಿಸಿದ್ದಾರೆ. ಇನ್ನು ಅನ್​ಸೋಲ್ಡ್ ಆದ ಆಟಗಾರರ ಪಟ್ಟಿಯಲ್ಲಿ ಕರ್ನಾಟಕದ 11 ಆಟಗಾರರು ಕೂಡ ಇದ್ದಾರೆ. 

IPL 2026: 30 ಲಕ್ಷ ರೂ. ಆಟಗಾರರಿಗೆ 28.4 ಕೋಟಿ ರೂ. ನೀಡಿ ಇತಿಹಾಸ ನಿರ್ಮಿಸಿದ CSK 

IPL 2026 CSK: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೂ ಮುನ್ನ 16 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ 9 ಆಟಗಾರರನ್ನು ಖರೀದಿಸಿದೆ. ಈ 9 ಆಟಗಾರರಲ್ಲಿ ಇಬ್ಬರಿಗೆ ಬರೋಬ್ಬರಿ 28.40 ಕೋಟಿ ರೂ. ವ್ಯಯಿಸುವ ಮೂಲಕ ಅನ್​ಕ್ಯಾಪ್ಡ್​ ಆಟಗಾರರಿಗೆ ಅತ್ಯಧಿಕ ಮೊತ್ತ ನೀಡಿದ ಫ್ರಾಂಚೈಸಿ ಎಂಬ ಹೆಗ್ಗಳಿಕೆಯನ್ನು ಸಿಎಸ್​ಕೆ ತನ್ನದಾಗಿಸಿಕೊಂಡಿದೆ.

IPL 2026: ವೆಂಕಿ ಎಂಟ್ರಿಯಿಂದ ಕನ್ನಡಿಗನ ಸ್ಥಾನಕ್ಕೆ ಕುತ್ತು..!

IPL 2026 RCB Squad: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ 2026ರ ಹರಾಜಿಗೂ ಮುನ್ನ 17 ಆಟಗಾರರನ್ನು ರಿಟೈನ್ ಮಾಡಿ ಕೊಂಡಿದ್ದರು. ಇದೀಗ ಮಿನಿ ಹರಾಜಿನ ಮೂಲಕ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಐಪಿಎಲ್ ಸೀಸನ್-19 ಗಾಗಿ 25 ಸದಸ್ಯರ ಬಳಗವನ್ನು ರೂಪಿಸಿದೆ.

ಇಂಗ್ಲಿಸ್​ಗೆ ಜಾಕ್ ಪಾಟ್: ಒಂದು ಮ್ಯಾಚ್​ಗೆ ಬರೋಬ್ಬರಿ 2.14 ಕೋಟಿ ರೂ.

IPL 2026 Josh Inglis: ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಜೋಸ್ ಇಂಗ್ಲಿಸ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈವರೆಗೆ ಆಡಿರುವುದು ಕೇವಲ 11 ಪಂದ್ಯಗಳನ್ನು ಮಾತ್ರ. ಅದು ಕೂಡ ಪಂಜಾಬ್ ಕಿಂಗ್ಸ್ ಪರ. ಕಳೆದ ಸೀಸನ್​ನಲ್ಲಿ ಪಂಜಾಬ್ ಪರ 11 ಮ್ಯಾಚ್​ಗಳನ್ನಾಡಿದ್ದ ಇಂಗ್ಲಿಸ್ ಒಂದು ಅರ್ಧಶತಕದೊಂದಿಗೆ 278 ರನ್ ಕಲೆಹಾಕಿದ್ದರು. ಈ ಬಾರಿ ಆಸ್ಟ್ರೇಲಿಯನ್ ದಾಂಡಿಗ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.

IPL 2026: 2 ಬಾರಿ ಅನ್​ಸೋಲ್ಡ್,  3ನೇ ಬಾರಿ ಪೃಥ್ವಿ ಶಾ ಕೈ ಹಿಡಿದ ಅದೃಷ್ಟ

IPL 2026 Prithwi shaw Team: ಪೃಥ್ವಿ ಶಾ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈವರೆಗೆ 79 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 14 ಅರ್ಧಶತಕಗಳೊಂದಿಗೆ 1892 ರನ್​ ಕಲೆಹಾಕಿದ್ದಾರೆ. ಇದಾಗ್ಯೂ ಪೃಥ್ವಿ ಶಾ ಕಳೆದ ಸೀಸನ್​ನಲ್ಲಿ ಹರಾಜಾಗಿರಲಿಲ್ಲ. ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಯುವ ದಾಂಡಿಗನನ್ನು ಕೊನೆಯ ಸುತ್ತಿನಲ್ಲಿ ಹಳೆಯ ಫ್ರಾಂಚೈಸಿಯೇ ಖರೀದಿಸಿದೆ.

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

IPL 2026 Cameron green: ಭರ್ಜರಿ ಫಾರ್ಮ್​ನಲ್ಲಿರುವ ಲೆಕ್ಕಾಚಾರದೊಂದಿಗೆ ಕೋಟಿ ಸುರಿದಿರುವ ಕೆಕೆಆರ್ ಫ್ರಾಂಚೈಸಿಗೆ ಹರಾಜಿನ ಬೆನ್ನಲ್ಲೇ ಗ್ರೀನ್ ಬಿಗ್ ಶಾಕ್ ನೀಡಿದ್ದಾರೆ. ಇದಾಗ್ಯೂ ಅವರ ಕಡೆಯಿಂದ ಮುಂಬರುವ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ಮೂಡಿಬರಲಿದೆಯಾ ಕಾದು ನೋಡಬೇಕಿದೆ. ಇನ್ನು ಅಡಿಲೇಡ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು 37 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿದೆ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