ರಸ್ತೆಯಲ್ಲೇ ಮೀನಿನ ಬಾಕ್ಸ್: ಹೆಲ್ತ್ ಇನ್ಸ್​ಪೆಕ್ಟರ್​ಗೆ ಜಂಟಿ ಆಯುಕ್ತರ ಆವಾಜ್​

ಬೆಂಗಳೂರು: ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್​ಗೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಹಲಸೂರು ಬಳಿ ನಡೆದಿದೆ. ಹಲಸೂರಿನ ಕೆಲವೆಡೆ ರಸ್ತೆಯಲ್ಲಿ ಮೀನಿನ ಬಾಕ್ಸ್​ಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿಗಳು ಮೀನಿನ ಬಾಕ್ಸ್​ ಇಟ್ಟಿದ್ದರಿಂದ ರಸ್ತೆಯೆಲ್ಲಾ ಗಲೀಜು ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫ​ರಾಜ್​ ಖಾನ್, ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್​ ಸಂಜಯ್​ಗೆ ಆವಾಜ್ ಹಾಕಿದ್ದಾರೆ. ರಸ್ತೆಯ ಮೇಲೆ ಮೀನಿನ ಬಾಕ್ಸ್​ಗಳನ್ನು ಇಟ್ಟುಕೊಂಡಿದ್ದರೂ ನೀವು ಏಕೆ ಕ್ರಮಕೈಗೊಂಡಿಲ್ಲ ಎಂದು […]

ರಸ್ತೆಯಲ್ಲೇ ಮೀನಿನ ಬಾಕ್ಸ್: ಹೆಲ್ತ್ ಇನ್ಸ್​ಪೆಕ್ಟರ್​ಗೆ ಜಂಟಿ ಆಯುಕ್ತರ ಆವಾಜ್​
ಸಾಧು ಶ್ರೀನಾಥ್​

Updated on: Dec 31, 2019 | 12:56 PM

ಬೆಂಗಳೂರು: ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್​ಗೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಹಲಸೂರು ಬಳಿ ನಡೆದಿದೆ.

ಹಲಸೂರಿನ ಕೆಲವೆಡೆ ರಸ್ತೆಯಲ್ಲಿ ಮೀನಿನ ಬಾಕ್ಸ್​ಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿಗಳು ಮೀನಿನ ಬಾಕ್ಸ್​ ಇಟ್ಟಿದ್ದರಿಂದ ರಸ್ತೆಯೆಲ್ಲಾ ಗಲೀಜು ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫ​ರಾಜ್​ ಖಾನ್, ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್​ ಸಂಜಯ್​ಗೆ ಆವಾಜ್ ಹಾಕಿದ್ದಾರೆ.

ರಸ್ತೆಯ ಮೇಲೆ ಮೀನಿನ ಬಾಕ್ಸ್​ಗಳನ್ನು ಇಟ್ಟುಕೊಂಡಿದ್ದರೂ ನೀವು ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿ ಮಾತಿನ ಭರದಲ್ಲಿ ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್​ಗೆ ಸರ್ಫ​ರಾಜ್​​ ಖಾನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

Published On - 12:38 pm, Tue, 31 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us