‘ಕೊರೊನಾ​ ಜೀವನದ ಒಂದು ಭಾಗವಾಗಲಿದೆ, ಲಾಕ್​ಡೌನ್​ ಮುಂದುವರಿಸಬಾರದು’

ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ನಲ್ಲಿಡಲಾಗಿದೆ. ಭಾರತದಲ್ಲಿ ಲಾಕ್​ಡೌನ್ ಹೀಗೆ ಮುಂದುವರಿದರೆ ಕೊರೊನಾಗಿಂತ ಹೆಚ್ಚಿನ ಜನರು ಹಸಿವಿನಿಂದ ಸಾಯುತ್ತಾರೆ ಎಂದು ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ. ಭಾರತದಲ್ಲಿ ಬೇರೆ ಬೇರೆ ಕಾರಣಗಳಿಂದ 1 ವರ್ಷಕ್ಕೆ 90 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ.‌ ಆದರೆ ಇಂಡಿಯಾದಲ್ಲಿ ಕೊರೊನಾದಿಂದ 2 ತಿಂಗಳಲ್ಲಿ 1 ಸಾವಿರ ಜನ ಮೃತಪಟ್ಟಿದ್ದಾರೆ. ಮಿಲಿಯನ್ ಗಟ್ಟಲೇ ಜನರಿಗೆ ಸರಿಪಡಿಸಲಾಗದ ನಷ್ಟ ಸಂಭವಿಸಲಿದೆ. ಈ ಲಾಕ್​ಡೌನ್ ದೇಶವನ್ನು 3 ವರ್ಷಗಳ ಹಿಂದಕ್ಕೆ ತಳ್ಳಲಿದೆ. ಭಾರತ […]

‘ಕೊರೊನಾ​ ಜೀವನದ ಒಂದು ಭಾಗವಾಗಲಿದೆ, ಲಾಕ್​ಡೌನ್​ ಮುಂದುವರಿಸಬಾರದು’
ನಾರಾಯಣ ಮೂರ್ತಿ
ಸಾಧು ಶ್ರೀನಾಥ್​

Updated on: Apr 30, 2020 | 6:04 PM

ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ನಲ್ಲಿಡಲಾಗಿದೆ. ಭಾರತದಲ್ಲಿ ಲಾಕ್​ಡೌನ್ ಹೀಗೆ ಮುಂದುವರಿದರೆ ಕೊರೊನಾಗಿಂತ ಹೆಚ್ಚಿನ ಜನರು ಹಸಿವಿನಿಂದ ಸಾಯುತ್ತಾರೆ ಎಂದು ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.

ಭಾರತದಲ್ಲಿ ಬೇರೆ ಬೇರೆ ಕಾರಣಗಳಿಂದ 1 ವರ್ಷಕ್ಕೆ 90 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ.‌ ಆದರೆ ಇಂಡಿಯಾದಲ್ಲಿ ಕೊರೊನಾದಿಂದ 2 ತಿಂಗಳಲ್ಲಿ 1 ಸಾವಿರ ಜನ ಮೃತಪಟ್ಟಿದ್ದಾರೆ. ಮಿಲಿಯನ್ ಗಟ್ಟಲೇ ಜನರಿಗೆ ಸರಿಪಡಿಸಲಾಗದ ನಷ್ಟ ಸಂಭವಿಸಲಿದೆ. ಈ ಲಾಕ್​ಡೌನ್ ದೇಶವನ್ನು 3 ವರ್ಷಗಳ ಹಿಂದಕ್ಕೆ ತಳ್ಳಲಿದೆ.

ಭಾರತ ಲಾಕ್ ಡೌನ್ ನಲ್ಲಿ ದೀರ್ಘಕಾಲ ಮುಂದುವರಿಸಲು ಸಾಧ್ಯವಿಲ್ಲ. ಕೊರೊನಾ ವೈರಸ್​ ಜೀವನದ ಭಾಗವಾಗಲಿದೆ. ಭಾರತದಲ್ಲಿ ಕೊರೊನಾದಿಂದ ಸಾವಿನ ಪ್ರಮಾಣ ಶೇಕಡಾ 0.25-0.5 ರಷ್ಟು ಮಾತ್ರ ಇದೆ. ಇದರಲ್ಲಿ ಶೇಕಡಾ 25 ರಷ್ಟು ಮಂದಿ ವಾಯು ಮಾಲಿನ್ಯದಿಂದ ಮೃತಪಡುತ್ತಿದ್ದಾರೆ. ಇದನ್ನು ಕಳೆದ 2 ತಿಂಗಳಲ್ಲಿ ಮೃತಪಟ್ಟ 1 ಸಾವಿರ ಜನರ ಸಾವಿಗೆ ಹೋಲಿಸಿ ನೋಡಿದಾಗ ಗಾಬರಿಯಾಗುವಂತಿಲ್ಲ ಎಂದರು.

Published On - 4:33 pm, Thu, 30 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us