ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ-ಐಶ್ವರ್ಯಾಗೌಡ ನಂಟಿನ ರಹಸ್ಯ ಬಯಲು ಮಾಡಿದ ಇಡಿ
ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ ನಿವಾಸದಲ್ಲಿ 2 ಕೋಟಿ 25 ಲಕ್ಷ ನಗದು ಪತ್ತೆಯಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಶಾಸಕ ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಾ ಗೌಡ ನಂಟಿನ ರಹಸ್ಯ ಬಯಲಾಗಿದ್ದು, ಇಡಿ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ವಿಚಾರ ಬಹಿರಂಗವಾಗಿದೆ.
- Prajwal Kumar NY
- Updated on: Apr 28, 2025
- 6:40 pm
ಚಿನ್ನ ವಂಚನೆ ಕೇಸ್: ಐಶ್ವರ್ಯ ಗೌಡ ಮತ್ತು ಕಾಂಗ್ರೆಸ್ ಮುಂಖಡನ ವ್ಯವಹಾರ ಬಯಲಿಗೆ
ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಚಿನ್ನದ ವಂಚನೆ ನಡೆಸಿದ ಆರೋಪದ ಮೇಲೆ ಐಶ್ವರ್ಯ ಗೌಡರನ್ನು ಇಡಿ ಬಂಧಿಸಿದೆ. ಎರಡು ದಿನಗಳ ಹಿಂದೆ ಇಡಿ ಅಧಿಕಾರಿಗಳು ಐಶ್ವರ್ಯ ಗೌಡ ಅವರ ಎರಡು ಮನೆ ಸೇರಿದಂತೆ 14 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಇಡಿ ಅಧಿಕಾರಿಗಳು ತನಿಖೆ ಮುಂದುವರೆದ್ದು, ಸ್ಪೋಟಕ ಅಂಶಗಳು ಬಹಿರಂಗಗೊಂಡಿವೆ.
- Prajwal Kumar NY
- Updated on: Apr 27, 2025
- 2:55 pm
ಓಂ ಪ್ರಕಾಶ್ ಕೊಲೆ ಪ್ರಕರಣದ ದಾಖಲೆ ಸಿಸಿಬಿಗೆ ಹಸ್ತಾಂತರ: ಕೃತಿ ವಿಚಾರಣೆಗೆ ಒಳಪಡಿಸಲು ಫಿಟ್ ಎಂದ ನಿಮ್ಹಾನ್ಸ್ ವೈದ್ಯರು
ಮಾಜಿ ಡಿಜಿ ಹಾಗೂ ಐಜಿಪಿ ಒಂ ಪ್ರಕಾಶ್ ಕೊಲೆ ಕೇಸ್ನಲ್ಲಿ ಅವರ ಪತ್ನಿ ಪಲ್ಲವಿಯ ಬಂಧನವಾಗಿದೆ. ಮಗಳು ಕೃತಿಯನ್ನು ನಿಮ್ಹಾನ್ಸ್ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗ ಕೃತಿ ತನಿಖೆಗೆ ಫಿಟ್ ಎಂದು ವೈದ್ಯಕೀಯ ವರದಿ ತಿಳಿಸಿದೆ. ಮತ್ತೊಂದೆಡೆ, ಪ್ರಕರಣದ ದಾಖಲೆಗಳನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ಚುರುಕುಪಡೆಯಲಿದೆ.
