Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL

IPL

2008 ರಲ್ಲಿ ಆರಂಭವಾದ ವಿಶ್ವ ಕ್ರಿಕೆಟ್​ನ ಅತ್ಯಂತ ಶ್ರೀಮಂತ ಟಿ20 ಲೀಗ್ ಐಪಿಎಲ್​ ಇದುವರೆಗೆ 15 ಆವೃತ್ತಿಗಳನ್ನು ಪೂರೈಸಿದೆ. ಇದೀಗ ಲೀಗ್​ನ 16ನೇ ಆವೃತ್ತಿ ಇದೇ ಮಾರ್ಚ್​ ತಿಂಗಳಲ್ಲಿ ಆರಂಭವಾಗಲಿದೆ. ಈ ಲೀಗ್​ನಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿವೆ. ಈ ಲೀಗ್​ನ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ವರ್ಷದಿಂದ ವರ್ಷಕ್ಕೆ ತನ್ನ ಬ್ರಾಂಡ್ ಮೌಲ್ಯದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿರುವ ಈ ಲೀಗ್​ನ ಒಟ್ಟು ಬ್ರ್ಯಾಂಡ್ ಮೌಲ್ಯವು 28% ರಷ್ಟು 10.7 ಬಿಲಿಯನ್ ಡಾಲರ್​ (ಸುಮಾರು ₹89,232 ಕೋಟಿ) ಹೆಚ್ಚಾಗಿದೆ. ತಂಡಗಳ ಪೈಕಿ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಬ್ರಾಂಡ್ ಮೌಲ್ಯ 87 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಅಂದರೆ ಸುಮಾರು 725 ಕೋಟಿ ಆಗಿದೆ. ಹಾಗೆಯೇ ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲದ ಆರ್​ಸಿಬಿ ತಂಡ 582 ಕೋಟಿ ರೂ. (69.8 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ 4ನೇ ಸ್ಥಾನದಲ್ಲಿದೆ.

ಇನ್ನೂ ಹೆಚ್ಚು ಓದಿ

ಆರ್​ಸಿಬಿ- ಪಂಜಾಬ್ ಪಂದ್ಯ ಆರಂಭಕ್ಕೆ ಕಟ್- ಆಫ್ ಸಮಯ ಯಾವುದು? ರದ್ದಾದರೆ ಯಾವ ತಂಡಕ್ಕೆ ಲಾಭ?

RCB vs PBKS: ಐಪಿಎಲ್ 2025ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಬೆಂಗಳೂರಿನ ಭಾರೀ ಮಳೆಯಿಂದ ಪಂದ್ಯ ವಿಳಂಬವಾಗಿದೆ. ಟಾಸ್‌ಗಾಗಿ ಕಟ್-ಆಫ್ ಸಮಯ ರಾತ್ರಿ 10.41 ಮತ್ತು ಪಂದ್ಯ ಆರಂಭಕ್ಕೆ 10.56 ಆಗಿದೆ. ಪಂದ್ಯ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ಸಿಗುತ್ತದೆ.

IPL 2025: ಬೆಂಗಳೂರಿನಲ್ಲಿ ಇನ್ನೂ ಆರಂಭವಾಗದ ಪಂದ್ಯ; ಮಳೆಯಿಂದ ರದ್ದಾಗುತ್ತಾ?

IPL 2025 Match 34: ಐಪಿಎಲ್ 2025ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪಂದ್ಯ ವಿಳಂಬವಾಗಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯಕ್ಕೆ ಮಳೆ ತಡೆಯಾಗಿದ್ದು, ಪಂದ್ಯದ ಆರಂಭದಲ್ಲಿ ವಿಳಂಬ ಉಂಟಾಗಿದೆ. ಆದಾಗ್ಯೂ, ಮೈದಾನದ ಉತ್ತಮ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ನಿಂತ ಬಳಿಕ ಪಂದ್ಯ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ.

