ಕರಬೂಜ ಹಣ್ಣನ್ನು ಈ ಆರೋಗ್ಯ ಸಮಸ್ಯೆಗಳಿರುವವರು ಸೇವನೆ ಮಾಡಬೇಡಿ
ಕರಬೂಜ ಬೇಸಿಗೆಯ ಋತುವಿನಲ್ಲಿ ಸೇವನೆ ಮಾಡಬೇಕಾದ ಹಣ್ಣುಗಳಲ್ಲಿ ಪ್ರಮುಖವಾದದ್ದು. ಅಲ್ಲದೆ ಇದು ಹಲವರ ನೆಚ್ಚಿನ ಹಣ್ಣು. ಇದನ್ನು ಸೇವನೆ ಮಾಡುವುದರಿಂದ ಬಾಯಾರಿಕೆಯನ್ನು ತಣಿಸುತ್ತದೆ. ವಿಶೇಷವಾಗಿ ಇದರಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ, ಬೇಸಿಗೆಯ ಶಾಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಕರಬೂಜ ಹಣ್ಣಿನ ಸೇವನೆಯಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ಹಣ್ಣಿನ ಸೇವನೆ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
- Preethi Bhat Gunavante
- Updated on: Mar 20, 2025
- 10:50 am
ಸ್ತನ ಕ್ಯಾನ್ಸರ್ ತಡೆಯಲು ಬೇಸಿಗೆಯಲ್ಲಿ ಸಿಗುವ ಈ ಹಣ್ಣನ್ನು ತಪ್ಪದೆ ಸೇವನೆ ಮಾಡಿ
ತಾಳೆ ಹಣ್ಣುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಜೊತೆಗೆ ದೇಹಕ್ಕೂ ತುಂಬಾ ಒಳ್ಳೆಯದು. ಈ ಹಣ್ಣುಗಳು ಬೇಸಿಗೆಯ ಶಾಖದಿಂದ ನಮ್ಮನ್ನು ರಕ್ಷಿಸುವುದಲ್ಲದೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳನ್ನು ನೀಡುತ್ತದೆ. ಇನ್ನು ಈ ಹಣ್ಣಿನಲ್ಲಿ ಸತು ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳಿವೆ. ಹಾಗಾಗಿ ಬೇಸಿಗೆಯಲ್ಲಿ ತಾಳೆ ಹಣ್ಣುಗಳನ್ನು ಆಗಾಗ ಸೇವನೆ ಮಾಡುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ಕೂಡ ತಡೆಯಬಹುದು. ಹಾಗಾದರೆ ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯ ಉಪಯೋಗವಿದೆ ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Mar 20, 2025
- 8:50 am
ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಸೇವನೆ ಅಪಾಯಕಾರಿ! ಅಧ್ಯಯನದಿಂದ ಬಹಿರಂಗ
ವಿಜ್ಞಾನಿಗಳು ಗರ್ಭಾವಸ್ಥೆಯ ಸಮಯದಲ್ಲಿ ಪ್ಯಾರಾಸಿಟಮಾಲ್ ಬಳಸುವ ಕುರಿತು ಅಧ್ಯಯನ ನಡೆಸಿದ್ದು, ಇದರ ಅತಿಯಾದ ಸೇವನೆ ಗರ್ಭಿಣಿಗೆ ಮತ್ತು ಆಕೆಗೆ ಹುಟ್ಟುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದಿದೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ? ಗರ್ಭಿಣಿಯರು ಹೆಚ್ಚಾಗಿ ಪ್ಯಾರಾಸಿಟಮಾಲ್ ಸೇವನೆ ಮಾಡಬಾರದು ಎನ್ನಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Mar 20, 2025
- 8:14 am
