ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.
ಮನೆಯ ಅಂಗಳದ ನಿತ್ಯಪುಷ್ಪ ಹೂವು ನಿಜಕ್ಕೂ ಶುಗರ್, ಬಿಪಿಗೆ ಮನೆಮದ್ದಾಗಿ ಉಪಯೋಗವಾಗುತ್ತದೆಯೇ ತಿಳಿದುಕೊಳ್ಳಿ
ಮನೆಯ ಅಂಗಳದಲ್ಲಿ ಕಾಣಸಿಗುವ ನಿತ್ಯಪುಷ್ಪ ಅಥವಾ ಸದಾಪುಷ್ಪ ಕೇವಲ ಅಲಂಕಾರಿಕ ಹೂವಲ್ಲ. ಇದರಲ್ಲಿ ಔಷಧೀಯ ಸಂಯುಕ್ತಗಳಿವೆ ಎಂಬ ಕಾರಣಕ್ಕೆ ಶುಗರ್ ಮತ್ತು ಬಿಪಿಗೆ ಕಂಟ್ರೋಲ್ ಮಾಡಲು ಬಳಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ನಿತ್ಯಪುಷ್ಪದ ಎಲೆ ಅಥವಾ ಹೂವನ್ನು ಕಷಾಯ ಮಾಡಿ ಸೇವಿಸುವುದರಿಂದ ಶುಗರ್, ಬಿಪಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆಯೇ, ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 15, 2026
- 9:18 pm
ಜಿಮ್ಗೆ ಹೋಗುವವರು ತಪ್ಪದೇ ತಿಳಿಯಿರಿ: ವರ್ಕೌಟ್ ಮಾಡುವಾಗ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?
ಕೆಲವರಿಗೆ, ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿರುತ್ತದೆ. ಇದು ವ್ಯಾಯಾಮದ ಅವಧಿ, ತೀವ್ರತೆ, ದೇಹದ ಗಾತ್ರ, ವಾತಾವರಣ ಮತ್ತು ಬೆವರುವ ಪ್ರಮಾಣದ ಮೇಲೆ ನೀರಿನ ಅಗತ್ಯ ಬದಲಾಗುತ್ತದೆ. ಒಂದು ಗಂಟೆಯೊಳಗಿನ ಸಾಮಾನ್ಯ ವರ್ಕೌಟ್ಗೆ ನೀರು ಸಾಕಾಗಬಹುದು. ದೀರ್ಘಕಾಲದ ವ್ಯಾಯಾಮದಲ್ಲಿ ಎಲೆಕ್ಟ್ರೋಲೈಟ್ಗಳ ಅಗತ್ಯವೂ ಇರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 14, 2026
- 7:05 pm
ರಾತ್ರಿ ಮಲಗುವ ಮುನ್ನ ಸೇಬು ತಿನ್ನುವ ಅಭ್ಯಾಸವಿದ್ದರೆ ನಿಮಗೆ ಈ ವಿಷಯಗಳು ತಿಳಿದಿರಲೇಬೇಕು!
ಸೇಬಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಇರುವುದರಿಂದ ಇದು ಆರೋಗ್ಯಕರ ಹಣ್ಣಾಗಿದೆ. ರಾತ್ರಿ ಸೇಬು ತಿನ್ನುವುದರಿಂದ ಎಲ್ಲರಿಗೂ ಗ್ಯಾಸ್ ಅಥವಾ ಆಸಿಡಿಟಿ ಉಂಟಾಗುತ್ತದೆ ಎಂಬುದಿಲ್ಲ. ಆದರೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಅಥವಾ ಆಸಿಡ್ ರಿಫ್ಲಕ್ಸ್ ಇರುವವರು ಮಲಗುವ ಮುನ್ನ ಈ ಹಣ್ಣಿನ ಸೇವನೆ ಮಾಡದಿರುವುದು ಒಳ್ಳೆಯದು. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 12, 2026
- 8:03 pm
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕ್ಯಾರೆಟ್ ಮಾತ್ರ ಸೇವನೆ ಮಾಡಬೇಕೇ ತಿಳಿದುಕೊಳ್ಳಿ
