
ಚಿಕ್ಕಬಳ್ಳಾಪುರ: ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ.
ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಪಿ.ಬಚ್ಚೇಗೌಡ ಅವರ ನಾಮಪತ್ರ ತಿರಸ್ಕೃತವಾಗಿದೆ. ಜೆಡಿಎಸ್ ಆದ್ಯ ಅಭ್ಯರ್ಥಿ ಎನ್.ರಾಧಕೃಷ್ಣ ನಾಮಪತ್ರ ಊರ್ಜಿತವಾಗಿದೆ. ಬಿ ಫಾರಂನಲ್ಲಿ ರಾಧಾಕೃಷ್ಣರನ್ನ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಕೆ.ಪಿ.ಬಚ್ಚೇಗೌಡರನ್ನ ಪರ್ಯಾಯ ಅಭ್ಯರ್ಥಿಯಾಗಿ ಸೂಚಿಸಲಾಗಿತ್ತು. ಇಬ್ಬರೂ ಅಭ್ಯರ್ಥಿಗಳು ಜೊತೆಯಲ್ಲೇ ಬಂದು, ಒಂದೇ ಬಿ ಫಾರಂನಲ್ಲಿ ಇಬ್ಬರ ಹೆಸರನ್ನೂ ಬರೆದು, ನಾಮಪತ್ರ ಸಲ್ಲಿಸಿದ್ದರು.
Published On - 3:23 pm, Tue, 19 November 19