RCB vs PBKS Highlights, IPL 2025: ಬ್ಯಾಟರ್​​ಗಳ ಬೇಜವಾಬ್ದಾರಿ ಆಟಕ್ಕೆ ಸೋಲಿನ ಬೆಲೆ ತೆತ್ತ ಆರ್​ಸಿಬಿ

Royal Challengers Bengaluru vs Punjab Kings Highlights in Kannada: ಪಂಜಾಬ್ ಕಿಂಗ್ಸ್ ಐಪಿಎಲ್ 2025 ರಲ್ಲಿ ತಮ್ಮ ಐದನೇ ಗೆಲುವು ದಾಖಲಿಸಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡವು ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು.

ಧೋನಿ, ಕೊಹ್ಲಿ, ರೋಹಿತ್​ಗೆ ನೀಡಿದ ಗೌರವ ಮನೀಶ್ ಪಾಂಡೆಗೆ ಯಾಕಿಲ್ಲ? ಬಿಸಿಸಿಐ ತಾರತಮ್ಯ ಧೋರಣೆ

18 Years of IPL: 2008ರಿಂದ ಐಪಿಎಲ್​ನಲ್ಲಿ ಆಡುತ್ತಿರುವ ಕೆಲವೇ ಕೆಲವು ಆಟಗಾರರಿಗೆ ಬಿಸಿಸಿಐ ವಿಶೇಷ ಸ್ಮರಣಿಕೆ ನೀಡಿ ಗೌರವಿಸುತ್ತಿದೆ. ಆ ಪ್ರಕಾರ ಧೋನಿ, ಕೊಹ್ಲಿ, ರೋಹಿತ್ ಅವರಿಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿಸಿದೆ. ಆದರೆ ಈ ಮೂವರಂತೆ 18 ಸೀಸನ್ ಆಡಿರುವ ಕನ್ನಡಿಗ ಮನೀಶ್ ಪಾಂಡೆ ಅವರಿಗೆ ಬಿಸಿಸಿಐನಿಂದ ಈ ವಿಶೇಷ ಗೌರವ ಸಿಕ್ಕಿಲ್ಲ. ಮನೀಶ್ ಅವರನ್ನು ಕಡೆಗಣಿಸಿರುವುದು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

IPL 2025: ಬದಲಿ ಆಟಗಾರನಾಗಿ ಸಿಎಸ್​ಕೆ ತಂಡ ಸೇರಿದ ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್

CSK Signs Explosive Batter Dewald Brevis: ಚೆನ್ನೈ ಸೂಪರ್ ಕಿಂಗ್ಸ್ ತಂಡವು 2025ರ ಐಪಿಎಲ್‌ನಲ್ಲಿ ಗಾಯಗೊಂಡ ಗುರ್ಕೀರತ್ ಸಿಂಗ್ ಬದಲಿಗೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಸೀಸನ್‌ನಲ್ಲಿ ಚೆನ್ನೈನ ಬ್ಯಾಟಿಂಗ್ ದುರ್ಬಲವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬ್ರೆವಿಸ್ ಅವರ ಅದ್ಭುತ ಟಿ20 ದಾಖಲೆ ಮತ್ತು ಪ್ರಸ್ತುತ ಉತ್ತಮ ಫಾರ್ಮ್ ಸಿಎಸ್‌ಕೆಗೆ ಹೊಸ ಉತ್ಸಾಹ ತುಂಬಲಿದೆ.

