ಬೆಂಗಳೂರಿನಲ್ಲಿ ಖಾಸಗಿ ವಾಹಿನಿ ಕ್ಯಾಮರಮ್ಯಾನ್ ‌ಮೇಲೆ ಹಲ್ಲೆ

ಖಾಸಗಿ ವಾಹಿನಿ ಕ್ಯಾಮರಮ್ಯಾನ್ ಮೇಲೆ ಪ್ರೀಡಂನ ಪಾರ್ಕ್​​ನ ಕುವೆಂಪು ಹೋರಾಟ ಸಮಿತಿ ಪ್ರತಿಭಟನೆ ವೇಳೆ ರಣದೀರ ಪಡೆ ರಾಜ್ಯಾಧ್ಯಕ್ಷ ಹರೀಶ್ ಬೈರಪ್ಪ ಹಲ್ಲೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ವಾಹಿನಿ ಕ್ಯಾಮರಮ್ಯಾನ್ ‌ಮೇಲೆ ಹಲ್ಲೆ
ಖಾಸಗಿ ವಾಹಿನಿ ಕ್ಯಾಮರಾಮೆನ್​​ ಮೇಲೆ ಹಲ್ಲೆ
Edited By:

Updated on: Jun 18, 2022 | 4:06 PM

ಬೆಂಗಳೂರು: ಖಾಸಗಿ ವಾಹಿನಿ (Privet Media) ಕ್ಯಾಮರಮ್ಯಾನ್ (Cameraman) ‌ಮೇಲೆ ಪ್ರೀಡಂನ ಪಾರ್ಕ್​​ನ (Freedom Park) ಕುವೆಂಪು (Kuvempu) ಹೋರಾಟ ಸಮಿತಿ ಪ್ರತಿಭಟನೆ ವೇಳೆ ರಣದೀರ ಪಡೆ ರಾಜ್ಯಾಧ್ಯಕ್ಷ ಹರೀಶ್ ಬೈರಪ್ಪ ಹಲ್ಲೆ (Sliced) ಮಾಡಿದ್ದಾರೆ. ನಿಂದು ಆರ್ ಎಸ್ ಎಸ್ ಚಾನೆಲ್, ಯಾಕೆ ಇಲ್ಲಿ ಬಂದಿದ್ದಿಯಾ ಎಂದು ಹಲ್ಲೆ ಮಾಡಿದ್ದಾರೆ. ಕ್ಯಾಮರಮ್ಯಾನ್​​ಗೆ ಹಿಗ್ಗಾಮುಗ್ಗಾ ಥಳಿಸಿ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಪ್ರೀಡಂ ಪಾರ್ಕ್ ರಸ್ತೆ ತುಂಬೆಲ್ಲ ಅಟ್ಟಾಡಿಸಿ ಹಲ್ಲೆ ಮಾಡಿದ್ದು, ಈ ವೇಳೆ ಪೊಲೀಸರು ತಡೆಯುವ ಪ್ರಯತ್ನ ಮಾಡಿದರೂ ಲೆಕ್ಕಿಸದೇ ಹಲ್ಲೆ ಮಾಡಿದ್ದಾರೆ. ಹರೀಶ್ ಬೈರಪ್ಪ ಮತ್ತು ಅವರ ಸ್ನೇಹಿತರು ಆರ್ ಎಸ್ ಎಸ್ ಗೆ ಧಿಕ್ಕಾರ ಎಂದು ಕೂಗಿ ಹಲ್ಲೆ ನಡೆಸಿದ್ದಾರೆ.

 

 

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:05 pm, Sat, 18 June 22