ಮುರುಘಾ ಶರಣರಿಗೆ ಜಾಮೀನು, ನ್ಯಾಯಾಲಯದಲ್ಲಿ ಇವತ್ತು ನಡೆದ ವಿದ್ಯಮಾನ ಏನೆಂದು ಲಾಯರ್ ಹೇಳಿದರು

|

Updated on: Nov 08, 2023 | 7:32 PM

ಇವತ್ತು ಕೋರ್ಟ್ ನಲ್ಲಿ ವಾದವೇನೂ ನಡೆಯಲಿಲ್ಲ, 10-12 ದಿನಗಳ ಹಿಂದೆಯೇ ನಾಗೇಶ್ ಮತ್ತು ಇನ್ನೊಬ್ಬ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದ್ದರು ಎಂದು ವಕೀಲ ಹೇಳಿದರು. ಇವತ್ತಿಗೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತು ಎಂದು ಹೇಳಿದ ವಕೀಲರು, ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸುವ ಹಾಗೆ ಈ ಪ್ರರಕಣದಲ್ಲೂ ವಿಧಿಸಲಾಗಿದೆ ಎಂದರು

ಬೆಂಗಳೂರು: ಸುಮಾರು ಒಂದು ವರ್ಷದ ಹಿಂದೆ ಪೋಕ್ಸೋ ಕಾಯ್ದೆ (POCSO Act) ಅಡಿ ಬಂಧನಕ್ಕೊಳಗಾಗಿ ಕಾರಾಗೃಹದಲ್ಲಿದ್ದ ಚಿತ್ರದುರ್ಗ ಮುರುಘಾಮಠದ ಡಾ ಶಿವಮೂರ್ತಿ ಶರಣರಿಗೆ (DR Shivamurthy Swamiji) ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು (Conditional bail) ನೀಡಿದೆ. ಅವರನ್ನು ಸೆಪ್ಟೆಂಬರ್ 2022 ರಲ್ಲಿ ಬಂಧಿಸಲಾಗಿತ್ತು. ಮುರುಘಾ ಶರಣರ ಪರ ವಾದಿಸಿದ ರಾಜ್ಯದ ಖ್ಯಾತ ಕ್ರಿಮಿನಲ್ ಲಾಯರ್ ಸಿವಿ ನಾಗೇಶ್ ಅವರ ಟೀಮಿನ ಸದಸ್ಯನಾಗಿರುವ ವಕೀಲರೊಬ್ಬರು ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿ, ಇವತ್ತು ಕೋರ್ಟ್ ನಲ್ಲಿ ವಾದವೇನೂ ನಡೆಯಲಿಲ್ಲ, 10-12 ದಿನಗಳ ಹಿಂದೆಯೇ ನಾಗೇಶ್ ಮತ್ತು ಇನ್ನೊಬ್ಬ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದ್ದರು ಎಂದು ಹೇಳಿದರು. ಇವತ್ತಿಗೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತು ಎಂದು ಹೇಳಿದ ವಕೀಲರು, ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸುವ ಹಾಗೆ ಈ ಪ್ರರಕಣದಲ್ಲೂ ವಿಧಿಸಲಾಗಿದೆ ಎಂದರು. ಸದ್ಯಕ್ಕೆ ಜಾಮೀನು ಪಡೆದಾಗಿದೆ ಆದರೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ವಕೀಲ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Wed, 8 November 23

Follow us on