
ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಬುಧವಾರ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ವೈಧೃತಿ, ಕರಣ : ವಣಿಜ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:32 – 14:04, ಗುಳಿಕ ಕಾಲ 10:59 – 12:32, ಯಮಗಂಡ ಕಾಲ 07:54 – 09:27
ಮೇಷ ರಾಶಿ: :ಉದ್ದೇಶ ಶುದ್ಧವಿದ್ದು, ಎಲ್ಲ ಅನುಕೂಲತೆಗಳು ತಾನಾಗಿಯೇ ಸಿದ್ಧಿಸಲಿದೆ. ಒಮ್ಮನಸ್ಸಿನಿಂದ ಇಂದು ಕಾರ್ಯ ಅಸಾಧ್ಯ. ಕಿರಿಕಿರಿಯನ್ನು ನಿಭಾಯಿಸುವುದೂ ಕಷ್ಡವಾದೀತು. ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸುತ್ತಲಿನವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಆದರೆ ಅವರಿಂದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಕಾಡಬಹುದು. ಶತ್ರುಗಳನ್ನೇ ಆದರೂ ಅವರನ್ನು ನೋಡಿಕೊಳ್ಳುವ ಕ್ರಮ ಗೊತ್ತಿರಲಿ. ಮನೋರಂಜನೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವಿರಿ. ಒಮ್ಮೆಲೆ ಹಲವು ಕಡೆಗಳಿಂದ ಉದ್ಯೋಗಕ್ಕೆ ಕರೆ ಬರಲಿದ್ದು ಆಯ್ಕೆ ಕಷ್ಟವಾಗುವುದು. ಕೆಲಸದಿಂದ ಹೊರಬಂದ ಸ್ನೇಹಿತರಿಗೆ ಸಹಾಯ ಮಾಡುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಹೆಚ್ಚು ಇರಲಿದೆ. ಅನಿರೀಕ್ಷಿತವಾಗಿ ಆರೋಗ್ಯ ಕೆಡಬಹುದು. ಸಂಗಾತಿಯಿಂದ ಸಹಕಾರವು ನಿಮಗೆ ಸಿಗಲಿದೆ. ಇನ್ನೊಬ್ಬರ ವಿಮರ್ಶೆಯಲ್ಲಿ ಸಮಯ ಹೋಗುವುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ.
ವೃಷಭ ರಾಶಿ::ಹಾಳಾದ ವಸ್ತುಗಳ ಖರೀದಿಯಿಂದ ನಿಮ್ಮ ಮಾತುಗಳನ್ನು ನಂಬುವವರ ಸಂಖ್ಯೆ ಕಡಿಮೆ ಆದೀತು. ಇಂದು ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ನಿಮಗೆ ಅನೇಕ ಅವಕಾಶಗಳು ಸಿಗಲಿದ್ದು ಅದನ್ನು ಬಿಡುವಿರಿ. ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸೌಖ್ಯವನ್ನು ಇಚ್ಛಿಸುವಿರಿ. ಕೆಲವನ್ನು ಮಾತನಾಡಿ ಕೆಡಿಸಿಕೊಳ್ಳುವಿರಿ. ಇದು ನಿಮ್ಮನ್ನು ಚಿಂತೆಗೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗವು ನಿಮ್ಮ ಮೇಲೆ ಒತ್ತಡವನ್ನು ತರಬಹುದು. ಮನೆಯ ನಿರ್ಮಾಣದಲ್ಲಿ ನಿಮಗೆ ಗೊಂದಲ ಹೆಚ್ಚಾಗುವುದು. ನಿಮ್ಮನ್ನು ಕಡೆಗಣಿಸಿದ ಜನರ ಮುಂದೇ ನೀವು ಎದ್ದು ನಿಲ್ಲುವಿರಿ. ಇಂದಿನ ಕಾರ್ಯಗಳು ಮುಕ್ತಾಯವಾಗದೇ ಆತಂಕ ಪಡುವಿರಿ. ಸಂಗಾತಿಯನ್ನು ಹೆಚ್ಚು ಇಷ್ಟಪಡುವಿರಿ. ಮನೆಯಲ್ಲಿ ನಿಮ್ಮ ಹಣ ಕಾಣೆಯಾಗುವುದು. ನೀವೇ ನಿಮಗೆ ವೈರಿಯಾಗುವ ಸಾಧ್ಯತೆ ಇದೆ. ಸಾಮರಸ್ಯದ ಕೊರೆತೆಯು ನೀಗಲಿದೆ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ.
