
Darshan Thoogudeepa
ನಟ ದರ್ಶನ್ ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ. ಇವರು ಕನ್ನಡ ಚಿತ್ರರಂಗದ ಜನಪ್ರಿಯ ನಟ. 1977ರ ಫೆಬ್ರವರಿ 16ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ದರ್ಶನ್ ಅವರ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’ 2001ರಲ್ಲಿ ಬಿಡುಗಡೆಯಾಗಿತು. ಆ ಮೂಲಕ ಹೀರೋ ಆಗಿ ಅವರು ವೃತ್ತಿಜೀವನ ಆರಂಭಿಸಿದರು. ತಮ್ಮ ಅಭಿನಯದಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದ ದರ್ಶನ್ ಅವರು ವಿಶೇಷವಾಗಿ ಆ್ಯಕ್ಷನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಗಮನಾರ್ಹ ಚಲನಚಿತ್ರಗಳಲ್ಲಿ ‘ಕರಿಯ’, ‘ನಮ್ಮ ಪ್ರೀತಿಯ ರಾಮು’, ‘ಸಂಗೊಳ್ಳಿ ರಾಯಣ್ಣ’, ‘ಕಲಾಸಿಪಾಳ್ಯ’, ‘ಅಯ್ಯ’, ‘ನವಗ್ರಹ’, ‘ಯಜಮಾನ’, ‘ರಾಬರ್ಟ್’, ‘ಕಾಟೇರ’ ಮುಂತಾದ ಸಿನಿಮಾಗಳಿವೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರು ಸಿನಿಮಾ ಮಾತ್ರವಲ್ಲದೇ ಪರೋಪಕಾರಿ, ಸಮಾಜಮುಖಿ ಚಟುವಟಿಕೆಗಳಿಂದಲೂ ಫೇಮಸ್ ಆಗಿದ್ದಾರೆ. ದರ್ಶನ್ ಅವರದ್ದು ಕಲಾವಿದರ ಕುಟುಂಬ. ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟ ಆಗಿದ್ದರು. ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ.
Darshan: ವಿದೇಶಿ ಬಾತುಕೋಳಿ ಕೇಸ್; ಸೆ.4ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
ಪ್ರಾಣಿ, ಪಕ್ಷಿಗಳ ಬಗ್ಗೆ ನಟ ದರ್ಶನ್ ತೂಗುದೀಪ ಅವರಿಗೆ ವಿಶೇಷ ಪ್ರೀತಿ ಇದೆ. ಆದರೆ ಅನುಮತಿ ಪಡೆಯದೆಯೇ ಅವರು ವಿದೇಶಿ ಬಾತುಕೋಳಿ ಸಾಕಿದ್ದರು. ಈ ಕೇಸ್ಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಇಂದು (ಜುಲೈ 2) ದರ್ಶನ್ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.
- Ram
- Updated on: Jul 4, 2025
- 3:12 pm
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ದಾಂಪತ್ಯದಲ್ಲಿ ಇರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಜನರು ಈ ದೇವಾಯಲಕ್ಕೆ ಬರುತ್ತಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ನಟ ದರ್ಶನ್ ಹಾಗೂ ಅವರ ಕುಟುಂಬದವರು ಮಾಡಿಸಿದ ಪೂಜೆಯ ಬಗ್ಗೆ ದೇವಸ್ಥಾನದ ಸಿಬ್ಬಂದಿ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
- Gopal AS
- Updated on: Jun 26, 2025
- 9:24 pm
ದರ್ಶನ್ ವಿದೇಶಕ್ಕೆ ತೆರಳಿದ್ದು ನಿಜವೇ? ವೈರಲ್ ಆಗ್ತಿರೋ ವಿಡಿಯೋ ಅಸಲಿಯತ್ತೇನು?
ನಟ ದರ್ಶನ್ ಅವರು ತಮ್ಮ ಹೊಸ ಚಿತ್ರ 'ಡೆವಿಲ್' ನ ಚಿತ್ರೀಕರಣಕ್ಕಾಗಿ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದ ಅವರು ದುಬೈ ಮತ್ತು ಯುರೋಪ್ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಂಡುಬಂದ ಅವರ ವಿಡಿಯೋ ವೈರಲ್ ಆಗಿದೆ. ಇದರ ಅಸಲಿಯತ್ತಿನ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Jun 25, 2025
- 8:48 am
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ನಟ ದರ್ಶನ್ ಮತ್ತು ನಿರ್ದೇಶಕ ನಾಗಶೇಖರ್ ಅವರ ಮನೆಗಳು ಅಪ್ಪ-ಪಕ್ಕದಲ್ಲೇ ಇವೆ. ಆ ಬಗ್ಗೆ ನಾಗಶೇಖರ್ ಅವರು ಮಾತನಾಡಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಗ್ಗೆ ಮಾತನಾಡುತ್ತಾ ಮನೆ ಕುರಿತು ನಾಗಶೇಖರ್ ಈ ವಿಷಯ ಹಂಚಿಕೊಂಡರು. ಎಂದಿಗೂ ದರ್ಶನ್ ಮನೆಗೆ ತಾವು ಹೋಗಿಲ್ಲ ಎಂದಿದ್ದಾರೆ ನಾಗಶೇಖರ್.
