ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಇತರ 13 ಆರೋಪಿಗಳ ಜೊತೆ ಹೊಸದಾಗಿ ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ಕು ಜನರ ಹೆಸರಗಳು ಕೇಳಿಬಂದಿವೆ. ಇವರೆಲ್ಲ ಸದ್ಯಕ್ಕೆ ನಾಪತ್ತೆ ಆಗಿದ್ದಾರೆ. ತಲೆ ತಪ್ಪಿಸಿಕೊಂಡಿರುವ ಈ 4 ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ಈ ಆರೋಪಿಗಳು ಸಿಕ್ಕ ನಂತರ ಇನ್ನಷ್ಟು ಹೊಸ ಮಾಹಿತಿಗಳು ಹೊರಬರಲಿದೆ.