ಬೆಂಗಳೂರು: ವಿಧಾನಸೌಧದ ಎದುರುಗಡೆ ಪೂರ್ವ ದಿಕ್ಕಿನ ಕಡೆಗೆ ಇರುವ ಅಂಬೇಡ್ಕರ್ ಪ್ರತಿಮೆ ಮುಂದೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಅಂಬೇಡ್ಕರ್ ಪರಿನಿರ್ವಾಣದ ಕಾರ್ಯಕ್ರಮದಲ್ಲಿ ಒಳಮೀಸಲಾತಿ ನೀಡುವಂತೆ ಸಿಎಂ ಮುಂದೆ ಜಂಬೂದ್ವೀಪ ಜನಸೇವೆ ಸಂಘಟನೆಯವರು ಪ್ರತಿಭಟನೆ ಮಾಡಿದ್ದಾರೆ. ಪಿಟಿಸಿಎಲ್(PTCL) ಕಾಯ್ದೆ ತಿದ್ದುಪಡಿ ಮಾಡುವಂತೆ ಹಾಗೂ ಎಜಿ ಸದಾಶಿವ ವರದಿ ಅನ್ವಯ ಮಾದಿಗ ಸಮಾಜಕ್ಕೆ 6 ಶೇ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹ ಮಾಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