ಮಿಥುನ ರಾಶಿ: :ನಿಜವಾದ ಸಂಕಟವಿದ್ದರೆ ಮಾರ್ಗವು ಅನ್ಯರಿಂದ ಗೊತ್ತಾಗಲಿಸೆ. ತೋರಿಕೆಗೆ ಯಾವುದೂ ಸಿಗದೇ ಇರುವುದು. ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಮಕ್ಕಳ ಭಾವನೆಗೆ ಸ್ಪಂದಿಸಿ ಅವರನ್ನು ಖುಷಿಪಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಭಯವಾಗಬಹುದು. ಹೊಸ ಯಂತ್ರವನ್ನು ನೀವು ಖರೀದಿಸುವ ಅನಿವಾರ್ಯತೆ ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಿದ ಧನ್ಯತೆ ನಿಮಗೆ ಆಗಲಿದೆ. ಖಾಲಿಯಾದ ಸ್ಥಾನವನ್ನು ತುಂಬುವುದು ಆಗದು. ಇದು ನಿಮ್ಮನ್ನು ಖುಷಿಯಿಂದ ಇಡುವುದು. ಕಲಹವು ಸಣ್ಣದೇ ಆಗಿದ್ದರೂ ಅದ ಫಲವು ಬಹಳ ದೊಡ್ಡಾದಾಗಿರುವುದು. ಮಾತಿನ ಮೇಲೆ ನಿಮ್ಮ ನಿಯಂತ್ರಣವಯ ಅಗತ್ಯ. ಬಂಧುಗಳು ನಿಮ್ಮನ್ನು ಪ್ರಶಂಸಿಸುವರು. ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಬಯಸಬಹುದು.
ಕರ್ಕಾಟಕ ರಾಶಿ: :ನೀವು ಕೊಡಸುವ ಉದ್ಯೋಗವು ಅನ್ಯರ ಪಾಲಾಗಲಿದೆ. ಮಾತನ್ನು ಉಳಿಸಿಕೊಳ್ಳಲು ಅತಿಯಾದ ಹಠ ಬರಲಿದೆ. ಬರಬೇಕಾದ ಹಣವು ನಿಮಗೆ ಸಿಗುವುದು ಕಷ್ಟವಾಗುವುದು. ಓಡಾವೂ ವ್ಯರ್ಥವಾಗಿ, ಬೇಸರ ತರಬಹುದು. ಇಂದು ಹೊಸ ಉತ್ಸಾಹದಿಂದ ವೃತ್ತಿಗೆ ತೆರಳಿದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಧನನಷ್ಟವಾದರೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದಲ್ಲಿ ಬದಲಾವಣೆ ಮಾಡಲು ಇಚ್ಛಿಸುವಿರಿ. ನಿಮ್ಮ ಕೆಲಸಗಳಿಗೆ ಆಪ್ತರ ವಿರೋಧವಿರಲಿದೆ. ಆತುರದ ನಿರ್ಧಾರದಿಂದ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಒಳಿತಿಗಾಗಿ ಸಮಯವನ್ನು ನೀವು ನಿರೀಕ್ಷಿಸಬೇಕಾಗುತ್ತದೆ. ನೀವು ಮಾನಸಿಕವಾಗಿ ಗಟ್ಟಿಯಾಗಬೇಕಾಗಿದೆ. ದುರ್ಬಲ ಮನಸ್ಸಿಗೆ ನಕಾರಾತ್ಮಕ ಅಂಶಗಳು ಬರಬಹುದು. ಪ್ರಾತಃಕಾಲದಲ್ಲಿಯೇ ಅದನ್ನು ಕಳೆದುಕೊಳ್ಳುವ ಉಪಾಯವನ್ನು ಮಾಡಿಕೊಳ್ಳಿ. ಅನಾರೋಗ್ಯದಿಂದ ಒಪ್ಪಿಕೊಂಡ ಕಾರ್ಯವನ್ನು ಮಸಡಿಕೊಡಲಾಗದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಆಸೆಯಾಗಲಿದೆ.
