ಮೈಸೂರು, ಅ.9: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysuru Dasara) ಇಡೀ ಸಾಂಸ್ಕೃತಿಕ ನಗರ ಸಜ್ಜಾಗುತ್ತಿದೆ. ಮಹಿಷಾ ದಸರಾ ವಿವಾದವೂ ಹುಟ್ಟುಹಾಕಲಾಗಿದೆ. ಮಹಿಷ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋಗೆ ಎರಡು ಬಣಗಳು ಅನುಮತಿ ಕೋರಿವೆ. ಈ ನಡುವೆ ಆಡಳಿತ ಮಂಡಳಿಯು ಚಾಮುಂಡಿ ಬಿಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಬಣ್ಣ ಬಳಿಯಲು ಮುಂದಾಗಿದೆ. ಪ್ರತಿ ವರ್ಷ ದಸರಾ ಉದ್ಘಾಟನೆಗೂ ಮುನ್ನ ಪ್ರತಿಮೆಗೆ ಬಣ್ಣ ಬಳಿಯಲಾಗುತ್ತಿದೆ. ಈ ಬಾರಿಯೂ ಬಣ್ಣ ಬಳಿಯಲು ಆರಂಭಿಸಿದ್ದು, ಧೂಳಿನಿಂದ ರಕ್ಷಿಸಲು ಪ್ರತಿಮೆಯನ್ನು ಬಟ್ಟೆಗಳಿಂದ ಸುತ್ತಲಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