Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶ್ವರಪ್ಪರ ಮಕ್ಕಳಾಟವೇ ಬಿಜೆಪಿಯಲ್ಲಿ ಅಶಿಸ್ತಿಗೆ ಕಾರಣವಾಗಿದೆ, ವಲಸಿಗರಿಂದಲ್ಲ: ಬಿಸಿ ಪಾಟೀಲ್, ಮಾಜಿ ಶಾಸಕ

ಈಶ್ವರಪ್ಪರ ಮಕ್ಕಳಾಟವೇ ಬಿಜೆಪಿಯಲ್ಲಿ ಅಶಿಸ್ತಿಗೆ ಕಾರಣವಾಗಿದೆ, ವಲಸಿಗರಿಂದಲ್ಲ: ಬಿಸಿ ಪಾಟೀಲ್, ಮಾಜಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 22, 2023 | 2:58 PM

ವಲಸೆ ಬಂದ ಕಾಂಗ್ರೆಸ್ ಶಾಸಕರಿಂದಲೇ ಬಿಜೆಪಿಯಲ್ಲಿ ಅಶಿಸ್ತು ಉಂಟಾಗಿದೆ ಎಂದು ಎರಡೆರಡು ಬಾರಿ ಹೇಳಿರುವ ಈಶ್ವರಪ್ಪ ನಂತರ ತನಗೆ ಫೋನ್ ಮಾಡಿ, ಇಲ್ಲ ನಾನು ಹಾಗೆ ಹೇಳಿಲ್ಲ ಅನ್ನುತ್ತಾರೆ ಎಂದು ಪಾಟೀಲ್ ಹೇಳಿದರು.

ಹಾವೇರಿ: ಬಿಜೆಪಿಗೆ ವಲಸೆ ಹೋದ ಕಾಂಗ್ರೆಸ್ ನಾಯಕರು ಪಕ್ಷದ ವರಿಷ್ಠ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವಂತೆ ಎಸ್ ಟಿ ಸೋಮಶೇಖರ್ (ST Somashekhar), ಶಿವರಾಂ ಹೆಬ್ಬಾರ್ (Shivaram Hebbar) ತಮ್ಮ ಕೋಪವನ್ನು ಬಹಿರಂಗಗೊಳಿಸಿದ್ದಾರೆ. ಅವರಿಬ್ಬರು ಇಷ್ಟರಲ್ಲೇ ವಾಪಸ್ಸು ಕಾಂಗ್ರೆಸ್ ಗೆ ಹೋದರೆ ಆಶ್ವರ್ಯವಿಲ್ಲ. ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಶಾಸಕ ಬಿಸಿ ಪಾಟೀಲ್ (BC Patil) ಸಹ ಈಶ್ವರಪ್ಪ ವಿರುದ್ಧ ಕಿಡಿಕಾರಿದರು. ವಲಸೆ ಬಂದ ಕಾಂಗ್ರೆಸ್ ಶಾಸಕರಿಂದಲೇ ಬಿಜೆಪಿಯಲ್ಲಿ ಅಶಿಸ್ತು ಉಂಟಾಗಿದೆ ಎಂದು ಎರಡೆರಡು ಬಾರಿ ಹೇಳಿರುವ ಈಶ್ವರಪ್ಪ ನಂತರ ತನಗೆ ಫೋನ್ ಮಾಡಿ, ಇಲ್ಲ ನಾನು ಹಾಗೆ ಹೇಳಿಲ್ಲ ಅನ್ನುತ್ತಾರೆ ಎಂದು ಪಾಟೀಲ್ ಹೇಳಿದರು. ಹೇಳೋದನ್ನು ಹೇಳಿದ ನಂತರ, ತನ್ನಿಂದ ತಪ್ಪಾಯಿತು ಅನ್ನುವ ಈಶ್ವರಪ್ಪನವರ ಹುಡುಗಾಟವೇ ಬಿಜೆಪಿಯಲ್ಲಿ ಅಶಿಸ್ತಿಗೆ ಕಾರಣವಾಗಿದೆ, ಅವರು ತಮ್ಮ ಹಿರಿತನಕ್ಕೆ ತಕ್ಕ ಮತಾಡಬೇಕು ಎಂದು ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