ಬೆಂಗಳೂರಲ್ಲಿ ಧಾರಾಕಾರ ಮಳೆ: ವಾಹನ ಸವಾರರ ಪರದಾಟ

Updated on: Oct 02, 2025 | 7:30 PM

ಬೆಂಗಳೂರಲ್ಲಿ ಏಕಾಏಕಿ ಸುರಿದ ಧಾರಾಕಾರ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಲಾಂಗ್​ ವೀಕೆಂಡ್​ ಹಿನ್ನಲೆ ನಗರ ಸುತ್ತಲು ಮನೆಯಿಂದ ಹೊರಬಂದವರಿಗೆ ವರುಣ ಶಾಕ್​ ಕೊಟ್ಟಿದ್ದು, ಹಲವು ದಿನಗಳ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ. ಚ್ಮಂಡ್ ಸರ್ಕಲ್​, ಶಾಂತಿನಗರ, ಲಾಲ್​ ಬಾಗ್​, ಕೆ.ಆರ್‌.ಸರ್ಕಲ್‌, ಚಾಮರಾಜಪೇಟೆ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಜಯನಗರ ಸೇರಿ ಹಲವೆಡೆ ಧಾರಾಕಾರ ಮಳೆಯಾಗಿದೆ.

ಬೆಂಗಳೂರು, ಅಕ್ಟೋಬರ್​ 02: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಹಲವು ದಿನಗಳ ಬಿಡುವು ಕೊಟ್ಟಿದ್ದ ಮಳೆರಾಯ (Rain) ಮತ್ತೆ ಅಬ್ಬರಿಸಿದ್ದಾನೆ. ನಗರದ ರಿಚ್ಮಂಡ್ ಸರ್ಕಲ್​, ಶಾಂತಿನಗರ, ಲಾಲ್​ ಬಾಗ್​, ಕೆ.ಆರ್‌.ಸರ್ಕಲ್‌, ಚಾಮರಾಜಪೇಟೆ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಜಯನಗರ ಸೇರಿ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆ ನೀರು ರಸ್ತೆಯಲ್ಲೇ ಹರಿದ ಪರಿಣಾಮ ವಾಹನ ಸವಾರರು ಪರದಾಡಿದ ಪ್ರಸಂಗವೂ ನಡೆದಿದೆ. ಲಾಂಗ್​ ವೀಕೆಂಡ್​ ಹಿನ್ನಲೆ ನಗರ ಸುತ್ತಲು ಮನೆಯಿಂದ ಹೊರಬಂದವರಿಗೆ ವರುಣ ಶಾಕ್​ ಕೊಟ್ಟಿದ್ದಾನೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.