AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

Mangala RR
| Edited By: |

Updated on: Mar 16, 2026 | 10:58 PM

Share

ದರ್ಶನ್ ಪರ ವಕೀಲರು ‘ಬಾಸ್’ ಸಿನಿಮಾಗೆ ಪ್ರಮಾಣಪತ್ರ ನೀಡಬಾರದು ಎಂದು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಬಾಸ್ ಚಿತ್ರದ ನಟ ತನುಷ್ ಶಿವಣ್ಣ ಅವರು ಮಾತನಾಡಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ನಾವು ಈ ರೀತಿ ಮಾಡಿಲ್ಲ. ಇದು ರೇಣುಕಾಸ್ವಾಮಿ ಕಥೆ ಅಲ್ಲ ಎಂದು ತನುಷ್ ಶಿವಣ್ಣ ಹೇಳಿದ್ದಾರೆ.

ದರ್ಶನ್ (Darshan) ಪರ ವಕೀಲರು ‘ಬಾಸ್’ ಸಿನಿಮಾಗೆ ಪ್ರಮಾಣಪತ್ರ ನೀಡಬಾರದು ಎಂದು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ‘ಬಾಸ್’ ಚಿತ್ರದ ನಟ ತನುಷ್ ಶಿವಣ್ಣ ಅವರು ಮಾತನಾಡಿದ್ದಾರೆ. ‘ಅವರು ಸಿನಿಮಾವನ್ನೇ ನೋಡಿಲ್ಲ. ಹಾಗಿದ್ದಮೇಲೆ ಅವರು ಹೇಗೆ ನೋಟಿಸ್ ಕಳಿಸುತ್ತಾರೆ? ನಾವು ಯಾವ ವಿಷಯದ ಮೇಲೆ ಸಿನಿಮಾ ಮಾಡಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಸೆನ್ಸಾರ್ ಮಂಡಳಿಗೆ ಜವಾಬ್ದಾರಿ ಇದೆ. ಅವರು ತಮ್ಮ ಕೆಲಸ ಮಾಡುತ್ತಾರೆ. ಇನ್ನೇನು ನಮ್ಮ ಸಿನಿಮಾಗೆ ಪ್ರಮಾಣಪತ್ರ ಸಿಗಬೇಕಿತ್ತು. ಆದರೆ ಈಗ ನೋಟಿಸ್ ಕಳಿಸಿದ್ದರಿಂದ ನಮಗೆ ತುಂಬಾ ನಷ್ಟ ಆಗಿದೆ. ರೇಣುಕಾಸ್ವಾಮಿ ಘಟನೆ ಜೊತೆ ಕೆಲವು ವಿಷಯಗಳು ಮ್ಯಾಚ್ ಆಗಿರಬಹುದು. ಆದರೆ ಇದು ಅದೇ ಕಥೆ ಅಂತ ನಿರ್ಧಾರಕ್ಕೆ ಬರೋಕೆ ಆಗಲ್ಲ. ನಾವು ಆ ವಿಷಯ ಇಟ್ಟುಕೊಂಡು ಸಿನಿಮಾ ಮಾಡೋಕೆ ಕೂಡ ಆಗಲ್ಲ’ ಎಂದು ತನುಷ್ ಶಿವಣ್ಣ (Tanush Shivanna) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us