Kannada Cinema
1934ರಲ್ಲಿ ಮೊದಲ ಕನ್ನಡ ಸಿನಿಮಾ ‘ಸತಿ ಸುಲೋಚನಾ’ ಬಿಡುಗಡೆ ಆಗುವ ಮೂಲಕ ಉದಯವಾದ ಕನ್ನಡ ಚಿತ್ರರಂಗಕ್ಕೆ 89 ವರ್ಷದ ಸುದೀರ್ಘ ಇತಿಹಾಸವಿದೆ.
ಮನರಂಜನೆಯ ಜೊತೆಗೆ ಜನ ಜಾಗೃತಿ ಮೂಡಿಸುವ, ಅಭಿರುಚಿ ಬೆಳೆಸುವ ಸಿನಿಮಾಗಳನ್ನು ಕನ್ನಡ ಚಿತ್ರರಂಗ ನೀಡುತ್ತಲೇ ಬಂದಿದೆ. ಸಿನಿಮಾಗಳ ಮೂಲಕ ಕನ್ನಡತನವನ್ನು ಪಸರಿಸುತ್ತಾ ಬಂದಿದೆ. ಸುಬ್ಬಯ್ಯ ನಾಯ್ಡು, ಭಾಗವತರ್, ಪಂಡರೀಬಾಯಿ ಅವರುಗಳು ಬಿತ್ತಿದ ಕನ್ನಡ ಚಿತ್ರರಂಗದ ಬೀಜಕ್ಕೆ ರಾಜ್ಕುಮಾರ್, ಕಲ್ಯಾಣ್ ಕುಮಾರ್, ಲೋಕೇಶ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ನಾಗ್, ಅಂಬರೀಶ್ ಅಂಥಹಾ ಇನ್ನೂ ಅನೇಕ ಮಹನೀಯರು ನೀರೆರೆದು ಹೆಮ್ಮರವಾಗಿ ಬಳೆಸಿದ್ದಾರೆ.
ಕನ್ನಡ ಚಿತ್ರರಂಗ ಇಂದು ವಾರ್ಷಿಕವಾಗಿ ಸಾವಿರಾರು ಕೋಟಿ ವ್ಯವಹಾರ ನಡೆಯುವ ತಾಣ, ವರ್ಷಕ್ಕೆ ಸರಾಸರಿ 200 ರಿಂದ 250 ಕನ್ನಡ ಸಿನಿಮಾಗಳು ಇಲ್ಲಿ ತಯಾರುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ‘ಕೆಜಿಎಫ್’, ‘ಕಾಂತಾರ’, ‘ವಿಕ್ರಾಂತ್ ರೋಣ’ ಇನ್ನೂ ಕೆಲವು ಸಿನಿಮಾಗಳು ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆ ಗೊಳಿಸಿವೆ.
ಪಂಜುರ್ಲಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹರಕೆ ತೀರಿಸಿದ ರಿಷಬ್ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡದವರು ಹರಕೆ ತೀರಿಸಲು ಬಂದಿದ್ದಾರೆ. ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಚಿತ್ರತಂಡ ಭಾಗಿಯಾಗಿದೆ. ಪತ್ನಿ, ಮಕ್ಕಳ ಜತೆ ನೇಮೋತ್ಸವಕ್ಕೆ ರಿಷಬ್ ಶೆಟ್ಟಿ ಆಗಮಿಸಿದ್ದಾರೆ. ಕಳೆದ ಎಪ್ರಿಲ್ ತಿಂಗಳಲ್ಲಿ ಕೂಡ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಮತ್ತು ಕುಟುಂಬದವರು ಭಾಗಿ ಆಗಿದ್ದರು.
- Pruthviraj
- Updated on: Dec 4, 2025
- 9:53 pm
ಈ ವಾರ ‘ಧುರಂಧರ್’, ‘ಅಖಂಡ 2’, ‘ಧರ್ಮಂ’ ಜೊತೆ ಇನ್ನಷ್ಟು ಸಿನಿಮಾ ರಿಲೀಸ್
ಈ ವಾರ ಬಾಕ್ಸ್ ಆಫೀಸ್ನಲ್ಲಿ ರಣವೀರ್ ಸಿಂಗ್, ಬಾಲಯ್ಯ, ಮಮ್ಮೂಟ್ಟಿ ಮುಂತಾದವರ ನಡುವೆ ಪೈಪೋಟಿ ಏರ್ಪಟ್ಟಿದೆ. ‘ಧುರಂಧರ್’, ‘ಅಖಂಡ 2’, ‘ಕಲಂಕಾವಲ್’, ‘ಧರ್ಮಂ’ ಮುಂತಾದ ಸಿನಿಮಾಗಳು ಡಿಸೆಂಬರ್ 5ಕ್ಕೆ ರಿಲೀಸ್ ಆಗುತ್ತಿವೆ. ಒಂದಲ್ಲ ಒಂದು ಕಾರಣದಿಂದ ಈ ಸಿನಿಮಾಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Dec 4, 2025
- 9:20 pm
ದರ್ಶನ್ ವಿರುದ್ಧ ಟ್ರಯಲ್ ಆರಂಭ: ಕೋರ್ಟ್ ವಿಚಾರಣೆ ಹೇಗಿರುತ್ತೆ? ಇಲ್ಲಿದೆ ಪೂರ್ತಿ ಮಾಹಿತಿ..