ಸಿಂಹ ರಾಶಿ: :ವಿಳಂಬವಾದಷ್ಟೂ ಉತ್ತಮ ಅವಕಾಶ ನಿಮಗೇ ಸಿಗದು. ಆಕಸ್ಮಿಕ ಆಗುತ್ತಿರುವ ಸಣ್ಣ ಸಣ್ಣ ಅಪಘಾತಗಳಿಂದ ಮಾನಸಿಕ ನೋವು ಹೆಚ್ಚಾಗುವುದು. ಆತುರದಲ್ಲಿ ಇಂದು ಅಸಂಬದ್ಧವಾಗುವ ಸಾಧ್ಯತೆ ಇದೆ. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ ಅಷ್ಟೇ. ಪ್ರಯತ್ನಪೂರ್ವಕವಾಗಿ ನಿಮ್ಮ ಕೆಲಸವನ್ನು ಪೂರೈಸುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಆಲಸ್ಯವು ಇಂದಿನ ಕಾರ್ಯವನ್ನು ನಿಧಾನ ಮಾಡಬಹುದು. ನೀವು ಇಟ್ಟ ನಂಬಿಕೆ ಹುಸಿಯಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಲಹವಾಗುವ ಸಾಧ್ಯತೆ ಇದೆ. ವಾಹನವನ್ನು ಬಹಳ ಜಾಗರೂಕತೆಯಿಂದ ಚಲಾಯಿಸಿ. ಮುಳ್ಳನ್ನು ಮುಳ್ಳಿಂದ ತೆಗೆಯಬೇಕು ಎನ್ನುವ ಮನೋಭಾವ ತೀವ್ರವಾಗಿ ನಿಮ್ಮೊಳಗೆ ಬೇರೂರುವುದು. ವಿದ್ಯಾರ್ಥಿಗಳಿಗೆ ಸಮಯದ ಅಭಾವವು ಆಗಬಹುದು. ಕೆಲವು ದಿನಗಳ ವಿರಾಮವನ್ನು ಪಡೆದು ಪ್ರವಾಸ ಹೋಗುವಿರಿ. ನಿಮ್ಮ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ. ಮೇಲಧಿಕರಿಗಳು ನಿಮ್ಮ ಕಾರ್ಯವನ್ನು ಪರಿಶೀಲಿಸಬಹುದು. ಎಲ್ಲರೆದುರೂ ನಿಮ್ಮ ಸಾಹಸಪ್ರದರ್ಶನ ಬೇಡ.
ಕನ್ಯಾ ರಾಶಿ: :ನೀವು ಹೇಳಿದ ಸತ್ಯದಿಂದ ಉಲ್ಲೋಲಕಲ್ಲೋಲ ಎಂಬ ನಿರೀಕ್ಷೆ ಇತ್ತು, ಆದರೆ ಅದರು ಹೊರಕ್ಕೆ ಕಾಣಿಸದು. ನೌಕರರಿಂದ ನಿರೀಕ್ಷಿಸಿದ್ದು ಸುಳ್ಳಾಗಬಹುದು. ಇಂದು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚರಚಾಗುವುದು. ಔದ್ಯೋಗಿಕ ವಿಚಾರದಲ್ಲಿ ನೀವು ಹೆಚ್ಚಿನ ಗಮನ ಅವಶ್ಯಕ. ಹಿರಿಯರ ಉಪದೇಶವು ನಿಮಗೆ ಕಿರಿಕಿರಿ ಎನಿಸಬಹುದು. ಗೃಹನಿರ್ಮಾಣದಲ್ಲಿ ವಿಘ್ನಗಳು ಬರಲಿದೆ. ನಿಮ್ಮ ಆದಾಯದ ಮೂಲವಾದ ವ್ಯಾಪಾರವು ಲಾಭವನ್ನು ಕೊಡಬಹುದು. ಹಳೆಯ ರೋಗಕ್ಕೆ ಔಷಧದಿಂದ ಪರಿಹಾರ ಸಿಗಲಿದೆ. ಕಛೇರಿಯ ಬಗೆಗಿನ ಮೋಹ ದೂರಾಗುವುದು. ನಿಮ್ಮ ಪ್ರೀತಿಪಾತ್ರರನ್ನು ನೀವು ಭೇಟಿಯಾಗಲು ಬಯಸುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದ ಅಧಿಕಾರಿಹಳಿಂದ ಒತ್ತಡವು ಬರಬಹುದು. ಆಪ್ತರ ಜೊತೆ ಪ್ರಯಾಣ ಮಾಡುವಿರಿ. ಪ್ರೇಮವು ಅತಂತ್ರ ಸ್ಥಿತಿಗೆ ಹೋಗಬಹುದು. ನೀರಿನ ಪ್ರದೇಶದಲ್ಲಿ ಜಾಗರೂಕತೆ ಅವಶ್ಯಕ. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಬಗ್ಗೆ ಕಾಳಜಿ ಹೆಚ್ಚಾಗುವುದು.
