ಬೆಂಗಳೂರಿನ ‘ಪಂಚ’ ರಣಕಣದಲ್ಲಿ ಅಡಗಿದೆ ಅಭ್ಯರ್ಥಿಗಳ ಭವಿಷ್ಯ

ಬೆಂಗಳೂರು: ಬರೀ ಬೈ ಎಲೆಕ್ಷನ್ ಅಲ್ಲ. ಇದೊಂದು ಮಿನಿ ಕುರುಕ್ಷೇತ್ರ. ಮೂರು ಪಕ್ಷಗಳ ಜಿದ್ದಾಜಿದ್ದಿನ ಸಮರ. ಪ್ರತಿಷ್ಠೆಗಾಗಿ ನಡೆದ ಕಾದಾಟ. ಇರೋ 15 ಸೀಟ್​ಗಳಲ್ಲಿ ಹೆಚ್ಚು ಸ್ಥಾನ ಗೆಲ್ಲೋಕೆ ನಡೆದ ಹೋರಾಟ. ಅಂಥಾ ರಣರೋಚಕ. ಕುತೂಹಲದ ಕಾದಾಟದ ಭವಿಷ್ಯ ಇಂದು ಹೊರಬೀಳಲಿದೆ. ಕಣದಲ್ಲಿ ಮಿಂಚಿನಂತೆ ಕಾದಾಡಿದ್ದ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಶುರುವಾಗಿದೆ. ಅದ್ರಲ್ಲೂ ಬೆಂಗಳೂರಿನ 5 ಕ್ಷೇತ್ರಗಳ ಅಭ್ಯರ್ಥಿಗಳು ಏನಾಗುತ್ತೋ ಏನೋ ಅಂತಾ ಫಲಿತಾಂಶದತ್ತ ಚಿತ್ತ ನೆಟ್ಟು ಕೂತಿದ್ದಾರೆ. ಬೆಂಗಳೂರಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಾಢ್ಯ ಅಭ್ಯರ್ಥಿಗಳು […]

ಬೆಂಗಳೂರಿನ ‘ಪಂಚ’ ರಣಕಣದಲ್ಲಿ ಅಡಗಿದೆ ಅಭ್ಯರ್ಥಿಗಳ ಭವಿಷ್ಯ
ಸಾಧು ಶ್ರೀನಾಥ್​

Updated on: Dec 09, 2019 | 7:56 AM

ಬೆಂಗಳೂರು: ಬರೀ ಬೈ ಎಲೆಕ್ಷನ್ ಅಲ್ಲ. ಇದೊಂದು ಮಿನಿ ಕುರುಕ್ಷೇತ್ರ. ಮೂರು ಪಕ್ಷಗಳ ಜಿದ್ದಾಜಿದ್ದಿನ ಸಮರ. ಪ್ರತಿಷ್ಠೆಗಾಗಿ ನಡೆದ ಕಾದಾಟ. ಇರೋ 15 ಸೀಟ್​ಗಳಲ್ಲಿ ಹೆಚ್ಚು ಸ್ಥಾನ ಗೆಲ್ಲೋಕೆ ನಡೆದ ಹೋರಾಟ. ಅಂಥಾ ರಣರೋಚಕ. ಕುತೂಹಲದ ಕಾದಾಟದ ಭವಿಷ್ಯ ಇಂದು ಹೊರಬೀಳಲಿದೆ. ಕಣದಲ್ಲಿ ಮಿಂಚಿನಂತೆ ಕಾದಾಡಿದ್ದ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಶುರುವಾಗಿದೆ. ಅದ್ರಲ್ಲೂ ಬೆಂಗಳೂರಿನ 5 ಕ್ಷೇತ್ರಗಳ ಅಭ್ಯರ್ಥಿಗಳು ಏನಾಗುತ್ತೋ ಏನೋ ಅಂತಾ ಫಲಿತಾಂಶದತ್ತ ಚಿತ್ತ ನೆಟ್ಟು ಕೂತಿದ್ದಾರೆ.

ಬೆಂಗಳೂರಿನ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಾಢ್ಯ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಅವರ ಮಧ್ಯೆ ದೊಡ್ಡ ಕದನವೇ ಏರ್ಪಟ್ಟಿತ್ತು. ಆ ರೋಚಕ ಫೈಟ್ ಮಾಡ್ತಿರೋ ಬೆಂಗಳೂರಿನ 5 ಕ್ಷೇತ್ರಗಳು:

‘ಪಂಚ’ ಕ್ಷೇತ್ರಗಳು
* ಯಶವಂತಪುರ
* ಮಹಾಲಕ್ಷ್ಮೀ ಲೇಔಟ್
* ಹೊಸಕೋಟೆ
* ಕೆ.ಆರ್. ಪುರಂ
* ಶಿವಾಜಿನಗರ