ಮೊಬೈಲ್, ಲ್ಯಾಪ್ಟಾಪ್ ಬಳಕೆಯಿಂದ ಕಣ್ಣಿಗೆ ಆಯಾಸವಾಗುವುದು ಮತ್ತು ಕಣ್ಣು ಒಣಗುವಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಕಡಿಮೆ ಮಾಡಲು ಮತ್ತು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕ್ಯಾರೆಟ್, ಹಸಿರು ಸೊಪ್ಪುಗಳಂತಹ ಪೌಷ್ಟಿಕ ಆಹಾರಗಳು ಸಹಾಯ ಮಾಡುತ್ತದೆ. ಹಾಗಾದರೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಮತ್ತು ಬೀಟಾ -ಕ್ಯಾರೋಟಿನ್ ಇರುವ ಆಹಾರಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 12, 2026
- 5:04 pm
ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳು: ರಕ್ತಹೀನತೆ ಇರುವವರು ಈ ತಪ್ಪು ಮಾಡಬೇಡಿ
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಫೋಲೇಟ್, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಸಿಯಂ ಮತ್ತು ಫೈಬರ್ ಸೇರಿದಂತೆ ಹಲವು ರೀತಿಯ ಪೋಷಕಾಂಶಗಳಿವೆ. ನಿಯಮಿತವಾಗಿ ಸೇವಿಸಿದರೆ ಸಮತೋಲಿತ ಆಹಾರದ ಭಾಗವಾಗಿ ಆರೋಗ್ಯಕ್ಕೆ ನೆರವಾಗಬಹುದು. ಆರೋಗ್ಯಕ್ಕೆ ಒಳ್ಳೆಯದು ಎಂದು ಪಾಲಕ್ ಸೊಪ್ಪನ್ನು ಪ್ರತಿದಿನ ತಿನ್ನುವುದೇ ಎಲ್ಲರಿಗೂ ಸೂಕ್ತವೇ, ಯಾರಾದರೂ ಇದನ್ನು ಸೇವಿಸುವಾಗ ವಿಶೇಷವಾಗಿ ಎಚ್ಚರಿಕೆ ವಹಿಸಬೇಕೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 11, 2026
- 8:00 pm
ಡ್ರ್ಯಾಗನ್ ಫ್ರೂಟ್ ತಿನ್ನುವವರು ರೆಡ್ ಮತ್ತು ವೈಟ್ ಡ್ರ್ಯಾಗನ್ ಹಣ್ಣಿನಲ್ಲಿರುವ ವ್ಯತ್ಯಾಸ ತಿಳಿಯಿರಿ
ಕೆಂಪು ಮತ್ತು ಬಿಳಿ ಡ್ರ್ಯಾಗನ್ ಫ್ರೂಟ್ ಎರಡರಲ್ಲೂ ಫೈಬರ್, ನೀರು, ವಿಟಮಿನ್ಗಳು ಮತ್ತು ವಿವಿಧ ಆ್ಯಂಟಿಆಕ್ಸಿಡೆಂಟ್ಗಳು ಇವೆ. ಕೆಂಪಿನಲ್ಲಿ ಬೆಟಾಸಯಾನಿನ್ನಂತಹ ಸಂಯುಕ್ತಗಳು ಕಂಡುಬರುತ್ತವೆ. ಬಿಳಿ ವಿಧವೂ ಜೀರ್ಣಕ್ರಿಯೆಗೆ ಸಹಾಯ ಮಾಡುವ ಫೈಬರ್ ನೀಡುತ್ತದೆ. ಹಾಗಾದರೆ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ, ಯಾವ ಆರೋಗ್ಯ ಸಮಸ್ಯೆಗೆ ಯಾವುದು ಬೆಸ್ಟ್ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 11, 2026
- 6:48 pm
40ರ ನಂತರ ಡಯಟ್ನಲ್ಲಿ ಇರಬೇಕಾದ 5 ಆಹಾರಗಳಿವು! ಆರೋಗ್ಯಕರ ಏಜಿಂಗ್ಗೆ ಸಹಾಯ ಮಾಡಬಹುದು
40ರ ನಂತರ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಬೆರ್ರಿ ಹಣ್ಣುಗಳು, ಮೊಟ್ಟೆ, ಕೊಬ್ಬಿನ ಮೀನು, ಕ್ವಿನೋವಾ ಮತ್ತು ಹಸಿರು ಸೊಪ್ಪುಗಳು ಪ್ರೋಟೀನ್, ಫೈಬರ್, ಆ್ಯಂಟಿಆಕ್ಸಿಡೆಂಟ್ಗಳು, ಒಮೆಗಾ-3 ಹಾಗೂ ಹಲವು ಪೋಷಕಾಂಶಗಳನ್ನು ಒದಗಿಸಬಹುದು. ಇದರ ಜೊತೆಗೆ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಸಮತೋಲಿತ ಆಹಾರ ಯಂಗ್ ಆಗಿ ಕಾಣಲು ನೆರವಾಗಬಹುದು.