ತುಲಾ ರಾಶಿ::ದುಃಸ್ವಪ್ನಗಳು ನಿದ್ರೆಯನ್ನು ದೂರ ಮಾಡುತ್ತದೆ. ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ. ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ನಿಮ್ಮ ಭವಿಷ್ಯಕ್ಕೆ ಮಾರ್ಗವನ್ನು ತೋರಿಸುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶಗಳು ಲಭ್ಯವಾಗುವುವು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಬಹುದು. ಮಾತನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮ ಇಂದಿನ ಕಾರ್ಯಕ್ಕೆ ಹಿರಿಯರ ಒಪ್ಪಿಗೆ ಪಡೆದು ಮುಂದುವರಿಯುವುದು ಅವಶ್ಯಕ. ಭವಿಷ್ಯದ ಕಲ್ಪನೆಯನ್ನು ಕುಟುಂಬದವರ ಜೊತೆ ಹಂಚಿಕೊಳ್ಳುವಿರಿ. ಸಮಾಜಸೇವೆಗೆ ಹೊರಗಡೆಯಿಂದ ಹಣವನ್ನು ಪಡೆಯುವಿರಿ. ನಿಮ್ಮವರ ಮೇಲೆ ಅನುಮಾನವು ದೂರವಾಗಲು ಕಾರಣವಾಗಬಹುದು. ನಿಮ್ಮ ಹೇಳಿಕೆಗಳು ಸ್ಪಷ್ಟವಾಗಿರಲಿ. ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಪಶ್ಚಾತ್ತಾಪ ಪಡುವುದು ಬೇಡ. ನಿಮ್ಮದಲ್ಲದ ತಪ್ಪನ್ನೂ ನೀವು ಒಪ್ಪಿಕೊಂಡು ಕಲಹವಾಗುವುದನ್ನು ನಿಲ್ಲಿಸುವಿರಿ. ಮಕ್ಕಳ ವಿವಾಹಕ್ಕಾಗಿ ಓಡಾಡುವಿರಿ.
ವೃಶ್ಚಿಕ ರಾಶಿ: :ಸ್ಪರ್ಧೆಗಳಿಗೆ ಬಹಳ ಸೂಕ್ಷ್ಮವಾಗಿ ತಯಾರಿಯನ್ನು ನಡೆಸುವಿರಿ. ಪಟ್ಟಶ್ರಮವು ಇಂದು ಸಾರ್ಥಕ ಎನಿಸಬಹುದು. ಮನೆಯ ಸಂತೋಷದ ವಾತಾವರಣವು ಪುಟ್ಟ ಕಾರಣಕ್ಕೆ ಹಾಳಾಗಬಹುದು. ತನಗೆ ಬೇಕಾದುದನ್ನು ಪಡೆಯುವ ಆತುರತೆ ಇರಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಬಹುದು. ಆದಾಯ ಮೂಲವನ್ನು ತೋರಿಸದೇ ಹಣವನ್ನು ರಕ್ಷಿಸಲಾಗದು. ಜಾಣ್ಮೆಯಿಂದ ಕಾರ್ಯವನ್ನು ಸಾಧಿಸಬಹುದು. ಉದ್ಯೋಗದಲ್ಲಿ ಅಸಹಾಯಕರಾಗಿ ಕೆಲಸವನ್ನು ಪೂರ್ಣಮಾಡುವಿರಿ. ಅವಕಾಶಗಳು ಪಡೆಯಲು ತಂತ್ರವನ್ನು ಹೂಡುವಿರಿ. ಮಾತಿನಲ್ಲಿ ಸತ್ಯತೆ ಇದ್ದರೂ ಸ್ಪಷ್ಟತೆ ಇರಲಿ. ಉದ್ಯೋಗದ ನಿಮಿತ್ತ ದೂರ ಹೋದವರಿಗೆ ತೊಂದರೆ ಆಗಬಹುದು. ನಿಮಗೆ ಬೇಕಾದ ವಸ್ತುವು ಯಾರಿಂದಲಾದರೂ ಸಿಗಬಹುದು. ಉದ್ಯಮದ ವಾಸ್ತವಿಕ ಚಿತ್ರಣ ಅಂತಿಮವಾಗಿ ಗೊತ್ತಾಗಲಿದೆ. ಇಂದು ನಿಮಗೆ ಸಿಕ್ಕಿದ್ದರಲ್ಲಿ ಸಂತೋಷಿಸಿ. ಅಧಿಕಾರಿಗಳ ಕರುಣೆಯ ಕಾರಣ ಆಪತ್ತಿನಿಂದ ಹೊರಬರುವಿರಿ. ಅಪರಿಚರಿಂದ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಮೆಚ್ಚುಗೆಯಿಂದ ಅಪರಿಚಿತರಿಗೆ ಖುಷಿಯಾಗಬಹುದು.
