ನಾಯಿ ಸ್ನಾನ ಮಾಡಿಸಲು ಹೋಗಿ ಮಸಣ ಸೇರಿದ ಅಣ್ಣ-ತಂಗಿ

ಅಣ್ಣ ಪ್ರೇಮಕುಮಾರ್, ತಂಗಿ ಜೆನ್ನಿಫರ್ ಮೃತಪಟ್ಟವರು. ಇವರು ಬೆಟ್ಟಹಲಸೂರಿನಲ್ಲಿ ಕಲ್ಲು ಕ್ವಾರಿಯಲ್ಲಿ ನಾಯಿ ತೊಳೆಯಲು ತೆರಳಿದ್ದರು. ಈ ವೇಳೆ ತಂಗಿ ನೀರಿಗೆ ಬಿದ್ದಿದ್ದಳು. ತಂಗಿಯನ್ನು ರಕ್ಷಣೆ ಮಾಡಲು ತೆರಳಿದ ಅಣ್ಣನೂ ನೀರುಪಾಲಾಗಿದ್ದಾನೆ.

ನಾಯಿ ಸ್ನಾನ ಮಾಡಿಸಲು ಹೋಗಿ ಮಸಣ ಸೇರಿದ ಅಣ್ಣ-ತಂಗಿ
ಮೃತ ಅಣ್ಣ-ತಂಗಿ

Updated on: Dec 26, 2020 | 8:03 PM

ಬೆಂಗಳೂರು: ಸಾವು ಎಲ್ಲಿ ಯಾವಾಗ ಬರುತ್ತದೆ ಎಂದು ಹೇಳೋದು ತುಂಬಾನೇ ಕಷ್ಟ. ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರಿನಲ್ಲೂ ಇದೇ ರೀತಿ ಆಗಿದೆ. ನಾಯಿ ಸ್ನಾನ ಮಾಡಿಸಲು ಹೋದ ಅಣ್ಣ ತಂಗಿ ಈಗ ಮಸಣ ಸೇರಿದ್ದಾರೆ.

ಅಣ್ಣ ಪ್ರೇಮಕುಮಾರ್, ತಂಗಿ ಜೆನ್ನಿಫರ್ ಮೃತಪಟ್ಟವರು. ಇವರು ಬೆಟ್ಟಹಲಸೂರಿನಲ್ಲಿ ಕಲ್ಲು ಕ್ವಾರಿಯಲ್ಲಿ ನಾಯಿ ತೊಳೆಯಲು ತೆರಳಿದ್ದರು. ಈ ವೇಳೆ ತಂಗಿ ನೀರಿಗೆ ಬಿದ್ದಿದ್ದಳು. ತಂಗಿಯನ್ನು ರಕ್ಷಣೆ ಮಾಡಲು ತೆರಳಿದ ಅಣ್ಣನೂ ನೀರುಪಾಲಾಗಿದ್ದಾನೆ. ಚಿಕ್ಕಜಾಲ ಠಾಣೆ ಪೊಲೀಸರಿಂದ ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಬಾಗಲಕೋಟೆ: ಬಸ್​ಗೆ ಡಿಕ್ಕಿ ಹೊಡೆದ ಬೈಕ್​: ಸವಾರ ಸ್ಥಳದಲ್ಲೇ ಸಾವು

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us