Kannada Cinema
1934ರಲ್ಲಿ ಮೊದಲ ಕನ್ನಡ ಸಿನಿಮಾ ‘ಸತಿ ಸುಲೋಚನಾ’ ಬಿಡುಗಡೆ ಆಗುವ ಮೂಲಕ ಉದಯವಾದ ಕನ್ನಡ ಚಿತ್ರರಂಗಕ್ಕೆ 89 ವರ್ಷದ ಸುದೀರ್ಘ ಇತಿಹಾಸವಿದೆ.
ಮನರಂಜನೆಯ ಜೊತೆಗೆ ಜನ ಜಾಗೃತಿ ಮೂಡಿಸುವ, ಅಭಿರುಚಿ ಬೆಳೆಸುವ ಸಿನಿಮಾಗಳನ್ನು ಕನ್ನಡ ಚಿತ್ರರಂಗ ನೀಡುತ್ತಲೇ ಬಂದಿದೆ. ಸಿನಿಮಾಗಳ ಮೂಲಕ ಕನ್ನಡತನವನ್ನು ಪಸರಿಸುತ್ತಾ ಬಂದಿದೆ. ಸುಬ್ಬಯ್ಯ ನಾಯ್ಡು, ಭಾಗವತರ್, ಪಂಡರೀಬಾಯಿ ಅವರುಗಳು ಬಿತ್ತಿದ ಕನ್ನಡ ಚಿತ್ರರಂಗದ ಬೀಜಕ್ಕೆ ರಾಜ್ಕುಮಾರ್, ಕಲ್ಯಾಣ್ ಕುಮಾರ್, ಲೋಕೇಶ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ನಾಗ್, ಅಂಬರೀಶ್ ಅಂಥಹಾ ಇನ್ನೂ ಅನೇಕ ಮಹನೀಯರು ನೀರೆರೆದು ಹೆಮ್ಮರವಾಗಿ ಬಳೆಸಿದ್ದಾರೆ.
ಕನ್ನಡ ಚಿತ್ರರಂಗ ಇಂದು ವಾರ್ಷಿಕವಾಗಿ ಸಾವಿರಾರು ಕೋಟಿ ವ್ಯವಹಾರ ನಡೆಯುವ ತಾಣ, ವರ್ಷಕ್ಕೆ ಸರಾಸರಿ 200 ರಿಂದ 250 ಕನ್ನಡ ಸಿನಿಮಾಗಳು ಇಲ್ಲಿ ತಯಾರುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ‘ಕೆಜಿಎಫ್’, ‘ಕಾಂತಾರ’, ‘ವಿಕ್ರಾಂತ್ ರೋಣ’ ಇನ್ನೂ ಕೆಲವು ಸಿನಿಮಾಗಳು ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆ ಗೊಳಿಸಿವೆ.
‘ರಿಚರ್ಡ್ ಆಂಟನಿ’ ಸಿನಿಮಾ ಕುರಿತು ರಾಜ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಕೆಲಸಗಳಲ್ಲಿ ನಿರತರಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗೆ ರಾಜ್ ಬಿ. ಶೆಟ್ಟಿ ನೀಡಿದ ಹೇಳಿಕೆ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. 'ರಿಚರ್ಡ್ ಆಂಟನಿ' ಚಿತ್ರದ ಕೆಲಸಗಳು ಇನ್ನೂ ಆರಂಭವಾಗಿಲ್ಲವೇ ಎಂದು ಪ್ರಶ್ನಿಸುವಂತೆ ಮಾಡಿದೆ. 'ಸಪ್ತ ಸಾಗರದಾಚೆ ಎಲ್ಲೋ' ನಂತರ ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ.
- Rajesh Duggumane
- Updated on: Dec 20, 2025
- 2:49 pm
‘ಕೊರಗಜ್ಜ’ ಸಿನಿಮಾದಲ್ಲಿ ಡ್ಯುಯೆಟ್ ಸಾಂಗ್? ಕುತೂಹಲ ಮೂಡಿಸಿದ ಚಿತ್ರತಂಡ
‘ಕೊರಗಜ್ಜ’ ಸಿನಿಮಾದ ಎರಡನೇ ಹಾಡಿಗೆ ಶ್ರೇಯಾ ಘೋಷಾಲ್ ಮತ್ತು ಅರ್ಮಾನ್ ಮಲಿಕ್ ಧ್ವನಿ ನೀಡಿದ್ದಾರೆ. ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಸಾಹಿತ್ಯ ಬರೆದಿದ್ದಾರೆ. ಗೋಪಿ ಸುಂದರ್ ಅವರು ಸಂಗೀತ ಸಂಯೋಜಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ಹೊಸ ಹಾಡಿನ ಬಗ್ಗೆ ‘ಕೊರಗಜ್ಜ’ ಸಿನಿಮಾ ತಂಡ ಕೆಲವು ಮಾಹಿತಿ ಹಂಚಿಕೊಂಡಿದೆ.
