
Darshan Thoogudeepa
ನಟ ದರ್ಶನ್ ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ. ಇವರು ಕನ್ನಡ ಚಿತ್ರರಂಗದ ಜನಪ್ರಿಯ ನಟ. 1977ರ ಫೆಬ್ರವರಿ 16ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ದರ್ಶನ್ ಅವರ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’ 2001ರಲ್ಲಿ ಬಿಡುಗಡೆಯಾಗಿತು. ಆ ಮೂಲಕ ಹೀರೋ ಆಗಿ ಅವರು ವೃತ್ತಿಜೀವನ ಆರಂಭಿಸಿದರು. ತಮ್ಮ ಅಭಿನಯದಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದ ದರ್ಶನ್ ಅವರು ವಿಶೇಷವಾಗಿ ಆ್ಯಕ್ಷನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಗಮನಾರ್ಹ ಚಲನಚಿತ್ರಗಳಲ್ಲಿ ‘ಕರಿಯ’, ‘ನಮ್ಮ ಪ್ರೀತಿಯ ರಾಮು’, ‘ಸಂಗೊಳ್ಳಿ ರಾಯಣ್ಣ’, ‘ಕಲಾಸಿಪಾಳ್ಯ’, ‘ಅಯ್ಯ’, ‘ನವಗ್ರಹ’, ‘ಯಜಮಾನ’, ‘ರಾಬರ್ಟ್’, ‘ಕಾಟೇರ’ ಮುಂತಾದ ಸಿನಿಮಾಗಳಿವೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರು ಸಿನಿಮಾ ಮಾತ್ರವಲ್ಲದೇ ಪರೋಪಕಾರಿ, ಸಮಾಜಮುಖಿ ಚಟುವಟಿಕೆಗಳಿಂದಲೂ ಫೇಮಸ್ ಆಗಿದ್ದಾರೆ. ದರ್ಶನ್ ಅವರದ್ದು ಕಲಾವಿದರ ಕುಟುಂಬ. ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟ ಆಗಿದ್ದರು. ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ.
ಯಮ ಕರೆದರೂ ಅಮ್ಮನ ಕೆಲಸ ಮಾಡಿ ಹೋಗೋದು ಎಂದಿದ್ದ ದರ್ಶನ್; ಅಂಬಿ ಕುಟುಂಬದ ನಾಮಕರಣ ಶಾಸ್ತ್ರಕ್ಕೆ ಗೈರು
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಕಾರ್ಯಕ್ರಮಕ್ಕೆ ದರ್ಶನ್ ಅವರ ಅನುಪಸ್ಥಿತಿಯಿಂದಾಗಿ ಸುಮಲತಾ ಮತ್ತು ದರ್ಶನ್ ನಡುವಿನ ಸಂಬಂಧದ ಬಗ್ಗೆ ಮತ್ತೆ ಚರ್ಚೆಗಳು ಶುರುವಾಗಿವೆ. ಇದಕ್ಕೂ ಮುನ್ನ ದರ್ಶನ್ ಅವರು ಸುಮಲತಾ ಅವರನ್ನು ಮತ್ತು ಅಂಬರೀಷ್ ಕುಟುಂಬದ ಸದಸ್ಯರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದರು. ಸುಮಲತಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ, ದರ್ಶನ್ ಅವರ ಗೈರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
- Rajesh Duggumane
- Updated on: Mar 17, 2025
- 10:39 am
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ನಟ ದರ್ಶನ್ ಅವರು ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ಇದ್ದಾರೆ. ಅವರು ‘ಡೆವಿಲ್’ ಚಿತ್ರದ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾದ ಶೂಟ್ ಮತ್ತೆ ಆರಂಭ ಆಗಿದೆ. ಇಂದು ಚಿತ್ರಕ್ಕೆ ಕೊನೆಯ ದಿನ.
- Rajesh Duggumane
- Updated on: Mar 15, 2025
- 11:54 am
‘ಅಪ್ಪು’ ಸಿನಿಮಾಗೆ ದರ್ಶನ್ ಅಭಿಮಾನಿ ಬೆಂಬಲ; ವಿಶೇಷ ಕಲಾಕೃತಿ ತಂದ ಫ್ಯಾನ್
‘ಅಪ್ಪು’ ಸಿನಿಮಾ ಮರು ಬಿಡುಗಡೆ ಆಗಿದ್ದು, ಬರೀ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಮಾತ್ರವಲ್ಲದೇ ಬೇರೆ ನಟರ ಅಫ್ಯಾನ್ಸ್ ಸಹ ಈ ಸಿನಿಮಾಗೆ ಪ್ರೋತ್ಸಾಹ ನೀಡಿದ್ದಾರೆ. ದರ್ಶನ್ ಅವರ ಫ್ಯಾನ್ಸ್ ಕೂಡ ಬಂದು ‘ಅಪ್ಪು’ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ವಿಶೇಷ ಕಲಾಕೃತಿ ರಚಿಸಿದ ಅಭಿಮಾನಿಯೊಬ್ಬರು ದರ್ಶನ್ ಮತ್ತು ಪುನೀತ್ ಬಗ್ಗೆ ಮಾತನಾಡಿದ್ದಾರೆ.
