ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.
Kitchen Hacks: ಅನ್ನ ಅಂಟದಂತೆ, ದಾಲ್ ಚೆಲ್ಲದಂತೆ ಮಾಡಲು ಈ ಟ್ರಿಕ್ಸ್ ಬಳಸಿ
ಅಡುಗೆ ಮಾಡುವಾಗ ಉಂಟಾಗುವ ಸಣ್ಣ ಸಮಸ್ಯೆಗಳು ಕೂಡ ಅಡುಗೆ ಮಾಡುವ ಇಚ್ಛೆಯನ್ನೇ ಹಾಳು ಮಾಡಿಬಿಡಬಹುದು. ಅಂತಹ ಸಂದರ್ಭಗಳಲ್ಲಿ, ನಿಮಗೆ ಕೆಲವು ಕಿಚನ್ ಟಿಪ್ಸ್ ತಿಳಿದಿದ್ದರೆ, ಆಹಾರವನ್ನು ತಯಾರಿಸುವುದು ಸುಲಭವಾಗುತ್ತದೆ. ಹಾಗಾದರೆ ಅನ್ನ ಉದುರುದುರಾಗಿ ಬರಲು, ದಾಲ್ ಚೆಲ್ಲದಂತೆ ಮಾಡಲು ಮತ್ತು ತರಕಾರಿಗಳ ಹಸಿರು ಬಣ್ಣವನ್ನು ಇರುವಂತೆ ಕಾಪಾಡಲು ಸಹಾಯ ಮಾಡುವ 5 ಸುಲಭ ಕಿಚನ್ ಹ್ಯಾಕ್ಸ್ ಇಲ್ಲಿವೆ.
- Preethi Bhat Gunavante
- Updated on: Aug 26, 2026
- 9:15 pm
ಮಳೆಗಾಲದಲ್ಲಿ ಪ್ರತಿದಿನ ಮಜ್ಜಿಗೆ ಕುಡಿದರೆ ಏನಾಗುತ್ತದೆ? ತಜ್ಞರ ಸಲಹೆ ಮತ್ತು ಮುನ್ನೆಚ್ಚರಿಕೆಗಳು
ಮಳೆಗಾಲದಲ್ಲಿ ತಾಜಾ ಮಜ್ಜಿಗೆಯನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು. ಇದು ದೇಹಕ್ಕೆ ದ್ರವಾಂಶ ಮತ್ತು ಕೆಲವು ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಕರುಳಿನ ಆರೋಗ್ಯಕ್ಕೂ ಒಳ್ಳೆಯದು. ಆದರೆ ಮಜ್ಜಿಗೆಯನ್ನು ಯಾವುದೇ ಕಾಯಿಲೆಗೆ ಔಷಧಿ ಅಥವಾ ಸೋಂಕು ತಡೆಯುವ ಪಾನೀಯ ಎಂದು ಪರಿಗಣಿಸಬಾರದು. ಇದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳ ಬಗ್ಗೆ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Aug 26, 2026
- 7:58 pm
ರಾತ್ರಿ ಮಲಗುವ 1 ಗಂಟೆ ಮೊದಲು ಫೋನ್ ಆಫ್ ಮಾಡಿದರೆ ಏನಾಗುತ್ತದೆ? ದೇಹದಲ್ಲಿ ಆಗುವ ಬದಲಾವಣೆಗಳಿವು
ಮೊಬೈಲ್ನ ಸಮಸ್ಯೆ ಕೇವಲ ನೀಲಿ ಬೆಳಕಿಗೆ ಸೀಮಿತವಾಗಿಲ್ಲ. ರಾತ್ರಿ ಸೋಶಿಯಲ್ ಮೀಡಿಯಾ, ರೀಲ್ಸ್, ವಿಡಿಯೋಗಳು, ಸುದ್ದಿ, ಮೆಸೇಜ್ಗಳು ಮತ್ತು ಕೆಲಸದ ನೋಟಿಫಿಕೇಶನ್ಗಳು ಮೆದುಳನ್ನು ಸಕ್ರಿಯವಾಗಿರಿಸಬಹುದು. ಕೆಲವೇ ನಿಮಿಷ ಎಂದು ಫೋನ್ ತೆಗೆದುಕೊಂಡವರು ಗೊತ್ತಿಲ್ಲದೆ ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಸ್ಕ್ರೀನ್ ನೋಡುವ ಸಾಧ್ಯತೆಯೂ ಇದೆ. ಇದರಿಂದ ಮಲಗುವ ಸಮಯ ಮೀರಿ ಹೋಗಿ, ಒಟ್ಟಾರೆ ನಿದ್ರೆಯ ಅವಧಿಯೇ ಕಡಿಮೆಯಾಗಬಹುದು.
