ಮೂಟೆ ಮೇಲೆ ಕುಳಿತು ತರಕಾರಿ ವ್ಯಾಪಾರಕ್ಕೆ ಇಳಿದ ಮಾಜಿ ಸಚಿವ ರೇವಣ್ಣ!

ಹಾಸನ: ಕೊರೊನಾ ಸೋಂಕು ಕಾಲದಲ್ಲಿ ಮಾಜಿ ಸಚಿವ ರೇವಣ್ಣ ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ! ಲಾಕ್​ ಡೌನ್​ 2.0 ಚಾಲ್ತಿಯಲ್ಲಿರುವಾಗ ರೈತರ ಓಡಾಟಕ್ಕೆ ಕಷ್ಟವಾಗಿದೆ. ಮಾರುಕಟ್ಟೆವರೆಗೂ ಬೆಳೆ ತರಲು ಆಗದೆ ಪಡದಾಡುತ್ತಿದ್ದಾರೆ. ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತರು ಕಂಗೆಟ್ಟಿದ್ದಾರೆ. ಪರಿಸ್ಥಿತಿಯನ್ನ ಅರಿತ ಹೆಚ್​ಡಿ ರೇವಣ್ಣ ರೈತರಿಂದ ಲೋಡ್ ಗಟ್ಟಲೆ ತರಕಾರಿ ಖರೀದಿಸಿದ್ದಾರೆ. ಎಪಿಎಂಸಿಗೆ ಬರೋ ಲೋಡ್ ಗಟ್ಟಲೆ ತರಕಾರಿಯನ್ನ ಖರೀದಿಸಿ ಬಡವರಿಗೆ ಹಂಚಿದ್ದಾರೆ. ಹೊಳೆನರಸೀಪುರ ಪಟ್ಟಣದ ಎಪಿಎಂಸಿಯಲ್ಲಿ ಮಾಸ್ಕ್​ ಧರಿಸಿಯೇ ತರಕಾರಿ ಖರೀದಿ ಮಾಡಿದ ರೇವಣ್ಣ, ಪ್ರತಿಗ್ರಾಮದ […]

ಮೂಟೆ ಮೇಲೆ ಕುಳಿತು ತರಕಾರಿ ವ್ಯಾಪಾರಕ್ಕೆ ಇಳಿದ ಮಾಜಿ ಸಚಿವ ರೇವಣ್ಣ!
ಸಾಧು ಶ್ರೀನಾಥ್​

Updated on: Apr 21, 2020 | 11:43 AM

ಹಾಸನ: ಕೊರೊನಾ ಸೋಂಕು ಕಾಲದಲ್ಲಿ ಮಾಜಿ ಸಚಿವ ರೇವಣ್ಣ ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ! ಲಾಕ್​ ಡೌನ್​ 2.0 ಚಾಲ್ತಿಯಲ್ಲಿರುವಾಗ ರೈತರ ಓಡಾಟಕ್ಕೆ ಕಷ್ಟವಾಗಿದೆ. ಮಾರುಕಟ್ಟೆವರೆಗೂ ಬೆಳೆ ತರಲು ಆಗದೆ ಪಡದಾಡುತ್ತಿದ್ದಾರೆ. ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತರು ಕಂಗೆಟ್ಟಿದ್ದಾರೆ. ಪರಿಸ್ಥಿತಿಯನ್ನ ಅರಿತ ಹೆಚ್​ಡಿ ರೇವಣ್ಣ ರೈತರಿಂದ ಲೋಡ್ ಗಟ್ಟಲೆ ತರಕಾರಿ ಖರೀದಿಸಿದ್ದಾರೆ. ಎಪಿಎಂಸಿಗೆ ಬರೋ ಲೋಡ್ ಗಟ್ಟಲೆ ತರಕಾರಿಯನ್ನ ಖರೀದಿಸಿ ಬಡವರಿಗೆ ಹಂಚಿದ್ದಾರೆ.

ಹೊಳೆನರಸೀಪುರ ಪಟ್ಟಣದ ಎಪಿಎಂಸಿಯಲ್ಲಿ ಮಾಸ್ಕ್​ ಧರಿಸಿಯೇ ತರಕಾರಿ ಖರೀದಿ ಮಾಡಿದ ರೇವಣ್ಣ, ಪ್ರತಿಗ್ರಾಮದ ಡೈರಿಗಳ ಮೂಲಕ ಬಡ ಜನರಿಗೆ ಅದನ್ನ ವಿತರಣೆ ಮಾಡಿದ್ದಾರೆ. ತಾವೇ ಖುದ್ದಾಗಿ ಮಾರ್ಕೆಟ್​ಗೆ ಹೋಗಿ ತರಕಾರಿ ಖರೀದಿಸಿದ್ದಾರೆ ಮಾಜಿ ಸಚಿವ. ತನ್ಮೂಲಕ, ತಮ್ಮ ಕ್ಷೇತ್ರದ ಜನರಿಗೆ ತರಕಾರಿ ವಿತರಿಸಲು ಮತ್ತು ನಷ್ಟಕ್ಕೀಡಾಗುತ್ತಿರೋ ರೈತರಿಗೂ ಹೆಚ್.ಡಿ.ರೇವಣ್ಣ ನೆರವಾಗುತ್ತಿದ್ದಾರೆ. ತರಕಾರಿ ಖರೀದಿಸಿ ಬಡವರಿಗೆ ಹಂಚಿಕೆ ಮಾಡುವಾಗಲೂ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us