Assembly Polls: ಬದುಕಿನುದ್ದಕ್ಕೂ ಜನಾರ್ಧನ ರೆಡ್ಡಿ ಜೊತೆಯಿದ್ದೇನೆ, ರಾಜಕೀಯದ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಅವರೊಂದಿಗೆ ಸಾಗುತ್ತೇನೆ: ಅರುಣ ಲಕ್ಷ್ಮಿ

|

Updated on: Feb 07, 2023 | 1:35 PM

ಜನಾರ್ಧನ ರೆಡ್ಡಿ ಬಳ್ಳಾರಿಯ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಬದುಕಿನುದ್ದಕ್ಕೂ ಅವರೊಂದಿಗೆ ಹೆಜ್ಜೆ ಹಾಕಿದ್ದೇನೆ, ರಾಜಕೀಯದ ಹೊಸ ಇನ್ನಿಂಗ್ಸ್ ನಲ್ಲೂ ಅವರೊಂದಿಗೆ ಸಾಗುತ್ತೇನೆ ಎಂದು ಅರುಣ ಲಕ್ಷ್ಮಿ ಹೇಳಿದರು.

ಬಳ್ಳಾರಿ: ತಮ್ಮ ಪತಿ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಸಹೋದರ ಗಾಲಿ ಸೋಮಶೇಖರ ರೆಡ್ಡಿ (Gali Somashekhar Reddy) ಅವರು ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ತಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಅರುಣ ಲಕ್ಷ್ಮಿ (Aruna Lakshmi) ಹೇಳಿದರು. ನಗರದಲ್ಲಿ ಇಂದು ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಅರುಣ ಲಕ್ಷ್ಮಿ ಅವರು ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿಯ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಬದುಕಿನುದ್ದಕ್ಕೂ ಅವರೊಂದಿಗೆ ಹೆಜ್ಜೆ ಹಾಕಿದ್ದೇನೆ, ರಾಜಕೀಯದ ಹೊಸ ಇನ್ನಿಂಗ್ಸ್ ನಲ್ಲೂ ಅವರೊಂದಿಗೆ ಸಾಗುತ್ತೇನೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 1:33 pm, Tue, 7 February 23

Follow us on