- Madan Kumar
- Updated on: Dec 19, 2025
- 5:58 pm
ವಿಲನ್ ಪಾತ್ರ ಮಾಡಿದರೂ ಜನರು ಒಪ್ಪಿಕೊಂಡರು; ಖುಷಿ ಹೊರಹಾಕಿದ ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್ 'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ನೆಗೆಟಿವ್ ಪಾತ್ರ ನಿರ್ವಹಿಸಿದ್ದರೂ, ಅಭಿಮಾನಿಗಳು ಅವರನ್ನು ಒಪ್ಪಿಕೊಂಡಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಇಂತಹ ಪಾತ್ರ ಮಾಡುವುದು ಅಪಾಯಕಾರಿ ಎಂದಿದ್ದರೂ, ಜನರಿಂದ ದ್ವೇಷ ಬಾರದಿರುವುದು ಅವರಿಗೆ ಸಂತಸ ತಂದಿದೆ. ಆ ಬಗ್ಗೆ ಇಲ್ಲಿದೆ ವಿವರ .
- Shreelaxmi H
- Updated on: Dec 19, 2025
- 7:34 am
ಅರ್ಧ ಕೋಟಿಗೆ ಕುಸಿದ ‘ಡೆವಿಲ್’ ಕಲೆಕ್ಷನ್; ಕೈ ಹಿಡಿಯಬೇಕಿದೆ ಅಭಿಮಾನಿಗಳು
'ಡೆವಿಲ್' ಸಿನಿಮಾ ಕಲೆಕ್ಷನ್ ದಿನೇ ದಿನೇ ಕುಸಿತ ಕಾಣುತ್ತಿದೆ. ಆರಂಭಿಕ ಉತ್ತಮ ಗಳಿಕೆಯ ನಂತರವೂ, ಚಿತ್ರದ ಬೃಹತ್ ಬಜೆಟ್ಗೆ ಹೋಲಿಸಿದರೆ ಪ್ರಸ್ತುತ ಗಳಿಕೆ ಸಾಕಾಗುತ್ತಿಲ್ಲ. ಗುರುವಾರ ಕಲೆಕ್ಷನ್ ತೀವ್ರವಾಗಿ ಇಳಿದಿದ್ದು, ಅಭಿಮಾನಿಗಳ ಬೆಂಬಲ ಅನಿವಾರ್ಯವಾಗಿದೆ. ಮುಂಬರುವ ವಾರ ಹೊಸ ಕನ್ನಡ ಚಿತ್ರಗಳ ಬಿಡುಗಡೆಯಿಂದ 'ಡೆವಿಲ್' ಇನ್ನಷ್ಟು ಸವಾಲು ಎದುರಿಸಲಿದೆ.
- Rajesh Duggumane
- Updated on: Dec 19, 2025
- 8:04 am
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
‘ಲ್ಯಾಂಡ್ ಲಾರ್ಡ್’ ಚಿತ್ರದ ‘ನಿಂಗವ್ವ ನಿಂಗವ್ವ..’ ಸಾಂಗ್ ರಿಲೀಸ್ ಆಗಿದೆ. ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಕಂಠದಲ್ಲಿ ಸಾಂಗ್ ಮೂಡಿಬಂದಿದೆ. ಹಾಡಿನ ರಿಲೀಸ್ ವೇಳೆ ಯೋಗರಾಜ್ ಭಟ್ ಅವರು ನೇರವಾಗಿ ಮಾತನಾಡಿದರು. ಯಾಕೆ ಈ ರೀತಿ ಮಾತಾಡಿದರು ಎಂಬುದಕ್ಕೆ ಈ ವಿಡಿಯೋದಲ್ಲಿ ಉತ್ತರ.
- Madan Kumar
- Updated on: Dec 18, 2025
- 10:30 pm
ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಬಲರಾಮನ ದಿನಗಳು’ ಚಿತ್ರದ ಆಡಿಯೋ ಹಕ್ಕು
ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ ‘ಬಲರಾಮನ ದಿನಗಳು’. ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ಟಿ-ಸಿರೀಸ್ ಸಂಸ್ಥೆಯು ಈ ಚಿತ್ರದ ಹಾಡುಗಳ ಪ್ರಸಾರ ಹಕ್ಕುಗಳನ್ನು ಖರೀದಿ ಮಾಡಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಯಿತು. ಕೆ.ಎಂ. ಚೈತನ್ಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತಾಡಿದರು.
- Madan Kumar
- Updated on: Dec 18, 2025
- 8:24 pm
‘ಚಾರ್ಜ್ಶೀಟ್’, ‘ರಕ್ಕಿ’ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳಿಸಿದ ವೆಂಕಟ್ ಭಾರದ್ವಾಜ್
‘ಹೈನಾ’ ಮತ್ತು ‘ಹೇ ಪ್ರಭು’ ಸಿನಿಮಾಗಳ ಬಿಡುಗಡೆ ನಂತರ ಇನ್ನೆರಡು ಸಿನಿಮಾಗಳಿಗೆ ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ‘ಜಾರ್ಜ್ಶೀಟ್’ ಮತ್ತು ‘ರಕ್ಕಿ’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿವೆ. ಆ ಬಗ್ಗೆ ಚಿತ್ರತಂಡಗಳ ಕಡೆಯಿಂದ ಮಾಹಿತಿ ನೀಡಲಾಗಿದೆ. ಕ್ರೈಂ ಕಥಾಹಂದರ ‘ಜಾರ್ಜ್ಶೀಟ್’ ಸಿನಿಮಾದಲ್ಲಿ ಇರಲಿದೆ. ರಿಯಲ್ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ.
