ದೇವಾಲಯದ ಹುಂಡಿ ಕಳ್ಳತನ, ನಾಣ್ಯಬಿಟ್ಟು ನೋಟು ಕದ್ದೊಯ್ದ ಖದೀಮರು

ಆನೇಕಲ್: ದೇವಾಲಯದ ಬಾಗಿಲು ಮುರಿದು ಕಳ್ಳರು ಹುಂಡಿಯಲ್ಲಿದ್ದ ಹಣ ಲೂಟಿ ಮಾಡಿರುವ ಘಟನೆ ಚಿಕ್ಕಹೊಸಹಳ್ಳಿಯ ಮಾದೇಶ್ವರ ದೇವಾಲಯದಲ್ಲಿದೆ ನಡೆದಿದೆ. ಖದೀಮರು ನಿನ್ನೆ ರಾತ್ರಿ ಮಾದೇಶ್ವರ ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಲಕ್ಷಾಂತರ ಹಣವನ್ನು ದೋಚಿದ್ದಾರೆ. ಚಾಲಾಕಿ ಖದೀಮರು ಕೇವಲ ನೋಟುಗಳನ್ನು ಮಾತ್ರ ಕದ್ದಿದ್ದು, ಚಿಲ್ಲರೆ ನಾಣ್ಯಗಳನ್ನು ದೇವಾಲಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಭಕ್ತರು ಹೆಚ್ಚಿನ ಕಾಣಿಕೆ ಹಾಕಿರ್ತಾರೆ ಹುಂಡಿಯಲ್ಲಿ ಬಹಳ ಹಣ ಶೇಖರಣೆಯಾಗಿರೋದು ತಿಳಿದೇ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನು ಈ ಪ್ರಕರಣ […]

ದೇವಾಲಯದ ಹುಂಡಿ ಕಳ್ಳತನ, ನಾಣ್ಯಬಿಟ್ಟು ನೋಟು ಕದ್ದೊಯ್ದ ಖದೀಮರು
ಸಾಧು ಶ್ರೀನಾಥ್​

Updated on: Feb 24, 2020 | 4:04 PM

ಆನೇಕಲ್: ದೇವಾಲಯದ ಬಾಗಿಲು ಮುರಿದು ಕಳ್ಳರು ಹುಂಡಿಯಲ್ಲಿದ್ದ ಹಣ ಲೂಟಿ ಮಾಡಿರುವ ಘಟನೆ ಚಿಕ್ಕಹೊಸಹಳ್ಳಿಯ ಮಾದೇಶ್ವರ ದೇವಾಲಯದಲ್ಲಿದೆ ನಡೆದಿದೆ. ಖದೀಮರು ನಿನ್ನೆ ರಾತ್ರಿ ಮಾದೇಶ್ವರ ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಲಕ್ಷಾಂತರ ಹಣವನ್ನು ದೋಚಿದ್ದಾರೆ. ಚಾಲಾಕಿ ಖದೀಮರು ಕೇವಲ ನೋಟುಗಳನ್ನು ಮಾತ್ರ ಕದ್ದಿದ್ದು, ಚಿಲ್ಲರೆ ನಾಣ್ಯಗಳನ್ನು ದೇವಾಲಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಭಕ್ತರು ಹೆಚ್ಚಿನ ಕಾಣಿಕೆ ಹಾಕಿರ್ತಾರೆ ಹುಂಡಿಯಲ್ಲಿ ಬಹಳ ಹಣ ಶೇಖರಣೆಯಾಗಿರೋದು ತಿಳಿದೇ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನು ಈ ಪ್ರಕರಣ ಆನೇಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Published On - 4:03 pm, Mon, 24 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us