AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನಿಂದ ರಕ್ಷಿಸಲು ಭರ್ಜರಿ ಐಡಿಯಾ: ಮೈಸೂರು ಝೂ ಪ್ರಾಣಿಗಳು ಫುಲ್ ಹ್ಯಾಪಿ

ಮೈಸೂರು: ಬೇಸಿಗೆ ಆರಂಭವಾಯ್ತು ಅಂದ್ರೆ ಸಾಕು ಸುಡು ಬಿಸಿಲು. ಹೊರಗೆ ಕಾಲಿಟ್ಟರೆ ನೆತ್ತಿ ಮೇಲೆ ಸೂರ್ಯ ನರ್ತನ ಮಾಡ್ತಾನೆ.‌ ಈ ಬಿಸಿಲ‌ ತಾಪಕ್ಕೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕಂಗೆಟ್ಟು ಹೋಗಿವೆ. ಇದನ್ನ ಅರಿತ ಮೃಗಾಲಯದ ಅಧಿಕಾರಿಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ. ತುಂಟಾಟ ಮಾಡುತ್ತಾ.. ತಣ್ಣನೆಯ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಚಿಂಪಾಂಜಿ.. ನೀರಿಗೆ ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿರುವ ಗಜಪಡೆ.. ರಿಲ್ಯಾಕ್ಸ್ ಮೂಡ್‌ನಲ್ಲಿರುವ ಮೃಗಾಲಯದ ಪ್ರಾಣಿಗಳು.. ಪ್ರಾಣಿಗಳಿಗೂ ಸಿಕ್ಕಿದ ಶವರ್ ಸೌಭಾಗ್ಯ: ಯೆಸ್‌, ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ […]

ಬಿಸಿಲಿನಿಂದ ರಕ್ಷಿಸಲು ಭರ್ಜರಿ ಐಡಿಯಾ: ಮೈಸೂರು ಝೂ ಪ್ರಾಣಿಗಳು ಫುಲ್ ಹ್ಯಾಪಿ
ಚಾಮರಾಜೇಂದ್ರ ಮೃಗಾಲ
ಸಾಧು ಶ್ರೀನಾಥ್​
|

Updated on: Feb 25, 2020 | 6:54 PM

Share

ಮೈಸೂರು: ಬೇಸಿಗೆ ಆರಂಭವಾಯ್ತು ಅಂದ್ರೆ ಸಾಕು ಸುಡು ಬಿಸಿಲು. ಹೊರಗೆ ಕಾಲಿಟ್ಟರೆ ನೆತ್ತಿ ಮೇಲೆ ಸೂರ್ಯ ನರ್ತನ ಮಾಡ್ತಾನೆ.‌ ಈ ಬಿಸಿಲ‌ ತಾಪಕ್ಕೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕಂಗೆಟ್ಟು ಹೋಗಿವೆ. ಇದನ್ನ ಅರಿತ ಮೃಗಾಲಯದ ಅಧಿಕಾರಿಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ.

ತುಂಟಾಟ ಮಾಡುತ್ತಾ.. ತಣ್ಣನೆಯ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಚಿಂಪಾಂಜಿ.. ನೀರಿಗೆ ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿರುವ ಗಜಪಡೆ.. ರಿಲ್ಯಾಕ್ಸ್ ಮೂಡ್‌ನಲ್ಲಿರುವ ಮೃಗಾಲಯದ ಪ್ರಾಣಿಗಳು..

ಪ್ರಾಣಿಗಳಿಗೂ ಸಿಕ್ಕಿದ ಶವರ್ ಸೌಭಾಗ್ಯ: ಯೆಸ್‌, ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿಗಳು ಈಗ ಫುಲ್ ಹ್ಯಾಪಿಯಾಗಿವೆ. ಯಾಕಂದ್ರೆ ಇಷ್ಟು ದಿನ ಇಲ್ಲಿರುವ ಪ್ರಾಣಿಗಳು ಬಿಸಿಲಿಗೆ ಬೇಸತ್ತು ಹೋಗಿದ್ವು. ಆದ್ರೆ ಈಗ ಮೃಗಾಲಯದ ಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸಲು ಕೃತಕ ನೀರಿನ ಚಿಲುಮೆಗಳ ವ್ಯವಸ್ಥೆ ಮಾಡಲಾಗಿದೆ. ಕೃತಕ ನೀರಿನ ಚಿಲುಮೆಯಿಂದ ಚಿಮ್ಮುವ ನೀರಿಗೆ ಎಲ್ಲಾ ಪ್ರಾಣಿಗಳು ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿವೆ.

ಚಿಂಪಾಂಜಿ, ಕರಡಿ, ಜಿರಾಫೆ‌, ಕಾಡೆಮ್ಮೆ, ಹುಲಿ, ಸಿಂಹಗಳು ಇರುವ ಸ್ಥಳದಲ್ಲಿ ಕೃತಕ ನೀರಿನ ಚಿಲುಮೆಗಳನ್ನು ಮಾಡಲಾಗಿದೆ. ಆದರೆ ಆನೆಗಳಿಗೆ ಶವರ್ ನಿರ್ಮಿಸಲಾಗಿದೆ. ಬಿಸಿಲು ಹೆಚ್ಚಾದಾಗ ಆನೆಗಳು ಶವರ್‌ನ ಕೆಳಗೆ ನಿಂತು ಸ್ನಾನ ಮಾಡಿ ರಿಲ್ಯಾಕ್ಸ್ ಆಗುತ್ತವೆ. ಹಾಗೇ ಹಕ್ಕಿಗಳಿಗೆ ಕುಡಿಯುವ ನೀರು, ಪರಿಸರ ಹಸಿರಾಗಿರುವಂತೆ ವ್ಯವಸ್ಥೆ‌ ಮಾಡಲಾಗಿದೆ.

ಒಟ್ನಲ್ಲಿ ಮನುಷ್ಯರಾದ ನಾವು ಬಿಸಿಲಿನಿಂದ ತಪ್ಪಿಸಿಕೊಳ್ಳವುದಕ್ಕೆ ಎಸಿ, ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದ್ರೆ ಪ್ರಾಣಿಗಳು ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿವೆ. ಇದನ್ನ ಅರಿತ ಮೈಸೂರಿನ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳನ್ನು ಕೂಲ್ ಕೂಲ್ ಮಾಡಲು ಮುಂದಾಗಿರುವುದು ನಿಜಕ್ಕೂ ಮೆಚ್ಚುವಂತಹದ್ದು.

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​