ತಾಯಿಯ ಕತ್ತು ಹಿಸುಕಿ ಸಾಯ್ಸಿ, ಮೃತ ದೇಹದ ಬಳಿ ಕೂತು ಕಣ್ಣೀರು ಹಾಕಿದ ಮಗರಾಯ?

ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿಯ 4ನೇ ಕ್ರಾಸ್‌ನಲ್ಲಿ ವೃದ್ಧೆಯ ಕೊಲೆಯಾಗಿದ್ದು, ಮದ್ಯದ ಅಮಲಿನಲ್ಲಿ ಪುತ್ರನೇ ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಾಶಿಬಾಯಿ ಭರಮಪ್ಪ ಕದಾಂಪುರ(62) ಮೃತ ವೃದ್ಧೆ. ರವಿ ಕದಾಂಪುರ(40) ಮೃತ ವೃದ್ಧೆಯ ಮಗ. ಈತ ತನ್ನ ತಾಯಿಯ ದೇಹದ ಮುಂದೆ ಕೂತು ತಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಕಣ್ಣೀರು ಹಾಕುತ್ತಿದ್ದಾನೆ. ಆದ್ರೆ ಮದ್ಯದ ಅಮಲಿನಲ್ಲಿ ಈತನೇ ತನ್ನ ತಾಯಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಏಕೆಂದರೆ ಮೃತ ವೃದ್ಧೆಯ ಕುತ್ತಿಗೆ […]

ತಾಯಿಯ ಕತ್ತು ಹಿಸುಕಿ ಸಾಯ್ಸಿ, ಮೃತ ದೇಹದ ಬಳಿ ಕೂತು ಕಣ್ಣೀರು ಹಾಕಿದ ಮಗರಾಯ?
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 23, 2020 | 1:18 PM

ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿಯ 4ನೇ ಕ್ರಾಸ್‌ನಲ್ಲಿ ವೃದ್ಧೆಯ ಕೊಲೆಯಾಗಿದ್ದು, ಮದ್ಯದ ಅಮಲಿನಲ್ಲಿ ಪುತ್ರನೇ ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಾಶಿಬಾಯಿ ಭರಮಪ್ಪ ಕದಾಂಪುರ(62) ಮೃತ ವೃದ್ಧೆ.

ರವಿ ಕದಾಂಪುರ(40) ಮೃತ ವೃದ್ಧೆಯ ಮಗ. ಈತ ತನ್ನ ತಾಯಿಯ ದೇಹದ ಮುಂದೆ ಕೂತು ತಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಕಣ್ಣೀರು ಹಾಕುತ್ತಿದ್ದಾನೆ. ಆದ್ರೆ ಮದ್ಯದ ಅಮಲಿನಲ್ಲಿ ಈತನೇ ತನ್ನ ತಾಯಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಏಕೆಂದರೆ ಮೃತ ವೃದ್ಧೆಯ ಕುತ್ತಿಗೆ ಭಾಗದಲ್ಲಿ ನೇಣು ಬಿಗಿದ ಗುರುತುಗಳು ಕಾಣಿಸಿವೆ. ಹೀಗಾಗಿ ಮಗನೇ ಸಾಯಿಸಿ ಡ್ರಾಮ ಮಾಡ್ತಿದ್ದಾನ ಎಂಬ ಅನುಮಾನ ಕಾಡುತ್ತಿದೆ. ಸದ್ಯ ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 1:12 pm, Fri, 23 October 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us