Sunita Williams: ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಏನು ತಿನ್ನುತ್ತಿದ್ದರು? ಹೇಗಿತ್ತು ಆಹಾರ ಶೈಲಿ ತಿಳಿದುಕೊಳ್ಳಿ
ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಜೀವನಶೈಲಿ ಹೇಗಿತ್ತು? ಅವರು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತಿದ್ದರು ಎಂಬುದನ್ನು ತಿಳಿಯುವುದರ ಜೊತೆಗೆ ಒಂಬತ್ತು ತಿಂಗಳ ಕಾಲ ಅವರ ಆಹಾರ ಶೈಲಿ ಹೇಗಿರಬಹುದು ಎಂಬುದನ್ನು ತಿಳಿಯಲು ಹೆಚ್ಚು ಕುತೂಹಲ ಹೊಂದಿದ್ದು, ಈ ರೀತಿಯ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದರು. ಇದಕ್ಕೆ ಪೂರಕವೆಂಬಂತೆ ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು ಅವರ ಆಹಾರ ಪದ್ದತಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿತ್ತು. ಅದರಂತೆ ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Mar 19, 2025
- 3:25 pm
ಹೃದಯಾಘಾತ ತಡೆಯಲು ಬೇಸಿಗೆಯಲ್ಲಿ ಈ ತರಕಾರಿಯ ರಸ ಕುಡಿಯಿರಿ
ಸೌತೆಕಾಯಿ ರಸವು ಉತ್ತಮ ಡಿಟಾಕ್ಸ್ ಪಾನೀಯವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರತಿದಿನ ಬೆಳಿಗ್ಗೆ ಈ ತರಕಾರಿಯ ರಸವನ್ನು ಕುಡಿದರೆ, ದೇಹದಿಂದ ಬೇಡದ ತ್ಯಾಜ್ಯಗಳು ಹೊರಗೆ ಹೋಗಿ ದೇಹವು ಶುದ್ಧವಾಗುತ್ತದೆ. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಉಪಯೋಗವಿದೆ ಎಂಬುದನ್ನು ತಿಳಿದುಕೊಳ್ಳಿ.
- Preethi Bhat Gunavante
- Updated on: Mar 19, 2025
- 2:39 pm
ಪತಂಜಲಿಯ ರೇನೋಗ್ರಿಟ್ ಟ್ಯಾಬ್ಲೆಟ್ ಕಿಡ್ನಿ ಸಮಸ್ಯೆಗೆ ರಾಮಬಾಣ! ಸಂಶೋಧನೆಯಿಂದ ಬಹಿರಂಗ
ರೇನೋಗ್ರಿಟ್ ಟ್ಯಾಬ್ಲೆಟ್ ಅಥವಾ ಪತಂಜಲಿ ದಿವ್ಯ ರೆನೋಗ್ರಿಟ್ ಟ್ಯಾಬ್ಲೆಟ್ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗಿದೆ ಎಂಬುದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ನೆಚರ್ ಜರ್ನಲ್ನಲ್ಲಿ ಈ ಸಂಶೋಧನೆಯ ಕುರಿತು ಕೆಲವು ಮಾಹಿತಿಗಳು ಪ್ರಕಟವಾಗಿದೆ. ಇದರಲ್ಲಿ ಹೇಳಿರುವಂತೆ, ಈ ಪತಂಜಲಿಯ ಔಷಧಿ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆಯೇ, ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯನ್ನು ಗುಣಪಡಿಸುತ್ತದೆ ಎಂದು ಹೇಳಲಾಗಿದೆ.
- Preethi Bhat Gunavante
- Updated on: Mar 19, 2025
- 2:10 pm
Belly Fat: ಎಷ್ಟೇ ಪ್ರಯತ್ನಿಸಿದರೂ ಹೊಟ್ಟೆ ಸಣ್ಣವಾಗದಿರಲು ಕಾರಣವೇನು?
ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಹೊಟ್ಟೆ ಸಣ್ಣವಾಗಿರಬೇಕು ತಾನು ಸ್ಲಿಮ್ ಆಗಿ ಕಾಣಬೇಕೆಂಬ ಕನಸಿರುತ್ತದೆ, ಆದರೆ ನಮ್ಮ ಜೀವನ ಶೈಲಿ, ಆಹಾರ ಹಾಗೂ ದೇಹಕ್ಕೆ ಸಮರ್ಪಕ ವ್ಯಾಯಾಮವಿಲ್ಲದ ಕಾರಣ ಹೊಟ್ಟೆ ಹಾಗೂ ಸೊಂಟದ ಸುತ್ತಲೂ ಬೊಜ್ಜು ಶೇಖರಣೆಯಾಗಿರುತ್ತದೆ. ಹೊಟ್ಟೆಯನ್ನು ಸಣ್ಣವಾಗಿಸಲು ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ. ಈ ಮಾಹಿತಿಯನ್ನು ಅರ್ಪಿತಾ ಪುಟ್ಟಸ್ವಾಮಿ ಎನ್ನುವವರು ತಮ್ಮ ಇನ್ಸ್ಟಾ ಖಾತೆ (dt.arpitha_fitkarnataka) ಯಲ್ಲಿ ಹಂಚಿಕೊಂಡಿದ್ದು, ಹೊಟ್ಟೆ ತೆಳ್ಳಗಾಗದಿರಲು ಕಾರಣಗಳನ್ನು ತಿಳಿಸಿದ್ದಾರೆ.
- Preethi Bhat Gunavante
- Updated on: Mar 19, 2025
- 9:32 am
ಗರ್ಭಾವಸ್ಥೆಯಲ್ಲಿ ಕೋಲ್ಡ್ ಡ್ರಿಂಕ್ ಕುಡಿಯಬಹುದೇ? ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ
ಗರ್ಭಾವಸ್ಥೆಯ ವೇಳೆ ವೈದ್ಯರು ಕೆಲವು ಆಹಾರಗಳ ಸೇವನೆ ಮಾಡಬಾರದು ಎಂದು ಸಲಹೆ ನೀಡುತ್ತಾರೆ. ಅವುಗಳಲ್ಲಿ ತಂಪು ಪಾನೀಯವೂ ಒಂದು. ಆದರೆ ಕೆಲವರು ಇಂತಹ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದಿಲ್ಲ. ಈ ರೀತಿಯ ನಿರ್ಲಕ್ಷ್ಯದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಕೊಲ್ಡ್ ಡ್ರಿಂಕ್ ಕುಡಿಯಬಹುದೇ? ಇದರಿಂದ ಶರೀರಕ್ಕೆ ಹಾನಿಯಾಗುತ್ತದೆಯೇ? ಇಂತಹ ಪ್ರಶ್ನೆಗಳಿಗೆ ತಜ್ಞರು ನೀಡಿದ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Mar 19, 2025
- 8:16 am
Fact Check: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾಗೆ ನೀತಾ ಅಂಬಾನಿ ಬುಗಾಟಿ ಕಾರು ನೀಡಿದ್ದು ನಿಜವೇ?
ಸಾಮಾಜಿಕ ಮಾಧ್ಯಮದಲ್ಲಿ ನೀತಾ ಅಂಬಾನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಇರುವ ಎರಡು ಚಿತ್ರಗಳು ವೈರಲ್ ಆಗುತ್ತಿದೆ. ಇದರಲ್ಲಿ ನೀತಾ ಅಂಬಾನಿ ಅವರು ಕಾರಿನ ಕೀಲಿಯನ್ನು ರೋಹಿತ್ ಶರ್ಮಾಗೆ ನೀಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಹಂಚಿಕೊಂಡ ಬಳಕೆದಾರರು, ಟ್ರೋಫಿ ಗೆದ್ದ ಸಂಭ್ರಮಕ್ಕಾಗಿ ನೀತಾ ಅಂಬಾನಿ ಅವರು ರೋಹಿತ್ ಶರ್ಮಾ ಅವರಿಗೆ ಬುಗಾಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
- Preethi Bhat Gunavante
- Updated on: Mar 18, 2025
- 4:14 pm
ಈ ಕಂಪನಿಯ ಕಾರು ಮೊಬೈಲ್ ಗಿಂತ ವೇಗವಾಗಿ ಚಾರ್ಜ್ ಆಗುತ್ತೆ: 5 ನಿಮಿಷ ಚಾರ್ಜ್ ಮಾಡಿದ್ರೆ 470 ಕಿಮೀ ಹೋಗಬಹುದು
BYD ಕಂಪನಿಯ ಈ ಹೊಸ ತಂತ್ರಜ್ಞಾನವನ್ನು ಹಾನ್ ಎಲ್ ಮತ್ತು ಟ್ಯಾಂಗ್ ಎಲ್ ಎಸ್ಯುವಿ ಮಾದರಿಗಳಲ್ಲಿ ಕಾಣಬಹುದು. ಈ ಕಾರುಗಳ ಬೆಲೆ 31 ಲಕ್ಷ ರೂ. ಗಳಿಂದ ಆರಂಭವಾಗಲಿದೆ. ಹೊಸ EV ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾದ ಈ ಕಾರುಗಳು ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ. ಮೀ ವೇಗವನ್ನು ಹೆಚ್ಚಿಸಿಕೊಳ್ಳಬಹುದು.
