ನಕಲಿ ಗೊಬ್ಬರ ತಯಾರಿಕೆ ಆರೋಪ, ಪ್ರೀತಮ್ ಇಂಡಸ್ಟ್ರೀಸ್ ಸೀಜ್

ಬಾಗಲಕೋಟೆ: ನಕಲಿ ಗೊಬ್ಬರ ತಯಾರಿಸುತ್ತಿರುವ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು ಬಾಗಲಕೋಟೆ ನವನಗರದ ಕೈಗಾರಿಕಾ ವಲಯದಲ್ಲಿರುವ ಪ್ರೀತಮ್ ಇಂಡಸ್ಟ್ರೀಸ್ ಸೀಜ್ ಮಾಡಿದ್ದಾರೆ. ಮಾಹಿತಿ ಆಧರಿಸಿ ಕೃಷಿ, ಕಂದಾಯ, ಪೊಲೀಸ್ ಅಧಿಕಾರಿಗಳು ಪ್ರೀತಮ್ ಇಂಡಸ್ಟ್ರೀಸ್ ಮೇಲೆ ಜಂಟಿ ದಾಳಿ ನಡೆಸಿದ್ರು. ಇಂಡಸ್ಟ್ರೀಜ್​ಗೆ ಹೋದಾಗ ಸಂಬಂಧಪಟ್ಟವರಿಗೆ ಕರೆ ಮಾಡಿದ್ರು ಸ್ಪಂದಿಸಿಲ್ಲ. ಹೀಗಾಗಿ ಗೇಟ್ ಮತ್ತು ಕೀಲಿ ಮುರಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಉಪ್ಪಿನ ರೀತಿ ಕಾಣುವ ಬಿಳಿ ವಸ್ತು ಪತ್ತೆಯಾಗಿದೆ. ಹಾಗೂ ಅಲ್ಲಿ 400ಕ್ಕೂ ಅಧಿಕ ಬ್ಯಾಗ್​​ಗಳು, […]

ನಕಲಿ ಗೊಬ್ಬರ ತಯಾರಿಕೆ ಆರೋಪ, ಪ್ರೀತಮ್ ಇಂಡಸ್ಟ್ರೀಸ್ ಸೀಜ್
ಸಾಧು ಶ್ರೀನಾಥ್​

Updated on: May 14, 2020 | 2:08 PM

ಬಾಗಲಕೋಟೆ: ನಕಲಿ ಗೊಬ್ಬರ ತಯಾರಿಸುತ್ತಿರುವ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು ಬಾಗಲಕೋಟೆ ನವನಗರದ ಕೈಗಾರಿಕಾ ವಲಯದಲ್ಲಿರುವ ಪ್ರೀತಮ್ ಇಂಡಸ್ಟ್ರೀಸ್ ಸೀಜ್ ಮಾಡಿದ್ದಾರೆ.

ಮಾಹಿತಿ ಆಧರಿಸಿ ಕೃಷಿ, ಕಂದಾಯ, ಪೊಲೀಸ್ ಅಧಿಕಾರಿಗಳು ಪ್ರೀತಮ್ ಇಂಡಸ್ಟ್ರೀಸ್ ಮೇಲೆ ಜಂಟಿ ದಾಳಿ ನಡೆಸಿದ್ರು. ಇಂಡಸ್ಟ್ರೀಜ್​ಗೆ ಹೋದಾಗ ಸಂಬಂಧಪಟ್ಟವರಿಗೆ ಕರೆ ಮಾಡಿದ್ರು ಸ್ಪಂದಿಸಿಲ್ಲ. ಹೀಗಾಗಿ ಗೇಟ್ ಮತ್ತು ಕೀಲಿ ಮುರಿದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಉಪ್ಪಿನ ರೀತಿ ಕಾಣುವ ಬಿಳಿ ವಸ್ತು ಪತ್ತೆಯಾಗಿದೆ. ಹಾಗೂ ಅಲ್ಲಿ 400ಕ್ಕೂ ಅಧಿಕ ಬ್ಯಾಗ್​​ಗಳು, ಬೇರೆ ಬೇರೆ ಕಂಪನಿಗಳ ಗೊಬ್ಬರದ ಪ್ಯಾಕೆಟ್​ಗಳು ಸಿಕ್ಕಿವೆ. ಗೊಬ್ಬರದ ಗುಣಮಟ್ಟ ಪರೀಕ್ಷಿಸಲು ಲ್ಯಾಬ್​ಗೆ ರವಾನೆ ಮಾಡಲಾಗಿದೆ. ಲ್ಯಾಬ್​ನ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


Published On - 1:49 pm, Thu, 14 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us