- Prajwal Kumar NY
- Updated on: Apr 24, 2025
- 7:46 am
ಕನ್ನಡಿಗನಿಗೆ ಹಿಗ್ಗಾಮುಗ್ಗಾ ಥಳಿತ: ಸಿಸಿಟಿವಿಯಲ್ಲಿ ಬಯಲಾಯ್ತು ವಿಂಗ್ ಕಮಾಂಡರ್ ನವರಂಗಿ ಆಟ
ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಬೋಸ್ ಮತ್ತು ಟೆಕ್ಕಿ ವಿಕಾಸ್ ಕುಮಾರ್ ನಡುವೆ ನಡೆದ ಹಲ್ಲೆಯ ಪ್ರಕರಣಕ್ಕೆ ಸಿಸಿಟಿವಿ ದೃಶ್ಯಗಳು ಟ್ವಿಸ್ಟ್ ನೀಡಿವೆ. ಆರಂಭದಲ್ಲಿ ಅಧಿಕಾರಿ ಮೇಲೆ ಹಲ್ಲೆ ಎಂದು ದೂರು ದಾಖಲಾಗಿತ್ತು. ಆದರೆ, ಸಿಸಿಟಿವಿ ಫೂಟೇಜ್ ಅಧಿಕಾರಿಯೇ ಟೆಕ್ಕಿ ಮೇಲೆ ಹಲ್ಲೆ ಮಾಡಿರುವುದನ್ನು ತೋರಿಸಿದೆ. ಭಾಷಾ ವಿವಾದ ಎಂದು ಹೇಳಲಾಗುತ್ತಿದ್ದರೂ, ಸತ್ಯಾಂಶ ಬೇರೆ ಇದೆ ಎಂದು ಸಿಸಿಟಿವಿ ಬಹಿರಂಗಪಡಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Prajwal Kumar NY
- Updated on: Apr 21, 2025
- 8:44 pm
ಬೆಂಗಳೂರಿನಲ್ಲಿ ಹತೋಟಿಗೆ ಬಾರದ ರೋಡ್ರೇಜ್: ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದನೆ
ಬೆಂಗಳೂರಿನಲ್ಲಿರೋಡ್ರೇಜ್ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಬದಲಿಗೆ ದಿನೇ ದಿನೇ ರೋಡ್ರೇಂಜ್ ಕೇಸ್ಗಳು ಹೆಚ್ಚುತ್ತಿವೆ. ಅದರಂತೆ 2 ದಿನಗಳ ಹಿಂದೆ ಜೆ.ಪಿ.ನಗರದ 8ನೇ ಹಂತದ ರಸ್ತೆಯಲ್ಲಿ ಆಟೋ ಚಾಲಕನೋರ್ವ ಕಾರನ್ನು ಅಡ್ಡಗಟ್ಟಿ ಅವಾಜ್ ಹಾಕಿದ್ದಾನೆ. ಅಲ್ಲದೇ ಮಧ್ಯದ ಬೆರಳು ತೋರಿಸಿ ನಿಂದಿಸಿದ್ದಾನೆ. ಹಾರ್ನ್ ಮಾಡಿ ಕಿರಿಕಿರಿ ಉಂಟು ಮಾಡಿದ ಆಟೋ ಚಾಲಕನಿಗೆ ಕಾರು ಚಾಲಕ ಪ್ರಶ್ನಿಸಿದ್ದಾನೆ. ಇಷ್ಟಕ್ಕೆ ಆಟೋ ಚಾಲಕ ಕಾರು ಅಡ್ಡಗಟ್ಟಿ ಕಿರಿಕ್ ಮಾಡಿದ್ದಾನೆ.
- Prajwal Kumar NY
- Updated on: Apr 21, 2025
- 5:52 pm
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ: ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಬಾಲಕನೋರ್ವ ಬುಲೆಟ್ ಬೈಕ್ ಚಾಲನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ಕತ್ತರಿಗುಪ್ಪೆ ರಸ್ತೆಯಲ್ಲಿ ಪುಟ್ಟ ಬಾಲಕ ಬಾಲಕ ರಾಯಲ್ ಎನ್ಫೀಲ್ಡ್ ಬೈಕ್ ಓಡಿಸಿದ್ದು, ಸ್ಥಳೀಯರ ಮೊಬೈಲ್ನಲ್ಲಿ ವಿಡಿಯೋ ಸೆರೆಯಾಗಿದೆ. ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕನಿಗೆ ರಾಯಲ್ ಎನ್ಫೀಲ್ಡ್ ಬೈಕ್ ಓಡಿಸಲು ಕೊಟ್ಟು ತಾನು ಹಿಂದೆ ಕುಳಿತುಕೊಂಡಿದ್ದು, ಸದ್ಯ ಈ ವಿಡಿಯೋವನ್ನು ಎಕ್ಸ್ ಟ್ವಿಟ್ಟರ್ನಲ್ಲಿ ಹಂಚಿಕೊಂಡು ಕ್ರಮಕ್ಕೆ ಪೊಲೀಸರಿಗೆ ಮನವಿ ಮಾಡಲಾಗಿದೆ.
- Prajwal Kumar NY
- Updated on: Apr 21, 2025
- 4:53 pm
ಕೆಲಸ ಮಾಡುತ್ತಿದ್ದ ಕಟ್ಟಡದಲ್ಲೇ ಪತಿ-ಪತ್ನಿ ಅನುಮಾನಸ್ಪದ ಸಾವು: ದೂರದ ಊರಿನಿಂದ ಬಂದವರು ಹೆಣವಾದರು
ದೂರದ ಊರಿನಿಂದ ಬಂದಿದ್ದ ದಂಪತಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬದಕು ಕಟ್ಟಿಕೊಂಡಿದ್ದರು. ಮಾಡುವ ಕೆಲಸದಿಂದ ಕುಟುಂಬದ ನಿರ್ವಾಹಣೆಯ ಜೊತೆಗೆ ಜೀವನ ಕೂಡ ಹಸನಾಗಿತ್ತು. ವರ್ಷಕ್ಕೊಮ್ಮೆ ಬರುವ ಹಬ್ಬವನ್ನ ಕಟುಂಬ ಸಮೇತ ಆಚರಣೆ ಮಾಡಿ ಹುಟ್ಟೂರಿನಿಂದ ನಗರಕ್ಕೆ ವಾಪಸ್ ಆಗಿದ್ದರು. ಆದ್ರೆ ಆ ಹಬ್ಬದ ಖುಷಿ ಮಾಸುವ ಮೊದಲೇ ದಂಪತಿ ಹೆಣವಾಗಿದ್ದಾರೆ. ಈ ದಂಪತಿ ಸಾವಿನ ಹಿಂದೆ ಹಲವು ರೀತಿಯ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.