- Malatesh Jaggin
- Updated on: Mar 14, 2025
- 9:34 am
ನನ್ನ ಉಸಿರು ಇರೋ ತನಕ ಬುಲ್ಬುಲ್ ಅಂತ ಕರೆಯಿರಿ, ದರ್ಶನ್ಗೆ ನಾನು ಋಣಿ: ರಚಿತಾ ರಾಮ್
ನಟಿ ರಚಿತಾ ರಾಮ್ ಅವರು ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಮೊದಲು ಅವಕಾಶ ಕೊಟ್ಟವರನ್ನು ಇಂದಿಗೂ ಸ್ಮರಿಸುತ್ತಾರೆ ರಚಿತಾ ರಾಮ್. ದರ್ಶನ್ ಅವರನ್ನು ತಮ್ಮ ಗಾಡ್ಫಾದರ್ ಎಂದು ರಚಿತಾ ಕರೆದಿದ್ದಾರೆ.
- Madan Kumar
- Updated on: Mar 12, 2025
- 4:58 pm
‘ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ’; ವಿವಾದಕ್ಕೆ ತೆರೆ ಎಳೆದ ಸುಮಲತಾ
ದರ್ಶನ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಂತರ ಹುಟ್ಟಿಕೊಂಡ ಊಹಾಪೋಹಗಳಿಗೆ ಸುಮಲತಾ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ದರ್ಶನ್ ಜೊತೆಗಿನ ಬಾಂಧವ್ಯದ ಬಗ್ಗೆ ಖಚಿತಪಡಿಸಿದ್ದಾರೆ ಮತ್ತು ಸಾಮಾಜಿಕ ಜಾಲತಾಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ಇದೆ.
- Rajesh Duggumane
- Updated on: Mar 12, 2025
- 2:02 pm
‘ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಆಗುತ್ತೆ’; ಸುಮಲತಾ-ದರ್ಶನ್ ಸಂಬಂಧ ಹಳಸಿದ ಬಗ್ಗೆ ಆಪ್ತನ ಮಾತು
ದರ್ಶನ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಸುಮಲತಾ ಅವರನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ದರ್ಶನ್ ಅವರ ಆಪ್ತರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ತಾತ್ಕಾಲಿಕ ಎಂದೂ, ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ ಎಂದೂ ಹೇಳಿದ್ದಾರೆ.
- Rajesh Duggumane
- Updated on: Mar 12, 2025
- 12:05 pm
ಸುಮಲತಾ-ದರ್ಶನ್ ಮಧ್ಯೆ ಬಿರುಕು? ಈ ಬೆಳವಣಿಗೆ ನೋಡಿದ್ರೆ ನೀವೂ ಒಪ್ತೀರಿ
ಸುಮಲತಾ ಅಂಬರೀಷ್ ಮತ್ತು ದರ್ಶನ್ ಅವರ ನಿಕಟ ಸಂಬಂಧದ ಬಗ್ಗೆ ಈಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದರ್ಶನ್ ಅವರು ಸುಮಲತಾ ಮತ್ತು ಅವರ ಕುಟುಂಬದ ಸದಸ್ಯರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್ಫಾಲೋ ಮಾಡಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲವಾದರೂ, ಸುಮಲತಾ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಈ ವಿಚಾರಕ್ಕೆ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
- Mangala RR
- Updated on: Mar 12, 2025
- 7:56 am
ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ಡಿ ಬಾಸ್
‘ಡೆವಿಲ್’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಬಗ್ಗೆ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಆದರೆ ಎಲ್ಲರಿಗೂ ದರ್ಶನ್ ಒಂದು ಶಾಕ್ ನೀಡಿದ್ದಾರೆ. ಈ ಸಿನಿಮಾದಿಂದ ಸ್ವತಃ ದರ್ಶನ್ ಅವರ ಅಕ್ಕನ ಮಗನನ್ನೇ ಹೊರಗೆ ಇಡಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಕೂಡ ದರ್ಶನ್ ಅವರು ತಿಳಿಸಿದ್ದಾರೆ.
- Madan Kumar
- Updated on: Mar 11, 2025
- 11:14 pm
ಸದ್ದಿಲ್ಲದೆ ಆರಂಭ ಆಯ್ತು ‘ಡೆವಿಲ್’ ಸಿನಿಮಾ ಶೂಟ್; ದರ್ಶನ್ ಎಂಟ್ರಿಗೂ ಸಮಯ ನಿಗದಿ
ದರ್ಶನ್ ಅವರ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ ಅದು ಮತ್ತೆ ಆರಂಭವಾಗಿದೆ. ನಟನ ಆರೋಗ್ಯದ ಸಮಸ್ಯೆಯಿಂದಾಗಿ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡದೆ, ಮಾತಿನ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
- Rajesh Duggumane
- Updated on: Mar 8, 2025
- 2:15 pm
ದರ್ಶನ್ಗೆ ಅಭಿಮಾನಿಗಳಿಂದಲೇ ಹೆಚ್ಚುತ್ತಿದೆ ಸಮಸ್ಯೆ; ಫ್ಯಾನ್ಸ್ಗೆ ಅರ್ಥ ಆಗೋದು ಯಾವಾಗ?
ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಅಭಿಮಾನಿಗಳ ಒತ್ತಡ ಹೆಚ್ಚಿನ ಸಮಸ್ಯೆಯಾಗಿದೆ. ಅವರ ಆರೋಗ್ಯದ ಬಗ್ಗೆ ಚಿಂತಿಸದ ಅಭಿಮಾನಿಗಳು ನಿರಂತರವಾಗಿ ಸೆಲ್ಫಿ ಮತ್ತು ಆಶೀರ್ವಾದಕ್ಕಾಗಿ ಮುಗಿಬೀಳುತ್ತಿದ್ದಾರೆ. ಬೆನ್ನು ನೋವಿನಿಂದ ತೊಂದರೆ ಅನುಭವಿಸುತ್ತಿರುವ ದರ್ಶನ್ ಅವರು ಈ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
- Rajesh Duggumane
- Updated on: Mar 8, 2025
- 12:42 pm