
Kannada Cinema
1934ರಲ್ಲಿ ಮೊದಲ ಕನ್ನಡ ಸಿನಿಮಾ ‘ಸತಿ ಸುಲೋಚನಾ’ ಬಿಡುಗಡೆ ಆಗುವ ಮೂಲಕ ಉದಯವಾದ ಕನ್ನಡ ಚಿತ್ರರಂಗಕ್ಕೆ 89 ವರ್ಷದ ಸುದೀರ್ಘ ಇತಿಹಾಸವಿದೆ.
ಮನರಂಜನೆಯ ಜೊತೆಗೆ ಜನ ಜಾಗೃತಿ ಮೂಡಿಸುವ, ಅಭಿರುಚಿ ಬೆಳೆಸುವ ಸಿನಿಮಾಗಳನ್ನು ಕನ್ನಡ ಚಿತ್ರರಂಗ ನೀಡುತ್ತಲೇ ಬಂದಿದೆ. ಸಿನಿಮಾಗಳ ಮೂಲಕ ಕನ್ನಡತನವನ್ನು ಪಸರಿಸುತ್ತಾ ಬಂದಿದೆ. ಸುಬ್ಬಯ್ಯ ನಾಯ್ಡು, ಭಾಗವತರ್, ಪಂಡರೀಬಾಯಿ ಅವರುಗಳು ಬಿತ್ತಿದ ಕನ್ನಡ ಚಿತ್ರರಂಗದ ಬೀಜಕ್ಕೆ ರಾಜ್ಕುಮಾರ್, ಕಲ್ಯಾಣ್ ಕುಮಾರ್, ಲೋಕೇಶ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ನಾಗ್, ಅಂಬರೀಶ್ ಅಂಥಹಾ ಇನ್ನೂ ಅನೇಕ ಮಹನೀಯರು ನೀರೆರೆದು ಹೆಮ್ಮರವಾಗಿ ಬಳೆಸಿದ್ದಾರೆ.
ಕನ್ನಡ ಚಿತ್ರರಂಗ ಇಂದು ವಾರ್ಷಿಕವಾಗಿ ಸಾವಿರಾರು ಕೋಟಿ ವ್ಯವಹಾರ ನಡೆಯುವ ತಾಣ, ವರ್ಷಕ್ಕೆ ಸರಾಸರಿ 200 ರಿಂದ 250 ಕನ್ನಡ ಸಿನಿಮಾಗಳು ಇಲ್ಲಿ ತಯಾರುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ‘ಕೆಜಿಎಫ್’, ‘ಕಾಂತಾರ’, ‘ವಿಕ್ರಾಂತ್ ರೋಣ’ ಇನ್ನೂ ಕೆಲವು ಸಿನಿಮಾಗಳು ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆ ಗೊಳಿಸಿವೆ.
ಅಭಿಮಾನಿಗಳಿಗೆ ಯಶ್ನ ಹತ್ತಿರದಿಂದ ನೋಡೋ ಅವಕಾಶ; ಎಲ್ಲಿ? ಯಾವಾಗ?
ರಾಕಿಂಗ್ ಸ್ಟಾರ್ ಯಶ್ ಅವರು ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲೇ ಈ ಕಾರ್ಯಕ್ರಮ ನಡೆಯಲಿದೆ. ಯಶ್ ಅವರ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಈ ಕಾರ್ಯಕ್ರಮಕ್ಕೆ ಬರುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಷಯ.
- Rajesh Duggumane
- Updated on: Mar 22, 2025
- 2:22 pm
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಹಿರಿಯ ನಿರ್ದೇಶಕ ಎ.ಟಿ. ರಘು ನಿಧನಕ್ಕೆ ದೊಡ್ಡಣ್ಣ ಕಂಬನಿ ಮಿಡಿದ್ದಾರೆ. ‘ಈ ವಿಷಯ ತಿಳಿದು ಮನಸ್ಸಿಗೆ ತುಂಬ ಆಘಾತ ಆಯಿತು. ಚಿತ್ರರಂಗ ಒಂದು ಕುಟುಂಬ ಇದ್ದಂತೆ. ಅವರವರ ಸ್ಟೇಷನ್ ಬಂದಾಗ ಇಳಿದು ಹೋಗುತ್ತಿದ್ದಾರೆ. ಅಂಬರೀಶ್ ಮತ್ತು ಎ.ಟಿ. ರಘು ನಡುವಿನ ಬೆಸುಗೆ ತುಂಬ ಚೆನ್ನಾಗಿತ್ತು’ ಎಂದು ದೊಡ್ಡಣ್ಣ ಅವರು ಹೇಳಿದ್ದಾರೆ.