ಧನು ರಾಶಿ: :ಅಧಿಕಾರ ಹಸ್ತಾಂತರವನ್ನು ಸಂಭ್ರಮದಿಂದ ಆಚರಿಸುವಿರಿ. ಸಣ್ಣದಾದರೂ ಸ್ವಂತ ಉದ್ಯೋಗವಿರಬೇಕು ಎನ್ನುವ ಧ್ಯೇಯ ನಿಮ್ಮದು. ನೀವು ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ವಿಧಾನವನ್ನು ಕಲಿಯುವುದು ಯೋಗ್ಯ. ಕೋಪವನ್ನು ಬಹಳ ಶ್ರಮದಿಂದ ನಿಯಂತ್ರಣ ಮಾಡಿಕೊಳ್ಳುವಿರಿ. ನಿಮ್ಮ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ತಿಂದರೆ ಇಲ್ಲ. ಸ್ನೇಹಿತನಿಗಾಗಿ ಸಾಲಮಾಡಬೇಕಾದೀತು. ಪಾಲುದಾರಿಕೆಯನ್ನು ಅರ್ಧಕ್ಕೆ ಬಿಟ್ಟು ಹೋಗಬಹುದು. ಕಾರಣವೂ ಸರಿಯಾಗಿ ಇರದು. ನಿಮಗೆ ಇಂದು ನಿಮ್ಮ ಸಹೋದ್ಯೋಗಿಗಳ ವರ್ತನೆಯಲ್ಲಿ ಅನುಮಾನ ಕಾಣಬಹುದು. ಅವರಿಂದ ದೂರವಿರುವುದು ಉತ್ತಮ. ನಿಮ್ಮ ಆದಾಯದ ಮೂಲವು ಹೊರಗಿನಿಂದ ಬರುವುದಾಗಿದೆ. ಹಾಗಾಗಿ ಹಣಕ್ಕಾಗಿ ತಲೆ ಕೆಡಸಿಕೊಳ್ಳುವುದಿಲ್ಲ. ಬೇಕಾಗಿದ್ದನ್ನು ಪಡೆಯುವಿರಿ. ಸೇವಾ ಮನೋಭಾವವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ.
ಮಕರ ರಾಶಿ: :ಅಲ್ಪ ದಂಡವನ್ನಾದರೂ ತಪ್ಪಿಗೆ ಕಟ್ಟಲೇಬೇಕಾಗುವುದು. ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಇಂದು ನೀವು ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಗೆಳೆತನ ನಿಮಗೆ ಬಹಳ ಇಷ್ಟವಾಗುವುದು. ವಿವಾದದಲ್ಲಿ ಜಯವಿದೆ ಎಂದು ಎಲ್ಲರ ಬಳಿಯೂ ವಾದಕ್ಕೆ ಹೋಗುವುದು ಬೇಡ. ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ಕೊಡಲಿದೆ. ಹಿರಿಯರಿಗೆ ತಲೆಬಾಗಿದರೇ ದಾರಿ ಸುಗಮ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವಿರಿ. ನೀವು ಆರೋಪ ಮಾಡುವ ಮೊದಲು ನಿಮ್ಮ ಸ್ಥಾನದ ಬಗ್ಗೆಯೂ ಎಚ್ಚರ ಇರಲಿ. ನಿಮ್ಮವರ ಬಳಿ ಸಹಾಯವನ್ನು ಕೇಳುವಿರಿ. ಇಂದು ನಿದ್ರೆಯು ಬಾರದೇ ಮನಸ್ಸು ಸರಿ ಇರದು. ಅನವಶ್ಯಕ ಮಾತುಗಳಿಂದ ವಿವಾದವು ಸೃಷ್ಟಿಯಾಗುವುದು. ಕುಟುಂಬದ ಕಲಹವು ನಿಮಗೆ ಹಲವು ವಿಚಾರಗಳನ್ನು ತಿಳಿಸೀತು. ಸಹೋದರನಿಂದ ಸಹಕಾರವು ನಿಮಗೆ ಸಿಗಬಹುದು. ಸ್ನೇಹಿತರ ವರ್ಗವು ಬೆಳೆಯಬಹುದು. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ.
