
ಬೆಂಗಳೂರು, ಮೇ.30: ಸಿಬಿಐ(CBI) ಅಧಿಕಾರಿಗಳು ಎಂದು ಹೇಳಿ ರಾತ್ರಿ ನಗರದ ಸೋಲದೇವನಹಳ್ಳಿ(Soladevanahalli ) ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ಗೆ ನುಗ್ಗಿ ದರೋಡೆ ಮಾಡಿದ್ದರು. ಕೃತ್ಯ ನಡೆದ ಹನ್ನೆರಡು ಗಂಟೆ ಒಳಗಡೆ ಆರೋಪಿಗಳನ್ನ ಚೇಸ್ ಮಾಡಿ ಪೊಲೀಸರು ಹಿಡಿದಿದ್ದಾರೆ. ನಿನ್ನೆ(ಮೇ.29) ರಾತ್ರಿ ಸೆಕ್ಯೂರಿಟಿಗೆ ಸಿಬಿಐ ಪೊಲೀಸರು ಎಂದು ಹೇಳಿ ಅಪಾರ್ಟ್ಮೆಂಟ್ಗೆ ನಾಲ್ವರು ನುಗ್ಗಿದ್ದಾರೆ. ನಂತರ ಆಚಾರ್ಯ ಕಾಲೇಜು ವಿದ್ಯಾರ್ಥಿಗಳು ವಾಸ ಮಾಡುವ ಫ್ಲಾಟ್ಗೆ ಹೋಗಿ, ಫ್ಲಾಟ್ನಲ್ಲಿದ್ದವರಿಗೆ ಲಾಠಿಯಿಂದ ಹಲ್ಲೆ ನಡೆಸಿ, ಲಾಕಪ್ ಮತ್ತು ಗನ್ ತೋರಿಸಿ ಗಾಂಜಾ ಮಾರಾಟ ಮಾಡ್ತಿದ್ದಿರಾ ಎಂದು ಹೇಳಿ ಬೆದರಿಸಿದ್ದಾರೆ.
ಹೌದು, ಫ್ಲಾಟ್ನಲ್ಲಿದ್ದ ಯುವಕರಿಗೆ ಹಲ್ಲೆ ಮಾಡಿ ತೊಂಬತ್ತು ಸಾವಿರ ಹಣ ದೋಚಿದ್ದಾರೆ. ಕೂಡಲೇ ಘಟನೆ ಬಳಿಕ ಹಲ್ಲೆಗೆ ಒಳಗಾದವರು ಸೋಲದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಕಾರ್ಯಚರಣೆ ನಡೆಸಿದ ಪೊಲೀಸರಿಗೆ ತಮಿಳುನಾಡಿನ ಕಡೆ ಆರೋಪಿಗಳು ಎಸ್ಕೇಪ್ ಆಗ್ತಿದ್ದ ಮಾಹಿತಿ ದೊರೆಯುತ್ತದೆ. ಈ ಹಿನ್ನಲೆ ಚೇಸ್ ಮಾಡಿ ತಮಿಳುನಾಡಿನ ಧರ್ಮಪುರಿಯಲ್ಲಿ ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ.
ಇದನ್ನೂ ಓದಿ:ಬೀದರ್: ಸಿನಿಮೀಯ ರೀತಿಯಲ್ಲಿ ಎಟಿಎಂ ದರೋಡೆ ಮಾಡಿದ್ದ ಗ್ಯಾಂಗ್ ಅಂದರ್; ಮೂವರು ಅರೆಸ್ಟ್, ನಾಲ್ವರು ಪರಾರಿ
ಒಂದು ಐ 20 ಮತ್ತು ಮಹೇಂದ್ರ XUV 300 ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದ ಟೀಮ್, ಬಂಧಿತ ಆರೋಪಿಗಳಿಂದ CBIT ಹೆಸರಿನ ನಾಲ್ಕು ಐಡಿ ಕಾರ್ಡ್, ಒಂದು ಏರ್ ಗನ್ , ಏರ್ ಗನ್ ಗೆ ಬಳಸುವ ನೂರಕ್ಕು ಹೆಚ್ಚು ಬುಲೆಟ್ಸ್, ಪೊಲೀಸರು ಬಳಸುವ ಹ್ಯಾಂಡ್ ಕಾಫ್, ಲಾಠಿ, ಹಿರಿಯ ಪೊಲೀಸ್ ಅಧಿಕಾರಿಗಳು ಬಳಸುವ ಪೊಲೀಸ್ ಬ್ಯಾಟನ್ನನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೇರಳ ಮೂಲದ ಪ್ರಮೋದ್, ಅನಂತ ಕೃಷ್ಣ, ದೀಪಲ್ ಮತ್ತು ಆದರ್ಶ್ ಎಂಬುವವರನ್ನು ಬಂಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