ಸೇಫ್ ಆಗಿ ಇಳಿಸಿದ್ದ ಚಾಲಕನೇ ವಿದ್ಯಾರ್ಥಿ ಮೇಲೆ ಬಸ್ ಹರಿಸಿಬಿಟ್ಟ!

ಆನೇಕಲ್: ಶಾಲಾ ಬಸ್‌ ಹರಿದು ಎಲ್​ಕೆಜಿ ವಿದ್ಯಾರ್ಥಿ ದೀಕ್ಷಿತ್ ಮೃತಪಟ್ಟಿರುವ ಘಟನೆ ಕಮ್ಮಸಂದ್ರ ಬಳಿಯ ಅನಂತನಗರದಲ್ಲಿ ನಡೆದಿದೆ. ಅತೀ ವೇಗವಾಗಿ ಶಾಲಾ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅವಘಡದಲ್ಲಿ ಹೊಸೂರು ಮುಖ್ಯರಸ್ಯೆಯಲ್ಲಿರುವ ಕಮ್ಮಸಂದ್ರದ ಸೇಂಟ್‌ ಪೀಟರ್ಸ್‌ ಇಂಗ್ಲಿಷ್ ಶಾಲೆಗೆ ಸೇರಿದ ವಿದ್ಯಾರ್ಥಿ ದೀಕ್ಷಿತ್ ಸಾವಿಗೀಡಾಗಿದ್ದಾನೆ. ಮೊದಲು ಶಾಲಾ ಬಸ್​ನಿಂದ ಮಗುವನ್ನು ಚಾಲಕನೇ ಕೆಳಗಿಳಿಸಿದ್ದಾನೆ. ಬಸ್‌ನ ಎಡ ಭಾಗದಲ್ಲಿ ಮಗು ನಡೆದುಕೊಂಡು ಹೋಗುತ್ತಿತ್ತು. ಮಗುವನ್ನು ಗಮನಿಸದೆ ಬಸ್​ ಅನ್ನು ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬಸ್ […]

ಸೇಫ್ ಆಗಿ ಇಳಿಸಿದ್ದ ಚಾಲಕನೇ ವಿದ್ಯಾರ್ಥಿ ಮೇಲೆ ಬಸ್ ಹರಿಸಿಬಿಟ್ಟ!
ಸಾಧು ಶ್ರೀನಾಥ್​

Updated on: Dec 16, 2019 | 5:11 PM

ಆನೇಕಲ್: ಶಾಲಾ ಬಸ್‌ ಹರಿದು ಎಲ್​ಕೆಜಿ ವಿದ್ಯಾರ್ಥಿ ದೀಕ್ಷಿತ್ ಮೃತಪಟ್ಟಿರುವ ಘಟನೆ ಕಮ್ಮಸಂದ್ರ ಬಳಿಯ ಅನಂತನಗರದಲ್ಲಿ ನಡೆದಿದೆ. ಅತೀ ವೇಗವಾಗಿ ಶಾಲಾ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅವಘಡದಲ್ಲಿ ಹೊಸೂರು ಮುಖ್ಯರಸ್ಯೆಯಲ್ಲಿರುವ ಕಮ್ಮಸಂದ್ರದ ಸೇಂಟ್‌ ಪೀಟರ್ಸ್‌ ಇಂಗ್ಲಿಷ್ ಶಾಲೆಗೆ ಸೇರಿದ ವಿದ್ಯಾರ್ಥಿ ದೀಕ್ಷಿತ್ ಸಾವಿಗೀಡಾಗಿದ್ದಾನೆ. ಮೊದಲು ಶಾಲಾ ಬಸ್​ನಿಂದ ಮಗುವನ್ನು ಚಾಲಕನೇ ಕೆಳಗಿಳಿಸಿದ್ದಾನೆ. ಬಸ್‌ನ ಎಡ ಭಾಗದಲ್ಲಿ ಮಗು ನಡೆದುಕೊಂಡು ಹೋಗುತ್ತಿತ್ತು. ಮಗುವನ್ನು ಗಮನಿಸದೆ ಬಸ್​ ಅನ್ನು ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬಸ್ ಕೆಳಗೆ ಸಿಲುಕಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us