AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿನ ಎಲ್ಲಾ ದಾಖಲೆ ಉಡೀಸ್: ಹೊಸ ದಾಖಲೆ ನಿರ್ಮಿಸಿದ ಕಂಬಳ ವೀರ!

ಮಂಗಳೂರು: ಉಕ್ಕಿನಂತಹ ದೇಹ.. ಶರವೇಗದಲ್ಲಿ ಗುರಿ ಮುಟ್ಟೋ ವೇಗ. ಒಂದ್ಸಲ ಕೆಸರುಗದ್ದೆಗೆ ಕಾಲಿಟ್ರೆ ಗೆಲುವಿನ ಕೇಕೆ ಹಾಕ್ತಿರೋದೆ.. ಹೆಜ್ಜೆ ಇಟ್ರೆ ಸಾಕು ಚಿನ್ನದ ಬೇಟೆ ಫಿಕ್ಸ್.. FLOW.. ಇದೇ ಮಿಂಚಿನ ಓಟ.. ಇದೇ ರಣೋತ್ಸಾಹ.. ಇದೇ ಛಲ.. ಕರಾವಳಿಯ ಉಸೇನ್​ ಬೋಲ್ಟ್.. ಕಂಬಳದ ವೀರ ಶ್ರೀನಿವಾಸ ಗೌಡನತ್ತ ಎಲ್ಲರೂ ತಿರುಗಿ ನೋಡ್ತಿದ್ದಾರೆ. ಯೆಸ್​.. ದೇಶಾದ್ಯಂತ ಸದ್ದು ಮಾಡ್ತಿರೋ.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್ ಸೃಷ್ಟಿಸಿರೋ ಕಂಬಳದ ಕುವರ ಶ್ರೀನಿವಾಸ್​​​ ಗೌಡ ಅಂದ್ರೆ ಮನೆ ಮಾತಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆ […]

ಹಿಂದಿನ ಎಲ್ಲಾ ದಾಖಲೆ ಉಡೀಸ್: ಹೊಸ ದಾಖಲೆ ನಿರ್ಮಿಸಿದ ಕಂಬಳ ವೀರ!
ಸಾಧು ಶ್ರೀನಾಥ್​
|

Updated on:Feb 24, 2020 | 12:21 PM

Share

ಮಂಗಳೂರು: ಉಕ್ಕಿನಂತಹ ದೇಹ.. ಶರವೇಗದಲ್ಲಿ ಗುರಿ ಮುಟ್ಟೋ ವೇಗ. ಒಂದ್ಸಲ ಕೆಸರುಗದ್ದೆಗೆ ಕಾಲಿಟ್ರೆ ಗೆಲುವಿನ ಕೇಕೆ ಹಾಕ್ತಿರೋದೆ.. ಹೆಜ್ಜೆ ಇಟ್ರೆ ಸಾಕು ಚಿನ್ನದ ಬೇಟೆ ಫಿಕ್ಸ್.. FLOW.. ಇದೇ ಮಿಂಚಿನ ಓಟ.. ಇದೇ ರಣೋತ್ಸಾಹ.. ಇದೇ ಛಲ.. ಕರಾವಳಿಯ ಉಸೇನ್​ ಬೋಲ್ಟ್.. ಕಂಬಳದ ವೀರ ಶ್ರೀನಿವಾಸ ಗೌಡನತ್ತ ಎಲ್ಲರೂ ತಿರುಗಿ ನೋಡ್ತಿದ್ದಾರೆ.

ಯೆಸ್​.. ದೇಶಾದ್ಯಂತ ಸದ್ದು ಮಾಡ್ತಿರೋ.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್ ಸೃಷ್ಟಿಸಿರೋ ಕಂಬಳದ ಕುವರ ಶ್ರೀನಿವಾಸ್​​​ ಗೌಡ ಅಂದ್ರೆ ಮನೆ ಮಾತಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಮಿಜಾರು ನಿವಾಸಿ ಶ್ರೀನಿವಾಸ್ ಗೌಡ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಹಿಂದಿನ ಎಲ್ಲಾ ದಾಖಲೆ ಉಡೀಸ್: ಕೆಸರು ಗದ್ದೆಯಲ್ಲಿ ಕೋಣಗಳ ಜೊತೆ ಮಿಂಚಿನಂತೆ ಹೆಜ್ಜೆ ಇಡೋ ಶ್ರೀನಿವಾಸ ಗೌಡ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆ ಪೈವಳಿಕೆ ಬೋಳಂಗಳದಲ್ಲಿ ನಡೆದ ಕಂಬಳದಲ್ಲಿ ಎರಡು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಕಂಬಳ ಇತಿಹಾಸದಲ್ಲೇ ಒಂದೇ ವರ್ಷದಲ್ಲಿ 39 ಚಿನ್ನದ ಪದಕ ಪಡೆಯೋ ಮೂಲಕ ನಂಬರ್ ಒನ್ ಪಟ್ಟ ಗಟ್ಟಿ ಮಾಡ್ಕೊಂಡಿದ್ದಾರೆ.

ಇನ್ನು, ಫೆಬ್ರವರಿ 2 ರಂದು ಐಕಳದಲ್ಲಿ ನಡೆದಿದ್ದ ಕಂಬಳದಲ್ಲಿ 143 ಮೀಟರ್ ದೂರವನ್ನು 12.46 ಸೆಕೆಂಡ್ ಕ್ರಮಿಸಿ ರೆಕಾರ್ಡ್ ಮಾಡಿದ್ರು. ಇದೀಗ ಕಾಸರಗೋಡು ಜಿಲ್ಲೆಯಲ್ಲಿ ನಡೆದ ಹಗ್ಗ ಮತ್ತು ನೇಗಿಲು ವಿಭಾಗದಲ್ಲಿ ಮಿಂಚಿನಂತೆ ಓಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ರು.

ಒಟ್ನಲ್ಲಿ ಕರಾವಳಿಯಲ್ಲಿ ನಡೆಯೋ ಸ್ಪೆಷಲ್ ಕ್ರೀಡೆ ಕಂಬಳದಲ್ಲಿ ಶ್ರೀನಿವಾಸಗೌಡ ಸಾಧನೆಯ ಶಿಖರವನ್ನೇರಿದ್ದಾರೆ. ಕಂಬಳ ಸೀಜನ್​ನಲ್ಲಿ ಇನ್ನೂ ಎರಡ್ಮೂರು ಕಂಬಳ ನಡೆಯಲಿದ್ದು ಅಲ್ಲೂ ಚಿನ್ನದ ಬೇಟೆಯಾಡೋಕೆ ಕರಾವಳಿ ಉಸೇನ್ ಬೋಲ್ಟ್ ಕಣ್ಣಿಟ್ಟಿದ್ದಾರೆ.

Published On - 12:21 pm, Mon, 24 February 20

'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!