ಯಶವಂತಪುರ ವಿಧಾನಸಭಾ ಕ್ಷೇತ್ರ
ಎಸ್.ಟಿ. ಸೋಮಶೇಖರ್ v/s ಟಿ.ಎನ್. ಜವರಾಯಿಗೌಡ v/s ಪಿ.ನಾಗರಾಜ್
ಬೆಂಗಳೂರಿನಲ್ಲಿ ಯಶವಂತಪುರ ಹೈವೋಲ್ಟೇಜ್ ಕ್ಷೇತ್ರ. ಇಲ್ಲಿ ಬಿಜೆಪಿ ಅಭ್ಯರ್ಥಿ ಆಗಿರುವ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಪ್ರಬಲ ಅಭ್ಯರ್ಥಿ. 2 ಬಾರಿಯೂ ಸೋಮಶೇಖರ್ ವಿರುದ್ಧ ಪರಾಜಿತರಾಗಿದ್ದ ಟಿ.ಎನ್. ಜವರಾಯಿಗೌಡ ಜೆಡಿಎಸ್ ಅಭ್ಯರ್ಥಿಯಾಗಿ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಈ ಬಾರಿ ಇಬ್ಬರ ಮಧ್ಯೆ ನೇರಾನೇರ ಫೈಟ್ ಇದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸ ಮುಖ ಪಿ. ನಾಗರಾಜ್ ಮೊದಲ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ
ಕೆ.ಗೋಪಾಲಯ್ಯ v/s ಎಂ. ಶಿವರಾಜು v/s ಗಿರೀಶ್ ನಾಶಿ
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರವೂ ಅಷ್ಟೇ.. ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಕ್ಷೇತ್ರ.. 2 ಬಾರಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ದ ಕೆ. ಗೋಪಾಲಯ್ಯ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಎಂ. ಶಿವರಾಜು ಮೊದಲ ಬಾರಿಗೆ ಅಖಾಡದಲ್ಲಿದ್ದಾರೆ. ಇನ್ನು ಕಾಂಗ್ರೆಸ್ ತೊರೆದಿದ್ದ ಗಿರೀಶ್ ನಾಶಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರ
ಎಂಟಿಬಿ ನಾಗರಾಜ್ v/s ಶರತ್ ಬಚ್ಚೇಗೌಡ v/s ಪದ್ಮಾವತಿ ಸುರೇಶ್
ಹೊಸಕೋಟೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್​ಗೆ ಕೈ ಕೊಟ್ಟು ಹೋಗಿರೋ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮಧ್ಯೆ ನೇರಾನೇರ ಫೈಟ್ ಇದೆ. ಇವರಿಬ್ಬರ ಅಲೆ ಮಧ್ಯೆ ಕಾಂಗ್ರೆಸ್ ಪದ್ಮಾವತಿ ಸುರೇಶ್ ಪುಟಿದೇಳುವ ತವಕದಲ್ಲಿದ್ದಾರೆ.

ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರ
ಭೈರತಿ ಬಸವರಾಜ್ v/s ಎಂ.ನಾರಾಯಣಸ್ವಾಮಿ v/s ಸಿ. ಕೃಷ್ಣಮೂರ್ತಿ
ಕೆ.ಆರ್.ಪುರಂ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದ ಭೈರತಿ ಬಸವರಾಜ್ ಬಿಜೆಪಿಯ ಬಲಿಷ್ಠ ಕ್ಯಾಂಡಿಡೇಟ್. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್​ನ ಎಂ.ನಾರಾಯಣಸ್ವಾಮಿ ಮತ್ತು ಜೆಡಿಎಸ್​ನ ಸಿ.ಕೃಷ್ಣಮೂರ್ತಿ ಕಣದಲ್ಲಿದ್ದಾರೆ. ಇವ್ರಿಬ್ಬರೂ ಭೈರತಿ ಬಸವರಾಜ್​ಗೆ ಟಫ್ ಫೈಟ್ ನೀಡದಿದ್ರೂ ಹೋರಾಟ ಮಾಡೋ ಕೆಪಾಸಿಟಿ ಹೊಂದಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರ
ರಿಜ್ವಾನ್ ಅರ್ಷದ್ v/s ಎಂ.ಸರವಣ v/s ತನ್ವೀರ್ ಅಹ್ಮದ್
ಶಿವಾಜಿನಗರ ಕ್ಷೇತ್ರದಲ್ಲಿ ಮುಸ್ಲಿಂರ ಪ್ರಾಬಲ್ಯ ಜಾಸ್ತಿ ಇದೆ. ಹೀಗಾಗಿ, ಹಾಲಿ ಎಂಎಲ್​ಸಿ ಆಗಿರುವ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆಲ್ಲೋ ಚಾನ್ಸಸ್ ಹೆಚ್ಚಾಗಿದೆ.. ಅರ್ಷದ್​ಗೆ ಬಿಜೆಪಿ ಅಭ್ಯರ್ಥಿ ಎಂ.ಸರವಣ ಪೈಪೋಟಿ ನೀಡೋ ಸಾಧ್ಯತೆ ಇದೆ. ಇದ್ರ ಮಧ್ಯೆ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ಕೂಡ ಪ್ರತಿರೋಧ ಒಡ್ಡೋ ಶಕ್ತಿ ಹೊಂದಿದ್ದಾರೆ.

Published On - 7:22 am, Mon, 9 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us