IPL 2025: ವಿಕೆಟ್ ಮುಂದೆ ಕೈಚಾಚಿದ ಕ್ಲಾಸೆನ್; ಕ್ಯಾಚ್ ಹಿಡಿದರೂ ನಾಟೌಟ್ ನೀಡಿದ ಅಂಪೈರ್

IPL 2025: ಐಪಿಎಲ್ 2025ರ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಮುಂಬೈ ಗುರಿ ಬೆನ್ನಟ್ಟುವ ವೇಳೆ 7ನೇ ಓವರ್‌ನಲ್ಲಿ, ಕ್ಲಾಸೆನ್ ಅವರ ಕೈಗವಸುಗಳು ಸ್ಟಂಪ್‌ಗಳ ಮುಂದಿದ್ದ ಕಾರಣ ಈ ನೋ-ಬಾಲ್ ನೀಡಲಾಯಿತು. ಇದರಿಂದ ಮುಂಬೈಗೆ ಫ್ರೀ ಹಿಟ್ ಸಿಕ್ಕರೆ, ಹೈದರಾಬಾದ್​ಗೆ ವಿಕೆಟ್ ಸಿಗುವ ಅವಕಾಶ ಕೈತಪ್ಪಿತು.

‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಡಿಕೆಶಿ ಭೇಟಿ ಬಳಿಕ ಅನಿಲ್ ಕುಂಬ್ಳೆ ಮಾತು

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇಂದು ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈ ಮಧ್ಯೆ ಅವರು ಹೇಳಿದ ಒಂದು ಮಾರು ಚರ್ಚೆಗೆ ಕಾರಣ ಆಗಿದೆ .

Rohit Sharma: ವಾಂಖೆಡೆಯಲ್ಲಿ ರೋಹಿತ್ ಶರ್ಮಾ ದಾಖಲೆ: ಈವರೆಗೆ ಯಾರೂ ಮಾಡಿಲ್ಲ ಈ ರೆಕಾರ್ಡ್

MI vs SRH, IPL 2025: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಹಳೆಯ ಶೈಲಿಗೆ ಮರಳಿದರು ಎನ್ನಬಹುದು. ಪುಲ್ ಶಾಟ್ ಮೂಲಕ ಎರಡು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದರು. ಈ ಸಿಕ್ಸರ್‌ಗಳೊಂದಿಗೆ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದಾರೆ.

MI vs SRH: ಬೇಸರದಲ್ಲಿದ್ದ ಇಶಾನ್ ಕಿಶನ್​ರನ್ನು ಮಗುವಿನಂತೆ ಸಮಾಧಾನ ಪಡಿಸಿದ ನೀತಾ ಅಂಬಾನಿ

Ishan kishan-Nita Ambani: ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದ ನಂತರ, ಮುಂಬೈ ತಂಡದ ಒಡತಿ ನೀತಾ ಅಂಬಾನಿ ಮತ್ತು ಇಶಾನ್ ಕಿಶನ್ ವಾಂಖೆಡೆ ಕ್ರೀಡಾಂಗಣದಲ್ಲಿ ಭೇಟಿಯಾದರು. ಈ ಸಂದರ್ಭ ಕಿಶನ್ ಬೇಸರದಲ್ಲಿರುವಂತೆ ಕಂಡುಬಂತು. ಐಪಿಎಲ್ 2025 ರ ಹರಾಜಿನ ಮೊದಲು, ಇಶಾನ್ ಕಿಶನ್ ಮುಂಬೈ ತಂಡದಲ್ಲಿ 7 ಋತುಗಳ ಕಾಲ ಆಡಿದ್ದರು.

Sanju Samson: ಸಂಜು ಸ್ಯಾಮ್ಸನ್-ರಾಹುಲ್ ದ್ರಾವಿಡ್ ಮಧ್ಯೆ ಜಗಳ?: ರಾಜಸ್ಥಾನ್ ರಾಯಲ್ಸ್ ಟೀಮ್​ನಲ್ಲಿ ಬಿರುಕು

Rahul Dravid and Sanju Samson: ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸೂಪರ್ ಓವರ್ ಪ್ರಾರಂಭವಾಗುವ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ರಾಹುಲ್ ದ್ರಾವಿಡ್ ತಮ್ಮ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಈ ಸಂದರ್ಭ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಸಹ ಆಟಗಾರ ಕರೆದಿದ್ದಾರೆ. ಆಗ ಸ್ಯಾಮ್ಸನ್ ಏನು ಮಾಡಿದ್ರು ನೋಡಿ.

ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