- Mangala RR
- Updated on: Jun 22, 2025
- 7:28 pm
ದರ್ಶನ್ ಹಾಡಿದ್ದ ‘ಹೊಸ ಬೆಳಕು..’ ಹಾಡು ಮತ್ತೆ ವೈರಲ್; ಮ್ಯೂಸಿಕ್ ಕೊಟ್ಟು ಹಾಡಿದ್ದ ದಾಸ
ದರ್ಶನ್ ಅವರ ಹಾಡು ‘ಹೊಸ ಬಳೆಕು’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ರಾಜ್ ಕಪ್ ಸಮಯದಲ್ಲಿ ದರ್ಶನ್ ಮತ್ತು ಶಿವಣ್ಣ ಒಟ್ಟಾಗಿ ಹಾಡಿದ ಹಾಡು. ದರ್ಶನ್ ಅವರು ಸದ್ಯ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ಕೇರಳದ ಕಣ್ಣೂರಿನಲ್ಲಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
- Rajesh Duggumane
- Updated on: Jun 18, 2025
- 8:48 am
ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್, ಪವಿತ್ರಾ ಬಂಧನಕ್ಕೆ ಒಂದು ವರ್ಷ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ನಡೆದು ವರ್ಷವೇ ಆಗಿದೆ. ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಬಂಧನ, ಪೊಲೀಸ್ ತನಿಖೆ, ಜಾಮೀನು ಮತ್ತು ಪ್ರಕರಣದ ಇತ್ತೀಚಿನ ಬೆಳವಣಿಗೆ ಬಗ್ಗೆ ಇಲ್ಲಿ ಹೇಳಲಾಗಿದೆ. ವರ್ಷ ಕಳೆದರೂ ಪ್ರಕರಣದ ವಿಚಾರಣೆ ಆರಂಭ ಆಗಿಲ್ಲ.
- Rajesh Duggumane
- Updated on: Jun 11, 2025
- 8:36 am
ದರ್ಶನ್ ನಮ್ಮನ್ನು ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಅವರು ಜಾಮೀನು ಪಡೆದು ಹೊರಗೆ ಬಂದ ನಂತರ ರೇಣುಕಾಸ್ವಾಮಿ ಕುಟುಂಬ ಮೌನವಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಈ ಕುರಿತು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಮಾತನಾಡಿದ್ದಾರೆ. ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Jun 8, 2025
- 1:38 pm
Video: ರೇಣುಕಾಸ್ವಾಮಿ ಹತ್ಯೆಗೆ 1 ವರ್ಷ; ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ರೇಣುಕಾ ಸ್ವಾಮಿ ಹತ್ಯೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಅವರ ಕುಟುಂಬಸ್ಥರು ಭಾವಚಿತ್ರಕ್ಕೆ ನಮನ ಸಲ್ಲಿಸಿ, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಪವಿತ್ರಾ ಗೌಡ ಮತ್ತು ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದೆ. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
- Akshatha Vorkady
- Updated on: Jun 8, 2025
- 12:13 pm
‘ಬದುಕಿದ್ದರೆ ಇನ್ಯಾವಗೋ ನನ್ನ ನೋಡ್ತೀರಾ’; ಕಾಲ್ತುಳಿತ ಘಟನೆ ಬಳಿಕ ದರ್ಶನ್ ಹಳೆಯ ವಿಡಿಯೋ ವೈರಲ್
Darshan: ಬೆಂಗಳೂರಿನಲ್ಲಿ ಆರ್ಸಿಬಿ ಗೆಲುವಿನ ಸಂಭ್ರಮದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. 47ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಬಳಿಕ ದರ್ಶನ್ ಅವರ ಹಳೆಯ ವೀಡಿಯೋ ವೈರಲ್ ಆಗಿದ್ದು, ಅತಿಯಾದ ಅಭಿಮಾನದಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಸುತ್ತದೆ.
- Rajesh Duggumane
- Updated on: Jun 5, 2025
- 9:34 am
ವಿದೇಶಕ್ಕೆ ಹೋಗಲು ದರ್ಶನ್ಗೆ ಸಿಕ್ತು ಅನುಮತಿ; ದಾಸ ಇನ್ಮುಂದೆ ಫುಲ್ ಬಿಂದಾಸ್
ನಟ ದರ್ಶನ್ ಅವರು ‘ಡೆವಿಲ್: ದಿ ಹೀರೋ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶೂಟಿಂಗ್ ಸಲುವಾಗಿ ಅವರು ವಿದೇಶಕ್ಕೆ ಹೋಗಬೇಕಿದೆ. ರೇಣುಕಾಸ್ವಾಮಿ ಕೊಲೆ ಆರೋಪ ದರ್ಶನ್ ಮೇಲಿರುವುದರಿಂದ ವಿದೇಶಕ್ಕೆ ಹೋಗಲು ಅವರಿಗೆ ಇಷ್ಟು ದಿನ ಅನುಮತಿ ಇರಲಿಲ್ಲ. ಆದರೆ ಈಗ ನ್ಯಾಯಾಲಯದಿಂದ ದರ್ಶನ್ ಅವರಿಗೆ ಅನುಮತಿ ಸಿಕ್ಕಿದೆ.
- Madan Kumar
- Updated on: May 30, 2025
- 6:33 pm