ದರ್ಶನ್, ಪವಿತ್ರಾ ಗೌಡ ಮುಂತಾದ ಆರೋಪಿಗಳು ಇನ್ನೂ ಎಷ್ಟು ದಿನ ಜೈಲಿನಲ್ಲಿ ಇರಬೇಕಾಗುತ್ತದೆ? ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಾದ-ಪ್ರತಿವಾದ ಯಾವ ರೀತಿ ನಡೆಯಲಿದೆ? ಈ ಕೇಸ್ನಲ್ಲಿ ಯಾವೆಲ್ಲ ಸಾಕ್ಷಿಗಳು ಇವೆ? ವಕೀಲರು ಯಾರು? ಇಂಥ ಎಲ್ಲ ಪಶ್ನೆಗಳಿಗೂ ಈ ಲೇಖನದಲ್ಲಿದೆ ಉತ್ತರ..
- Ramesha M
- Updated on: Dec 4, 2025
- 8:40 pm
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು? ವಿವರಿಸಿದ ಪತ್ನಿ
‘ಪಾತ್ರಧಾರಿ’ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ಸಂಗೀತ್ ಸಾಗರ್ ಅವರು ನಿಧನರಾದರು. ಹೃದಯಾಘಾತದಿಂದ ಅವರು ಮೃತರಾಗಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಅವರ ಪತ್ನಿ ಸ್ಮಿತಾ ಸಾಗರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಇನ್ನೂ ನಮಗೆ ಮೃತ ದೇಹ ಕೊಟ್ಟಿಲ್ಲ’ ಎಂದು ಸ್ಮಿತಾ ಅವರು ಹೇಳಿದ್ದಾರೆ.
- Madan Kumar
- Updated on: Dec 4, 2025
- 5:12 pm
ಮೂರು ಬಾರಿ ಸಾಯಲು ಹೋಗಿದ್ದ ಚರಣ್ ರಾಜ್; ತಪ್ಪಿದ್ದು ಹೇಗೆ?
ನಟ ಚರಣ್ ರಾಜ್ ತಮ್ಮ ಕಷ್ಟದ ದಿನಗಳನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಮೂರು ಬಾರಿ ಸಾಯಲು ಹೋಗಿದ್ದ ಅವರು, ಊಟವಿಲ್ಲದೆ ಹಸಿವಿನಿಂದ ಕಷ್ಟಪಟ್ಟಿದ್ದರು. ನಿರ್ದೇಶಕ ಸಿದ್ಲಿಂಗಯ್ಯ ಅವರ ಬೆಂಬಲದಿಂದ ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಂಡರು. ಅವರ ಜೀವನ ಪಯಣದ ಸವಾಲುಗಳು ಮತ್ತು ಅದರಿಂದ ಹೊರಬಂದ ರೀತಿ ನಿಜಕ್ಕೂ ಸ್ಫೂರ್ತಿದಾಯಕ.
- Shreelaxmi H
- Updated on: Dec 4, 2025
- 8:13 am
100 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಯ್ತು ‘45’ ಸಿನಿಮಾ?
ಬಹುನಿರೀಕ್ಷಿತ ‘45’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಚಿತ್ರತಂಡ ಹೇಳಿದೆ. ಈ ಚಿತ್ರದ ಬಜೆಟ್ 100 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಡಿ.25ಕ್ಕೆ ‘45’ ರಿಲೀಸ್ ಆಗಲಿದೆ.
