AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನಿಂದ ರಕ್ಷಿಸಲು ಭರ್ಜರಿ ಐಡಿಯಾ: ಮೈಸೂರು ಝೂ ಪ್ರಾಣಿಗಳು ಫುಲ್ ಹ್ಯಾಪಿ

ಮೈಸೂರು: ಬೇಸಿಗೆ ಆರಂಭವಾಯ್ತು ಅಂದ್ರೆ ಸಾಕು ಸುಡು ಬಿಸಿಲು. ಹೊರಗೆ ಕಾಲಿಟ್ಟರೆ ನೆತ್ತಿ ಮೇಲೆ ಸೂರ್ಯ ನರ್ತನ ಮಾಡ್ತಾನೆ.‌ ಈ ಬಿಸಿಲ‌ ತಾಪಕ್ಕೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕಂಗೆಟ್ಟು ಹೋಗಿವೆ. ಇದನ್ನ ಅರಿತ ಮೃಗಾಲಯದ ಅಧಿಕಾರಿಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ. ತುಂಟಾಟ ಮಾಡುತ್ತಾ.. ತಣ್ಣನೆಯ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಚಿಂಪಾಂಜಿ.. ನೀರಿಗೆ ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿರುವ ಗಜಪಡೆ.. ರಿಲ್ಯಾಕ್ಸ್ ಮೂಡ್‌ನಲ್ಲಿರುವ ಮೃಗಾಲಯದ ಪ್ರಾಣಿಗಳು.. ಪ್ರಾಣಿಗಳಿಗೂ ಸಿಕ್ಕಿದ ಶವರ್ ಸೌಭಾಗ್ಯ: ಯೆಸ್‌, ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ […]

ಬಿಸಿಲಿನಿಂದ ರಕ್ಷಿಸಲು ಭರ್ಜರಿ ಐಡಿಯಾ: ಮೈಸೂರು ಝೂ ಪ್ರಾಣಿಗಳು ಫುಲ್ ಹ್ಯಾಪಿ
ಚಾಮರಾಜೇಂದ್ರ ಮೃಗಾಲ
ಸಾಧು ಶ್ರೀನಾಥ್​
|

Updated on: Feb 25, 2020 | 6:54 PM

Share

ಮೈಸೂರು: ಬೇಸಿಗೆ ಆರಂಭವಾಯ್ತು ಅಂದ್ರೆ ಸಾಕು ಸುಡು ಬಿಸಿಲು. ಹೊರಗೆ ಕಾಲಿಟ್ಟರೆ ನೆತ್ತಿ ಮೇಲೆ ಸೂರ್ಯ ನರ್ತನ ಮಾಡ್ತಾನೆ.‌ ಈ ಬಿಸಿಲ‌ ತಾಪಕ್ಕೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕಂಗೆಟ್ಟು ಹೋಗಿವೆ. ಇದನ್ನ ಅರಿತ ಮೃಗಾಲಯದ ಅಧಿಕಾರಿಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ.

ತುಂಟಾಟ ಮಾಡುತ್ತಾ.. ತಣ್ಣನೆಯ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಚಿಂಪಾಂಜಿ.. ನೀರಿಗೆ ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿರುವ ಗಜಪಡೆ.. ರಿಲ್ಯಾಕ್ಸ್ ಮೂಡ್‌ನಲ್ಲಿರುವ ಮೃಗಾಲಯದ ಪ್ರಾಣಿಗಳು..

ಪ್ರಾಣಿಗಳಿಗೂ ಸಿಕ್ಕಿದ ಶವರ್ ಸೌಭಾಗ್ಯ: ಯೆಸ್‌, ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿಗಳು ಈಗ ಫುಲ್ ಹ್ಯಾಪಿಯಾಗಿವೆ. ಯಾಕಂದ್ರೆ ಇಷ್ಟು ದಿನ ಇಲ್ಲಿರುವ ಪ್ರಾಣಿಗಳು ಬಿಸಿಲಿಗೆ ಬೇಸತ್ತು ಹೋಗಿದ್ವು. ಆದ್ರೆ ಈಗ ಮೃಗಾಲಯದ ಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸಲು ಕೃತಕ ನೀರಿನ ಚಿಲುಮೆಗಳ ವ್ಯವಸ್ಥೆ ಮಾಡಲಾಗಿದೆ. ಕೃತಕ ನೀರಿನ ಚಿಲುಮೆಯಿಂದ ಚಿಮ್ಮುವ ನೀರಿಗೆ ಎಲ್ಲಾ ಪ್ರಾಣಿಗಳು ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿವೆ.

ಚಿಂಪಾಂಜಿ, ಕರಡಿ, ಜಿರಾಫೆ‌, ಕಾಡೆಮ್ಮೆ, ಹುಲಿ, ಸಿಂಹಗಳು ಇರುವ ಸ್ಥಳದಲ್ಲಿ ಕೃತಕ ನೀರಿನ ಚಿಲುಮೆಗಳನ್ನು ಮಾಡಲಾಗಿದೆ. ಆದರೆ ಆನೆಗಳಿಗೆ ಶವರ್ ನಿರ್ಮಿಸಲಾಗಿದೆ. ಬಿಸಿಲು ಹೆಚ್ಚಾದಾಗ ಆನೆಗಳು ಶವರ್‌ನ ಕೆಳಗೆ ನಿಂತು ಸ್ನಾನ ಮಾಡಿ ರಿಲ್ಯಾಕ್ಸ್ ಆಗುತ್ತವೆ. ಹಾಗೇ ಹಕ್ಕಿಗಳಿಗೆ ಕುಡಿಯುವ ನೀರು, ಪರಿಸರ ಹಸಿರಾಗಿರುವಂತೆ ವ್ಯವಸ್ಥೆ‌ ಮಾಡಲಾಗಿದೆ.

ಒಟ್ನಲ್ಲಿ ಮನುಷ್ಯರಾದ ನಾವು ಬಿಸಿಲಿನಿಂದ ತಪ್ಪಿಸಿಕೊಳ್ಳವುದಕ್ಕೆ ಎಸಿ, ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದ್ರೆ ಪ್ರಾಣಿಗಳು ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿವೆ. ಇದನ್ನ ಅರಿತ ಮೈಸೂರಿನ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳನ್ನು ಕೂಲ್ ಕೂಲ್ ಮಾಡಲು ಮುಂದಾಗಿರುವುದು ನಿಜಕ್ಕೂ ಮೆಚ್ಚುವಂತಹದ್ದು.

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