ಮಾನಸಿಕ ಖಿನ್ನತೆ: ಬೆಂಗಳೂರಿನಲ್ಲಿ ನಿವೃತ್ತ DySP ನೇಣಿಗೆ ಶರಣು

ಬ್ಲಡ್​​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಿವೃತ್ತ DySP ಹನುಮಂತಪ್ಪ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಮಾನಸಿಕ ಖಿನ್ನತೆ: ಬೆಂಗಳೂರಿನಲ್ಲಿ ನಿವೃತ್ತ DySP ನೇಣಿಗೆ ಶರಣು
ನಿವೃತ್ತ DySP ಹನುಮಂತಪ್ಪ
ಆಯೇಷಾ ಬಾನು

Updated on: Dec 27, 2020 | 3:15 PM

ಬೆಂಗಳೂರು: ನಿವೃತ್ತ DySP ಹನುಮಂತಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರದ ಎಂ.ಸಿ.ಲೇಔಟ್​ನಲ್ಲಿ ನಡೆದಿದೆ.

ಬ್ಲಡ್​​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಿವೃತ್ತ DySP ಹನುಮಂತಪ್ಪ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇವರು ಮಾಗಡಿ ರಸ್ತೆ, ಬ್ಯಾಟರಾಯನಪುರ ಠಾಣೆಗಳಲ್ಲಿ ಇನ್ಸ್ಪೆಕ್ಟರ್ ಆಗಿದ್ದರು ಹಾಗೂ ವಿಜಯನಗರ ಉಪವಿಭಾಗದಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಕೆಲಸದಿಂದ ನಿವೃತ್ತಿ, ಬ್ಲಡ್​​ ಕ್ಯಾನ್ಸರ್, ಅಲ್ಲದೆ ನಾಳೆಯಿಂದ ಕೀಮೋಥೆರಫಿ ಚಿಕಿತ್ಸೆಗೆ ಒಳಪಡಬೇಕಿತ್ತು. ಈ ಎಲ್ಲಾ ಕಾರಣಕ್ಕಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ವಿಜಯನಗರ ಪೊಲೀಸ್​​​ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು ಖಚಿತ ಕಾರಣ ತಿಳಿದು ಬರಬೇಕಿದೆ.

ಚುನಾವಣೆ ನಿಮಿತ್ತ ಬಸ್ ಕೊಂಡೊಯ್ದಿದ್ದ ಚಾಲಕ ಡಿಪೋದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣು

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us