- Mangala RR
- Updated on: Mar 21, 2025
- 6:57 pm
Narayana Narayana Review: ನಿಧಿ ಹುಡುಕುವವರಿಗೆ ಹಾಸ್ಯದ ಜೊತೆ ಶ್ರೀಕೃಷ್ಣನ ನೀತಿ ಪಾಠ
‘ನಾರಾಯಣ ನಾರಾಯಣ’ ಇದು ಹೊಸಬರ ಸಿನಿಮಾ. ಇದರಲ್ಲಿ ಕಾಮಿಡಿ ಕಥೆ ಇದೆ. ಜೊತೆಗೆ ಅಗತ್ಯವಾದ ಒಂದು ನೀತಿ ಪಾಠವೂ ಇದೆ. ಹಳ್ಳಿ ಕಹಾನಿಯನ್ನು ಹಾಸ್ಯದ ಮೂಲಕ ಹೇಳಲಾಗಿದೆ. ಶ್ರೀಕಾಂತ್ ಕೆಂಚಪ್ಪ ಅವರು ನಿರ್ದೇಶನ ಮಾಡಿದ್ದಾರೆ. ಬಹುತೇಕ ಹೊಸ ಕಲಾವಿದರು ಬಣ್ಣ ಹಚ್ಚಿದ್ದಾರೆ. ‘ನಾರಾಯಣ ನಾರಾಯಣ’ ಸಿನಿಮಾ ವಿಮರ್ಶೆ ಇಲ್ಲಿದೆ..
- Madan Kumar
- Updated on: Mar 21, 2025
- 6:12 pm
ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ; ‘ಕಂಗ್ರಾಜುಲೇಷನ್ಸ್ ಬ್ರದರ್’
ಸೀರಿಯಲ್ಗಳಲ್ಲಿ ನಟಿಸಿ ಅನುಭವ ಹೊಂದಿರುವ ರಕ್ಷಿತ್ ನಾಗ್ ಅವರು ‘ಕಂಗ್ರಾಜುಲೇಷನ್ಸ್ ಬ್ರದರ್’ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಸಂಜನಾ ದಾಸ್, ಅನುಶಾ ಅವರು ನಾಯಕಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ತಂಡದ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Mar 21, 2025
- 3:46 pm
ಸಿನಿಮೋತ್ಸವಗಳಲ್ಲಿ ‘ವಾಘಚಿಪಾಣಿ’ ಯಶಸ್ಸು; ನಿರ್ದೇಶಕ ನಟೇಶ್ ಹೆಗಡೆ ಮನದಾಳದ ಮಾತು
ನಟೇಶ್ ಹೆಗಡೆ ಅವರ ‘ಪೆದ್ರೊ’ ಮತ್ತು ‘ವಾಘಚಿಪಾಣಿ’ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿವೆ. ಆದರೆ, ಇವುಗಳು ಥಿಯೇಟರ್ಗಳಲ್ಲಿ ಬಿಡುಗಡೆ ಕಂಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆಗೆ ನಟೇಶ್ ಹೆಗಡೆ ಅವರು ಉತ್ತರಿಸಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ ಜೊತೆಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
- Web contact
- Updated on: Mar 21, 2025
- 12:50 pm
ಅಂಬರೀಷ್ ಜೊತೆ 27 ಸಿನಿಮಾ ಮಾಡಿದ್ದ ಖ್ಯಾತ ನಿರ್ದೇಶಕ ಎಟಿ ರಘು ನಿಧನ
ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಎ.ಟಿ. ರಘು ಅವರು 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 'ಮಂಡ್ಯದ ಗಂಡು' ಸೇರಿದಂತೆ 55ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಚಿತ್ರರಂಗ ಶೋಕ ಸಾಗರದಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿನಿಪ್ರಿಯರು ಪ್ರಾರ್ಥಿಸಿದ್ದಾರೆ.
