ಸ್ಮಶಾನ ಕಾವಲುಗಾರನಿಗೂ ಬೆನ್ನುಹತ್ತಿದ ಕೊರೊನಾ ಪೆಡಂಭೂತ

ಹುಬ್ಬಳ್ಳಿ: ಸ್ಮಶಾನ ಕಾಯುವವನನ್ನೂ ಬಿಟ್ಟಿಲ್ಲ ಕೊರೊನಾ ಪೆಡಂಭೂತ. ಇಲ್ಲಿನ ಸ್ಮಶಾನ ಕಾವಲುಗಾರನಿಗೆ ಕೊರೊನಾ ತಗುಲಿದೆ. ಸೋಂಕು ದೃಢಪಟ್ಟ ವ್ಯಕ್ತಿಯ ಹಿನ್ನೆಲೆ ನೋಡಿದಾಗ ಅದು ಹೇಗೆ ಸಾಧ್ಯ ಎಂದು ಬೆಚ್ಚಿಬೀಳುವಂತಿದೆ. 63 ವರ್ಷದ 363ನೇ ರೋಗಿಯೇ ಈ ಸ್ಮಶಾನ ಕಾಯುವಾತ. ಸೋಂಕಿತ 236ನೇ ವ್ಯಕ್ತಿಯಿಂದ 363ನೇ ರೋಗಿಗೆ ಸೋಂಕು ತಗುಲಿದೆ. 236ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈತನಿಗೆ ಹರಡಿದೆ. ಸೋಂಕಿತ 236ನೇ ವ್ಯಕ್ತಿ ಮಾರ್ಚ್ 27ರಂದು ಹುಬ್ಬಳ್ಳಿಯಲ್ಲಿ ಆಹಾರದ ಕಿಟ್ ಹಂಚಿದ್ದ. ಆತನ ಜೊತೆಗೂಡಿ ಕಿಟ್​ ಹಂಚಿದ್ದ ಈ […]

ಸ್ಮಶಾನ ಕಾವಲುಗಾರನಿಗೂ ಬೆನ್ನುಹತ್ತಿದ ಕೊರೊನಾ ಪೆಡಂಭೂತ
ಸಾಧು ಶ್ರೀನಾಥ್​

Updated on: Apr 18, 2020 | 2:10 PM

ಹುಬ್ಬಳ್ಳಿ: ಸ್ಮಶಾನ ಕಾಯುವವನನ್ನೂ ಬಿಟ್ಟಿಲ್ಲ ಕೊರೊನಾ ಪೆಡಂಭೂತ. ಇಲ್ಲಿನ ಸ್ಮಶಾನ ಕಾವಲುಗಾರನಿಗೆ ಕೊರೊನಾ ತಗುಲಿದೆ. ಸೋಂಕು ದೃಢಪಟ್ಟ ವ್ಯಕ್ತಿಯ ಹಿನ್ನೆಲೆ ನೋಡಿದಾಗ ಅದು ಹೇಗೆ ಸಾಧ್ಯ ಎಂದು ಬೆಚ್ಚಿಬೀಳುವಂತಿದೆ. 63 ವರ್ಷದ 363ನೇ ರೋಗಿಯೇ ಈ ಸ್ಮಶಾನ ಕಾಯುವಾತ.

ಸೋಂಕಿತ 236ನೇ ವ್ಯಕ್ತಿಯಿಂದ 363ನೇ ರೋಗಿಗೆ ಸೋಂಕು ತಗುಲಿದೆ. 236ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈತನಿಗೆ ಹರಡಿದೆ. ಸೋಂಕಿತ 236ನೇ ವ್ಯಕ್ತಿ ಮಾರ್ಚ್ 27ರಂದು ಹುಬ್ಬಳ್ಳಿಯಲ್ಲಿ ಆಹಾರದ ಕಿಟ್ ಹಂಚಿದ್ದ. ಆತನ ಜೊತೆಗೂಡಿ ಕಿಟ್​ ಹಂಚಿದ್ದ ಈ 63 ವರ್ಷದ ವ್ಯಕ್ತಿ.

ಇದೀಗ, 363ನೇ ಸೋಂಕಿತ ವೃದ್ಧ ಸ್ಮಶಾನ ಕಾವಲುಗಾರನ ಜೊತೆಗೆ ಕೆಲಸಕ್ಕಿದ್ದ ಇಬ್ಬರನ್ನೂ ಆರೋಗ್ಯ ಸಿಬ್ಬಂದಿ ಕಿಮ್ಸ್​ಗೆ ಕರೆದೊಯ್ದಿದ್ದಾರೆ. ಹಾಗಾದ್ರೆ, 263ನೇ ಸೋಂಕಿತ ವ್ಯಕ್ತಿಯಿಂದ ಕಿಟ್ ಪಡೆದ ಇತರರ ಗತಿಯೇನು? 263ನೇ ಸೋಂಕಿತನ ಸಂಪರ್ಕದಲ್ಲಿದ್ದವರು ಸ್ವಯಂಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.

Published On - 2:05 pm, Sat, 18 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us