ಬೆಂಗಳೂರಿಗೆ ‘ಸ್ಯಾರಿ’ ಸಂಕಟ, ಟ್ರಾವೆಲ್ ಹಿಸ್ಟರಿ ಹೇಳದೆ ವೈದ್ಯರ ಜೊತೆ ಚೆಲ್ಲಾಟ! 

ಬೆಂಗಳೂರು: ಮಹಾಮಾರಿ ಕೊರೊನಾದಿಂದ ರೆಡ್ ಜೋನ್ ಬೆಂಗಳೂರಿಗೆ ಮತ್ತೊಂದು ಕಂಟಕ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೊವಿಡ್ 19 ಪಾಸಿಟಿವ್ ಕೇಸ್​ಗಳು ದಿನೇ ದಿನೇ ಹೆಚ್ಚುತ್ತಿವೆ. ಒಂದ್ಕಡೆ ಕೊರೊನಾ ಕೇಸ್​ಗಳನ್ನ ಟ್ರ್ಯಾಕ್​ ಮಾಡಲಾಗದೇ ವೈದ್ಯರ ಪರದಾಡುವಂತಹ ಸ್ಥಿತಿ ಇದೆ. ಉಸಿರಾಟದ ತೊಂದರೆ ಅಂತಾ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಈ ವೇಳೆ ವೈದ್ಯರೇ ಕೈಮುಗಿದು ಕೇಳಿದ್ರೂ ಕೊರೊನಾ ಸೋಂಕಿತರು ಟ್ರಾವೆಲ್ ಹಿಸ್ಟರಿ ಗುಟ್ಟು ಬಿಟ್ಟುಕೊಡುತ್ತಿಲ್ಲ. ಮಾಹಿತಿ ಬಿಟ್ಟು ಕೊಡದೇ ಸತಾಯಿಸುತ್ತಿರುವ ಕೆಲ ರೋಗಿಗಳು ವೈದ್ಯರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಉಸಿರಾಟದ […]

ಬೆಂಗಳೂರಿಗೆ ‘ಸ್ಯಾರಿ’ ಸಂಕಟ, ಟ್ರಾವೆಲ್ ಹಿಸ್ಟರಿ ಹೇಳದೆ ವೈದ್ಯರ ಜೊತೆ ಚೆಲ್ಲಾಟ! 
ಸಾಧು ಶ್ರೀನಾಥ್​

Updated on: Apr 18, 2020 | 11:48 AM

ಬೆಂಗಳೂರು: ಮಹಾಮಾರಿ ಕೊರೊನಾದಿಂದ ರೆಡ್ ಜೋನ್ ಬೆಂಗಳೂರಿಗೆ ಮತ್ತೊಂದು ಕಂಟಕ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೊವಿಡ್ 19 ಪಾಸಿಟಿವ್ ಕೇಸ್​ಗಳು ದಿನೇ ದಿನೇ ಹೆಚ್ಚುತ್ತಿವೆ. ಒಂದ್ಕಡೆ ಕೊರೊನಾ ಕೇಸ್​ಗಳನ್ನ ಟ್ರ್ಯಾಕ್​ ಮಾಡಲಾಗದೇ ವೈದ್ಯರ ಪರದಾಡುವಂತಹ ಸ್ಥಿತಿ ಇದೆ.

ಉಸಿರಾಟದ ತೊಂದರೆ ಅಂತಾ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಈ ವೇಳೆ ವೈದ್ಯರೇ ಕೈಮುಗಿದು ಕೇಳಿದ್ರೂ ಕೊರೊನಾ ಸೋಂಕಿತರು ಟ್ರಾವೆಲ್ ಹಿಸ್ಟರಿ ಗುಟ್ಟು ಬಿಟ್ಟುಕೊಡುತ್ತಿಲ್ಲ. ಮಾಹಿತಿ ಬಿಟ್ಟು ಕೊಡದೇ ಸತಾಯಿಸುತ್ತಿರುವ ಕೆಲ ರೋಗಿಗಳು ವೈದ್ಯರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.

ಉಸಿರಾಟದ ತೊಂದರೆ ಅಂತಾ ಆಸ್ಪತ್ರೆಗೆ ಬರೋ ರೋಗಿಗಳಿಗೆ ಕೊರೊನಾ ಇದೆ ಅನ್ನೋದು 2 ದಿನ ಗೊತ್ತಾಗಲ್ಲ. ಹಾಗಂತ ಮಾಮೂಲಿ ವಾರ್ಡ್​ಗೆ ಕಳುಹಿಸಿದರೂ ದೊಡ್ಡ ಆಪತ್ತು. ವೈದ್ಯರು ಕೂಡ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳದೇ ಚಿಕಿತ್ಸೆ ನೀಡುತ್ತಾರೆ. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಎಂದು ರಿಪೋರ್ಟ್ ಬಂದ ಮೇಲೆ ಚಿಕಿತ್ಸೆ ನೀಡಿದ ವೈದ್ಯರಲ್ಲೂ ಆತಂಕ ಶುರುವಾಗುತ್ತದೆ. ಬೆಂಗಳೂರಿನಲ್ಲಿ ಇಂಥ ಕೇಸ್​ಗಳೇ ಅತಿ ಹೆಚ್ಚು ದಾಖಲಾಗಿವೆ.

ಟ್ರಾವೆಲ್ ಹಿಸ್ಟರಿ ಹೇಳದೆ ವೈದ್ಯರ ಜೊತೆ ಚೆಲ್ಲಾಟ..!
ಬೆಂಗಳೂರಿನಲ್ಲಿ ಸುಮಾರು 20 ರೋಗಿಗಳು ಟ್ರಾವೆಲ್ ಹಿಸ್ಟರಿ ಹೇಳದೇ ಸುಳ್ಳು ಹೇಳಿದ್ದಾರಂತೆ. SARI (ಸೀರಿಯಸ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್) ಅಂತಾ ಬಂದವರಲ್ಲೇ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆ ಇದ್ದವ್ರಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ತಗುಲಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಹೊಸದೊಂದು SARI ಬ್ಲಾಕ್ ಓಪನ್ ಮಾಡಲಾಗಿದೆ. ಹೀಗಾಗಿಯೇ ದಯವಿಟ್ಟು ನಿಮ್ಮ ಟ್ರಾವೆಲ್ ಹಿಸ್ಟರಿ ಹೇಳಿ ಸೂಕ್ತ ಚಿಕಿತ್ಸೆ ನೀಡಲು ಅವಕಾಶ ಮಾಡಿ ಅಂತಿದ್ದಾರೆ ವೈದ್ಯರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us