- Madan Kumar
- Updated on: Dec 3, 2025
- 7:23 pm
ದರ್ಶನ್-ರೇಣುಕಾಸ್ವಾಮಿ ಕೇಸ್: ಡಿ.17ರಿಂದ ಸಾಕ್ಷ್ಯ ವಿಚಾರಣೆಗೆ ನ್ಯಾಯಾಲಯ ನಿರ್ಧಾರ
ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಹಾಯಕ ಎಸ್ಪಿಪಿ ಸಚಿನ್ ಮನವಿ ಮಾಡಿದ್ದಾರೆ. ಡಿ.17ರಂದು ವಿಚಾರಣೆ ಶುರು ಆಗಲಿದೆ. ಎಫ್ಎಸ್ಎಲ್ ಸಾಕ್ಷಿಗಳು, ಪ್ರತ್ಯಕ್ಷ ಸಾಕ್ಷಿಗಳು, ತಾಂತ್ರಿಕ ಸಾಕ್ಷಿಗಳ ಪ್ರತ್ಯೇಕ ಪಟ್ಟಿಯು ನ್ಯಾಯಾಲಯಕ್ಕೆ ಸಲ್ಲಿಕೆ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 260ಕ್ಕೂ ಅಧಿಕ ಸಾಕ್ಷಿಗಳು ಇವೆ. ದರ್ಶನ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.
- Ramesha M
- Updated on: Dec 3, 2025
- 5:26 pm
ದರ್ಶನ್ ಕ್ಯಾರವಾನ್ ಒಳಗೆ ಏನು ನಡೆಯುತ್ತದೆ? ವಿವರಿಸಿದ ಅಚ್ಯುತ್ ಕುಮಾರ್
ದರ್ಶನ್ ಮತ್ತು ಅಚ್ಯುತ್ ಕುಮಾರ್ ಅವರು ಜೊತೆಯಾಗಿ ನಟಿಸಿದ ನಾಲ್ಕನೇ ಸಿನಿಮಾ ‘ದಿ ಡೆವಿಲ್’. ದರ್ಶನ್ ಜೊತೆ ಕೆಲಸ ಮಾಡಿದ ಅನುಭವವನ್ನು ಸುದ್ದಿಗೋಷ್ಠಿಯಲ್ಲಿ ಅಚ್ಯುತ್ ಅವರು ಹಂಚಿಕೊಂಡರು. ಕ್ಯಾರವಾನ್ ಇಳಿದು ಬರುವಾಗಲೇ ದರ್ಶನ್ ಅವರು ಸನ್ನಿವೇಶಕ್ಕೆ ತಯಾರಾಗಿ ಬರುತ್ತಾರೆ ಎಂದು ಅಚ್ಯುತ್ ಹೇಳಿದರು.
- Madan Kumar
- Updated on: Dec 3, 2025
- 4:11 pm
ಪಾಕಿಸ್ತಾನದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ: ವಿಡಿಯೋ ವೈರಲ್
ಪಾಕಿಸ್ತಾನದ ಕರಾಚಿಯ ದೇವಸ್ಥಾನದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಭಕ್ತರು ಕಮೆಂಟ್ ಮಾಡುತ್ತಿದ್ದಾರೆ. ಸಾವಿರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಕುಳಿತು ಈ ಸಿನಿಮಾ ನೋಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Dec 3, 2025
- 3:49 pm
ಸಿನಿಮಾ ಚೆನ್ನಾಗಿರಲು ಮುಖ್ಯವಾಗಿ ಬೇಕಾಗಿದ್ದು ಏನು? ರಾಜ್ಕುಮಾರ್ ಮಾತು ಈಗಲೂ ಪ್ರಸ್ತುತ
ಡಾ. ರಾಜ್ಕುಮಾರ್ ಅವರು ಸಿನಿಮಾದ ಗುಣಮಟ್ಟದ ಬಗ್ಗೆ ನೀಡಿದ ಸಂದರ್ಶನ ಈಗಲೂ ಪ್ರಸ್ತುತ. ಕಥೆ, ಸ್ವಂತಿಕೆ ಮತ್ತು ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದಿದ್ದ ಅವರ ಮಾತುಗಳು ಇಂದಿಗೂ ದಿಕ್ಸೂಚಿ. ತಂತ್ರಜ್ಞಾನ ಎಷ್ಟೇ ಬೆಳೆದರೂ, ಸಿನಿಮಾದ ಆತ್ಮ ಕಥೆಯೇ. ಕಥೆಯಿಲ್ಲದ ಸಿನಿಮಾ ಗೆಲ್ಲಲ್ಲ ಎಂದು ಅವರು ಹೇಳಿದ್ದು, ಕನ್ನಡ ಚಿತ್ರರಂಗಕ್ಕೆ ಮಾರ್ಗದರ್ಶನವಾಗಿದೆ.
- Shreelaxmi H
- Updated on: Dec 3, 2025
- 9:20 am