
ಮೈಸೂರು: ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಕೇರಳದ ತಿರುವನಂತಪುರಂನ ಪ್ರೆಸ್ಟಿನ್ ಸಿಲ್ವ, ಜಯಪ್ರಕಾಶ್, ಮೈಸೂರಿನ ಉದಯಗಿರಿಯ ಮೋಹನ್, ರಮೇಶ್ ಬಂಧಿತರು.
ಅಕ್ರಮವಾಗಿ ಮಾರಾಟ ಮಾಡಲು ಬನ್ನಿಮಂಟಪದ ಬ್ರಿಡ್ಜ್ ಬಳಿ ನಿಂತಿದ್ದಾಗ ಸಂಚಾರಿ ದಳದ DCF ಎ.ಟಿ.ಪೂವಯ್ಯ ನೇತೃತ್ವದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಕೆ.ಜಿ. ತೂಕದ 8 ದಂತ ಹಾಗೂ ಸ್ಕೂಟರ್ಗಳನ್ನು ವಶಕ್ಕೆ ಪಡೆಯಲಾಗಿದೆ.