ಕೇಂದ್ರ ಬಜೆಟ್ 2020-21ರ ಹಲ್ವಾ ಸಂಭ್ರಮ ನಿನ್ನೆ ನಡೆಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಮಾರಂಭದ ನಂತರ ಬಜೆಟ್ ದಾಖಲೆಯ ಅಂತಿಮ ಸಿದ್ಧತೆಯ ಕಾರ್ಯದಲ್ಲಿ ಇಲಾಖೆಯ ಸಿಬ್ಬಂದಿ ತೊಡಗಿಕೊಳ್ಳುತ್ತಾರೆ. ಹೆಚ್ಚಿನವರು ಮನೆಗಳಿಗೂ ಹೋಗದೆ, ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಾರೆ.
Ad
1 / 8
ಹಲ್ವಾ ಸಮಾರಂಭಕ್ಕೆ ಆಗಮಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
2 / 8
ಸಿಹಿ ಸವಿಯಲು ತಯಾರಿ
3 / 8
ದೆಹಲಿಯ ನಾರ್ಥ್ ಬ್ಲಾಕ್ನಲ್ಲಿ ನಡೆದ ಬಜೆಟ್ ಹಲ್ವಾ ಕಾರ್ಯಕ್ರಮ
4 / 8
ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಹ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗಿಯಾದರು.
5 / 8
ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಸಹ ಸಂಭ್ರಮದಲ್ಲಿ ಭಾಗಿಯಾದರು.