ಮೆಜೆಸ್ಟಿಕ್ KSRTC ಬಸ್​ ನಿಲ್ದಾಣದಲ್ಲಿ ಅಗ್ನಿ ಅವಘಡ, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಮೆಜೆಸ್ಟಿಕ್​ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದ ಟರ್ಮಿನಲ್-1ರ ಪವರ್ ರೂಮ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಮೆಜೆಸ್ಟಿಕ್ KSRTC ಬಸ್​ ನಿಲ್ದಾಣದಲ್ಲಿ ಅಗ್ನಿ ಅವಘಡ, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಕೆಂಪೇಗೌಡ ಬಸ್​ ನಿಲ್ದಾಣ ಬೆಂಗಳೂರು (ಸಂಗ್ರಹ ಚಿತ್ರ)
Edited By:

Updated on: Dec 06, 2022 | 7:31 PM

ಬೆಂಗಳೂರು: ರಾಜಧಾನಿ ಬೆಂಗಳೂರು ಮೆಜೆಸ್ಟಿಕ್​ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದ (Majestic KSRTC bus stand) ಟರ್ಮಿನಲ್-1ರ (Terminal-1) ಪವರ್ ರೂಮ್​​ನಲ್ಲಿ ಇಂದು (ಡಿ.6) ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಟರ್ಮಿನಲ್-1ರ ಪವರ್ ರೂಮ್​​ನಲ್ಲಿ ಶಾರ್ಕ್​​ ಸರ್ಕ್ಯೂಟ್​ನಿಂದ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡ ತಕ್ಷಣ ಸಿಬ್ಬಂದಿ, ಪ್ರಯಾಣಿಕರು ಮತ್ತು ವ್ಯಾಪಾರಸ್ಥರನ್ನು ಬೇರೆಡೆಗೆ ಕಳುಹಿಸಿದ್ದಾರೆ. ಸದ್ಯ ಸಾರಿಗೆ ಸಿಬ್ಬಂದಿಯಿಂದಲೇ ಬೆಂಕಿ ನಂದಿಸುವ ಗ್ಯಾಸ್ (fire extinguisher gas) ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Tue, 6 December 22