AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan Thoogudeepa

Darshan Thoogudeepa

ನಟ ದರ್ಶನ್ ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ. ಇವರು ಕನ್ನಡ ಚಿತ್ರರಂಗದ ಜನಪ್ರಿಯ ನಟ. 1977ರ ಫೆಬ್ರವರಿ 16ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ದರ್ಶನ್ ಅವರ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’ 2001ರಲ್ಲಿ ಬಿಡುಗಡೆಯಾಗಿತು. ಆ ಮೂಲಕ ಹೀರೋ ಆಗಿ ಅವರು ವೃತ್ತಿಜೀವನ ಆರಂಭಿಸಿದರು. ತಮ್ಮ ಅಭಿನಯದಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದ ದರ್ಶನ್​ ಅವರು ವಿಶೇಷವಾಗಿ ಆ್ಯಕ್ಷನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಗಮನಾರ್ಹ ಚಲನಚಿತ್ರಗಳಲ್ಲಿ ‘ಕರಿಯ’, ‘ನಮ್ಮ ಪ್ರೀತಿಯ ರಾಮು’, ‘ಸಂಗೊಳ್ಳಿ ರಾಯಣ್ಣ’, ‘ಕಲಾಸಿಪಾಳ್ಯ’, ‘ಅಯ್ಯ’, ‘ನವಗ್ರಹ’, ‘ಯಜಮಾನ’, ‘ರಾಬರ್ಟ್​’, ‘ಕಾಟೇರ’ ಮುಂತಾದ ಸಿನಿಮಾಗಳಿವೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರು ಸಿನಿಮಾ ಮಾತ್ರವಲ್ಲದೇ ಪರೋಪಕಾರಿ, ಸಮಾಜಮುಖಿ ಚಟುವಟಿಕೆಗಳಿಂದಲೂ ಫೇಮಸ್​ ಆಗಿದ್ದಾರೆ. ದರ್ಶನ್​ ಅವರದ್ದು ಕಲಾವಿದರ ಕುಟುಂಬ. ಅವರ ತಂದೆ ತೂಗುದೀಪ ಶ್ರೀನಿವಾಸ್​ ಅವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟ ಆಗಿದ್ದರು. ಅವರ ಸಹೋದರ ದಿನಕರ್​ ತೂಗುದೀಪ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನೂ ಹೆಚ್ಚು ಓದಿ

ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?

ಒಂದೇ ದಿನ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಬಾಕ್ಸ್ ಆಫೀಸ್​​ನಲ್ಲಿ ಪೈಪೋಟಿ ಜೋರಾಗಿದೆ. ಪರಭಾಷೆಯ ಸಿನಿಮಾಗಳು ಕೂಡ ತೆರೆಕಾಣುತ್ತಿವೆ. ಈ ನಡುವೆ ‘ದಿ ಡೆವಿಲ್’ ಸಿನಿಮಾ ಸಹ ಚಿತ್ರಮಂದಿರದಲ್ಲಿ ಇದೆ. ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ.

ದರ್ಶನ್ ಬಗ್ಗೆ ಸುದೀಪ್ ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ: ಜೋಗಿ ಪ್ರೇಮ್

ದರ್ಶನ್ ಮತ್ತು ಸುದೀಪ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರು. ಅವರ ಫ್ಯಾನ್ಸ್ ನಡುವೆ ಬಿರುಕು ಮೂಡಿದೆ. ಈ ಪರಿಸ್ಥಿತಿಯ ಬಗ್ಗೆ ‘ಕೆಡಿ’ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಅವರು ತಮ್ಮ ಅಭಿಪ್ರಾಯ ಏನೆಂಬುದನ್ನು ತಿಳಿಸಿದ್ದಾರೆ. ಸುದೀಪ್ ಮತ್ತು ದರ್ಶನ್ ಜೊತೆ ಒಡನಾಟ ಹೊಂದಿರುವ ಪ್ರೇಮ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ಅಶ್ಲೀಲ ಕಮೆಂಟ್ ಹಾಕಿದವರಿಗೆ ಸಂಕಷ್ಟ; ದೂರು ದಾಖಲಿಸಿ, ದಾಖಲೆ ಕೊಟ್ಟ ವಿಜಯಲಕ್ಷ್ಮೀ

ನಟಿ ವಿಜಯಲಕ್ಷ್ಮೀ ಸೈಬರ್ ಕಿರುಕುಳಕ್ಕೆ ಒಳಗಾಗಿದ್ದು, ಆನ್‌ಲೈನ್‌ನಲ್ಲಿ ಬಂದ ದ್ವೇಷದ ಕಾಮೆಂಟ್‌ಗಳ ವಿರುದ್ಧ ಬೆಂಗಳೂರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸುದೀಪ್-ದರ್ಶನ್ ಅಭಿಮಾನಿಗಳ ಸಂಘರ್ಷದ ಬಳಿಕ ಈ ಕಾಮೆಂಟ್‌ಗಳು ಹೆಚ್ಚಾಗಿವೆ. ಸೆಲೆಬ್ರಿಟಿಗಳು ಸೈಬರ್ ಬಲಿಪಶುಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

‘ಡೆವಿಲ್​​’ಗೆ ಅಸಲಿ ಚಾಲೆಂಜ್ ಈಗ ಶುರು; ಬಜೆಟ್ ಎಷ್ಟು? ಗಳಿಕೆ ಎಷ್ಟು?

