ತಂದೆಯೊಂದಿಗೆ ಪಲ್ಲಂಗ ಹಂಚಿಕೊಳ್ಳೋಕೆ ಒತ್ತಡ, ಕೊಪ್ಪಳ ಎಸ್ಪಿಗೆ ನೊಂದ ಮಹಿಳೆ ದೂರು

ಕೊಪ್ಪಳ: ತನ್ನ ತಂದೆ ಜತೆ ಮಲಗುವಂತೆ ಪತಿಯಿಂದ ಪತ್ನಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ವಿಚಿತ್ರ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಬೊಮ್ಮಸಾಗರ ತಾಂಡಾ ನಿವಾಸಿ ರತ್ನಮ್ಮ ಸಂಗನಾಳ ತನ್ನ ಪತಿ ಗೋಕುಲ್ ವಿರುದ್ಧವೇ ಇಂತಹದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ತಾವರಗೇರಾ ಠಾಣೆ ಪೊಲೀಸರಿಗೆ ಪತಿಯ ಕುಟುಂಬಸ್ಥರ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಈ ಹಿನ್ನೆಲೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. 2018ರಲ್ಲಿ ಕಳಮಳ್ಳಿ ತಾಂಡಾದ ಗೋಕುಲ್ […]

ತಂದೆಯೊಂದಿಗೆ ಪಲ್ಲಂಗ ಹಂಚಿಕೊಳ್ಳೋಕೆ ಒತ್ತಡ, ಕೊಪ್ಪಳ ಎಸ್ಪಿಗೆ ನೊಂದ ಮಹಿಳೆ ದೂರು
ಸಾಧು ಶ್ರೀನಾಥ್​

Updated on: Jan 23, 2020 | 11:28 AM

ಕೊಪ್ಪಳ: ತನ್ನ ತಂದೆ ಜತೆ ಮಲಗುವಂತೆ ಪತಿಯಿಂದ ಪತ್ನಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ವಿಚಿತ್ರ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಬೊಮ್ಮಸಾಗರ ತಾಂಡಾ ನಿವಾಸಿ ರತ್ನಮ್ಮ ಸಂಗನಾಳ ತನ್ನ ಪತಿ ಗೋಕುಲ್ ವಿರುದ್ಧವೇ ಇಂತಹದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ತಾವರಗೇರಾ ಠಾಣೆ ಪೊಲೀಸರಿಗೆ ಪತಿಯ ಕುಟುಂಬಸ್ಥರ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಈ ಹಿನ್ನೆಲೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

2018ರಲ್ಲಿ ಕಳಮಳ್ಳಿ ತಾಂಡಾದ ಗೋಕುಲ್ ಜತೆ ರತ್ನಮ್ಮಗೆ ವಿವಾಹವಾಯಿತು. ಗೋಕುಲ್ ತನ್ನ ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದ. ಮದುವೆಯಾದ ಬಳಿಕ ಗೋಕುಲ್‌ನಿಂದ ಪತ್ನಿಗೆ ಕಿರುಕುಳ ನೀಡಲಾಗುತ್ತಿದೆ. ಕಿರುಕುಳದ ಜತೆಗೆ ತನ್ನ ತಂದೆ ಜತೆ ಮಲಗುವಂತೆ ಒತ್ತಾಯ ಕೇಳಿ ಬಂದಿದೆಯಂತೆ. ಪತಿಯ ಕಿರುಕುಳಕ್ಕೆ ಬೇಸತ್ತು ಈ ಬಗ್ಗೆ ದೂರು ನೀಡಲು ಹೋದ್ರೂ ಪೊಲೀಸರು ದೂರು ಸ್ವೀಕರಿಸಿಲ್ಲ ಹೀಗಾಗಿ ಪತಿ ಮತ್ತು ತಾವರಗೇರಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

Published On - 11:27 am, Thu, 23 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us