ಕೊರೊನಾ ವಾರಿಯರ್ ಮೇಲೆ ದೊಣ್ಣೆಯಿಂದ Attack ಎಲ್ಲಿ?

ದಕ್ಷಿಣ ಕನ್ನಡ: ಆಶಾ ಕಾರ್ಯಕರ್ತೆಯ ಮೇಲೆ ದೊಣ್ಣೆಯಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಚೆನ್ನೈ ತ್ತೋಡಿ ಎಂಬಲ್ಲಿ ನಡೆದಿದೆ. ವಾಮದಪದವು ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಮಮತಾ ಗಟ್ಟಿ ಹಲ್ಲೆಗೆ ಒಳಗಾದ ಸಂತ್ರಸ್ಥೆ. ಮಮತಾ ಕರ್ತವ್ಯದಲ್ಲಿದ್ದಾಗ ಕಾಂತಪ್ಪ ಪೂಜಾರಿ ಎಂಬಾತನಿಂದ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಕಾಂತಪ್ಪ ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿದ್ದು ಮಮತಾರ ತಲೆ ಮತ್ತು ಕೈಗೆ ಬಲವಾದ ಪೆಟ್ಟುಬಿದ್ದಿದೆ ಎಂದು ತಿಳಿದುಬಂದಿದೆ. ಹಲ್ಲೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. […]

ಕೊರೊನಾ ವಾರಿಯರ್ ಮೇಲೆ ದೊಣ್ಣೆಯಿಂದ Attack ಎಲ್ಲಿ?
Edited By:

Updated on: Jul 09, 2020 | 5:46 PM

ದಕ್ಷಿಣ ಕನ್ನಡ: ಆಶಾ ಕಾರ್ಯಕರ್ತೆಯ ಮೇಲೆ ದೊಣ್ಣೆಯಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಚೆನ್ನೈ ತ್ತೋಡಿ ಎಂಬಲ್ಲಿ ನಡೆದಿದೆ. ವಾಮದಪದವು ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಮಮತಾ ಗಟ್ಟಿ ಹಲ್ಲೆಗೆ ಒಳಗಾದ ಸಂತ್ರಸ್ಥೆ.

ಮಮತಾ ಕರ್ತವ್ಯದಲ್ಲಿದ್ದಾಗ ಕಾಂತಪ್ಪ ಪೂಜಾರಿ ಎಂಬಾತನಿಂದ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಕಾಂತಪ್ಪ ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿದ್ದು ಮಮತಾರ ತಲೆ ಮತ್ತು ಕೈಗೆ ಬಲವಾದ ಪೆಟ್ಟುಬಿದ್ದಿದೆ ಎಂದು ತಿಳಿದುಬಂದಿದೆ. ಹಲ್ಲೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್ ಅಡ್ಯಂತಾಯ ಪುಂಜಾಲಕಟ್ಟೆ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

Published On - 4:32 pm, Thu, 9 July 20