ಮತ್ತದೇ ದುರ್ಘಟನೆ.. ಕಬ್ಬಿಣದ ಏಣಿಗೆ ವಿದ್ಯುತ್ ತಗುಲಿ ಕಾರ್ಮಿಕ ಸಾವು

ಕೊಡಗು: ಜಿಲ್ಲೆಯಲ್ಲಿ ಮತ್ತೊಂದು ಅಂತಹುದೇ ದುರ್ಘಟನೆ ನಡೆದಿದೆ. ಎಸ್ಟೇಟ್​ ತೋಟಗಳಲ್ಲಿ ಕಾರ್ಮಿಕರು ಏಣಿ ಹತ್ತಿ ಕೆಲಸ ಮಾಡುವ ಸಂದರ್ಭಗಳು ಹೆಚ್ಚು. ದುರ್ದೈವವೆಂದ್ರೆ ಅಂತಹ ಸಂದರ್ಭಗಳಲ್ಲಿ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಏಣಿಗೆ ತಗುಲಿ ವಿದ್ಯುದಾಘಾತಗಳು ಸಂಭವಿಸುತ್ತಿರುತ್ತವೆ. ಇದೀಗ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿಯೂ ಸಹ ಇಂತಹುದೇ ಘಟನೆ ನಡೆದಿದೆ. ಕಬ್ಬಿಣದ ಏಣಿಗೆ ವಿದ್ಯುತ್ ತಗುಲಿ ಬರಡಿ ಗ್ರಾಮದ ರಾಜನ್(45) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಅತ್ತಿಮಂಗಲ ಎಸ್ಟೇಟ್​ನಲ್ಲಿ ತೋಟದ ಕೆಲಸ ಮಾಡುವ ಸಂದರ್ಭ ಏಣಿಗೆ 11 ಕೆ.ವಿ ವಿದ್ಯುತ್ ಸ್ಪರ್ಶವಾಗಿದೆ. […]

ಮತ್ತದೇ ದುರ್ಘಟನೆ.. ಕಬ್ಬಿಣದ ಏಣಿಗೆ ವಿದ್ಯುತ್ ತಗುಲಿ ಕಾರ್ಮಿಕ ಸಾವು
ಸಾಧು ಶ್ರೀನಾಥ್​

Updated on: Nov 20, 2019 | 2:14 PM

ಕೊಡಗು: ಜಿಲ್ಲೆಯಲ್ಲಿ ಮತ್ತೊಂದು ಅಂತಹುದೇ ದುರ್ಘಟನೆ ನಡೆದಿದೆ. ಎಸ್ಟೇಟ್​ ತೋಟಗಳಲ್ಲಿ ಕಾರ್ಮಿಕರು ಏಣಿ ಹತ್ತಿ ಕೆಲಸ ಮಾಡುವ ಸಂದರ್ಭಗಳು ಹೆಚ್ಚು. ದುರ್ದೈವವೆಂದ್ರೆ ಅಂತಹ ಸಂದರ್ಭಗಳಲ್ಲಿ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಏಣಿಗೆ ತಗುಲಿ ವಿದ್ಯುದಾಘಾತಗಳು ಸಂಭವಿಸುತ್ತಿರುತ್ತವೆ.

ಇದೀಗ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿಯೂ ಸಹ ಇಂತಹುದೇ ಘಟನೆ ನಡೆದಿದೆ. ಕಬ್ಬಿಣದ ಏಣಿಗೆ ವಿದ್ಯುತ್ ತಗುಲಿ ಬರಡಿ ಗ್ರಾಮದ ರಾಜನ್(45) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ.

ಅತ್ತಿಮಂಗಲ ಎಸ್ಟೇಟ್​ನಲ್ಲಿ ತೋಟದ ಕೆಲಸ ಮಾಡುವ ಸಂದರ್ಭ ಏಣಿಗೆ 11 ಕೆ.ವಿ ವಿದ್ಯುತ್ ಸ್ಪರ್ಶವಾಗಿದೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 2:13 pm, Wed, 20 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us