- Rajesh Duggumane
- Updated on: Mar 21, 2025
- 7:34 am
ಕರ್ನಾಟಕ ಬಂದ್: ಕನ್ನಡ ಚಿತ್ರರಂಗದ ನೈತಿಕ ಬೆಂಬಲ, ನಿಲ್ಲಲ್ಲ ಚಿತ್ರೀಕರಣ
Karnataka Bandh: ಮಾರ್ಚ್ 22 ರಂದು ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಹಲವು ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಫಿಲಂ ಚೇಂಬರ್ನಲ್ಲಿ ನಡೆದ ಇಂದಿನ ಸಂಭೆಯಲ್ಲಿ, ಚಿತ್ರರಂಗದವೂ ಸಹ ಬಂದ್ಗೆ ಬೆಂಬಲ ನೀಡುವ ಬಗ್ಗೆ ಘೋಸಿಲಾಗಿದೆ. ಆದರೆ ಯಾವುದೇ ಸಿನಿಮಾದ ಚಿತ್ರೀಕರಣ ಬಂದ್ ಮಾಡಲಾಗುತ್ತಿಲ್ಲ.
- Manjunatha C
- Updated on: Mar 20, 2025
- 4:54 pm
ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ; ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಹೇಳ ಹೊರಟ ಹರ್ಷಿಕಾ
ಹರ್ಷಿಕಾ ಪೂಣಚ್ಚ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರ 'ಚಿ: ಸೌಜನ್ಯ' ದ ಘೋಷಣೆಯು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಕಾಲ್ಪನಿಕ ಕಥೆಯು ಒಂದು ಹೆಣ್ಣಿನ ಕಷ್ಟದ ಕಥೆಯನ್ನು ಹೇಳಲಿದೆ. ಪೋಸ್ಟರ್ನಲ್ಲಿರುವ ಚಿತ್ರವು ಈ ಕಥೆಯ ತೀವ್ರತೆಯನ್ನು ಚಿತ್ರಿಸುತ್ತದೆ.
- Rajesh Duggumane
- Updated on: Mar 20, 2025
- 2:31 pm
ಪುನೀತ್ ನಟನೆಯ ಯಾವ ಸಿನಿಮಾ ನೋಡಬೇಕು? ಅಭಿಮಾನಿಗಳಲ್ಲಿ ಕೇಳಿದ ದಿನೇಶ್ ಕಾರ್ತಿಕ್
ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು, ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಅವರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಪುನೀತ್ ಅವರ ಚಲನಚಿತ್ರಗಳನ್ನು ಶಿಫಾರಸು ಮಾಡುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಅಪ್ಪು ಅವರ ಸ್ಮರಣೆಯು ಇನ್ನೂ ಜೀವಂತವಾಗಿದ್ದು, ಅವರ ಅಭಿಮಾನಿಗಳು ವಿವಿಧ ಚಲನಚಿತ್ರಗಳನ್ನು ಶಿಫಾರಸು ಮಾಡಿದ್ದಾರೆ. ಈ ಘಟನೆಯು ಪುನೀತ್ ರಾಜ್ ಕುಮಾರ್ ಅವರ ಅಪಾರ ಜನಪ್ರಿಯತೆಯನ್ನು ತೋರಿಸುತ್ತದೆ.
- Rajesh Duggumane
- Updated on: Mar 18, 2025
- 7:05 am
ಪುನೀತ್ ರಾಜ್ಕುಮಾರ್ ಮಾಲೆ ಧರಿಸಿ ಇರುಮುಡಿ ಕಟ್ಟು ತಲೆಮೇಲೆ ಹೊತ್ತು ಸಮಾಧಿಗೆ ನಡೆದು ಬಂದ ಅಭಿಮಾನಿ
ಪುನೀತ್ ರಾಜ್ಕುಮಾರ್ ಅವರಿಗೆ ತರಹೇವಾರಿ ಅಭಿಮಾನಿಗಳು, ಒಬ್ಬೊಬ್ಬರದು ಒಂದೊಂದು ಬಗೆಯ ಅಭಿಮಾನ. ಆದರೆ ಅಯ್ಯಪ್ಪನ ಭಕ್ತರಂತೆ ಮಾಲೆಧರಿಸಿ ನಟನ ಫೋಟೋವನ್ನು ಕುತ್ತಿಗೆಗೆ ನೇತಾಡಿಸಿಕೊಂಡು ನಡೆಯುತ್ತಾ ಅವರ ಸಮಾಧಿಗೆ ಹೋಗಿ ಪೂಜೆ ಸಲ್ಲಿಸುವ ಪರಿಕಲ್ಪನೆ ಈ ಅಭಿಮಾನಿಗೆ ಬಿಟ್ಟು ಬೇರೆ ಯಾರಿಗೂ ಬಂದಿರಲಿಕ್ಕಿಲ್ಲ.
- Arun Belly
- Updated on: Mar 17, 2025
- 11:20 am