- Prajwal Kumar NY
- Updated on: Apr 17, 2025
- 6:56 pm
ಮತ್ತೆ ಅರೆಸ್ಟ್ ಆದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್; ಕಾರಣ ಏನು?
ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು, ಆದರೆ ಈಗ ಕೋರ್ಟ್ಗೆ ಹಾಜರಾಗದ ಕಾರಣ ಅವರ ಬಂಧನವಾಗಿದೆ. ಸಹ ಸ್ಪರ್ಧಿ ವಿನಯ್ ಗೌಡನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
- Prajwal Kumar NY
- Updated on: Apr 16, 2025
- 12:06 pm
‘ಬುರ್ಖಾ ತೆಗೆ, ನಿನ್ನ ಹೆಸರೇನು ಹೇಳು’: ಬೆಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ಕೃತ್ಯ
ಬೆಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ನಡೆದಿದೆ. ಹಿಂದೂ ಯುವಕನ ಜತೆಗಿದ್ದ ಮುಸ್ಲಿಂ ಯುವತಿಯ ಬಳಿ ಬಂದ ಗುಂಪೊಂದು ಬುರ್ಖಾ ತೆಗೆಯುವಂತೆ ಹೇಳಿದ್ದಲ್ಲದೆ, ಬೆದರಿಕೆ ಹಾಕಿದ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ಬೆಂಗಳೂರಿನ ಯಾವ ಪ್ರದೇಶದಲ್ಲಿ ನಡೆದ ಘಟನೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
- Prajwal Kumar NY
- Updated on: Apr 15, 2025
- 12:05 pm
ಬೆಂಗಳೂರು: ಪರೀಕ್ಷೆ ಭಯ, 5ನೇ ಮಹಡಿಯಿಂದ ಜಿಗಿದು ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ
ಇತ್ತೀಚೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲಿ ಕರ್ನಾಟಕದಲ್ಲಿ ಒಟ್ಟು ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಪರೀಕ್ಷಾ ಭಯದಿಂದ ದಂತ ವೈದ್ಯ ವಿದ್ಯಾರ್ಥಿನಿ ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Prajwal Kumar NY
- Updated on: Apr 14, 2025
- 4:03 pm
ಸರ್ಕಾರಿ ಇಮೇಲ್ ಐಡಿ ಬಳಸಿ, ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್ಗೆ 1 ಕೋಟಿ ರೂ. ವಂಚನೆ
ಬೆಂಗಳೂರು ಪೊಲೀಸರು ನಕಲಿ ನ್ಯಾಯಾಲಯದ ಆದೇಶಗಳನ್ನು ಬಳಸಿ ಬ್ಯಾಂಕ್ಗಳನ್ನು ವಂಚಿಸಿದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು 18 ನಕಲಿ ಆದೇಶಗಳ ಮೂಲಕ 1.23 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ. ಪೊಲೀಸರು ತನಿಖೆಯಲ್ಲಿ 62 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸರ್ಕಾರಿ ಇಮೇಲ್ ಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
- Prajwal Kumar NY
- Updated on: Apr 11, 2025
- 7:33 pm
‘ನನಗೆ ಬರೋಕಾಗಲ್ಲ, ವಿನಾಯಿತಿ ಕೊಡಿ’; ಬೆನ್ನು ನೋವಿನ ಕಾರಣ ಹೇಳಿ ಕೋರ್ಟ್ಗೆ ಗೈರಾದ ದರ್ಶನ್
ರೇಣುಕಾ ಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳು ಏಪ್ರಿಲ್ 8ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಹಾಜರಾಗಿದ್ದಾರೆ. ಆದರೆ ನಟ ದರ್ಶನ್ ಬೆನ್ನು ನೋವಿನ ಕಾರಣ ಗೈರಾಗಿದ್ದಾರೆ. ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಅವರು 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
- Prajwal Kumar NY
- Updated on: Apr 8, 2025
- 11:37 am