- Preethi Bhat Gunavante
- Updated on: Aug 26, 2026
- 6:48 pm
ತಣ್ಣೀರು ಕುಡಿದರೆ ನಿಜವಾಗಿಯೂ ಶೀತ- ಜ್ವರ ಬರುತ್ತಾ? ವೈದ್ಯರು ನೀಡಿರುವ ಸ್ಪಷ್ಟ ಉತ್ತರ ಇಲ್ಲಿದೆ
ಮಳೆಗಾಲ ಮತ್ತು ಚಳಿಗಾಲದಲ್ಲಿ ಕೆಲವು ಮನೆಗಳಲ್ಲಿ ಫ್ರಿಡ್ಜ್ನಲ್ಲಿಟ್ಟ ನೀರನ್ನು ಕುಡಿಯುವುದಿಲ್ಲ. ಅಷ್ಟು ಮಾತ್ರವಲ್ಲ, ತಣ್ಣೀರನ್ನು ಅಂದರೆ ಕುದಿಸದ ನೀರನ್ನು ಕೂಡ ಕುಡಿಯುವುದಿಲ್ಲ. ಏಕೆಂದರೆ ಇದರಿಂದ ಶೀತ ಉಂಟಾಗುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಇದು ನಿಜವಾಗಿಯೂ ಸತ್ಯವೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬುದನ್ನು ತಿಳಿಯುವುದು ಅನಿವಾರ್ಯ. ಈ ಕುರಿತು ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Aug 26, 2026
- 5:33 pm
ಪಡವಲಕಾಯಿ ತಿನ್ನಲು ಇಷ್ಟವಿಲ್ಲವೇ? ಇದರಿಂದ ಸಿಗುವ ಆರೋಗ್ಯ ಪ್ರಯೋಜನ ತಿಳಿದರೆ ಮತ್ತೆ ಮತ್ತೆ ತಿನ್ನುತ್ತೀರಿ
ದೈನಂದಿನ ಅಡುಗೆಯಲ್ಲಿ ಹಲವು ರೀತಿಯ ತರಕಾರಿಗಳನ್ನು ಬಳಸುತ್ತೇವೆ. ಆದರೆ ಕೆಲವು ತರಕಾರಿಗಳು ಹೆಚ್ಚು ರುಚಿಯಾಗಿರುವುದಿಲ್ಲ, ಆದ್ದರಿಂದ ಅನೇಕರು ಅವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಅದರಲ್ಲಿ ಪಡವಲಕಾಯಿಯೂ ಒಂದು. ಆದರೆ ತಜ್ಞರು ಇದು ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳನ್ನು ಹೊಂದಿರುವುದರಿಂದ, ಇದು ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯ ಎನ್ನುತ್ತಾರೆ. ಹಾಗಾದರೆ ಈ ತರಕಾರಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
- Preethi Bhat Gunavante
- Updated on: Aug 25, 2026
- 7:07 pm
ಆಹಾರದಿಂದ ಟೂತ್ಪೇಸ್ಟ್ವರೆಗೆ.. ನೀವು ಬಳಸುವ ವಸ್ತು ಅಸಲಿಯೇ? ಹೇಗೆಲ್ಲ ನಡೆಯುತ್ತೆ ಕಲಬೆರಕೆ
ಮಿಶ್ರಣ ಅಥವಾ ಲೇಬಲಿಂಗ್ ಸರಿಯಾಗಿ ಇಲ್ಲದಿರುವುದು ಕೇವಲ ವ್ಯಾಪಾರದ ನಿಯಮ ಉಲ್ಲಂಘನೆಯಲ್ಲ. ಇದು ಗ್ರಾಹಕರ ಆರೋಗ್ಯ, ಸುರಕ್ಷತೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ ವಿಷಯ. ಮಾರುಕಟ್ಟೆಯಲ್ಲಿ ಏನು ಖರೀದಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಗ್ರಾಹಕರಿಗೂ ಇದೆ. ಹಾಗಾಗಿ . ‘ಆರ್ಗ್ಯಾನಿಕ್’, ‘ನ್ಯಾಚುರಲ್’, ‘100% ನ್ಯಾಚುರಲ್’, ‘ಫಾರ್ಮ್ ಫ್ರೆಶ್’ ಎಂಬ ಪದಗಳನ್ನು ನೋಡಿದ ತಕ್ಷಣ ಉತ್ಪನ್ನ ಸುರಕ್ಷಿತ ಎಂದು ಭಾವಿಸುವುದು ಸರಿಯಲ್ಲ. ಪ್ಯಾಕೆಟ್ ಮೇಲಿನ ಲೇಬಲ್, ಪದಾರ್ಥಗಳ ಪಟ್ಟಿ, ಪ್ರಮಾಣ, ತಯಾರಿಕಾ ದಿನಾಂಕ ಮತ್ತು ಸಂಬಂಧಿತ ಆಹಾರ ಸುರಕ್ಷತಾ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯ.