- Preethi Bhat Gunavante
- Updated on: Mar 18, 2025
- 3:27 pm
Foods to Avoid in Summer: ಬೇಸಿಗೆಯಲ್ಲಿ ಈ ಆಹಾರ ಸೇವನೆ ತಪ್ಪಿಸಿ! ಆರೋಗ್ಯ ಚೆನ್ನಾಗಿರುತ್ತೆ
ಬೇಸಿಗೆಯಲ್ಲಿ ನಾವು ಪ್ರತಿನಿತ್ಯ ಸೇವನೆ ಮಾಡುವ ಅನೇಕ ಆಹಾರಗಳು ನಮಗರಿವಿಲ್ಲದಂತೆ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಹಾಗಾಗಿ ಉಪ್ಪು ಮತ್ತು ಮಸಾಲೆ ಅಧಿಕವಾಗಿರುವ ಆಹಾರಗಳು, ಹಾಗೆಯೇ ಹುರಿದ ಮತ್ತು ಕರಿದ ಆಹಾರಗಳು ಬೇಸಿಗೆಗೆ ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಾರೆ. ಬದಲಿಗೆ, ಕಲ್ಲಂಗಡಿ, ಸೌತೆಕಾಯಿ, ಎಳನೀರು ಮತ್ತು ನಿಂಬೆ ರಸ ಇತ್ಯಾದಿ ಹಣ್ಣು, ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಬೇಸಿಗೆಯಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡದಿದ್ದರೆ ತುಂಬಾ ಒಳ್ಳೆಯದು. ಅವು ಯಾವುದು? ಏಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
- Preethi Bhat Gunavante
- Updated on: Mar 18, 2025
- 3:00 pm
Raw Onions Benefits: ಈರುಳ್ಳಿ ಹಸಿಯಾಗಿ ತಿನ್ನಲು ಇಷ್ಟಪಡುವವರಿಗೆ ಈ ಆರೋಗ್ಯ ಸಮಸ್ಯೆ ಇರುವುದಿಲ್ಲ
ಅಡುಗೆಗೆ ಒಂದಲ್ಲಾ ಒಂದು ರೀತಿಯಲ್ಲಿ ಈರುಳ್ಳಿಯನ್ನು ಬಳಸಿಯೇ ಬಳಸುತ್ತೇವೆ. ಇವು ಅಡುಗೆಗೆ ರುಚಿ ನೀಡುವುದಲ್ಲದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಪದಾರ್ಥಗಳಲ್ಲಿ ಬಳಕೆ ಮಾಡುವಾಗ, ಈರುಳ್ಳಿಯನ್ನು ಬೇಯಿಸಿ ಅಥವಾ ಹುರಿದು ಆ ಬಳಿಕ ಅಡುಗೆಯಲ್ಲಿ ಬಳಕೆ ಮಾಡುತ್ತೇವೆ. ಆದರೆ ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?
- Preethi Bhat Gunavante
- Updated on: Mar 18, 2025
- 2:13 pm