ನಿಮ್ಮ ಕಥೆ ಕೇಳೋಕೆ ನಾವು ಇಲ್ಲಿ ಕೂತಿಲ್ಲ, ನೀರು ಬಿಡ್ಲಿಲ್ಲ ಅಂದ್ರೆ ರೈತರು ಮುಖಕ್ಕೆ ಹೊಡೀತಾರೆ

ರಾಯಚೂರು: ನೀರು ಬಿಡುವ ವಿಚಾರದಲ್ಲಿ DCM ಗೋವಿಂದ್ ಕಾರಜೋಳಗೆ ದೇವದುರ್ಗ ಶಾಸಕ ಶಿವನಗೌಡ ನಾಯಕ್​ ಆವಾಜ್ ಹಾಕಿದ್ದಾರೆ. ನಿನ್ನೆ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಮಿತಿ ಸಭೆಯಲ್ಲಿ DCMಗೆ ಏರುಧ್ವನಿಯಲ್ಲಿ ಆವಾಜ್ ಹಾಕಿದ್ದಾರೆ. ನಿಮ್ಮ ಕಥೆ ಕೇಳೋಕೆ ನಾವಿಲ್ಲಿ ಬಂದು ಕೂತಿಲ್ಲ, ಮಾರ್ಚ್​ 25ರಿಂದ 30ರವರೆಗೂ ಡ್ಯಾಂನಿಂದ ನೀರು ಬಿಡಬೇಕು. ಬಸವಸಾಗರದಿಂದ ನಾರಾಯಣಪುರ ಬಲದಂಡೆಗೆ ನೀರು ಹರಿಸಿ ಎಂದು ಏರು ಧ್ವನಿಯಲ್ಲೆ ಅವಾಜ್ ಹಾಕಿದ್ದಾರೆ. ಡ್ಯಾಂನಲ್ಲಿ ನೀರಿದ್ದೂ ಬಿಡಲಿಲ್ಲ ಅಂದ್ರೆ ರೈತರು ನಮ್ಮ ಮುಖಕ್ಕೆ ಹೊಡೀತಾರೆ, ಮುಖ್ಯಸ್ಥರಾಗಿ ನೀವು […]

ನಿಮ್ಮ ಕಥೆ ಕೇಳೋಕೆ ನಾವು ಇಲ್ಲಿ ಕೂತಿಲ್ಲ, ನೀರು ಬಿಡ್ಲಿಲ್ಲ ಅಂದ್ರೆ ರೈತರು ಮುಖಕ್ಕೆ ಹೊಡೀತಾರೆ
ಸಾಧು ಶ್ರೀನಾಥ್​

Updated on: Nov 18, 2019 | 8:36 AM

ರಾಯಚೂರು: ನೀರು ಬಿಡುವ ವಿಚಾರದಲ್ಲಿ DCM ಗೋವಿಂದ್ ಕಾರಜೋಳಗೆ ದೇವದುರ್ಗ ಶಾಸಕ ಶಿವನಗೌಡ ನಾಯಕ್​ ಆವಾಜ್ ಹಾಕಿದ್ದಾರೆ.

ನಿನ್ನೆ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಮಿತಿ ಸಭೆಯಲ್ಲಿ DCMಗೆ ಏರುಧ್ವನಿಯಲ್ಲಿ ಆವಾಜ್ ಹಾಕಿದ್ದಾರೆ. ನಿಮ್ಮ ಕಥೆ ಕೇಳೋಕೆ ನಾವಿಲ್ಲಿ ಬಂದು ಕೂತಿಲ್ಲ, ಮಾರ್ಚ್​ 25ರಿಂದ 30ರವರೆಗೂ ಡ್ಯಾಂನಿಂದ ನೀರು ಬಿಡಬೇಕು. ಬಸವಸಾಗರದಿಂದ ನಾರಾಯಣಪುರ ಬಲದಂಡೆಗೆ ನೀರು ಹರಿಸಿ ಎಂದು ಏರು ಧ್ವನಿಯಲ್ಲೆ ಅವಾಜ್ ಹಾಕಿದ್ದಾರೆ.

ಡ್ಯಾಂನಲ್ಲಿ ನೀರಿದ್ದೂ ಬಿಡಲಿಲ್ಲ ಅಂದ್ರೆ ರೈತರು ನಮ್ಮ ಮುಖಕ್ಕೆ ಹೊಡೀತಾರೆ, ಮುಖ್ಯಸ್ಥರಾಗಿ ನೀವು ಅಧಿಕಾರಿಗಳಿಗೆ ಹೇಳಿ ನೀರು ಬಿಡಿಸಬೇಕು. ಅಧಿಕಾರಿಗಳು ಹೇಳಿದಂತೆ ನೀವು ಕೇಳುವುದಲ್ಲ ಎಂದು DCM ಕಾರಜೋಳಗೆ ಶಾಸಕ ಶಿವನಗೌಡ ನಾಯಕ್​ ಗದರಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us