ಕುಂಭ ರಾಶಿ: :ನಿಮ್ಮ ಸಹೋದರರ ಭ್ರಾತೃತ್ವ ಎಲ್ಲರಿಂದ ಪ್ರಶಂಸಾಯೋಗ್ಯವಾಗಲಿದೆ. ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ಇಲ್ಲವಾದರೆ ನಿಮ್ಮ ಮೇಲೆ ಪ್ರಶ್ನೆಗಳು ಬರಬಹುದು. ನಿಮ್ಮ ದುರಭ್ಯಾಸದಿಂದ ಇಂದಿನ ಸಮಯವನ್ನು ನಷ್ಟಮಾಡಿಕೊಳ್ಳುವಿರಿ. ನಿಮ್ಮನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ಮನೆಯವರು ಇರುವರು. ನಿಮ್ಮ ಆಲೋಚನೆಗಳಿಂದ ನಿಮ್ಮ ಸ್ಥಾನವೇ ಬದಲಾಗಬಹುದು. ಬಾಂಧವ್ಯವು ಗಟ್ಟಿಯಾಗಬಹುದು. ಸಂಗಾತಿಯಿಂದ ಉತ್ತಮ ಸಲಹೆಯನ್ನು ಪಡೆಯುವಿರಿ. ನಿಮ್ಮವರಿಗೆ ಮಾಡಿದ ಅಪಮಾನಕ್ಕೆ ಪ್ರತೀಕಾರದ ಭಾವ ಉಂಟಾಗಲಿದೆ. ನಿಮ್ಮ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಕಾನೂನಿನ ಸಮರದಲ್ಲಿ ನಿಮಗೆ ಜಯವಾಗಬಹುದು. ಒತ್ತಡದಿಂದ ಹೊರಬಂದ ಕಾರಣ ನಿರಾಳವೆನಿಸಬಹುದು. ಸಮಾಜಮುಖಿಯಾದ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಆರ್ಥಿಕ ತೊಂದರೆಯನ್ನು ನಿಭಾಯಿಸುವ ಕಲೆ ಗೊತ್ತಾಗಲಿದೆ. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಬಹುದು.
ಮೀನ ರಾಶಿ: :ಹೇಗಾದರೂ ಮಾಡಿ ಆಕರ್ಷಕವಾಗಿ ಕಾಣಿಸಿಕೊಳ್ಳುವಂತೆ ಮಾಡಿಕೊಳ್ಳುವಿರಿ. ಧಾರ್ಮಿಕ ನಂಬಿಕೆಗಳು ನಿಮಗೆ ಸತ್ಯವೆನಿಸಿ, ಶ್ರದ್ಧೆಯು ಹೆಚ್ಚಾಗುವುದು. ಇಂದು ನಿಮ್ಮ ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡುವ ಸಾಧ್ಯತೆಯೂ ಹೆಚ್ಚು. ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಯೋಗ್ಯವಾದ ಮಾರ್ಗದರ್ಶನ ಬೇಕಾಗುವುದು. ಸಂಶೋಧನೆಯನ್ನು ಆರ್ಥಿಕ ಅಭಾವದಿಂದ ನಿಲ್ಲಿಸುವಿರಿ. ಅರ್ಧಕ್ಕೆ ಸಂಗಾತಿಯನ್ನು ಕಡೆಗಣಿಸಿದ್ದಕ್ಕೆ ಬೇಸರ ಪಡಬೇಕಾದೀತು. ತಾಯಿಯ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ತಾಯಿಯ ಕಡೆಯವರು ನಿಮಗೆ ಸಹಾಯ ಮಾಡುವರು. ಸುಖದಲ್ಲಿ ಇಂದು ಮಾಡಬೇಕಾದ ಕೆಲಸವನ್ನು ಮರೆಯುವಿರಿ. ಕಂಟಕದಿಂದ ನೀವು ಮುಕ್ತರಾಗುವಿರಿ. ಯಾವುದನ್ನೇ ಆರಂಭದಿಂದಲೇ ಅದು ಬರಬೇಕು. ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ.
ಲೋಹಿತ ಹೆಬ್ಬಾರ್ – 8762924271 (what’s app only)