- Preethi Bhat Gunavante
- Updated on: Aug 25, 2026
- 5:38 pm
ಹೈಹೀಲ್ಸ್ನಿಂದ ಪಾದ ನೋವು ಮಾತ್ರವಲ್ಲ, ಬೆನ್ನು ನೋವೂ ಬರಬಹುದು! ತಜ್ಞರ ಎಚ್ಚರಿಕೆ
ಫ್ಯಾಷನ್ ಅಥವಾ ದೇಹದ ಅಂದ ಹೆಚ್ಚಿಸಲು ಹೈಹೀಲ್ಸ್ ಧರಿಸುವುದರಲ್ಲಿ ತಪ್ಪಿಲ್ಲ. ಆದರೆ ಎತ್ತರ, ಫಿಟ್ ಮತ್ತು ಧರಿಸುವ ಅವಧಿಯ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. . ಹೈಹೀಲ್ಸ್ ಧರಿಸಿದಾಗ ಪಾದದ ಮುಂಭಾಗ ಮತ್ತು ಮಧ್ಯ ಭಾಗದ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ದೇಹದ ಸಮತೋಲನ ಕಾಪಾಡಿಕೊಳ್ಳಲು ಸ್ನಾಯುಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ದೀರ್ಘಕಾಲ ಹೈಹೀಲ್ಸ್ ಬಳಸುವವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
- Preethi Bhat Gunavante
- Updated on: Aug 24, 2026
- 8:58 pm
Dates vs Figs: ಖರ್ಜೂರ ಮತ್ತು ಅಂಜೂರದಲ್ಲಿ ಯಾವುದರಲ್ಲಿದೆ ಹೆಚ್ಚು ವಿಟಮಿನ್, ಮಿನರಲ್?
ಅಂಜೂರ ಮತ್ತು ಖರ್ಜೂರಗಳು ರುಚಿಯಲ್ಲಿ ಸಿಹಿ ಅಂಶವಿರುವ ಡ್ರೈ ಫ್ರೂಟ್ಸ್. ಅವುಗಳನ್ನು ಹೆಚ್ಚಾಗಿ ಸಿಹಿ ಖಾದ್ಯಗಳ ತಯಾರಿಸಲು ಮತ್ತು ಸಕ್ಕರೆಗೆ ಬದಲಿಯಾಗಿ ಬಳಸಲಾಗುತ್ತದೆ. ಆದರೆ ಖರ್ಜೂರ ಮತ್ತು ಅಂಜೂರ ಇವೆರಡರಲ್ಲಿ ಯಾವುದರಲ್ಲಿ ಹೆಚ್ಚು ಪೋಷಕಾಂಶವಿದೆ ಮತ್ತು ತೂಕ ಮಾಡಿಕೊಳ್ಳಲು ಬಯಸುವವರು ಯಾವುದನ್ನು ಆಯ್ಕೆ ಮಾಡಿದರೆ ಒಳ್ಳೆಯದು ಎಂಬ ಪ್ರಶ್ನೆಗಳು ಹಲವರಲ್ಲಿವೆ. ಇದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Aug 24, 2026
- 8:36 pm
ವಿಟಮಿನ್ ಬಿ12 ಕಡಿಮೆಯಾದರೆ ದೇಹದಲ್ಲಿ ಏನಾಗುತ್ತದೆ? ವೈದ್ಯರು ಹೇಳಿದ ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಬಿ12 ಕೊರತೆಯನ್ನು ದೀರ್ಘಕಾಲ ನಿರ್ಲಕ್ಷಿಸಿದರೆ ನರಗಳಿಗೆ ಸಂಬಂಧಿಸಿದ ಹಾನಿ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ನಿರಂತರ ಸುಸ್ತು, ಕೈ-ಕಾಲುಗಳಲ್ಲಿ ಮರಗಟ್ಟುವಿಕೆ, ನಾಲಿಗೆಯಲ್ಲಿ ಬದಲಾವಣೆ, ಬ್ರೈನ್ ಫಾಗ್ ಅಥವಾ ಬ್ಯಾಲೆನ್ಸ್ ಸಮಸ್ಯೆಗಳಂತಹ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
- Preethi Bhat Gunavante
- Updated on: Aug 24, 2026
- 6:40 pm
