ಕ್ವಾರಂಟೈನ್ ಮುಗ್ಸಿ ಮನೆಗೆ ಮರಳಿದ ನರ್ಸ್,​ ತಾಯಿ-ಮಗಳ ಸಮ್ಮಿಲನಕ್ಕೆ ಜನ ಖುಷ್

ಬೆಳಗಾವಿ: ಕೊರೊನಾ ವಾರ್ಡ್​ನಲ್ಲಿ ಕೆಲಸ ಮಾಡಿ ಮನೆಗೆ ನರ್ಸ್ ವಾಪಸ್ ಆಗುತ್ತಿದ್ದಂತೆ ಮಗು ಓಡೋಡಿ ಬಂದು ತಾಯಿಯನ್ನು ಅಪ್ಪಿಕೊಂಡಿದೆ. ಈ ವೇಳೆ ಮುಗುವನ್ನು ಮುದ್ದಾಡಿ ತಾಯಿ ಆನಂದ ಭಾಷ್ಪ ಸುರಿಸಿದ್ದಾರೆ. ಬೆಳಗಾವಿ ನಗರದ ಬಡಕಲ್ ಗಲ್ಲಿಯಲ್ಲಿರುವ ಮನೆಯಲ್ಲಿ ನರ್ಸ್​ ಸುಗಂಧಾ ವಾಸವಿದ್ದರು. ಒಂದು ವಾರ ಕೊರೊನಾ ವಾರ್ಡ್​ನಲ್ಲಿ ನರ್ಸ್​ ಕೆಲಸ ಮಾಡಿದ್ದರು. ಬಳಿಕ 14 ದಿನ ಸುಗಂಧಾ ಕ್ವಾರಂಟೈನ್​ನಲ್ಲಿದ್ದರು. ಹಾಗಾಗಿ 21 ದಿನ 3 ವರ್ಷದ ಮಗಳನ್ನ ಬಿಟ್ಟು ಸುಗಂಧಾ ಕೆಲಸ ಮಾಡುತ್ತಿದ್ದರು. ಕ್ವಾರಂಟೈನ್​ನಲ್ಲಿರುವ ಕಾರಣ ತನ್ನ […]

ಕ್ವಾರಂಟೈನ್ ಮುಗ್ಸಿ ಮನೆಗೆ ಮರಳಿದ ನರ್ಸ್,​ ತಾಯಿ-ಮಗಳ ಸಮ್ಮಿಲನಕ್ಕೆ ಜನ ಖುಷ್
ಸಾಧು ಶ್ರೀನಾಥ್​

Updated on: Apr 18, 2020 | 3:53 PM

ಬೆಳಗಾವಿ: ಕೊರೊನಾ ವಾರ್ಡ್​ನಲ್ಲಿ ಕೆಲಸ ಮಾಡಿ ಮನೆಗೆ ನರ್ಸ್ ವಾಪಸ್ ಆಗುತ್ತಿದ್ದಂತೆ ಮಗು ಓಡೋಡಿ ಬಂದು ತಾಯಿಯನ್ನು ಅಪ್ಪಿಕೊಂಡಿದೆ. ಈ ವೇಳೆ ಮುಗುವನ್ನು ಮುದ್ದಾಡಿ ತಾಯಿ ಆನಂದ ಭಾಷ್ಪ ಸುರಿಸಿದ್ದಾರೆ. ಬೆಳಗಾವಿ ನಗರದ ಬಡಕಲ್ ಗಲ್ಲಿಯಲ್ಲಿರುವ ಮನೆಯಲ್ಲಿ ನರ್ಸ್​ ಸುಗಂಧಾ ವಾಸವಿದ್ದರು. ಒಂದು ವಾರ ಕೊರೊನಾ ವಾರ್ಡ್​ನಲ್ಲಿ ನರ್ಸ್​ ಕೆಲಸ ಮಾಡಿದ್ದರು. ಬಳಿಕ 14 ದಿನ ಸುಗಂಧಾ ಕ್ವಾರಂಟೈನ್​ನಲ್ಲಿದ್ದರು. ಹಾಗಾಗಿ 21 ದಿನ 3 ವರ್ಷದ ಮಗಳನ್ನ ಬಿಟ್ಟು ಸುಗಂಧಾ ಕೆಲಸ ಮಾಡುತ್ತಿದ್ದರು.

ಕ್ವಾರಂಟೈನ್​ನಲ್ಲಿರುವ ಕಾರಣ ತನ್ನ ಮಗಳನ್ನು ಭೇಟಿಯಾಗದೆ ಆಸ್ಪತ್ರೆ ಮುಂದೆ ಸುಗಂಧಾ-ಮಗಳು ಕಣ್ಣೀರಿಟ್ಟಿದ್ದರು. ಈ ಕುರಿತು ಟಿವಿ9 ಕನ್ನಡದಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಟಿವಿ9 ಸುದ್ದಿ ನೋಡಿ ನರ್ಸ್ ಸುಗಂಧಾ ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿ ಮಾತನಾಡಿದ್ದರು. 21 ದಿನಗಳ ನಂತರ ಇದೀಗ ಮನೆಗೆ ವಾಪಸ್ ಆಗಿದ್ದಾರೆ. ಅಮ್ಮ-ಮಗಳ ಸಮ್ಮಿಲನ ಕಂಡು ಕಾಲೋನಿಯ ಜನ ಖುಷಿಯಾಗಿದ್ದಾರೆ.

Published On - 3:50 pm, Sat, 18 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us