ಬಾಗಲಕೋಟೆಯಲ್ಲಿ ಎಗ್​ರೈಸ್​ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

ಜುಮ್ಮಕಟ್ಟಿ ಗ್ರಾಮದ ಯುವಕ ರಮೇಶ ಕಂಬಾಡದ ಎಂಬುವವನ ಮೇಲೆ ಎಗ್​ರೈಸ್​ ಅಂಗಡಿ ಮಾಲೀಕ ಮಲಿಕ್ ಮತ್ತು ಕೆಲಸಗಾರರ ತಂಡ ಹಲ್ಲೆ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಎಗ್​ರೈಸ್​ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ
ಗಾಯಗೊಂಡ ಯುವಕ
Edited By:

Updated on: Sep 05, 2021 | 5:43 PM

ಬಾಗಲಕೋಟೆ: ಎಗ್​ರೈಸ್ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಜುಮ್ಮಕಟ್ಟಿ ಗ್ರಾಮದ ಯುವಕ ರಮೇಶ ಕಂಬಾಡದ ಎಂಬುವವನ ಮೇಲೆ ಎಗ್​ರೈಸ್​ ಅಂಗಡಿ ಮಾಲೀಕ ಮಲಿಕ್ ಮತ್ತು ಕೆಲಸಗಾರರ ತಂಡ ಹಲ್ಲೆ ನಡೆಸಿದ್ದಾರೆ. ಯುವಕನ ಬಾಯಿಯಿಂದ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದು, ಹಲ್ಲೆ ನಡೆಸಿದ ಅಂಗಡಿ ಮಾಲೀಕ ಮಲಿಕ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಯಲ್ಲಿ ಅಂತ್ಯವಾದ ಜಗಳ
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಕೊನೆಗೆ ಆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಸಂಭವಿಸಿದೆ. ಶ್ರೀರಾಂಪುರ ನಿವಾಸಿಯಾದ ಆನಂದ್ ಅದೇ ಏರಿಯಾದಲ್ಲಿ ಟೈಲರಿಂಗ್ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಕೆಲ ತಿಂಗಳಿಂದ ಆನಂದ್ ಮನೆಗೆ ಹೋಗದೆ ಬೆಳಗಾದರೆ ಬಾರ್, ಕತ್ತಲಾದರೆ ಸ್ನೇಹಿತರ ರೂಮ್​ನಲ್ಲಿ ಠಿಕಾಣಿ ಹಾಕುತ್ತಿದ್ದನಂತೆ.

ನಿನ್ನೆಯೂ ಕೂಡ ಎಂದಿನಂತೆ ಶ್ರೀರಾಂಪುರದಲ್ಲಿನ ಅನಿಲ್ ಬಾರ್ಗೆ ತೆರಳಿದ್ದಾನೆ. ಇದೇ ವೇಳೆ ಮೀನು ವ್ಯಾಪಾರಿ ಲೋಹಿತ್ ಅನ್ನೋನು ಕೂಡ ಬಾರ್​ಗೆ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಲೋಹಿತ್, ಆನಂದ್ ಮೇಲೆ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ

ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಮೇಲೆ ಚಿಕ್ಕಮಗಳೂರಿನಲ್ಲಿ ಹಲ್ಲೆ: ವ್ಯಾಪಕ ಖಂಡನೆ

ಕೊವಿಡ್ ಸಮಯದಲ್ಲಿ ಬಾಲ್ಯವಿವಾಹ ಹೆಚ್ಚಾಗಿದೆ: ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್

(Egg rice shop owner attack on young man reason of not pay the money in Bagalkot)

Web contact

TV9 Kannada

Read More
Follow Us