- Preethi Bhat Gunavante
- Updated on: Sep 10, 2026
- 9:02 pm
ಕಸದಂತೆ ಎಸೆಯುವ ಕಲ್ಲಂಗಡಿ ಬೀಜವೇ ಪೌಷ್ಟಿಕ ಸ್ನ್ಯಾಕ್! ಸೇವಿಸುವ ಸರಿಯಾದ ವಿಧಾನ ತಿಳಿಯಿರಿ
ಕಲ್ಲಂಗಡಿ ಹಣ್ಣು ತಿಂದ ಬಳಿಕ ಬೀಜಗಳನ್ನು ಎಸೆಯುವ ಬದಲು ಅವುಗಳನ್ನು ಆಹಾರದಲ್ಲಿ ಬಳಸಬಹುದು. ಕಲ್ಲಂಗಡಿ ಬೀಜಗಳಲ್ಲಿ ಪ್ರೋಟೀನ್, ಮೆಗ್ನೀಷಿಯಂ, ಜಿಂಕ್, ಕಬ್ಬಿಣ ಹಾಗೂ ಆರೋಗ್ಯಕರ ಕೊಬ್ಬುಗಳಿವೆ. ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಬೀಜಗಳನ್ನು ಒಣಗಿಸಿ ಲಘುವಾಗಿ ಹುರಿದು ಸ್ನ್ಯಾಕ್ ಅಥವಾ ಸಲಾಡ್ಗೆ ಸೇರಿಸಬಹುದು. ಆದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನ ಮತ್ತು ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 10, 2026
- 7:52 pm
ಗ್ಯಾಸ್, ಆಸಿಡಿಟಿ ಕಡಿಮೆಮಾಡಲು ಧನಿಯಾ-ಶುಂಠಿ ನೀರು ಕೆಲಸ ಮಾಡುತ್ತೋ, ಇಲ್ಲವೋ ತಿಳಿದುಕೊಳ್ಳಿ
ಬೆಳಗ್ಗೆ ಗ್ಯಾಸ್, ಆಸಿಡಿಟಿ ಮತ್ತು ಹೊಟ್ಟೆ ಉಬ್ಬರದಿಂದ ತೊಂದರೆ ಅನುಭವಿಸುತ್ತಿದ್ದೀರಾ? ಧನಿಯಾ ಮತ್ತು ಶುಂಠಿಯಿಂದ ತಯಾರಿಸುವ ಪಾನೀಯ ಕೆಲವರಿಗೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿನ ಆರಾಮ ನೀಡಬಹುದು. ಆದರೆ ಇದು ಗ್ಯಾಸ್ ಅಥವಾ ಆಸಿಡಿಟಿಗೆ ಹೇಗೆ ಸಹಕಾರಿ ಮತ್ತು ಇಂತಹ ಸಮಸ್ಯೆ ತಡೆಗಟ್ಟಲು ಮತ್ತೆ ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 10, 2026
- 3:45 pm
ಕಪ್ಪು ಎಳ್ಳು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಕಾರಿ ಎಂಬುದು ಸತ್ಯವೋ, ಸುಳ್ಳೋ ತಿಳಿದುಕೊಳ್ಳಿ
ಕಪ್ಪು ಎಳ್ಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣ, ಫೈಬರ್ ಸೇರಿದಂತೆ ಹಲವು ರೀತಿಯ ಪೋಷಕಾಂಶಗಳಿವೆ. ಸಮತೋಲಿತ ಆಹಾರದ ಭಾಗವಾಗಿ ಎಳ್ಳನ್ನು ಮಿತವಾಗಿ ಸೇವಿಸಬಹುದು. ಆದರೆ ಇದು ನಿಜವಾಗಿಯೂ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆಯೇ, ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 9, 2026
- 7:48 pm
ಜೋರಾಗಿ ಗೊರಕೆ ಹೊಡೆಯುವುದು, ರಾತ್ರಿ ಪದೇಪದೇ ಎಚ್ಚರವಾಗುವುದು ಗಂಭೀರ ಸಮಸ್ಯೆಯ ಸೂಚನೆ!
ರಾತ್ರಿ ಪದೇಪದೇ ಎಚ್ಚರವಾಗುವುದು ಸಾಮಾನ್ಯ, ಆದರೆ ಇದು ನಿರಂತರವಾಗಿ ಮುಂದುವರಿದರೆ ಕಾರಣ ತಿಳಿದುಕೊಳ್ಳುವುದು ಬಹಳ ಮುಖ್ಯ. ಒತ್ತಡ, ಆತಂಕ, ಕೆಫೀನ್, ನಿದ್ರೆ ವಾತಾವರಣ, ನೋವು ಅಥವಾ ಸ್ಲೀಪ್ ಅಪ್ನಿಯಾ ಇದಕ್ಕೆ ಕಾರಣವಾಗಬಹುದು. ಜೋರಾಗಿ ಗೊರಕೆ, ನಿದ್ರೆಯಲ್ಲಿ ಉಸಿರಾಟ ನಿಲ್ಲುವುದು ಮತ್ತು ಹಗಲಿನಲ್ಲಿ ಅತಿಯಾದ ನಿದ್ರೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.
- Preethi Bhat Gunavante
- Updated on: Sep 9, 2026
- 7:21 pm
ಸ್ನಾಯು ಸೆಳೆತ, ದಣಿವನ್ನು ನಿರ್ಲಕ್ಷಿಸಬೇಡಿ! ಇದು ಮ್ಯಾಗ್ನೀಷಿಯಂ ಕೊರತೆಯ ಲಕ್ಷಣವಾಗಿರಬಹುದು…
ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮ್ಯಾಗ್ನೀಷಿಯಂ ಪ್ರಮುಖವಾಗಿ ಬೇಕಾದ ಖನಿಜ. ಇದರ ಕೊರತೆ ಉಂಟಾದಾಗ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು ಅದನ್ನು ತಿಳಿದುಕೊಂಡು ಅಂತಹ ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಯಾವ ರೀತಿ ಆಹಾರ ಸೇವನೆ ಮಾಡಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 9, 2026
- 6:09 pm