Devil Budget And Collection: ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಡಿಸೆಂಬರ್ 11ರಂದು ತೆರೆಕಂಡು 33.26 ಕೋಟಿ ರೂ. ಸಂಗ್ರಹಿಸಿದೆ. ಆದರೆ, 45 ಕೋಟಿ ಬಜೆಟ್ ಇರುವ ಚಿತ್ರದ ಗಳಿಕೆ ಕುಸಿತ ಕಂಡಿದೆ. ಇದೀಗ 'ಮಾರ್ಕ್' ಹಾಗೂ '45' ಚಿತ್ರಗಳ ಬಿಡುಗಡೆಯಿಂದ 'ಡೆವಿಲ್' ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ. ದರ್ಶನ್ ಜೈಲಿನಲ್ಲಿರುವಾಗ ಅಭಿಮಾನಿಗಳು ಪ್ರಚಾರ ಮಾಡಿದ್ದರೂ, ಲಾಭದ ನಿರೀಕ್ಷೆ ಕಡಿಮೆಯಾಗಿದೆ.

ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್

ಕನ್ನಡ ಚಿತ್ರರಂಗದಲ್ಲಿ ಸುದೀಪ್ ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಈ ಬಗ್ಗೆ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ತಾವು ಕಂಡಂತೆ ದರ್ಶನ್ ಫ್ಯಾನ್ಸ್ ಎಂಥವರು ಎಂಬುದನ್ನು ತರುಣ್ ಸುಧೀರ್ ವಿವರಿಸಿದ್ದಾರೆ. ವಿಡಿಯೋ ನೋಡಿ..

ಜೈಲಿಗೆ ತೆರಳಿ ಫ್ಯಾನ್ಸ್ ವಾರ್ ಬಗ್ಗೆ ದರ್ಶನ್​​ಗೆ ಮಾಹಿತಿ ನೀಡಿದ ವಿಜಯಲಕ್ಷ್ಮಿ: ದಾಸನ ರಿಯಾಕ್ಷನ್ ಏನು?

ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ವಿವಾದ ಶುರುವಾಗಿದೆ. ಸದ್ಯ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಫ್ಯಾನ್ಸ್ ವಾರ್ ಆರಂಭ ಆದ ಬಳಿಕ ಜೈಲಿನಲ್ಲಿ ಇದೇ ಮೊದಲ ಬಾರಿಗೆ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಆಗಿದ್ದಾರೆ.

  • Ramu Ram
  • Updated on: Dec 23, 2025
  • 8:35 pm

Kichcha Sudeep About Controversy: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್

Kichcha Sudeep On Mark Movie: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ. ಪೈರಸಿ ವಿರುದ್ಧ ಕಿಚ್ಚ ಸುದೀಪ್ ಅವರು ಯುದ್ಧ ಸಾರಿದ್ದಾರೆ. ಅದರ ಕುರಿತು ಈ ಸಂದರ್ಶನದಲ್ಲಿ ಸುದೀಪ್ ಅವರು ಮಾತನಾಡಿದ್ದಾರೆ.

ಸುದೀಪ್​ಗೆ ವಿಜಯಲಕ್ಷ್ಮಿ ಕೌಂಟರ್ ಕೊಡೋದಕ್ಕೂ ಇದೆ ಕಾರಣ?

ಕಿಚ್ಚ ಸುದೀಪ್ ಮತ್ತು ವಿಜಯಲಕ್ಷ್ಮೀ ನಡುವಿನ ವಿವಾದ ತಾರಕಕ್ಕೇರಿದೆ. ದರ್ಶನ್ ಅಭಿಮಾನಿಗಳನ್ನು ಗುರಿಯಾಗಿಸಿ ಸುದೀಪ್ ಹೇಳಿಕೆ ನೀಡಿದ್ದಾರೆಂದು ಭಾವಿಸಿದ ವಿಜಯಲಕ್ಷ್ಮೀ ತಿರುಗೇಟು ನೀಡಿದ್ದರು. ದರ್ಶನ್ ಜೈಲಿನಲ್ಲಿರುವಾಗ ಅವರ ಪರ ವಿಜಯಲಕ್ಷ್ಮೀ ಧ್ವನಿ ಎತ್ತಿದ್ದಾರೆ. ಸುದೀಪ್ ಅವರ ಹಿಂದಿನ ಮಾತುಗಳು ವಿವಾದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

12ನೇ ದಿನ ಕೇವಲ ಲಕ್ಷಗಳಲ್ಲಿ ‘ದಿ ಡೆವಿಲ್’ ಗಳಿಕೆ; ಒಟ್ಟಾರೆ ಗ್ರಾಸ್ 33 ಕೋಟಿ ರೂ.

ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ 12 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದೆ. ಆರಂಭಿಕ ಅಬ್ಬರದ ನಂತರ, ಚಿತ್ರದ ಗಳಿಕೆ ಕುಸಿದಿದ್ದು, 12ನೇ ದಿನ ಕೇವಲ ಲಕ್ಷಗಳಲ್ಲಿ ಸಂಗ್ರಹಿಸಿದೆ. ಮಿಶ್ರ ಪ್ರತಿಕ್ರಿಯೆ ಮತ್ತು ಪೈರಸಿ ಇದಕ್ಕೆ ಕಾರಣ ಎನ್ನಲಾಗಿದ್ದು, ಮುಂಬರುವ ಹೊಸ ಸಿನಿಮಾಗಳಿಂದ 'ಡೆವಿಲ್' ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಚಿತ್ರದ ಒಟ್ಟು ಗಳಿಕೆ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ದರ್ಶನ್ ಅಭಿಮಾನಿಯನ್ನು ಕಾಪಾಡಿದ್ದು ಸುದೀಪ್: ಆ ಘಟನೆ ವಿವರಿಸಿದ ರಜತ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಅತಿಥಿಯಾಗಿ ತೆರಳಿದ್ದ ರಜತ್ ಕಿಶನ್ ಅವರು ಈಗ ಹೊರಗೆ ಬಂದಿದ್ದಾರೆ. ಇದೇ ವೇಳೆಗೆ ದರ್ಶನ್ ತೂಗುದೀಪ ಮತ್ತು ಕಿಚ್ಚ ಸುದೀಪ್ ಅವರ ಅಭಿಮಾನಿಗಳ ನಡುವೆ ಕಿತ್ತಾಟ ಶುರು ಆಗಿದೆ. ಈ ಪರಿಸ್ಥಿತಿಯ ಬಗ್ಗೆ ರಜತ್ ಅವರು ಮಾತನಾಡಿದ್ದಾರೆ. ತಮಗೆ ಇಬ್ಬರೂ ಕೂಡ ಮುಖ್ಯ ಎಂದು ರಜತ್ ಹೇಳಿದ್ದಾರೆ.

ಯುದ್ಧಕ್ಕೆ ಸಿದ್ಧ: ಸುದೀಪ್ ಮಾತಿನ ನಿಜವಾದ ಅರ್ಥ ಏನು? ವಿವರಿಸಿದ ಕಿಚ್ಚನ ಆಪ್ತ ರಾಜು ಗೌಡ

ಕಿಚ್ಚ ಸುದೀಪ್ ಅವರು ‘ಮಾರ್ಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಸುದೀಪ್ ಅವರು ಮಾತನಾಡಿದರು ಎಂಬುದು ಕೆಲವರ ವಾದ ಆಗಿದೆ. ಅದರೆ ಸುದೀಪ್ ಮಾತನಾಡಿದ್ದು ಪೈರಸಿ ಮಾಡುವವರ ವಿರುದ್ಧ ಎಂದು ಅವರ ಆಪ್ತ ರಾಜು ಗೌಡ ಹೇಳಿದ್ದಾರೆ.

  • Sunil MH
  • Updated on: Dec 22, 2025
  • 3:56 pm

ಕೃತಜ್ಞತೆ ಮುಖ್ಯ; ಸುದೀಪ್-ವಿಜಯಲಕ್ಷ್ಮೀ ಹಳೆ ಫೋಟೋ ವೈರಲ್ ಮಾಡಿದ ಫ್ಯಾನ್ಸ್

ಕಿಚ್ಚ ಸುದೀಪ್ ಹೇಳಿಕೆ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿರುಗೇಟು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುದೀಪ್ 'ಮಾರ್ಕ್' ಸಿನಿಮಾ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನೀಡಿದ ಹೇಳಿಕೆಯನ್ನು ದರ್ಶನ್ ಅಭಿಮಾನಿಗಳು ತಮ್ಮನ್ನು ಉದ್ದೇಶಿಸಿ ಅಂದುಕೊಂಡರು. ಇದಕ್ಕೆ ವಿಜಯಲಕ್ಷ್ಮೀ ಕೌಂಟರ್ ನೀಡಿದ್ದು, ಹಳೆಯ ಫೋಟೋಗಳು ಮತ್ತು ಸುದೀಪ್‌ನ ಹಿಂದಿನ ಹೇಳಿಕೆಗಳು ವೈರಲ್ ಆಗುತ್ತಿವೆ. ಈ ವಿವಾದದ ಸಂಪೂರ್ಣ ವಿವರ ಇಲ್ಲಿದೆ.