ಸೊಳ್ಳೆಗಳು ಬರದಂತೆ ತಡೆಯಲು ಈ 5 ನೈಸರ್ಗಿಕ ವಿಧಾನ ಟ್ರೈ ಮಾಡಿ
ರಾತ್ರಿ ವೇಳೆ ಸೊಳ್ಳೆಗಳ ಕಾಟದಿಂದ ನಿದ್ರೆ ಹಾಳಾಗುವುದಷ್ಟೇ ಅಲ್ಲದೆ, ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ಗುನ್ಯಾ ಮುಂತಾದ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ ಆತಂಕವೂ ಹೆಚ್ಚುತ್ತದೆ. ಸೊಳ್ಳೆಗಳ ಕಾಟದಿಂದ ಹೈರಾಣವಾಗಿದ್ದರೆ ಬೇರೆ ಬೇರೆ ರಾಸಾಯನಿಕ ಬಳಸುವ ಬದಲು ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ಸೊಳ್ಳೆಗಳನ್ನು ದೂರವಿಡಬಹುದು. ಸೊಳ್ಳೆಗಳ ಕಾಟ ಕಡಿಮೆ ಮಾಡಲು ಕೆಲವು ಸರಳ ವಿಧಾನಗಳು ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Aug 24, 2026
- 1:28 pm
ನಿದ್ರೆ ಕೊರತೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ಇಮ್ಯೂನಿಟಿ ಮತ್ತು ನಿದ್ರೆಗಿರುವ ಸಂಬಂಧವೇನು?
ಇತ್ತೀಚಿನ ದಿನಗಳಲ್ಲಿ, ಕಾರ್ಯನಿರತ ಜೀವನಶೈಲಿಯಿಂದಾಗಿ, ಅನೇಕರಿಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ. ಇದು ರೋಗನಿರೋಧಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ನಿದ್ರೆ ಕೊರತೆಯಿಂದ ಇಮ್ಯೂನ್ ಸಿಸ್ಟಮ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ನಿದ್ರೆ ಚೆನ್ನಾಗಿ ಬರಲು ಯಾವ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Aug 22, 2026
- 7:40 pm
ಮಳೆಗಾಲದಲ್ಲಿ ಕಟ್ಟಿದ ಮೂಗು, ಕಫ ಹೆಚ್ಚಾಗಿದೆಯೇ? ಅಜ್ವೈನ್, ಬೆಳ್ಳುಳ್ಳಿಯ ಸಾಂಪ್ರದಾಯಿಕ ಪೊಟ್ಟಣದ ಬಗ್ಗೆ ತಜ್ಞರ ಸಲಹೆ
ಶೀತದ ಸಮಯದಲ್ಲಿ ಮೂಗು ಕಟ್ಟಿಕೊಳ್ಳುವುದು ದೊಡ್ಡ ಸಮಸ್ಯೆ. ತಲೆನೋವು ಮತ್ತು ಎದೆನೋವಿನಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಒಂದು ಮನೆಮದ್ದು ಸಹಾಯ ಮಾಡಬಹುದು. ಇದು ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಈ ಬಗ್ಗೆ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಶ್ವೇತಾ ಶಾ ಅವರು ಮಾಹಿತಿ ನೀಡಿದ್ದು ಅಜ್ವೈನ್, ಬೆಳ್ಳುಳ್ಳಿ ಮತ್ತು ಕರ್ಪೂರ ಬಳಸಿ ತಯಾರಿಸುವ ಪೊಟ್ಟಣದ ಬಗ್ಗೆ ಮತ್ತು ಅದರ ಪ್ರಯೋಜನದ ಬಗ್ಗೆ ಹೇಳಿದ್ದಾರೆ.
- Preethi Bhat Gunavante
- Updated on: Aug 22, 2026
- 7:00 pm