- Madan Kumar
- Updated on: Dec 18, 2025
- 4:27 pm
‘ನಾನು ನಿಮ್ಮ ಭಾಷೆ ಕಲಿತಿದ್ದು ಪುನೀತ್ಗಾಗಿ’; ಕನ್ನಡದ ಬಗ್ಗೆ ಪ್ರೀತಿ ಹೊರ ಹಾಕಿದ ಪ್ರಿಯಾ ಆನಂದ್
ನಟಿ ಪ್ರಿಯಾ ಆನಂದ್ ಅವರು ಪುನೀತ್ ರಾಜ್ಕುಮಾರ್ ಅವರಿಗಾಗಿ ಕನ್ನಡ ಕಲಿತೆ ಎಂದಿದ್ದಾರೆ. ‘ರಾಜಕುಮಾರ’ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ, ಪುನೀತ್ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು. ಇತ್ತೀಚೆಗೆ ‘ಬಲರಾಮನ ದಿನಗಳು’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ಕನ್ನಡ ಕಲಿಯಲು ಪ್ರೇರಣೆ ನೀಡಿದರು ಎಂದರು.
- Web contact
- Updated on: Dec 18, 2025
- 12:51 pm
ರೇಣುಕಾಸ್ವಾಮಿ ಕೇಸ್: ಎ1 ಪವಿತ್ರಾ ಗೌಡ ಇರುವ ಸೆಲ್ಗೆ ಟಿವಿ ನೀಡಲು ಕೋರ್ಟ್ ಸೂಚನೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆ ಇಂದಿನಿಂದ (ಡಿಸೆಂಬರ್ 17) ಆರಂಭ ಆಗಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ರೇಣುಕಾಸ್ವಾಮಿ ತಂದೆ, ತಾಯಿ ವಿಚಾರಣೆಗೆ ಹಾಜರಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತು ದರ್ಶನ್, ಪವಿತ್ರಾ ಗೌಡ ಅವರು ಕೋರ್ಟ್ ಕಲಾಪ ವೀಕ್ಷಣೆ ಮಾಡಿದ್ದಾರೆ.
- Ramesha M
- Updated on: Dec 17, 2025
- 7:33 pm
‘ಯಾರ ಜೊತೆ ಬೇಕಾದರೂ ಹೋಗಿ ಮಲಗು’: ಕನ್ನಡದ ನಟಿಗೆ ಗಂಡನಿಂದ ಕಿರುಕುಳ
ನಟಿ ಜೋಶಿತಾ ಅವರ ಸಂಸಾರದಲ್ಲಿ ಬಿರುಕು ಮಾಡಿದ್ದು, ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತಮಗೆ ಗಂಡ ಸುರೇಶ್ ನಾಯ್ಡು ನೀಡಿದ ಕಿರುಕುಳದ ಬಗ್ಗೆ ಜೋಶಿತಾ ಅವರು ವಿವರಿಸಿದ್ದಾರೆ. ಇಲ್ಲಿದೆ ಮಾಹಿತಿ..
- Mangala RR
- Updated on: Dec 17, 2025
- 5:47 pm
‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..
‘45’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಟ್ರೇಲರ್ನಲ್ಲಿ ಶಿವರಾಜ್ಕುಮಾರ್ ಅವರ ಲೇಡಿ ಗೆಟಪ್ ಕಾಣಿಸಿದೆ. ಅದನ್ನು ನೋಡಿ ಗೀತಕ್ಕ ಬಿದ್ದು ಬಿದ್ದು ನಕ್ಕಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Dec 16, 2025
- 9:26 pm
ರೇಣುಕಾಸ್ವಾಮಿ ಪ್ರಕರಣ: ದರ್ಶನ್ ಕೇಸ್ ಟ್ರಯಲ್ ಆರಂಭಕ್ಕೆ ಸಕಲ ಸಿದ್ಧತೆ
ಬುಧವಾರ (ಡಿಸೆಂಬರ್ 17) ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಹಾಜರಾಗಲಿದ್ದಾರೆ. 7, 8ನೇ ಸಾಕ್ಷಿಗಳಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಹಾಗೂ ತಾಯಿ ರತ್ನಪ್ರಭ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಈ ಪ್ರಕರಣದಲ್ಲಿನ ಪ್ರಮುಖ ಸಾಕ್ಷಿಗಳ ವಿಚಾರಣೆ ಬಳಿಕ ದರ್ಶನ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
- Ramesha M
- Updated on: Dec 16, 2025
- 7:30 pm